Thursday 29 March 2012

ಕಥೆ -ಕೂಸಿಗೆ ಒಂದು ಮದುವೆ ಮಾಡಕ್ಕು(ಹವ್ಯಕ ಭಾಷೆ)

ಒಪ್ಪನ ಒಪ್ಪಂಗೋ ವಿಷು ವಿಶೇಷ ಸ್ಪರ್ಧೆಗಾಗಿ ಬರೆದಿದ್ದು  


ಹವ್ಯಕರಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಆಗ್ತಾ ಇದ್ದು ಗಂಡು ಮಕ್ಕಳು ಪಾಪ ಹೆಣ್ಣಿಗಾಗಿ ಪರದಾಡಕ್ಕು ಆ ಸ್ಥಿತಿಗೆ ಬಂದು ಕೂತಿದ್ದು .ಊರ ಕಡೆ ಇಪ್ಪವಕ್ಕಂತು ಮದುವೆ ಕನಸೇ ಸೈ . ಹಂಗೆ ಇಲ್ನೋಡಿ ಶಾಂತಿ ಅಪ್ಪ ಶಾಂತಿಗೆ ಮದುವೆ ಮಾಡುಲೆ ಹೊರಟಿದ್ದ ಅವಂಗೆ ಬೇಕಾದ ಗಂಡು ಸಿಕ್ಕಿದ್ನ ನೋಡನ .
ರಾಮಣ್ಣ : ಕೂಸಿಗೆ 25 ವರ್ಷ ಆತು ಇನ್ನು ಮಾಡುವೆ ಮಾಡುಲೆ ಅಡ್ಡಿಲ್ಲೆ ಈಗಿನ ಕೂಸುಗ ಸಕತ್ ಚುರುಕಿರ್ತ ಯರುನ್ನ್ ತೋರ್ಸಿರು ಒಪ್ಪದು ಕಷ್ಟನೆಯ. ಹಂಗಾಗಿ ಈಗ್ಲಿಂದ ಹುಡುಕಿರೆ ಒಂದು ವರ್ಷಕ್ಕದ್ರು ಒಂದು ಸರಿ ಹೊಕ್ಕು ಹೇಳಿ ಯೆನಂಬೆ?.
ಕಮಲ: ಹಂಗೆ ಪಕ್ಕದ್ಮನೆ ಪದ್ದಕ್ಕಂಗೆ ಜನ ಬಳಕೆ ಜಾಸ್ತಿ ಸ್ವಲ್ಪ ಹೇಳಿತ್ತ್ರೆ ಚೊಲೋ ಗಂಡು ಹುಡುಕಿಕೊಡ್ತು ಅವಳಿಗೂ ಒಂದು ಮಾತು ಹೇಳಿ ಮತ್ತೆ ಜಾಸ್ತಿ ಪ್ರಚಾರ ಬ್ಯಾಡ ಗುಟ್ಟಾಗಿ ಇರ್ಲಿ ಯಲ್ಲವಕ್ಕು ಗೊತ್ತಾದ್ರೆ ತಪ್ಪಿಸಕ್ಕೆ ಕಾಯ್ತಾ ಇರ್ತ ಜನ ಮತ್ತೆ ಈಗಲೇ ಹೇಳಿದ್ದಿ ನಿನ್ಗಕ್ಕಂತು ಯಂತು ಗೊತ್ತಾಗ್ತಿಲ್ಲೆ ಎಲ್ಲಕಡೆ ಹೋಗಿ ಅದೇ ಹೇಳ್ತಾ ಕುಂತ್ಗಬುಡ್ತಿ.
ರಾಮಣ್ಣ: ಒಹ್ ನಿಂಗೊಂದೆ ಎಲ್ಲ ಗೊತಗದು ಅಲ್ದಾ ಯಂಗು ಗೊತ್ತಿದ್ದೂ ಹೆಂಗೆ ಮಾತದಕ್ಕು ಹೇಳಿ ನೋಡ್ತಿರು ಕೂಸಿಗೆ ಒಳ್ಳೆ ಗಂಡು ಹುಡುಕಿ ಧಾಮ್ಧೂಮ್ ಹೇಳಿ ಮದುವೆ ಮಾಡ್ತಿ .
ಹಂಗಂತ ಹೆಂಡತಿ ಹತ್ರ ಹೇಳಿ ಪಕ್ಕದ್ಮನೆ ಪದ್ದಕ್ಕನ ಮನೆಗೆ ಹೋಗಿ ಜಗಲಿಲಿ ಕುಂತ್ಕಂಡ.
ಪದ್ದಕ್ಕ : ಒಹ್ ರಾಮಣ್ಣ ಮತ್ತೆನ ಸಮಾಚಾರ ತಿಂಡಿ ಆತ? .ಬೆಳಿಗ್ಗೆ ಬೆಳಿಗ್ಗೆ ಹೊರಟಿದ್ದೆ ಅಂದ್ರೆ ಎಂತೋ ಸಮಾಚಾರ ?
ರಾಮಣ್ಣ: ಯೇನಿಲ್ಲೇ ಪದ್ದಕ್ಕ ನಮ್ಮನೆ ಕೂಸಿಗೆ ಈ ವರ್ಷ ಒಂದು ಮದುವೆ ಮಾಡಿ ಮುಗಿಸನ ಹೇಳಿ ನಾನು ಕಮಲ ತೀರ್ಮಾನ ಮಾಡಿದ್ಯ .
ಪದ್ದಕ್ಕ : ಒಹ್ ಹಂಗ ಸಮಾಚಾರ, ಒಳ್ಳೆ ಯೋಚನೆ ಮಾಡಿದ್ದಿ ನಿಂಗ ಈಗೆಲ್ಲ ಹೆಣ್ ಮಕ್ಕಳಿಗೆ ಡಿಮ್ಯಾಂಡ್ ಜಾಸ್ತಿ ನಿಂಗೆ ಎಂತ ಅಳಿಯ ಬೇಕು ಹೇಳು ಮಾರಾಯ ನಾ ಮಾಡಿಸ್ಕೊಡ್ತಿ ನಿಂಗೆ .
ರಾಮಣ್ಣ : ಅಷ್ಟಲ್ದೆ ನಿನ್ ಹತ್ರ ಬತ್ತಿದ್ನ ನಾ ಮತ್ತೆ ನನ್ಗೊತಿದು ನಿಂಗ್ ಒಳ್ಳೆ ಜನರ ಬಳಕೆ ಇದ್ದು ನಿನ್ ಹತ್ರ ಹೇಳಿದ್ಮೇಲೆ ಮುಗುತ್ತು ಕಥೆ !! ಆದ ಹಂಗೆಯ ಮದುವೆ . ಮತ್ತೆ ಯಾರಿಗೂ ಜಾಸ್ತಿ ಪ್ರಚಾರ ಮಾಡುದ್ ಬ್ಯಾಡ ಮತ್ತೆ ಗುಟ್ಟಾಗಿ ಇರ್ಲಿ .
ಪದ್ದಕ್ಕ : ಅಯ್ಯೋ ನಿ ಒಳ್ಳೆ ಮಾರಾಯ ಗುಟ್ಟಾಗಿ ಇಟ್ರೆ ಗೊತಗದು ಹೆಂಗೆ ಕುಸಿದ್ದು ಹೇಳಿ ನಿ ಏನ್ ಯೋಚನೆ ಮಾಡಡ ನಿಂಗೆ ಯಾವತರ ಗಂಡು ಬೇಕು ಹೇಳು ಮಾರಾಯ .
ರಾಮಣ್ಣ : ನನ್ಗಕ್ಕೆನ್ ಜಾಸ್ತಿ ಆಸೆ ಇಲ್ಲೆ ನೋಡು ಹುಡುಗ ಚೊಲೋ ಕೆಲ್ಸದಲ್ಲಿರವು, ಡಾಕ್ಟರ್ ಇಂಜಿನಿಯರ್ ಅಗಿರಕ್ಕು, ಜೊತೆಗೆ ಮನೆಲು ಸ್ವಲ್ಪ ಇರವು ,ಒಳ್ಳೆ ಹುಡುಗ ಅಗಕ್ಕು ಅತ್ತೆ ಮಾವ ಹೇಳಿ ಇಲ್ದಿದ್ರೆ ಚೊಲೋದು , ಜೊತೆಗೆ ಮನೆ ,ಕಾರು ಅಂತು ಬಿಡು ಮಾರಾಯ್ತಿ ಇದ್ದೆ ಇರ್ತು ಅದಿಲ್ದಿದ್ರೆ ಯೆಲ್ಲಾಗ್ತೆ ಮಾರಾಯ್ತಿ ಅದು ಅಲ್ದೆ ನಮ್ಮನೆ ಕೂಸು ಡಿಗ್ರಿ ಓದಿದ್ದು ,ಚೊಲೋ ಇದ್ದು ಬೇರೆ ನೋಡಕ್ಕೆ, ರಾಶಿ ಒಳ್ಳೆವ್ಳು ಯಾರ ಹತ್ರನು ಜಾಸ್ತಿ ಮತಡ್ತಿಲ್ಲೇ ಕತೆ ಹೊಡಿತಿಲ್ಲೆ ತಾನತು ತನ್ನ ಕೆಲಸ ಆತು , ಬೆಂಗಳೂರಲ್ಲಿ ಕೆಲಸ ಸಿಕ್ಕಿತ್ತು ಅದುಕ್ಕೆ ನನ್ಗನೆ ಬ್ಯಾಡ ಹೇಳಿದ್ಯ ನೋಡನ ಮದುವೆ ಅದಮೇಲೆ ಹೇಳಿ .
ಪದ್ದಕ್ಕ : ಒಹ್ ಹಂಗ ಅಲ್ಲ ನಂಗಲ ನೆಂಟರ ಮಾಣಿ ಒಂದು ಇದ್ದಿದ್ದ ಅವ್ನು ಡಿಗ್ರೀ ಮಾಡಿದ್ದ ಒಳ್ಳೆಯವ ಪಾಪ ಮನೆಲು ರಾಶಿ ಇದ್ದು ತೋಟ ಗದ್ದೆ ಹೇಳಿ ಅವಂಗೆ ಕೇಳನ ಮಾಡಿದಿದ್ದಿ...
ರಾಮಣ್ಣ : ಒಹ್ ನೀ ಒಳ್ಳೆ ಚನಗಿದ್ದೆ ಮಾರಾಯ್ತಿ ಒಳ್ಳೆ ಜನ , ನಂಗ ಹಂಗೆಲ್ಲ ಮನೆಲಿಪ್ಪವುಕ್ಕೆ ಕೊಡ್ತ್ವಿಲ್ಲೆ ಏನಿದ್ರೂ ಇಂಜಿನಿಯರ್ ಆಗಿರವು ನಮ್ಮನೆ ಕೂಸೇನು ಕಮ್ಮಿನ ? ಡಿಗ್ರೀ ಮದ್ಕೈಂದು . ನಮ್ಮನೆವ್ಳು ಅಂದ ನಾ ನಿಂಗೆ ಹೇಳಲೇ ಬಂದಿ ನೋಡು ನಾನೆ ನೋಡಿ ಮಾಡ್ತಿ ನೋಡ್ತಿರು ನಮ್ಮನೆ ಹುಡುಗಿ ಮಾಡುವೆನ ಹೆಂಗೆ ಹೇಳಿ ನೋಡ್ತಿರು .
ರಾಶಿ ಸಿಟ್ಟು ಬಂದು ರಾಮಣ್ಣ ಅಲ್ಲಿಂದ ಎದ್ದು ಮನೆಗೆ ಬಂದವನೇ ಜಾತಕ ತಗಂಡು ಹೊರಟ ಏನಾದ್ರು ಮಾಡಿ ೧ ತಿಂಗಳೊಳಗೆ ಮಾಡಿ ತೋರುಸ್ತಿ ಮದುವೆ ನ ಹೇಳಿ .
ಒಂದು ತಿಂಗಳಲ್ಲ ೬ ತಿಂಗಳಾತು ಎಳ್ಳು ಜಾತಕ ಹೊಂದಿದ್ದಿಲ್ಲೆ ಒಂದೆರಡು ಕಡೆ ಹಳ್ಳಿಲಿ ಇಪ್ಪವು ಕೇಳಿದ ಇವ ಕೊಡಲ್ಲೆ 'ಇಲ್ಲೆ ನಂಗ ಹಳ್ಳಿ ಮನೆಯವುಕ್ಕೆ ಕೊಡದಿಲ್ಲೆ ಹೇಳಿ ತೀರ್ಮಾನ ಮಾಡಿದ್ಯ ನನ್ಗಕ್ಕೆನಿದ್ರು ಇಂಜಿನಿಯರ್ ಅಳಿಯನೇ ಬೇಕು ' ಹೇಳಿದ ರಾಮಣ್ಣ .
ಮತ್ತೊಂದ್ ದಿನ ಪದ್ದಕ್ಕ ಅಲ್ದಾ ರಾಮಣ್ಣ ಎಲ್ಲಾರು ಆತನ ನಿಮ್ಮನೆ ಕೂಸಿಗೆ ? ಕೇಳ್ಚು .
ರಾಮಣ್ಣ : ಹ್ಮ್ಮ್ ಸುಮಾರು ಕಡೆ ಆಗಿತ್ತು ನನ್ಗನೆ ಬೇಡ ಅಂದ್ಯ ಇನ್ನು ಬೇರೆ ಒಳ್ಳೆ ಕಡೆ ಸಿಗ್ತು ಹೇಳಿ ..ಒಂದು ಸುಳ್ಳು ಹೇಳ್ದ
ಹಂಗೆ ಸ್ವಲ್ಪ ದಿನ ಆತು ಒಂದು ದಿನ ಶಾಂತಿ ಹೊರಗಡೆ ಹೋಗಿ ಬತ್ತಿ ಹೇಳಿ ಹೋದವಳು ವಾಪಸ್ ಬರಲೇ ಇಲ್ಲೆ . ಬೆಳಿಗ್ಗೆ ಹೋದವಳು ರಾತ್ರಿ ಆದರು ಬರ್ಲೆ ಅಂದ್ರೆ ಎಲ್ಲಿ ಹೋಗಿಕ್ಕು ಗಂಡ ಹೆಂಡತಿ ಇಬ್ರಿಗೂ ಸ್ವಲ್ಪ ಗಾಬರಿ ಆತು . ರಾಮಣ್ಣ ರಾತ್ರಿನೇ ಹೊರಟ ಹುಡುಕಲೆ. ೨ ದಿನ ಆದರು ಯಂತು ಸುದ್ದಿ ಸಿಗಲ್ಲೆ. ಕೊನೆಗೆ ಸುದ್ದಿ ಸಿಕ್ಚು ಕೊನೆ ಕೊಯ್ಯ ರಮೇಶ ನು ಕಾಣೆ ಅಯ್ದ್ನಡ ರಾಮಣ್ಣನ ಮಗಳು ಶಾಂತಿ ರಮೇಶ ಇಬ್ರು ಓಡೋಗಿ ಮದುವೆ ಮಾಡಿಕೈಂದವಡ ಹೇಳಿ .
ಪದ್ದಕ್ಕ : ಅಯ್ಯೋ ಅವತ್ತೇ ಹೇಳಿದಿ ನಮ್ಮ ಹವ್ಯಕರೇ ಮನೆಲಿಪ್ಪವು ರಾಶಿ ಜನ ಇದ್ದ ಎಲ್ಲಾದರು ಒಳ್ಳೆ ಕಡೆ ಕೊಡಿ ಹೇಳಿ ಇಲ್ಲೆ ಇನ್ಜಿನಿಯರೇ ಅಗಕ್ಕು ಹೇಳಿದ ಈಗ ನೋಡು ಯಂತ ಅಳಿಯ ಸಿಕ್ಕ ಹೇಳಿ .


ಅರ್ಪಿತಾ ಹರ್ಷ
ಲಂಡನ್

Not publishe

1 comment:

  1. Nice one,, Arpita... Keep writing :)

    ReplyDelete