Thursday 29 March 2012

ಕಥೆ -ಕೂಸಿಗೆ ಒಂದು ಮದುವೆ ಮಾಡಕ್ಕು(ಹವ್ಯಕ ಭಾಷೆ)

ಒಪ್ಪನ ಒಪ್ಪಂಗೋ ವಿಷು ವಿಶೇಷ ಸ್ಪರ್ಧೆಗಾಗಿ ಬರೆದಿದ್ದು  


ಹವ್ಯಕರಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಆಗ್ತಾ ಇದ್ದು ಗಂಡು ಮಕ್ಕಳು ಪಾಪ ಹೆಣ್ಣಿಗಾಗಿ ಪರದಾಡಕ್ಕು ಆ ಸ್ಥಿತಿಗೆ ಬಂದು ಕೂತಿದ್ದು .ಊರ ಕಡೆ ಇಪ್ಪವಕ್ಕಂತು ಮದುವೆ ಕನಸೇ ಸೈ . ಹಂಗೆ ಇಲ್ನೋಡಿ ಶಾಂತಿ ಅಪ್ಪ ಶಾಂತಿಗೆ ಮದುವೆ ಮಾಡುಲೆ ಹೊರಟಿದ್ದ ಅವಂಗೆ ಬೇಕಾದ ಗಂಡು ಸಿಕ್ಕಿದ್ನ ನೋಡನ .
ರಾಮಣ್ಣ : ಕೂಸಿಗೆ 25 ವರ್ಷ ಆತು ಇನ್ನು ಮಾಡುವೆ ಮಾಡುಲೆ ಅಡ್ಡಿಲ್ಲೆ ಈಗಿನ ಕೂಸುಗ ಸಕತ್ ಚುರುಕಿರ್ತ ಯರುನ್ನ್ ತೋರ್ಸಿರು ಒಪ್ಪದು ಕಷ್ಟನೆಯ. ಹಂಗಾಗಿ ಈಗ್ಲಿಂದ ಹುಡುಕಿರೆ ಒಂದು ವರ್ಷಕ್ಕದ್ರು ಒಂದು ಸರಿ ಹೊಕ್ಕು ಹೇಳಿ ಯೆನಂಬೆ?.
ಕಮಲ: ಹಂಗೆ ಪಕ್ಕದ್ಮನೆ ಪದ್ದಕ್ಕಂಗೆ ಜನ ಬಳಕೆ ಜಾಸ್ತಿ ಸ್ವಲ್ಪ ಹೇಳಿತ್ತ್ರೆ ಚೊಲೋ ಗಂಡು ಹುಡುಕಿಕೊಡ್ತು ಅವಳಿಗೂ ಒಂದು ಮಾತು ಹೇಳಿ ಮತ್ತೆ ಜಾಸ್ತಿ ಪ್ರಚಾರ ಬ್ಯಾಡ ಗುಟ್ಟಾಗಿ ಇರ್ಲಿ ಯಲ್ಲವಕ್ಕು ಗೊತ್ತಾದ್ರೆ ತಪ್ಪಿಸಕ್ಕೆ ಕಾಯ್ತಾ ಇರ್ತ ಜನ ಮತ್ತೆ ಈಗಲೇ ಹೇಳಿದ್ದಿ ನಿನ್ಗಕ್ಕಂತು ಯಂತು ಗೊತ್ತಾಗ್ತಿಲ್ಲೆ ಎಲ್ಲಕಡೆ ಹೋಗಿ ಅದೇ ಹೇಳ್ತಾ ಕುಂತ್ಗಬುಡ್ತಿ.
ರಾಮಣ್ಣ: ಒಹ್ ನಿಂಗೊಂದೆ ಎಲ್ಲ ಗೊತಗದು ಅಲ್ದಾ ಯಂಗು ಗೊತ್ತಿದ್ದೂ ಹೆಂಗೆ ಮಾತದಕ್ಕು ಹೇಳಿ ನೋಡ್ತಿರು ಕೂಸಿಗೆ ಒಳ್ಳೆ ಗಂಡು ಹುಡುಕಿ ಧಾಮ್ಧೂಮ್ ಹೇಳಿ ಮದುವೆ ಮಾಡ್ತಿ .
ಹಂಗಂತ ಹೆಂಡತಿ ಹತ್ರ ಹೇಳಿ ಪಕ್ಕದ್ಮನೆ ಪದ್ದಕ್ಕನ ಮನೆಗೆ ಹೋಗಿ ಜಗಲಿಲಿ ಕುಂತ್ಕಂಡ.
ಪದ್ದಕ್ಕ : ಒಹ್ ರಾಮಣ್ಣ ಮತ್ತೆನ ಸಮಾಚಾರ ತಿಂಡಿ ಆತ? .ಬೆಳಿಗ್ಗೆ ಬೆಳಿಗ್ಗೆ ಹೊರಟಿದ್ದೆ ಅಂದ್ರೆ ಎಂತೋ ಸಮಾಚಾರ ?
ರಾಮಣ್ಣ: ಯೇನಿಲ್ಲೇ ಪದ್ದಕ್ಕ ನಮ್ಮನೆ ಕೂಸಿಗೆ ಈ ವರ್ಷ ಒಂದು ಮದುವೆ ಮಾಡಿ ಮುಗಿಸನ ಹೇಳಿ ನಾನು ಕಮಲ ತೀರ್ಮಾನ ಮಾಡಿದ್ಯ .
ಪದ್ದಕ್ಕ : ಒಹ್ ಹಂಗ ಸಮಾಚಾರ, ಒಳ್ಳೆ ಯೋಚನೆ ಮಾಡಿದ್ದಿ ನಿಂಗ ಈಗೆಲ್ಲ ಹೆಣ್ ಮಕ್ಕಳಿಗೆ ಡಿಮ್ಯಾಂಡ್ ಜಾಸ್ತಿ ನಿಂಗೆ ಎಂತ ಅಳಿಯ ಬೇಕು ಹೇಳು ಮಾರಾಯ ನಾ ಮಾಡಿಸ್ಕೊಡ್ತಿ ನಿಂಗೆ .
ರಾಮಣ್ಣ : ಅಷ್ಟಲ್ದೆ ನಿನ್ ಹತ್ರ ಬತ್ತಿದ್ನ ನಾ ಮತ್ತೆ ನನ್ಗೊತಿದು ನಿಂಗ್ ಒಳ್ಳೆ ಜನರ ಬಳಕೆ ಇದ್ದು ನಿನ್ ಹತ್ರ ಹೇಳಿದ್ಮೇಲೆ ಮುಗುತ್ತು ಕಥೆ !! ಆದ ಹಂಗೆಯ ಮದುವೆ . ಮತ್ತೆ ಯಾರಿಗೂ ಜಾಸ್ತಿ ಪ್ರಚಾರ ಮಾಡುದ್ ಬ್ಯಾಡ ಮತ್ತೆ ಗುಟ್ಟಾಗಿ ಇರ್ಲಿ .
ಪದ್ದಕ್ಕ : ಅಯ್ಯೋ ನಿ ಒಳ್ಳೆ ಮಾರಾಯ ಗುಟ್ಟಾಗಿ ಇಟ್ರೆ ಗೊತಗದು ಹೆಂಗೆ ಕುಸಿದ್ದು ಹೇಳಿ ನಿ ಏನ್ ಯೋಚನೆ ಮಾಡಡ ನಿಂಗೆ ಯಾವತರ ಗಂಡು ಬೇಕು ಹೇಳು ಮಾರಾಯ .
ರಾಮಣ್ಣ : ನನ್ಗಕ್ಕೆನ್ ಜಾಸ್ತಿ ಆಸೆ ಇಲ್ಲೆ ನೋಡು ಹುಡುಗ ಚೊಲೋ ಕೆಲ್ಸದಲ್ಲಿರವು, ಡಾಕ್ಟರ್ ಇಂಜಿನಿಯರ್ ಅಗಿರಕ್ಕು, ಜೊತೆಗೆ ಮನೆಲು ಸ್ವಲ್ಪ ಇರವು ,ಒಳ್ಳೆ ಹುಡುಗ ಅಗಕ್ಕು ಅತ್ತೆ ಮಾವ ಹೇಳಿ ಇಲ್ದಿದ್ರೆ ಚೊಲೋದು , ಜೊತೆಗೆ ಮನೆ ,ಕಾರು ಅಂತು ಬಿಡು ಮಾರಾಯ್ತಿ ಇದ್ದೆ ಇರ್ತು ಅದಿಲ್ದಿದ್ರೆ ಯೆಲ್ಲಾಗ್ತೆ ಮಾರಾಯ್ತಿ ಅದು ಅಲ್ದೆ ನಮ್ಮನೆ ಕೂಸು ಡಿಗ್ರಿ ಓದಿದ್ದು ,ಚೊಲೋ ಇದ್ದು ಬೇರೆ ನೋಡಕ್ಕೆ, ರಾಶಿ ಒಳ್ಳೆವ್ಳು ಯಾರ ಹತ್ರನು ಜಾಸ್ತಿ ಮತಡ್ತಿಲ್ಲೇ ಕತೆ ಹೊಡಿತಿಲ್ಲೆ ತಾನತು ತನ್ನ ಕೆಲಸ ಆತು , ಬೆಂಗಳೂರಲ್ಲಿ ಕೆಲಸ ಸಿಕ್ಕಿತ್ತು ಅದುಕ್ಕೆ ನನ್ಗನೆ ಬ್ಯಾಡ ಹೇಳಿದ್ಯ ನೋಡನ ಮದುವೆ ಅದಮೇಲೆ ಹೇಳಿ .
ಪದ್ದಕ್ಕ : ಒಹ್ ಹಂಗ ಅಲ್ಲ ನಂಗಲ ನೆಂಟರ ಮಾಣಿ ಒಂದು ಇದ್ದಿದ್ದ ಅವ್ನು ಡಿಗ್ರೀ ಮಾಡಿದ್ದ ಒಳ್ಳೆಯವ ಪಾಪ ಮನೆಲು ರಾಶಿ ಇದ್ದು ತೋಟ ಗದ್ದೆ ಹೇಳಿ ಅವಂಗೆ ಕೇಳನ ಮಾಡಿದಿದ್ದಿ...
ರಾಮಣ್ಣ : ಒಹ್ ನೀ ಒಳ್ಳೆ ಚನಗಿದ್ದೆ ಮಾರಾಯ್ತಿ ಒಳ್ಳೆ ಜನ , ನಂಗ ಹಂಗೆಲ್ಲ ಮನೆಲಿಪ್ಪವುಕ್ಕೆ ಕೊಡ್ತ್ವಿಲ್ಲೆ ಏನಿದ್ರೂ ಇಂಜಿನಿಯರ್ ಆಗಿರವು ನಮ್ಮನೆ ಕೂಸೇನು ಕಮ್ಮಿನ ? ಡಿಗ್ರೀ ಮದ್ಕೈಂದು . ನಮ್ಮನೆವ್ಳು ಅಂದ ನಾ ನಿಂಗೆ ಹೇಳಲೇ ಬಂದಿ ನೋಡು ನಾನೆ ನೋಡಿ ಮಾಡ್ತಿ ನೋಡ್ತಿರು ನಮ್ಮನೆ ಹುಡುಗಿ ಮಾಡುವೆನ ಹೆಂಗೆ ಹೇಳಿ ನೋಡ್ತಿರು .
ರಾಶಿ ಸಿಟ್ಟು ಬಂದು ರಾಮಣ್ಣ ಅಲ್ಲಿಂದ ಎದ್ದು ಮನೆಗೆ ಬಂದವನೇ ಜಾತಕ ತಗಂಡು ಹೊರಟ ಏನಾದ್ರು ಮಾಡಿ ೧ ತಿಂಗಳೊಳಗೆ ಮಾಡಿ ತೋರುಸ್ತಿ ಮದುವೆ ನ ಹೇಳಿ .
ಒಂದು ತಿಂಗಳಲ್ಲ ೬ ತಿಂಗಳಾತು ಎಳ್ಳು ಜಾತಕ ಹೊಂದಿದ್ದಿಲ್ಲೆ ಒಂದೆರಡು ಕಡೆ ಹಳ್ಳಿಲಿ ಇಪ್ಪವು ಕೇಳಿದ ಇವ ಕೊಡಲ್ಲೆ 'ಇಲ್ಲೆ ನಂಗ ಹಳ್ಳಿ ಮನೆಯವುಕ್ಕೆ ಕೊಡದಿಲ್ಲೆ ಹೇಳಿ ತೀರ್ಮಾನ ಮಾಡಿದ್ಯ ನನ್ಗಕ್ಕೆನಿದ್ರು ಇಂಜಿನಿಯರ್ ಅಳಿಯನೇ ಬೇಕು ' ಹೇಳಿದ ರಾಮಣ್ಣ .
ಮತ್ತೊಂದ್ ದಿನ ಪದ್ದಕ್ಕ ಅಲ್ದಾ ರಾಮಣ್ಣ ಎಲ್ಲಾರು ಆತನ ನಿಮ್ಮನೆ ಕೂಸಿಗೆ ? ಕೇಳ್ಚು .
ರಾಮಣ್ಣ : ಹ್ಮ್ಮ್ ಸುಮಾರು ಕಡೆ ಆಗಿತ್ತು ನನ್ಗನೆ ಬೇಡ ಅಂದ್ಯ ಇನ್ನು ಬೇರೆ ಒಳ್ಳೆ ಕಡೆ ಸಿಗ್ತು ಹೇಳಿ ..ಒಂದು ಸುಳ್ಳು ಹೇಳ್ದ
ಹಂಗೆ ಸ್ವಲ್ಪ ದಿನ ಆತು ಒಂದು ದಿನ ಶಾಂತಿ ಹೊರಗಡೆ ಹೋಗಿ ಬತ್ತಿ ಹೇಳಿ ಹೋದವಳು ವಾಪಸ್ ಬರಲೇ ಇಲ್ಲೆ . ಬೆಳಿಗ್ಗೆ ಹೋದವಳು ರಾತ್ರಿ ಆದರು ಬರ್ಲೆ ಅಂದ್ರೆ ಎಲ್ಲಿ ಹೋಗಿಕ್ಕು ಗಂಡ ಹೆಂಡತಿ ಇಬ್ರಿಗೂ ಸ್ವಲ್ಪ ಗಾಬರಿ ಆತು . ರಾಮಣ್ಣ ರಾತ್ರಿನೇ ಹೊರಟ ಹುಡುಕಲೆ. ೨ ದಿನ ಆದರು ಯಂತು ಸುದ್ದಿ ಸಿಗಲ್ಲೆ. ಕೊನೆಗೆ ಸುದ್ದಿ ಸಿಕ್ಚು ಕೊನೆ ಕೊಯ್ಯ ರಮೇಶ ನು ಕಾಣೆ ಅಯ್ದ್ನಡ ರಾಮಣ್ಣನ ಮಗಳು ಶಾಂತಿ ರಮೇಶ ಇಬ್ರು ಓಡೋಗಿ ಮದುವೆ ಮಾಡಿಕೈಂದವಡ ಹೇಳಿ .
ಪದ್ದಕ್ಕ : ಅಯ್ಯೋ ಅವತ್ತೇ ಹೇಳಿದಿ ನಮ್ಮ ಹವ್ಯಕರೇ ಮನೆಲಿಪ್ಪವು ರಾಶಿ ಜನ ಇದ್ದ ಎಲ್ಲಾದರು ಒಳ್ಳೆ ಕಡೆ ಕೊಡಿ ಹೇಳಿ ಇಲ್ಲೆ ಇನ್ಜಿನಿಯರೇ ಅಗಕ್ಕು ಹೇಳಿದ ಈಗ ನೋಡು ಯಂತ ಅಳಿಯ ಸಿಕ್ಕ ಹೇಳಿ .


ಅರ್ಪಿತಾ ಹರ್ಷ
ಲಂಡನ್

Not publishe

Monday 19 March 2012

ಅಣ್ಣನಿಗೊಂದು ಅಂತರಾಳದ ಮಾತು

೧೯/೦೫/೨೦೧೨ ರ ಹೊಸದಿಗಂತದಲ್ಲಿ ಪ್ರಕಟಗೊಂಡಿದೆ 

ಪ್ರೀತಿಯ ಅಣ್ಣ
ಬಹಳ ದಿನಗಳ ನಂತರ ದಿನಗಳ ನಂತರವೇನು ಇದೆ ಮೊದಲ ಭಾರಿಗೆ ನಿನಗೆ ಪತ್ರ ಬರೆಯುವ ಸಾಹಸಕ್ಕೆ ಕೈ ಹಾಕಿದ್ದೇನೆ . ಆಶ್ಚರ್ಯವಾಗುತ್ತಿರಬಹುದು ಜೊತೆಗೆ ಸಂತೋಷವು ಆದೀತೆಂಬ ನಂಬಿಕೆ .ಕಳೆದ ಕೆಲ ದಿನಗಳಿಂದ ನಿನ್ನಲ್ಲದ ಬದಲಾವಣೆಯನ್ನು ಗಮನಿಸಿದೆ ದೂರವಿದ್ದರು ರಕ್ತಸಂಬಂಧ ನೋಡು ಮಾತಿನಲ್ಲೇ ಮನಸ್ಸು ತಿಳಿಯುವ ಸಣ್ಣ ಪ್ರಯತ್ನ ಮಾಡಿದೆ . ಮೊದಲಿನಂತಿಲ್ಲ ನೀನು . ನಿನ್ನೊಟ್ಟಿಗೆ ಕಲಿತ ಪಾಠ, ಆಡಿದ ಆಟ, ಮಾಡಿದ ಜಗಳ, ಇವೆಲ್ಲ ಇಂದಿಗೂ ಹಚ್ಚ ಹಸಿರು .ನೀನು ಅಷ್ಟೇ ನಿನ್ನ ಕಣ್ಣ ಬಿಂದುವಿನಂತೆ ನನ್ನ ನೋಡಿಕೊಂಡೆ ಜೀವನದಲ್ಲಿ ಎಷ್ಟೋ ಭಾರಿ ಮನ ನೋಯಿಸಲೆಂದೇ ಕೆಲವರು ಆಡಿದ ಮಾತುಗಳಿಂದ ನೊಂದಾಗ ಜೊತೆ ನೀಡಿದವ ನೀನು, ಚಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ಬುದ್ಧಿ ಹೇಳಿದವ ನೀನು . ಕಣ್ಣಲ್ಲಿ ನೀರು ತುಂಬಿದ್ದನ್ನು ಯಾರು ಗಮನಿಸದಿದ್ದರು ನೀನೆ ಗಮನಿಸಿ ಇದಕ್ಕೆಲ್ಲ ಒಂದೇ ಉತ್ತರ ಸಾಧಿಸಿ ತೋರಿಸು ಎಂದು ಹುರಿದುಂಬಿಸಿದವ ನೀನು . ಏನಿದ್ದರು ಮನಸ್ಸಿನಲ್ಲಿಟ್ಟುಕೊಳ್ಳ ಬೇಡ ನಾನಿರುವೆ ನಿನ್ನ ಅಣ್ಣ ಎಂದು ಸಾಂತ್ವನ ನೀಡಿದವ . ಚಿಕ್ಕಂದಿನಿಂದಲೂ ಅಳುವಿನಲ್ಲೂ ನಗಿಸಿದವ ನೀನು . ನಿನ್ನ ನೋಡಿದರೆ ನನಗೊಂದು ಹೆಮ್ಮೆ .
ಆದರೆ ಇತ್ತೀಚಿಗೆ ನೀನು ಮೊದಲಿನಂತಿಲ್ಲ ಸಾಕಷ್ಟು ಬದಲಾಗಿದ್ದೀಯ .ಕೆಲವೊಮ್ಮೆ ಇಲ್ಲೇ ಇದ್ದು ಎಲ್ಲೊ ಕಳೆದು ಹೋದಂತಿರುತ್ತೀಯ ಇನ್ನೊಮ್ಮೆ ಮಾತನಾಡಿಸಿದರೆ ಏನೋ ಅಡಚಣೆ ಏನೋ ಎಂಬಂತೆ ವರ್ತಿಸುತ್ತೀಯ ನಿನ್ನ ಈ ರೀತಿಯ ವರ್ತನೆ ನನಗೆ ತೀರ ಹೊಸದು .ಮೊದಲೆಲ್ಲ ಹೀಗಿರಲಿಲ್ಲ ನೀನು ಮಾತು ಸಾಕು ಎಂಬಲ್ಲಿವರೆಗೆ ಹರಟುತ್ತಿದ್ದೆ . ಇನ್ನು ನಗಲು ಸಾಧ್ಯವೇ ಇಲ್ಲ ಎಂಬಷ್ಟು ನಗಿಸುತ್ತಿದ್ದೆ . ಮನಬಿಚ್ಚಿ ಹರಟುತ್ತಿದ್ದೆ . ನನಗು ಆಗೆಲ್ಲ ನಿನ್ನೊಂದಿಗೆ ಹಂಚಿಕೊಳ್ಳಲು ಸಾಕಷ್ಟು ವಿಷಯಗಳಿರುತ್ತಿದ್ದವು. ಆದರೆ ಈಗ ನೀನು ತುಂಬಾ ಗಂಭೀರ ಮೊದಲಿನ ನಗು ಇಲ್ಲ ಮಾತೂ ಇಲ್ಲ . ಏಕೆ ಹೀಗೆ ಎಂಬ ಪ್ರಶ್ನೆಗೆ ಮಾತ್ರ ಇಂದು ಉತ್ತರ ದೊರಕಲಿಲ್ಲ . ನಾವು ಬದುಕಿನಲ್ಲಿ ಏನಾದರು ಸಾಧಿಸಬೇಕು ಎಂಬ ಪ್ರಯತ್ನ ದಲ್ಲಿದ್ದಾಗ ಹಲವಾರು ತೊಂದರೆಗಳು ಅಡ್ಡಬರುವುದು ಸಹಜ ಕೆಲವೊಮ್ಮೆ ಕೊಂಕು ನುಡಿಗಳೂ ಕೇಳಬೇಕಾಗುವುದು ಆದರೆ ಅವನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆ ಮುನ್ನುಗ್ಗಿ ಬದುಕನ್ನು ಹಸನಾಗಿಸಿಕೊಂಡು ಹೋಗುವುದೇ ಜೀವನ . ನೀನೇನು ಮಾಡಬೇಕೆಂಬುದು ನಿನ್ನ ಹಿಡಿತದಲ್ಲಿದ್ದರೆ ಎಲ್ಲವೂ ಸುಲಭ ನಿನ್ನ ದಾರಿ ಸುಗಮವಾಗಿಸಿಕೊಳ್ಳುವುದು ನಿನ್ನ ಕೈಯಲ್ಲೇ ಇದೆ . ಮುನ್ನುಗ್ಗಿ ನಿನ್ನ ಜೀವನ ವನ್ನು ಯಶಸ್ವಿಯಾಗಿಸಿಕೊ. ಎಂತಹ ಸಂದರ್ಭದಲ್ಲೂ ಧ್ರುತಿಗೆಡಬೇಡ .ಇವೆಲ್ಲ ನಿನಗೆ ಗೊತ್ತಿರುವ ವಿಚಾರಗಳೇ ನೀನೆ ನನಗೆ ಹೇಳಿಕೊಟ್ಟ ವಿಚಾರಗಳು ಆದರು ತಂಗಿಯಾಗಿ ಇದಿಷ್ಟನ್ನು ಒಮ್ಮೆ ನೆನಪಿಸುವ ಸಣ್ಣ ಪ್ರಯತ್ನ ಮಾಡಿದ್ದೇನೆ .
ಎಂದು ನಿನಗೆ ಪತ್ರ ಬರೆದಿರಲಿಲ್ಲ ನಿನ್ನ ಎದುರು ಕುಳಿತು ಹೇಳಬೇಕು ಎಂದುಕೊಂಡಿರುವುದೆಲ್ಲ ಹೇಳಿಬಿಡುತ್ತಿದ್ದೆ. ಒಂದು ಆತ್ಮೀಯ ಹರಟೆ ಅಲ್ಲಿರುತ್ತಿತ್ತು ಇತ್ತೀಚಿಗೆ ನಿನ್ನೆದುರು ಇದನ್ನೆಲ್ಲಾ ಹೇಳುವ ಪ್ರಯತ್ನ ಮಾಡಿ ಸೋತಿದ್ದೇನೆ ಅದಕ್ಕಾಗಿ ಈ ಪತ್ರ ಎದುರು ಹೇಳಲಾಗದುದನ್ನು ಇಲ್ಲಿ ಹೇಳುತ್ತಿದ್ದೇನೆ .ಓದಿ ಉತ್ತರಿಸು.



ಇಂತಿ ನಿನ್ನ ತಂಗಿ
ಅರ್ಪಿತಾ ಹರ್ಷ



Friday 16 March 2012

ಇಂಗ್ಲೆಂಡ್ ನ ಐಲ್ ಆಫ್ ವೈಟ್ ದ್ವೀಪ

ಲಂಡನ್ ಗೆ ಬಂದ ಪ್ರಾರಂಭದಲ್ಲಿ ಹತ್ತಿರದಲ್ಲಿರುವ ಎಲ್ಲ ಸ್ಥಳಗಳಿಗೆ ಹೋಗಿ ನೋಡಿ ಬಂದೆವು ಆಗಸ್ಟ್ ತಿಂಗಳಿನಲ್ಲಿ ಇಲ್ಲಿ ಬೇಸಿಗೆ ಬೇಸಿಗೆ ಎಂದರೆ ಸುಡುವ ಬಿಸಿಲೇನು ಇರುವುದಿಲ್ಲ ಸುಮಾರು ೨೦ ಡಿಗ್ರಿ ಅಷ್ಟು ತಾಪಮಾನ ಇತ್ತು.ಆ ಸಮಯದಲ್ಲಿ ಗೆಳೆಯರ ಸಹಾಯದಿಂದ ಹೊಸ ಸ್ಥಳಗಳಿಗೆ ಹೋಗುವ ನಿರ್ಧಾರ ಮಾಡಿದೆವು ಆಗ ಎಲ್ಲರ ಸಲಹೆಯ ಮೇರೆಗೆ ಸಿಕ್ಕ ಸ್ಥಳವೆ ಐಲ್ ಆಫ್ ವೈಟ್ . ಲಂಡನ್ ನಿಂದ ಸುಮಾರು ೧೨೬ ಕಿಲೋಮೀಟರು ದಲ್ಲಿರುವ ಐಲ್ ಆಫ್ ವೈಟ್ ಒಂದು ಸುಂದರ ದ್ವೀಪ .
ನಾವು ಹೋಗಿರುವುದು ೨ ದಿನಗಳ ಪ್ರವಾಸ ೨ ದಿನಗಳಲ್ಲಿ ಈ ಪುಟ್ಟ ದ್ವೀಪದ ಸುಮಾರು ೬ ಸ್ಥಳಗಳನ್ನು ನೋಡಿ ಬಂದೆವು ಇಲ್ಲಿಯ ಒಂದೊಂದು ಸ್ಥಳಗಳು ಕೂಡ ಅದ್ಭುತ . ಶನಿವಾರ ಬೆಳಗಿನ ಜಾವ ೫ ಗಂಟೆಗೆ ಮನೆಯಿಂದ ನಾವು ಹೊರಟೆವು ಮೊದಲು ತಲುಪಿದ ಸ್ಥಳ 'ಪೋರ್ಟ್ಸ್ ಮೌತ್ ಬಂದರು ', ಸುತ್ತಲು ಸಮುದ್ರ ತುಂಬಿರುವ ಇಲ್ಲಿ ಬೆಳಗ್ಗಿನ ಮುಂಜಾನೆ ಆಕರ್ಷಣೀಯವಾಗಿತ್ತು .ಯಥೆಚ್ಚವಾದ ಹಡಗು ಸಂಚಾರ ಸದಾ ಕಾಲ ನಡೆಯುವ ಪ್ರದೇಶವಿದು .ಅದು ನಮ್ಮ ಪ್ರವಾಸ ಪ್ರಾರಂಭದ ಸ್ಥಳ . ಮುಂಜಾನೆಯ ಸೂರ್ಯಾಸ್ತದ ಜೊತೆ ಕಾಫೀ ತಿಂಡಿ ಸವಿದು ಅಲ್ಲಿಂದ ನಮ್ಮ ಪ್ರಯಾಣ ಮೊದಲು ಹೊರಟಿದ್ದು 'ನೀಡಲ್ಸ್ ' ಎಂಬ ಸ್ಥಳಕ್ಕೆ .
ನೀಡಲ್ಸ್ ಹೆಸರೇ ಹೇಳುವಂತೆ ಸೂಜಿಯಾಕಾರದಲ್ಲಿದೆ . ಸುಮಾರು ೫ ಕಿಲೋಮೀಟರ್ ನಷ್ಟು ಹತ್ತಿ ತುದಿ ತಲುಪಬೇಕು ಇಲ್ಲಿ ಮೊದಲು ಶತ್ರುದೇಶಗಳ ಹಡಗುಗಳ ದಾಳಿ ಆಗದಂತೆ ತಡೆಯಲು ಈ ನೀಡಲ್ಸ್ಗ ನ ತುದಿಯಲ್ಲಿ ದೊರದರ್ಷಕಗಳಿಂದ ಕನ್ಗಾವಲಿದುತ್ತಿದ್ದರು.

ಇದು ಈಗ ಪ್ರವಾಸಿ ಸ್ಥಳವಾಗಿ ನಿರ್ಮಾಣಗೊಂಡಿದೆ. ೩ ದಿಕ್ಕಿನಲ್ಲೂ ಸಮುದ್ರವಿದೆ ಮಧ್ಯ ಚಾರಣಕ್ಕೆ ಸ್ಥಳ ೫ ಕಿಲೋಮೀಟರ್ ನಡೆದರೂ ಒಂದು ಸ್ವಲ್ಪ ಕೂಡ ದಣಿವಾಗದು ಅಂತಹ ಸುಂದರ ವಾತಾವರಣ ನೋಡಲು ಕಣ್ಣು ಕುಕ್ಕುವ ಹಾಗಿದೆ .ಸುಮಾರು ೩ ಗಂಟೆಗಳ ಕಾಲ ಅಲ್ಲಿಕಳೆದ ನಾವು ನಂತರ ಹೋಗಿದ್ದು 'ಸ್ಯಾನ್ ಡೌನ್ ' ಎಂಬ ಸ್ಥಳಕ್ಕೆ .
ಸ್ಯಾನ್ ಡೌನ್ ನಲ್ಲಿ ಬೀಚ್ ಇದೆ ಸಂಜೆಯ ಸಮಯದಲ್ಲಿ ಬೀಚ್ ನ ವಿಹಾರ ಸುಂದರ ಸುರ್ಯಾಸ್ತವಾಗುವ ಸಮಯದಲ್ಲಿ ಬೀಚ್ ನಲ್ಲಿ ಕಳೆಯುವ ಆನಂದ ವರ್ನಿಸಲಸಾದ್ಯ. ಅಲ್ಲೇ ಒಂದು ಪ್ರಾಣಿ ಸಂಗ್ರಹಾಲಯವು ಇದೆ ಹುಲಿ ಸಿಂಹ ಹಾವು ಚಿರತೆ ಹೀಗೆ ಹಲವು ಪ್ರಾಣಿಗಳನ್ನು ನೋಡಬಹುದು ಇದರ ಪಕ್ಕದಲ್ಲೇ ಡಿನೋಸಾರಸ್ ಸಂಗ್ರಹಾಲಯವಿದೆ ಹಿಂದಿನಕಾಲದಲ್ಲಿ ಹೇಗೆ ಡೈನೋಸಾರಸ್ ಗಳು ಬದುಕಿದ್ದವು ಅವುಗಳ ಮೊಟ್ಟೆ ಹೇಗಿರುತ್ತದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡೆವು .ನಾವು ಉಳಿದುಕೊಳ್ಳುವ ಹೋಟೆಲ್ ಸ್ಯಾನ್ ಡೌನ್ ನಲ್ಲೆ ಇದ್ದುದರಿಂದ ಸುಮಾರು ೭ ಗಂಟೆಯವರೆಗೆ ನಾವು ಬೀಚ್ ನಲ್ಲಿ ಆಟವಾಡಿ ನಂತರ ಹೋಟೆಲ್ ಸೇರಿದೆವು .
ಮರುದಿನ ಮೊದಲೇ ನಿರ್ಧರಿಸಿದಂತೆ ಬೆಳಗ್ಗೆ ೮ ಗಂಟೆಗೆಲ್ಲ ಹೋಟೆಲ್ ನಲ್ಲೆ ಉಪಹಾರ ಮುಗಿಸಿ 'ಗಾಡ್ ಶಿಲ್ ' ಎಂಬ ಸ್ಥಳಕ್ಕೆ ಹೊರಟೆವು .
ಗಾಡ್ ಶಿಲ್ ಬಹಳ ಹಳೆಯ ಕಾಲದ ಸ್ಥಳ ಅಲ್ಲಿ ಹಿಂದಿನ ಕಾಲದವರು ಹೇಗಿದ್ದರು ಆಗಿನ ಮನೆಗಳೆಲ್ಲ ಹೇಗಿರುತ್ತದೆ ಎಂಬ ಮಾಹಿತಿ ಸಿಗುತ್ತದೆ .

ಅಲ್ಲಿ ಒಂದು ಮಾದರಿ ಗ್ರಾಮ (ಮಾಡೆಲ್ ವಿಲ್ಲೇಜ್ ) ಎಂಬ ಸಂಗರಹಾಲಾಯವಿದೆ .ಸುಮಾರು ಒಂದು ತಾಸಿನ ಹಸಿರು ತುಂಬಿದ ಮಾಡೆಲ್ ವಿಲ್ಲೇಜ್ ನ ವೀಕ್ಷಣೆಯ ನಂತರ ನಾವು ಹೋಗಿದ್ದು ಅಲ್ಲಿಯೇ ಹತ್ತಿರದಲ್ಲಿರುವ ಚರ್ಚ್ ಇದು ಕೂಡ ಹಳೆಯದು ಪುರಾತನ ಕಾಲದ ಚರ್ಚ ಅನ್ನು ಇನ್ನು ನಡೆಸಿಕೊಂಡು ಬರುತ್ತಿದ್ದಾರೆ . ಅಲ್ಲಿಂದ ನಮ್ಮ ಪ್ರಯಾಣ ಹೊರಟಿದ್ದು ಶಾಂಕ್ ಲೀನ್ ಎಂಬ ಕಾಡಿಗೆ .

ಶಾಂಕ್ ಲೀನ್ ಒಂದು ಪಟ್ಟಣ ಪ್ರದೇಶವೇ ಆದರೆ ಅದರ ಮಧ್ಯದಲ್ಲೇ 'ಶಾಂಕ್ ಲೀನ್ ಶೈನ್ ' ಎಂಬ ದಟ್ಟ ಕಾಡೊಂಡಿದೆ ಇಲ್ಲಿ ಒಂದು ಜಲಪಾತವು ಕೂಡ ಇದೆ ಜೊತೆಗೆ ಪ್ರಾಣಿ ಪಕ್ಷಿಗಳ ಸಂಗ್ರಹಾಲಯವಿದೆ . ಇದೆಲ್ಲ ನೋಡಿ ಮುಗಿಸಿ ಹೊರ ಹೊರಟರೆ ಸಿಗುವುದೇ ಶಾಂಕ್ ಲೀನ್ ಬೀಚ್ . ಇದರ ಜೊತೆಗೆ ನಮಗೆ ಕುಶಿ ನೀಡಿದ ವಿಷಯವೆಂದರೆ ಇಲ್ಲಿ ನಮಗೆ ನಮ್ಮ ಭಾರತದ ಹೋಟೆಲ್ ಒಂದು ಸಿಕ್ಕಿದ್ದು. ಮಹಾರಾಜ ಎಂಬ ಭಾರತದ ಹೋಟೆಲ್ ನಲ್ಲಿ ದೇಸಿ ಊಟ ಮುಗಿಸಿ ಸಂತೋಷ ಪಟ್ಟು ಅಲ್ಲಿಂದ ನಮ್ಮ ಪ್ರಯಾಣ ಹೊರಟಿದ್ದು ರೈಡ್ ಎಂಬ ಸ್ಥಳಕ್ಕೆ.
ರೈಡ್ ಒಂದು ಸುಂದರ ಸ್ಥಳ ಇದು ಬಂದರುವಿನ ಪಕ್ಕದಲ್ಲೇ ಬರುವುದರಿಂದ ಅಲ್ಲಿ ಸಾಕಷ್ಟು ಹಡಗುಗಳು, ೩ ದಿಕ್ಕುಗಳಲ್ಲೂ ಸಮುದ್ರ . ಇದು ನಮ್ಮ ಕೊನೆಯ ಸ್ಥಳವಾಗಿತ್ತು ನಾವು ಅಲ್ಲಿಂದ ಹೊರಡುವಾಗ ಸುಮಾರು ಸಂಜೆ ೬ ಗಂಟೆ ಯಾಗಿತ್ತು . ೪ ತಾಸಿನ ಪ್ರಯಾಣ ಮತ್ತೆ ಬಂದು ಲಂಡನ್ ತಲುಪುವಾಗ ೧೦ ಗಂಟೆ .ಒಟ್ಟಾರೆಯಾಗಿ ೨ ದಿನ ಸುಂದರ ಹಸಿರು ತುಂಬಿದ ಎಲ್ಲಿ ನೋಡಿದರು ಮತ್ತೆ ಮತ್ತೆ ನೋಡಬೇಕೆಂಬ ಬಿಟ್ಟ ಕಣ್ಣು ಮುಚ್ಚದಂತೆ ಎವೆಯಿಕ್ಕದೆ ನೋಡಿ ಸಂತೋಷ ನೀಡಿದ ಪ್ರವಾಸವದು .ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ .



ಅರ್ಪಿತಾ ಹರ್ಷ
ಲಂಡನ್


ಈ ನನ್ನ ಲೇಖನವು ಈ ಕನಸುವಿನಲ್ಲಿ ಪ್ರಕಟಗೊಂಡಿದೆ http://www.ekanasu.com/2012/04/blog-post_4555.html

Thursday 15 March 2012

ಮನೆಯಲ್ಲಿಯೇ ಮಾಡಿ ಮಾವಿನ ಮಿಲ್ಕ್ ಶೇಕ್ .

ಇದು ಮಾವಿನ ಹಣ್ಣಿನ ಸೀಸನ್ . ಮಾವು ಎಂದರೆ ಎಲ್ಲರ ಬಾಯಲ್ಲೂ ನೀರು ಬರುವುದು ಖಂಡಿತ . ಮಾವಿನ ಹಣ್ಣಿನ ಮಿಲ್ಕ್ ಶೇಕ್ ಅನ್ನು ಮನೆಯಲ್ಲಿಯೇ ಮಾಡಿ ಸವಿಯಬಹುದು .


ಮಿಲ್ಕ್ ಶೇಕ್ ಗೆ ಬೇಕಾಗುವ ಸಾಮಗ್ರಿಗಳು :
ಸಿಹಿ ಮಾವಿನ ಹಣ್ಣು ೧
ಸಕ್ಕರೆ ಸ್ವಲ್ಪ
ಏಲಕ್ಕಿ ಪುಡಿ ೧ ಚಮಚ
ಐಸ್ ಕ್ಯೂಬ್ ೧ (ಬೇಕಿದ್ದಲ್ಲಿ)
ಹಾಲು ೧ ಕಪ್

ಮಾವಿನ ಹಣ್ಣನ್ನು ಹೋಳುಗಳನ್ನಾಗಿ ಹೆಚ್ಚಿಕೊಳ್ಳಿ . ಮಿಕ್ಸೆರ್ ನಲ್ಲಿ ಹೆಚ್ಚಿಟ್ಟ ಹೋಳುಗಳನ್ನು ಹಾಕಿ ಸಕ್ಕರೆ, ಏಲಕ್ಕಿ ಪುಡಿ ಹಾಕಿ ರುಬ್ಬಿ . ಬೇಕಿದ್ದಲ್ಲಿ ಐಸ್ ಕ್ಯೂಬ್ ಅನ್ನು ಸೇರಿಸಿಕೊಳ್ಳಬಹುದು . ಈಗ ಕಾದ ಹಾಲನ್ನು ತಣಿಸಿ ತಣ್ಣಗಿರುವ ಹಾಲನ್ನು ಸೇರಿಸಿ . ಈಗ ರುಚಿಯಾದ ಮಿಲ್ಕ್ ಶೇಕ್ ರೆಡಿ .



ಅರ್ಪಿತಾ ಹರ್ಷ

ಈ ನನ್ನ ಲೇಖನವು ಈ ಕನಸುವಿನಲ್ಲಿ ಪ್ರಕಟಗೊಂಡಿದೆ http://www.ekanasu.com/2012/03/blog-post_7558.html

Tuesday 13 March 2012

ಲಂಡನ್ ಜನಜೀವನ

ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ http://www.vijayanextepaper.com//svww_zoomart.php?Artname=20120427a_019101002&ileft=41&itop=97&zoomRatio=130&AN=20120427a_019101002

ಲಂಡನ್ ಜನರ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ ಕಲಿಯುವುದು ಇದೆ ಇಲ್ಲಿ ಅವಕಾಶಗಳ ಮಹಾಪೂರವೇ ಇದೆ ಎನ್ನಬಹುದು.
ಬರಿ ಅವಕಾಶಗಳಿದ್ದರೆ ಸಾಲದು ಅದನ್ನು ಹುಡುಕುವ ಹಂಬಲ ಮತ್ತು ಕೆಲಸದ ಬಗ್ಗೆ ಗೌರವ ಇರಬೇಕು. ಇಲ್ಲಿಯ ಯುವಪೀಳಿಗೆಯನ್ನು ಗಮನಿಸಿದಾಗ ಕಂಡುಬಂದ ವಿಷಯವೆಂದರೆ ಅವರಲ್ಲಿರುವ ಆಸಕ್ತಿ
ರೆಸ್ಟೋರೆಂಟ್ ಕೆಲಸ , ಟಿಕೆಟ್ ಮಾರಾಟ ,ಪೇಪರ್ ಹಾಕುವುದು ಇವುಗಳನ್ನೆಲ್ಲ ಒಂದು ಗೌರವಾನ್ವಿತ ಕೆಲಸ ಎಂದೇ ಭಾವಿಸಿ ಮಾಡುತ್ತಾರೆ ಇದರಿಂದ ತಮಗೆ ಓದಲು ಬೇಕಾಗುವ ಹಣ ಗಳಿಸಿಕೊಳ್ಳುತ್ತಾರೆ.ನಮ್ಮ ದೇಶದಿಂದ ಎಂ ಬಿ ಎ ಮತ್ತಿತರ ಉನ್ನತ ಹುದ್ದೆಗಳನ್ನು ಓದಲು ಬರುವ ಯುವಕರು ಕೂಡ ತಮ್ಮ ಬಿಡುವಿನ ವೇಳೆಯಲ್ಲಿ ಪಾರ್ಟ್ ಟೈಮ್ ಕೆಲಸಕ್ಕೋಸ್ಕರ ಇಂತಹ ಕೆಲಸಗಳಿಗೆ ಸೇರುತ್ತಾರೆ ಕಷ್ಟಪಟ್ಟು ದುಡಿಯುತ್ತಾರೆ. ಇಲ್ಲಿ ಯಾವುದಕ್ಕೂ ಮೇಲು ಕೀಳು ಎಂಬ ಭಾವನೆಗಳಿಲ್ಲ ಯಾರು ಯಾರನ್ನು ನಿನ್ನ ಕೆಲಸವೇನು ಎಂದು ಪ್ರಶ್ನಿಸುವಂತಿಲ್ಲ .
ಜೊತೆಗೆ ಇಲ್ಲಿ ಐಟಿ ಕಂಪೆನಿಗಳ ಸಂಖ್ಯೆ ದೊಡ್ಡದಿಲ್ಲದಿದ್ದರುಆರ್ಥಿಕವಾಗಿ ಮುಂದುವರೆದಿದೆ .ಹಾಗಾಗಿ ಬೇರೆಬೇರೆ ದೇಶಗಳೊಂದಿಗೆ ಟೈ ಅಪ್ ಆಗುವುದರ ಜೊತೆ ಅಲ್ಲಿನ ಜನರನ್ನು ಕೈಬೀಸಿ ಕರೆಯುತ್ತಾರೆ ನಮ್ಮ ದೇಶಗಳಲ್ಲಿ ಬುದ್ದಿವಂತರ ಸಂಖ್ಯೆ ಹೆಚ್ಚಿದೆ ಆದರೆ ಅವಕಾಶಗಳು ಕಡಿಮೆ ಇಂಜಿನಿಯರಿಂಗ್ ಓದಿಕೊಂಡರು ಕೆಲಸ ಸಿಗುವುದು ಕಷ್ಟ . ಈ ದೇಶದಲ್ಲಿ ಬಂಡವಾಳ ಹೂಡಿಕೆ ಯು ಇದೆ ಅದರಿಂದ ಲಾಭವನ್ನು ಪಡೆಯುತ್ತಾರೆ ಬೇರೆ ದೇಶದ ಬುದ್ದಿವಂತ ರಿಂದ ದುಡಿಸಿಕೊಂಡು ಹೊಸ ಆವಿಷ್ಕಾರಗಳನ್ನು ಮಾಡುತ್ತಾರೆ ಹೆಸರು ಗಳಿಸಿಕೊಳ್ಳುತ್ತಾರೆ .
ಇಲ್ಲಿಯೂ ನಿರುದ್ಯೋಗಿಗಳಿದ್ದಾರೆ ಬಡವರಿದ್ದಾರೆ ಆದರೆ ಇಲ್ಲಿ ಒಂದು ಹಂತದ ವಿದ್ಯಾಭ್ಯಾಸ ಮುಗಿದ ನಂತರ ಕೆಲಸ ಸಿಗದಿದ್ದಲ್ಲಿ ಸರ್ಕಾರವೇ ಅವರ ಖರ್ಚನ್ನು ಭರಿಸುತ್ತದೆ ಇದರಿಂದ ಇಲ್ಲಿ ಯಾರು ಬಡವರು ಎನ್ನಿಸಿಕೊಳ್ಳುವುದೇ ಇಲ್ಲ . ಜನರಿಂದ ತೆಗೆದುಕೊಳ್ಳುವ ಟ್ಯಾಕ್ಸ್ ಅನ್ನು ಈ ರೀತಿ ಉಪಯೋಗಿಸಿಕೊಳ್ಳುತ್ತದೆ ೧೮ ವರ್ಷ ತುಂಬುತ್ತಿದ್ದಂತೆ ಮಕ್ಕಳನ್ನು ಅವರ ಜೀವನ ಅವರು ನೋಡಿಕೊಳ್ಳುವಷ್ಟು ಸ್ವಾವಲಂಬಿಯನ್ನಾಗಿ ರೂಪಿಸಿ ಬಿಟ್ಟಿರುತ್ತಾರೆ . ತಮ್ಮ ಬದುಕಿಗೆ ಬೇಕಾಗುವಷ್ಟು ದುಡಿಮೆಯನ್ನು ಅವರೇ ದುಡಿದುಕೊಳ್ಳುತ್ತಾರೆ. ನಮ್ಮ ದೇಶದ ರೀತಿ ರಾಜಕೀಯಗಳಿರುವುದಿಲ್ಲ ಹಣವನ್ನು ಎಲ್ಲೂ ದುರುಪಯೋಗ ಮಾಡುವ ಅವಕಾಶಗಳಿಲ್ಲ .
ಭಾರತದಂತ ದೇಶಗಳಲ್ಲಿ ಯುವಕರಿಗೆ ಜೀವನದ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ ಮುಂದೇನು ಎಂಬುದರ ಬಗ್ಗೆ ಯೋಚನೆ ಇರುತ್ತದೆ ಇಲ್ಲಿಯ ಜನರಿಗೆ ಮಾಡುವ ಕೆಲಸದಲ್ಲಿ ಆಸಕ್ತಿ , ಶ್ರದ್ದೆ ಇರುತ್ತದೆ ನಿಜ ಆದರೆ ಜೀವನದ ಬಗ್ಗೆ ಗಂಭೀರತೆ ಇರುವುದಿಲ್ಲ ಕೆಲಸ ಸಿಗದಿದ್ದರೂ ಸರ್ಕಾರದಿಂದ ದೊರಕುವ ಭತ್ಯೆ ಯಲ್ಲಿಯೇ ಕಾಲ ಕಳೆಯಬಹುದೆಂಬ ನಿರ್ಧಾರ ಇರುತ್ತದೆ. ಜೊತೆಗೆ ಇಲ್ಲಿನ ಜನ ಮಕ್ಕಳಿಗೆ ಅಥವಾ ಜೀವನದ ಮುಂದಿನ ದಿನಗಳಿಗಾಗಿ ಏನನ್ನು ಕೂಡಿ ಇಡುವುದಿಲ್ಲ ಬಂದ ಹಣವನ್ನೆಲ್ಲ ಪ್ರವಾಸಗಳಿಗೆ ಅಥವಾ ಇತರ ರೀತಿಯ ಮನೋರಂಜನೆಗಳಿಗೆ ಬಳಸುತ್ತಾರೆ ಇದರಿಂದ ವರ್ತಮಾನದಲ್ಲಿ ಸಂತೋಷ ವನ್ನು ಅನುಭವಿಸುತ್ತಾರೆ ಮುದಿನ ದಿನಗಳ ಬಗ್ಗೆ ಅವರಲ್ಲಿ ಯಾವುದೇ ರೀತಿಯ ನಿರೀಕ್ಷೆಗಳಾಗಲಿ ಭಯಗಳಾಗಲಿ ಇರುವುದಿಲ್ಲ .ಹಾಗಾಗಿ ಇಲ್ಲಿನ ಜನರಿಗೆ ಜೀವನದಲ್ಲಿ ಏನಾದರೊಂದನ್ನು ಸಾಧಿಸಬೇಕೆಂಬ ಹಂಬಲ ಅಷ್ಟೊಂದಿರುವುದಿಲ್ಲ.ಜೊತೆಗೆ ಇಲ್ಲಿ ಆರ್ಥಿಕವಾಗಿ ಮುಂದಿರುವುದರಿಂದ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಾರೆ ಎನ್ನಬಹುದು .ನಮ್ಮ ದೇಶದಲ್ಲಿ ವಿದ್ಯಾವಂತರು ಹೆಚ್ಚಿದ್ದಾರೆ ಆದರೆ ಅವರು ಅವಕಾಶಗಳಿಗೊಸ್ಕರ ಕಾಯುತ್ತಾರೆ ಅದು ಹೊರದೇಶಗಳಲ್ಲಿ ಸಿಕ್ಕಾಗ ದೇಶ ಬಿಟ್ಟು ಹೊರದೇಶಗಳಲ್ಲಿ ನೆಲೆ ಹೂಡುವ ಪ್ರಯತ್ನ ಮಾಡುತ್ತಾರೆ .ಇದರಿಂದ ಅವರ ವೈಯಕ್ತಿಕ ಜೀವನಕ್ಕೆ ಲಾಭವಾಗುತ್ತದೆ ಆದರೆ ದೇಶಕ್ಕೆ ನಷ್ಟ ಏಕೆಂದರೆ ದೇಶ ಒಂದು ಒಳ್ಳೆಯ ಪ್ರತಿಭೆಯನ್ನು ಕಳೆದುಕೊಳ್ಳುತ್ತದೆ . ಪ್ರತಿಭಾ ಪಲಾಯನವಾಗುತ್ತಿದೆ .


ರಗಡ ಪಟ್ಟೀಸ್

ಈ ನನ್ನ ಲೇಖನವು ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ : http://www.vijayanextepaper.com//svww_zoomart.php?Artname=20120413a_018101003&ileft=633&itop=94&zoomRatio=130&AN=20120413a_018101003


ರಾಗಡಾ ಪಟ್ಟೀಸ್ ಉತ್ತರ ಭಾರತದ ಕಡೆಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಚಾಟ್. ತಿನ್ನಲೂ ಬಲು ರುಚಿ.ನೋಡಲು ಆಕರ್ಷಕ ವಾಗಿರುವುದು ಜೊತೆಗೆ ಮಕ್ಕಳು ವಯಸ್ಕರು ಎಲ್ಲ ಇಷ್ಟಪಡುವಂತ ಚಾಟ್ ಇದು . ನೀವೂ ಮಾಡಿ ನೋಡಿ .



ಬೇಕಾಗುವ ಸಾಮಗ್ರಿಗಳು :
ರಗಡ ಮತ್ತು ಪಟ್ಟೀಸ್ :-
ಬಟಾಣಿ ೧ ಕಪ್
ಆಲುಗಡ್ಡೆ ೪
ಬ್ರೆಡ್ ೧ (ಬೇಕಿದ್ದಲ್ಲಿ)
ಗರಂ ಮಸಾಲ ೧/೨ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಅರಿಶಿನ ಪುಡಿ ೧ ಚಮಚ
ಇಂಗು ಚಿಟಕಿ

ಬಟಾಣಿ ಯನ್ನು ಬೇಯಿಸಿಕೊಳ್ಳಿ . ಒಗ್ಗರಣೆಗೆ ಸಾಸಿವೆ ಉದ್ದಿನಬೇಳೆ ಹಾಕಿ ಬೆಂದ ಬಟಾಣಿಯನ್ನು ಹಾಕಿ ಸ್ವಲ್ಪ ನೀರು ಬೇಕಾದಲ್ಲಿ ಹಾಕಬಹುದು ನಂತರ ಗರಂ ಮಸಾಲ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಕುದಿಸಿ ಪಕ್ಕದಲ್ಲಿಟ್ಟುಕೊಳ್ಳಿ .
ಈಗ ಆಲುಗಡ್ಡೆಯನ್ನು ಬೇಯಿಸಿಕೊಳ್ಳಿ ಸಿಪ್ಪೆತೆಗೆದು ನುರುಚಿ ಅದಕ್ಕೆ ಉಪ್ಪು ಮತ್ತು ಅರಿಶಿನಪುಡಿ ಇಂಗು ಬೆರೆಸಿ. ಬೇಕಿದ್ದಲ್ಲಿ ಬ್ರೆಡ್ ಅನ್ನು ನೀರಿನಲ್ಲಿ ಅದ್ದಿ ಹಿಂಡಿ ಇದರೊಂದಿಗೆ ಮಿಶ್ರ ಮಾಡಬಹುದು .ನಂತರ ಈ ಮಿಶ್ರಣವನ್ನು ಚಪಾತಿ ಉಂಡೆಗಳಂತೆ ಮಾಡಿ ಎಣ್ಣೆಯಲ್ಲಿ ಹಾಕಿ ಕಂದುಬಣ್ಣ ಬರುವವರೆಗೆ ಕರಿಯಿರಿ.

ಸಿಹಿ ಚಟ್ನಿ :
ಹುಣಸೆ ಹಣ್ಣು ಸ್ವಲ್ಪ
ಬೆಲ್ಲ ೪ ಚಮಚ
ಕೆಂಪು ಮೆಣಸಿನ ಪುಡಿ ೧ chamacha
ಉಪ್ಪು

ನೀರಿನಲ್ಲಿ ಹುಣಸೇಹಣ್ಣನ್ನು ನೆನಸಿಟ್ಟು ಅದಕ್ಕೆ ಬೆಲ್ಲ ಮೆಣಸಿನಪುಡಿ ಸ್ವಲ್ಪ ಉಪ್ಪು ಹಾಕಿ ನುಣ್ಣಗೆ ರುಬ್ಬಿ ಸಿಹಿ ಚಟ್ನಿ ತಯಾರಿಸಿಕೊಳ್ಳಿ .

ಖಾರ ಚಟ್ನಿ :
ಹಸಿಮೆಣಸು ೪
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು

ಹಸಿಮೆಣಸು ಮತ್ತು ಕೊತ್ತುಂಬರಿ ಸೊಪ್ಪನ್ನು ಹೆಚ್ಚಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ನುಣ್ಣಗೆ ರುಬ್ಬಿದರೆ ಖಾರ ಚಟ್ನಿ ರೆಡಿ .

ತಯಾರು ಮಾಡಿಟ್ಟ ೨ ಆಲೂ ಪಟ್ಟೀಸ್ ಅನ್ನು ಪ್ಲೇಟ್ ಗೆ ಹಾಕಿ ಅದರ ಮೇಲೆ ಖಾರ ಚಟ್ನಿ ಮತ್ತು ಸಿಹಿ ಚಟ್ನಿ ಒಂದೊಂದು ಚಮಚ ಹಾಕಿ ಮೇಲಿನಿಂದ ಬಟಾಣಿಯ ರಗಡವನ್ನು ಹಾಕಿ . ಅಲಂಕಾರಕ್ಕೆ ಸೇವ್ ಮತ್ತು ಸಣ್ಣಗೆ ಹೆಚ್ಚಿತ್ತ ಈರುಳ್ಳಿ ,ಕೊತ್ತಂಬರಿ ಸೊಪ್ಪು ಉದುರಿಸಿ.
ಈಗ ರುಚಿಯಾದ ಚಾಟ್ ರೆಡಿ .


ಅರ್ಪಿತಾಹರ್ಷ



ಮೊಬೈಲ್ ಲೋಕ

ಗೆಳತಿಯೊಬ್ಬಳಿಗೆ ಮದುವೆ ಫಿಕ್ಸ್ ಆಗಿರುವುದು ತಿಳಿದು ಕುಶಿ ಆಯಿತು ಒಂದು ಫೋನ್ ಮಾಡಿ ವಿಶ್ ಮಾಡೋಣ ಎಂದು ಕಾಲ್ ಮಾಡಿದೆ ಬ್ಯುಸಿ ಬಂತು ಒಂದು ಅರ್ಧ ಗಂಟೆ ಬಿಟ್ಟು ಮತ್ತೆ ಫೋನ್ ಮಾಡಿದೆ ಆಗಲು ನೀವು ಕರೆಮಾಡಿದ ಚಂದಾದಾರರು ಬೇರೆ ಕರೆಯಲ್ಲಿ ಕಾರ್ಯ ನಿರತರಾಗಿದ್ದಾರೆ ಎಂದಿತು ಒಂದು ಹೆಣ್ಣು ದ್ವನಿ. ಸರಿ ಎಂದು ಸುಮಾರು ೪-೫ ಗಂಟೆಗಳ ಬಳಿಕ ಮತ್ತೆ ಕರೆ ಮಾಡಿದೆ ಆಗಲು ಅದೇ ಉತ್ತರ . ಪ್ರತಿದಿನ ಹೀಗೆ ಕಾಲ್ ಮಾಡುತ್ತಲೇ ಇದ್ದೆ ಒಮ್ಮೊಮ್ಮೆ ಬೇರೆಕರೆಯಲ್ಲಿ ಕಾರ್ಯ ನಿರತರಾಗಿದ್ದರೆ ,ಕೆಲವೊಮ್ಮೆ ಸ್ವಿಚ್ ಆಫ್ ಎಂದು ಹೇಳುತ್ತಿತ್ತು. ಒಂದು ವಾರದ ಬಳಿಕ ಅವಳಿಗೆ ಟೆಲಿಪತಿ ಯಾಯಿತೋ ಅಥವಾ ಮಿಸ್ಸಕಾಲ್ ನೋಡಿಯು ತಿರುಗಿ ಕಾಲ್ ಮಾಡದಿದ್ದಕ್ಕೆ ಬೈಯುತ್ತಾಳೆಂಬ ಭಯದಿಂದಲೋ ಅವಳೇ ಕಾಲ್ ಮಾಡಿದಳು .
ಹ್ಮ್ಮ್ ಅಂತು ಇವಾಗ ನಿನ್ನ ಜೊತೆ ಮಾತಾಡುವ ಅವಕಾಶ ಕೂಡಿ ಬಂತು ಎಂದೆ. ಸಾರೀ ಕಣೆ ಬೆಳಗ್ಗೆ ಇಂದ ಸಂಜೆ ವರೆಗೆ ನನ್ನ ಹುಡುಗನ ಜೊತೆ ಫೋನ್ ಮಾಡೋದ್ರಲ್ಲಿ ಬೇರೆಯವರಿಗೆ ಫೋನ್ ಮಾಡಲು ಸಮಯವೆಲ್ಲಿ ಎಂದಳು ನನ್ನ ಗೆಳತಿ . ಇದು ಇಂದಿನ ಎಲ್ಲ ಮದುವೆ ಫಿಕ್ಸ್ ಆದವರ,ಅಥವಾ ಲವ್ ನಲ್ಲಿ ಬಿದ್ದವರ ನಿತ್ಯದ ಕಥೆ ಯಾಗಿಬಿಟ್ಟಿದೆ. ಬೆಳಗ್ಗೆ ಫೋನ್ ಹೊಡೆದುಕೊಂಡ ಮೇಲೆ ಮಾತನಾಡುತ್ತಲೇ ಎದ್ದು ದಿನ ಪ್ರಾರಂಭಿಸಿ, ಮಧ್ಯ ರಾತ್ರಿ ಗುಡ್ ನೈಟ್ ಹೇಳುವವರೆಗೆ ಮೊಬೈಲ್ ಕೈಬಿಡದಂತಾಗಿದೆ. ಹಿಂದಿನ ಕಾಲಗಳಲ್ಲಿ ಪತ್ರದ ಮೂಲಕ ನಮ್ಮ ಮನದ ಭಾವನೆಗಳನ್ನು ಹೊರಹಾಕ ಬೇಕಿತ್ತು ಆದರೆ ಇಂದು ಎಲ್ಲವೂ ಮೊಬೈಲ್ ಅಲ್ಲಿಯೇ . ಒಟ್ಟಾರೆ ಮೊಬೈಲ್ ಲೋಕ ವಾಗಿಹೋಗಿದೆ .ನಾನು ನನ್ನ ಗೆಳತಿಗೆ ಒಳ್ಳೆ ಕೆಲಸ ಮಾದುತ್ತಿದ್ದೀಯೇ ಎಂದು ಹುರಿದುಂಬಿಸಿದೆ ಆ ಮೂಲಕವಾದರೂ ಮದುವೆಯ ಮೊದಲೇ ಒಬ್ಬರ ಮನಸ್ಸನ್ನು ಸ್ವಲ್ಪಮಟ್ಟಿಗಾದರೂ ತಿಳಿದುಕೊಳ್ಳುವ ಅವಕಾಶ ಮೊಬೈಲ್ ಮೂಲಕ ಸಿಗುತ್ತಿದೆ . ಇದರಿಂದ ಬಿ ಎಸ್ ಯನ್ ಎಲ್ . ಏರ್ಟೆಲ್ ಗಳಿಗೆ ಒಳ್ಳೆಯ ಲಾಭವಾಗಿ ಹೊಸ ಹೊಸ ಆಫರ್ ಗಳನ್ನೂ ಕೂಡ ಕೊಡಲು ಪ್ರಾರಂಭಿಸಿದ್ದಾರೆ ಎಂಬುದು ಸಂತೋಷದ ವಿಷಯ .

ಅರ್ಪಿತಾ ಹರ್ಷ

Friday 9 March 2012

ಒಗ್ಗಟ್ಟಿನಲ್ಲಿ ಬಲವಿದೆ !!

ಈ ನನ್ನ ಲೇಖನವು ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ


ಕರ್ನಾಟಕ ಮೊದಲಿನಿಂದಲೂ ತನ್ನದೇ ಆದ ಘನತೆ ಗೌರವ ಹೊಂದಿದ ರಾಜ್ಯವಾಗಿತ್ತು ಆದರೆ ಇತ್ತೀಚಿಗೆ ಹಲವಾರು ಹಗರಣಗಳು ನಡೆದು ಕರ್ನಾಟಕದ ಬಗ್ಗೆ ದೇಶ ವಿದೇಶಗಳಲ್ಲಿ ಮಾತನಾಡಿಕೊಳ್ಳುವ ಪ್ರಸಂಗ ಬಂದಿರುವುದು ನಿಜಕ್ಕೂ ಶೋಚನೀಯ. ರಾಜಕೀಯ ಎಂಬುದು ಎಲ್ಲೆಡೆ ಇದ್ದೆ ಇದೆ .ಎಲ್ಲ ರಾಜ್ಯಗಳಲ್ಲೂ ಒಂದಿಲ್ಲೊಂದು ಘಟನೆಗಳು ನಡೆಯುತ್ತಲೇ ಇರುತ್ತದೆ . ಆದರೆ ಕರ್ನಾಟಕದಲ್ಲಿ ಒಗ್ಗಟ್ಟು ಕಡಿಮೆ ಆಗಿರುವುದರಿಂದ ಸಣ್ಣ ವಿಷಯಗಳನ್ನು ದೊಡ್ದದನ್ನಾಗಿಸಿ ಅಪಪ್ರಚಾರ ಗಿಟ್ಟಿಸಿ ಕೊಳ್ಳುತ್ತಿದೆ .ವಿರೋದ ಪಕ್ಷಗಳ ಹೋರಾಟ ,ಶಾಸಕರ ಪ್ರಕರಣಗಳು ನಾಚಿಕೆಗೇಡಿನ ಕೆಲಸ . ಇವನ್ನೆಲ್ಲ ಬಿಟ್ಟು ರಾಜ್ಯದ ಉನ್ನತಿಗೆ ಏನು ಮಾಡಬೇಕು ಎಂಬುದರ ಬಗ್ಗೆ ಯೋಚಿಸಿ ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿದಲ್ಲಿ ಇಂತಹ ಅವಮಾನಕರ ಘಟನೆಗಳು ಆಗುವುದನ್ನು ತಪ್ಪಿಸಬಹುದು ಜೊತೆಗೆ ಸಾಧನೆ ಮಾಡಬಹುದು . ಕರ್ನಾಟಕ ಎಂಬ ಹೆಸರು ಕೇಳಿದೊಡನೆ ಅಲ್ಲಿ ಒಂದು ಸಾಧನೆಯ ನೆನಪಾಗಬೇಕೆ ಹೊರತು ಇಂತಹ ಅಪಮಾನಕರ ಘಟನೆಗಳಲ್ಲ .ಒಗ್ಗಟ್ಟಿನಿಂದ ನಾವೆಲ್ಲಾ ಒಂದು ಎಂಬ ಭಾವನೆಗಲಿದ್ದಲ್ಲಿ ಲಾಯರ್, ಪೋಲಿಸ್, ಮಾಧ್ಯಮ ಹೀಗೆ ಅವರವರಲ್ಲೇ ಗಲಾಟಿಯಾಗುವ ಇದರಿಂದ ರಾಜ್ಯದ ಹೆಸರು ಕೆಡಿಸುವುದನ್ನು ತಪ್ಪಿಸಬಹುದು .

ಅರ್ಪಿತಾ.c.ರಾವ್
ಲಂಡನ್



Thursday 1 March 2012

ಅಶೋಕ ಹಲ್ವಾ

ಬೇಕಾಗುವ ಸಾಮಗ್ರಿಗಳು
ರವೆ ೨ ಕಪ್
ಸಕ್ಕರೆ ೪ ಕಪ್
ಹಾಲು ಅರ್ಧ ಕಪ್
ತುಪ್ಪ
ಕೇಸರಿ ಬಣ್ಣ ಸ್ವಲ್ಪ
ಏಲಕ್ಕಿ ಪುಡಿ ಸ್ವಲ್ಪ
ಗೋಡಂಬಿ , ದ್ರಾಕ್ಷಿ ಅಲಂಕರಿಸಲು

ಮಾಡುವ ವಿಧಾನ : ರವೆಯನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು . ಸ್ವಲ್ಪ ಕೆಂಪು ಬಣ್ಣ ಬಂದ ನಂತರ ಸಕ್ಕರೆಯನ್ನು ಹಾಕಬೇಕು ಜೊತೆಗೆ ಹಾಲು ಹಾಕಿ ಕಲಕಬೇಕು . ಬೇಕಾದಲ್ಲಿ ಸ್ವಲ್ಪ ನೀರು ಹಾಕಬಹುದು ಕುದಿಯುತ್ತಿರುವಾಗ ತುಪ್ಪ ಹಾಕಬೇಕು ತಳ ಹಿಡಿಯದಂತೆ ಸೌಟಿನಿಂದ ತಿರಿಸುತ್ತಿರಬೇಕು ನಂತರ ಸ್ವಲ್ಪ ಕೇಸರಿ ಬಣ್ಣ ಹಾಕಿ ತಿರುಗಿಸಬೇಕು ಸ್ವಲ್ಪ ಸಮಯದ ನಂತರ ಗಟ್ಟಿಯಾಗುತ್ತದೆ ಹಲ್ವದ ಹದ ಬಂದ ನಂತರ ಕೆಳಗಿಳಿಸಿ ಏಲಕ್ಕಿ ಪುಡಿ ಹಾಕಿ ಪ್ಲೇಟ್ ನಲ್ಲಿ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಬಹುದು ನಂತರ ಒಂದೊಂದು ಪೀಸ್ ನ ಮೇಲು ಒಂದೊಂದು ಗೋಡಂಬಿ ಮತ್ತು ದ್ರಾಕ್ಷಿ ಇತ್ತು ಅಲಂಕರಿಸಬೇಕು . ಈಗ ರುಚಿಯಾದ ಅಶೋಕ ಹಲ್ವಾ ರೆಡಿ .


ಅರ್ಪಿತಾ ಹರ್ಷ
ಲಂಡನ್


ಈ ನನ್ನ ಲೇಖನವು ಕನ್ನಡ ಟೈಮ್ ನಲ್ಲಿ ಪ್ರಕಟಗೊಂಡಿದೆ http://www.kannadatimes.com/archives/1095