Saturday 29 December 2012

ಸೀರೆ ಮ್ಯಾಟ್ (ಡೋರ್ ಮ್ಯಾಟ್ )

ಈ ನನ್ನ ಲೇಖನವು ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ <a>http://www.vijayanextepaper.com/Details.aspx?id=661&boxid=191642218</a>







ಅಂಗಡಿಗಳಲ್ಲಿ ನಾನಾ ವಿಧದ ಮ್ಯಾಟ್ ಗಳು ಸಿಗುತ್ತವೆ ಹಾಗೆಯೇ ಅದಕ್ಕೆ 200-300 ರುಪಾಯಿ ಕೊಡಬೇಕಾಗುತ್ತದೆ. ಅಷ್ಟೇ ಸುಂದರವಾದ ಮ್ಯಾಟ್ಗಳನ್ನು ಮನೆಯಲ್ಲಿಯೇ ತಯಾರಿಸಬಹುದು . ಇದು ನೋಡಲು ಕೂಡ ಸೊಗಸಾಗಿರುತ್ತದೆ ಮತ್ತು ಸುಲಭ ಕೂಡ ಹೌದು . ಇದು ಕಸದಿಂದ ರಸ . ಮನೆಯಲ್ಲಿ ಇರುವ ಹಳೆ ಸೀರೆಗಳನ್ನು ಉಪಯೋಗಿಸಿ ಈ ಮ್ಯಾಟ್ ತಯಾರಿಸಬಹುದು. ಕ್ರೋಶ ಕಡ್ಡಿಯನ್ನು ಬಳಸಲು ಗೊತ್ತಿರುವವರು ಇದನ್ನು ಸುಲಭವಾಗಿ ಮಾಡಬಹುದು . ಬೇಕಾಗುವ ಸಾಮಗ್ರಿಗಳು : ಕತ್ತರಿ , ಹಳೆಯ ಸೀರೆ , ಕ್ರೋಶ ಕಡ್ಡಿ ( ಫ್ಯಾನ್ಸಿ ಸ್ಟೋರ್ ಗಳಲ್ಲಿ ಸಿಗುತ್ತದೆ) .

  ಮಾಡುವ ವಿಧಾನ : ಮೊದಲು ಹಳೆಯ ಸೀರೆಯನ್ನು ಕತ್ತರಿಯಿಂದ ಒಂದು ತುದಿ ಸ್ವಲ್ಪ ಕತ್ತರಿಸಿ ಉದ್ದಕ್ಕೆ ಸಿಗಿದು ಕೊಳ್ಳಬೇಕು . ( ಕತ್ತರಿಯಿಂದ ಉದ್ದ ಕಟ್ ಮಾಡುತ್ತಾ ಕುಳಿತರೆ ಸಮಯ ವ್ಯರ್ಥ ಹಳೆಯ ಸೀರೆಯಾಗಿರುವುದರಿಂದ ಸ್ವಲ್ಪ ಕತ್ತರಿಸಿದ ನಂತರ ತಾನಾಗೆ ಸಿಗಿಯಲು ಬರುತ್ತದೆ ) .

 ಇಡೀ ಸೀರೆಯನ್ನು ಹೀಗೆ ಉದ್ದವಾಗಿ (ಅಡ್ಡಕತ್ತರಿಸಬಾರದು ಸೀರೆಯು ಉದ್ದ ಇರುವ ಕಡೆ ನೋಡಿ ಕತ್ತರಿಸಬೇಕು) ಕತ್ತರಿಸಿದ ನಂತರ ಅದನ್ನು ಒಂದು ಉಂಡೆಯನ್ನಾಗಿ ಇಟ್ಟುಕೊಳ್ಳಬೇಕು ಇದರಿಂದ ಸಿಕ್ಕು ಕಟ್ಟುವುದಿಲ್ಲ 2 ಬೇರೆಬೇರೆ ರೀತಿಯ ಸೀರೆಯನ್ನು ಸಿಗಿದು ಉಂಡೆ ಮಾಡಿಟ್ಟುಕೊಂಡು ಸೇರಿಸುತ್ತಾ ಮ್ಯಾಟ್ ಮಾಡುವುದರಿಂದ ನೋಡಲು ಸುಂದರವಾಗಿ ಕಾಣುತ್ತದೆ. ನಂತರ ಕ್ರೋಶಕಡ್ದಿಯಿಂದ ಚೈನ್ ಸ್ಟಿಚ್ ಅನ್ನು ಹಾಕುತ್ತ ಸುತ್ತರಿಸುತ್ತ ಹೋದಾಗ ಇದು ವೃತ್ತಾಕಾರದ ರೂಪದಲ್ಲಿ ಬರುತ್ತದೆ. ಚೈನ್ ಸ್ಟಿಚ್ ಬಹಳ ಸುಲಭದ ಸ್ಟಿಚ್ ಆಗಿದೆ .

 ಇದು ಮೊದಲು ಗಂಟು ಕಟ್ಟುವುದರಿಂದ ಪ್ರಾರಂಭಿಸಿ ನಂತರ ಕ್ರೋಶ ಕಡ್ಡಿಯ ಒಳಗೆ 3 ಭಾರಿ ಸುತ್ತಬೇಕು . ಕ್ರೋಶ ಕಡ್ಡಿ ಬಳಸಲು ಗೊತ್ತಿರುವವರಿಗೆ ಇದು ಬಹಳ ಸುಲಭ .


 ಅರ್ಪಿತಾ ಹರ್ಷ ಲಂಡನ್

Wednesday 26 December 2012

ಉಕ್ಕಿನ ಮಹಿಳೆ

ಈ ನನ್ನ ಲೇಖನವು 30/01/2013ರ  ಉದಯವಾಣಿಯಲ್ಲಿ ಪ್ರಕಟಗೊಂಡಿದೆ <a>"http://epaper.udayavani.com/Display.aspx?Pg=H&Edn=BN&DispDate=1/30/2013"</a>


ಆಕೆ ಒಬ್ಬ ವ್ಯಾಪಾರಿಯ ಮಗಳು . ಹುಟ್ಟಿನಿಂದಲೇ ಛಲ ಎಂಬುದು ಅವಳಲ್ಲಿ ಬಲವಾಗಿ ಬೇರೂರಿತ್ತು.  ಬೆಳೆದು ದೊಡ್ದವಳಾಗುತ್ತಿದ್ದಂತೆ  ಮುಂದೊಮ್ಮೆ ದೇಶವನ್ನೇ ಆಳುವ ನಾಯಕಿ ಆಗಬಲ್ಲಳು ಎಂದು ಯಾರು ಕನಸು ಕಂಡಿರಲಿಲ್ಲ ಅದೊಂದು ದಿನ ಆಕೆ ಪ್ರಥಮ ಮಹಿಳಾ ಪ್ರಧಾನಿ ಯಾಗಿ ಆಯ್ಕೆ ಯಾದಳು ಅಷ್ಟೇ ಅಲ್ಲ ಅದೊಂದು ದೊಡ್ಡ ಸವಾಲಾಗಿ ಸ್ವೀಕರಿಸಿ ಯಶಸ್ವಿಯಾಗಿ ಮುಗಿಸಿ ಜಗತ್ ಪ್ರಸಿದ್ಧಿ ಪಡೆದವರು ಅವರು . ಮಾರ್ಗರೆಟ್ ಥ್ಯಾಚರ್ ಯಾರಿಗೆ ತಾನೇ ಗೊತ್ತಿಲ್ಲ? ಇಂದು ಜಗತ್ಪ್ರಸಿದ್ಧಿ ಹೊಂದಿದ ಈ ದಿಟ್ಟ ಮಹಿಳೆ ಒಬ್ಬ ವ್ಯಾಪಾರಿಯ ಮಗಳು . ರಾಜಕೀಯ ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ಅನುಭವಿಸಿದರೂ  ತನ್ನಲ್ಲಿರುವ ನಾಯಕತ್ವದ ಗುಣದಿಂದ ಯಾವುದಕ್ಕೂ ಎದೆಗುಂದದೆ ಕೊನೆಗೂ ಯಶಸ್ಸಿನ ಮೆಟ್ಟಿಲನ್ನು ಹತ್ತಿ ಹತ್ತಿ ಮುನ್ನುಗಿದವರು ಮಾರ್ಗರೆಟ್ ಥ್ಯಾಚರ್

ನಾನು ಲಂಡನ್ ಗೆ ಬಂದ  ಕೆಲವೇ ದಿನಗಳಲ್ಲಿ ಲಂಡನ್ ಬಗ್ಗೆ ತಿಳಿದುಕೊಳ್ಳುವ ಬಗ್ಗೆ ಬಹಳ ಆಸಕ್ತಿ ಇತ್ತು ಆ ಸಮಯದಲ್ಲಿ ನಾನು ಸಾಕಷ್ಟು ಇಂಗ್ಲಿಷ್ ಪುಸ್ತಕ ಓದುವುದು ಮತ್ತು  ಇಂಗ್ಲಿಷ್  ಫಿಲಂ ಗಳನ್ನೂ ನೋಡಲು ಪ್ರಾರಂಭಿಸಿದೆ .ಆಗ  ನನ್ನ ಕುತೂಹಲವನ್ನು ಸೆಳೆದಿದ್ದು ಎಂದರೆ ಬ್ರಿಟನ್ನಿನ ಮಾಜಿ ಮಹಿಳಾ ಪ್ರಧಾನ ಮಂತ್ರಿ ಮಾರ್ಗರೆಟ್ ಥ್ಯಾಚರ್ . ಇವರ ಬಗ್ಗೆ ಆಸಕ್ತಿ ಹೆಚ್ಚಾದಂತೆ ನಾನು ಮಾರ್ಗರೆಟ್ ಥ್ಯಾಚರ್ ಬಗ್ಗೆ ಅವರ ಚಲನಚಿತ್ರ  ನೋಡಲು ಪ್ರಾರಂಭಿಸಿದೆ . 'ದಿ ಐರನ್ ಲೇಡಿ ' ಇದೊಂದು ಡಾಕ್ಯುಮೆಂಟರಿ ಫಿಲಂ . ಮೊದಲಿನಿಂದ ನಾಯಕತ್ವದ ಗುಣಗಳನ್ನು ತಂದೆಯಿಂದ ಬೆಳೆಸಿಕೊಂಡ ಥ್ಯಾಚರ್ ಪ್ರತಿಯೊಂದು ಹಂತದಲ್ಲೂ ಗೆಲುವನ್ನು ಸಾಧಿಸುತ್ತಾ ಹೋಗುತಾರೆ .
ಇವರ ಯಶಸ್ಸಿಗೆ ಇವರಿಗೆ ಸಿಕ್ಕ ಬಿರುದು 'ಉಕ್ಕಿನ ಮಹಿಳೆ '. ಇವರ ವೃತ್ತಿ ಬದುಕಿನಲ್ಲಿ ಇವರು ಹತ್ತದ ಮೆಟ್ಟಿಲಿಲ್ಲ  ಸಾಧಿಸದ ಸಾಧನೆಗಲಳಿಲ್ಲ . ಆಕ್ಸ್ಫಾರ್ಡ್ ಯೂನಿವರ್ಸಿಟಿ ಯಲ್ಲಿ ಪ್ರೆಸಿಡೆಂಟ್ ಆಗುವ ಮೂಲಕ ಕಾಲಿಟ್ಟ ಆಕೆ  ಮುಂದೊಂದು ದಿನ ಮಹಿಳಾ ಪ್ರಧಾನ ಮಂತ್ರಿಯಾಗಿ ಆಯ್ಕೆ ಯಾಗಿ ದೇಶವನ್ನು  ಅಭಿವೃದ್ದಿ ಪಡಿಸುವುದರಲ್ಲಿ ಯಶಸ್ವಿಯಾಗುತ್ತಾರೆ. ಒಬ್ಬ ಮಹಿಳೆ ಏನನ್ನು ಬೇಕಾದರೂ ಸಾಧಿಸಬಳ್ಳಲು ಎನ್ನುವುದನ್ನು ತೊರಿಸಿದವರು ಥ್ಯಾಚರ್ .

 ಇವರ ಎಲ್ಲ ಯಶಸ್ವೀ ಕಾರ್ಯಗಳು ಮನಸ್ಸಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ದಿ ಐರನ್ ಲೇಡಿ ಮೂವಿ ತೋರಿಸಿಕೊಡುತ್ತದೆ .ಸುಮಾರು ಒಂದು ವರೆ ತಾಸಿನ ಈ ಡಾಕ್ಯುಮೆಂಟರಿ ಥ್ಯಾಚರ್ ನ ಬದುಕಿನ ಯಶಸ್ಸಿನ ಕಥೆಯನ್ನು ಹೇಳುತ್ತದೆ .ಈಗ ಮಾರ್ಗರೆಟ್ ಥ್ಯಾಚರ್ ಅವರಿಗೆ 87 ವರ್ಷ . ಇನ್ನೂ ಕೂಡ ಆಕೆ ಚಟುವಟಿಕೆಯಿಂದಿದ್ದಾರೆ . ಪ್ರತಿಯೊಬ್ಬರು ನೋಡಲೇಬೇಕಾದ ಮತ್ತು ನೋಡುಗರಲ್ಲಿ ನಾವು ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಹುಟ್ಟಿಸುವ  ದಿ ಐರನ್ ಲೇಡಿ ಚಿತ್ರ  ಮತ್ತು ಆಕೆ  ನನಗೆ ಬಹಳ ಇಷ್ಟವಾಯಿತು .


ಅರ್ಪಿತಾ ಹರ್ಷ 
ಲಂಡನ್ 

Thursday 20 December 2012

ಲಂಡನ್ ನ ಭಾರತೀಯ ದೇವಸ್ಥಾನಗಳು

ಭಾರತದಲ್ಲಿ ದೇವಸ್ಥಾನಗಳ ಸಂಖ್ಯೆ ಬಹಳಷ್ಟು. ಹೇಳಿಕೇಳಿ ಲಂಡನ್ ಒಂದು ಕ್ರಿಶ್ಚಿಯನ್ ದೇಶ ಇಲ್ಲಿ ಎಲ್ಲಿ ನೋಡಿದರು ಚರ್ಚು ಗಳು ಇದ್ದೆ ಇರುತ್ತದೆ ಜೊತೆಗೆ ಡಿಸೆಂಬರ್ ತಿಂಗಳು ಬಂತೆಂದರೆ ಎಲ್ಲೆಡೆಗಳಲ್ಲಿ ಜಗಜಗಿಸುವ ದೀಪಗಳು ಪಟಾಕಿಯ ಸಿಡಿಮದ್ದು ಜೊತೆಗೊಂದಿಷ್ಟು ಇಂಗ್ಲಿಷ್ ಹಾಡುಗಳು ಇದು ಲಂಡನ್ ನ ಬಗ್ಗೆ ಎಲ್ಲರಿಗೂ ಗೊತ್ತಿರುವ ಸಂಗತಿ . ಇಲ್ಲೂ ಕೂಡ ದೇವಸ್ಥಾನಗಳಿವೆ ಎಂದರೆ ಸಾಕಷ್ಟು ಜನರು ಆಶ್ಚರ್ಯ ಪಡಬಹುದು ಜೊತೆಗೊಂದಿಷ್ಟು ಕುತೂಹಲ ಕೂಡ ಮೂಡಬಹುದು . 
ಹೌದು ಎಲ್ಲ ದೇಶಗಳಲ್ಲಿರುವಂತೆ ಲಂಡನ್ ನಲ್ಲೂ ಕೂಡ ಚರ್ಚ್ ಗಳಿವೆ ಮಸೀದಿಗಳಿವೆ ಜೊತೆಗೆ ಸಾಕಷ್ಟು ದೇವಸ್ಥಾನಗಳು ಕೂಡ ಇವೆ. ಕೆಲವೊಂದು ಜಾಗಗಳಲ್ಲಿ ಭಾರತೀಯರ ಸಂಖ್ಯೆ ಬಹಳಷ್ಟಿದೆ ಅಲ್ಲೆಲ್ಲ ಮಹಾಲಕ್ಷ್ಮಿ , ಮುರುಗನ್, ಗಣಪತಿ ಹೀಗೆ ಬೇರೆಬೇರೆ ದೇವಸ್ಥಾನಗಳು ಇವೆ. ಹಾಗೆಯೇ ಇಲ್ಲಿ ಭಕ್ತಾದಿಗಳ ಸಂಖ್ಯೆಯು ಕೂಡ ಪ್ರತಿ ದಿನ ಇದ್ದೆ ಇರುತ್ತದೆ.  ಪ್ರತಿ ದಿನ ಆರತಿ ಪೂಜೆ ಪ್ರಸಾದ ಹಂಚಿಕೆ ಜೊತೆಗೆ ಕೆಲವೊಂದು ದೇವಸ್ಥಾನಗಳಲ್ಲಿ ಪ್ರತಿದಿನ ಅನ್ನಸಂತರ್ಪಣೆ ಕೂಡ ನಡೆಯುತ್ತದೆ .  
ಪ್ರತಿಯೊಂದು ಏರಿಯಾ ಗಳಲ್ಲೂ ಸಾಮಾನ್ಯವಾಗಿ ದೇವಸ್ಥಾನಗಳು ಇದ್ದೇ ಇದೆ ಅದರಲ್ಲೂ ಭಾರತೀಯರು ಇರುವಂತಹ ಜಾಗಗಳಾದ ಕ್ರೊಯ್ದನ್ , ಟ್ರೋನ್ತನ್ ಹೀಥ್ , ಗುಡ್ ಮೇಸ್ , ಇಲ್ ಫೋರ್ಡ್ ಈಸ್ಟ್ ಹ್ಯಾಮ್ , ಸೌತ್ ಹಾಲ್ ಗಳಲ್ಲಿ  ದೇವಸ್ಥಾನಗಳನ್ನು  ಕಾಣಬಹುದು. ಭಾರತದ ಬಹಳಷ್ಟು  ದೇವಸ್ಥಾನಗಳಲ್ಲಿರುವಂತೆ ಇಲ್ಲೂ ಕೂಡ ದೇವಸ್ಥಾನದ ಒಳ ಭಾಗಗಳಲ್ಲಿ ಫೋಟೋ ತೆಗೆಯುವುದನ್ನು ನಿಷೇದಿಸಲಾಗಿದೆ.ಕೆಲವೊಂದು 
ಈಸ್ಟ್ ಹ್ಯಾಮ್ ನ ಮಹಾಲಕ್ಷ್ಮಿ ದೇವಸ್ಥಾನ :
ಈಸ್ಟ್ ಹ್ಯಾಮ್ ನಲ್ಲಿ ಮಹಾಲಕ್ಷ್ಮಿ ದೇವಸ್ಥಾನ ಇದೆ ಇದನ್ನು 1989 ರಲ್ಲಿ ಕಟ್ಟಲು ಪ್ರಾರಂಭಿಸಿದರು ಇದನ್ನು ಅಧಿಕೃತವಾಗಿ ಪ್ರಾರಂಭವಾಗಿದ್ದು 1990 ರಲ್ಲಿ . ಅಂದಿನಿಂದ ಇಂದಿಗೂ ಕೂಡ ಸದಾ ಭಕ್ತಾದಿಗಳಿಂದ ತುಂಬಿರುವ ದೇವಸ್ಥಾನವಿದು. ಈ ದೇವಸ್ಥಾನದ ಒಳಗೆ ರುದ್ರ , ಶನೀಶ್ವರ, ಅಂಜನೇಯ , ಗಣೇಶ , ಗಾಯತ್ರಿ ಹಾಗು ಲಕ್ಷ್ಮಿ ನಾರಾಯಣ ವಿಗ್ರಹಗಳು ಇವೆ.ಹಾಗೆಯೇ ಬೇರೆ ಬೇರೆ ರೀತಿಯ ಪೂಜೆಗಳನ್ನು ಕೂಡ ಇಲ್ಲಿ ಮಾಡಿಸುವ ಅವಕಾಶವಿದೆ .
ಇಲ್ ಫೋರ್ಡ್ ನ ಮುರುಗನ್ ದೇವಸ್ಥಾನ :
ಇಲ್ ಫೋರ್ಡ್ ನಲ್ಲಿ ಮುರುಗನ್ ದೇವಸ್ಥಾನವನ್ನು ಇದು ಈಸ್ಟ್ ಹ್ಯಾಮ್ ಗೆ ಹತ್ತಿರವಿರುವುದರಿಂದ ಇದನ್ನು ಈಸ್ಟ್ ಹ್ಯಾಮ್ ಮುರುಗನ್ ಟೆಂಪಲ್ ಎಂದು ಕೂಡ ಕರೆಯುತಾರೆ.ಇಲ್ಲಿ ನವಗ್ರಹ ವಿಗ್ರಹಗಳು ಮತ್ತು ದಕ್ಷಿಣ ಮೂರ್ತಿ ಮತ್ತು ದುರ್ಗಾ ದೇವಿ ವಿಗ್ರಹಗಳನ್ನು ಕಾಣಬಹುದು ಈ ದೇವಸ್ಥಾನ ವಿಶಾಲವಾಗಿದ್ದು ಭಕ್ತಿ ಮೂಡಿ  ಬರುವಂತ ದೇವಸ್ಥಾನ ಜೊತೆಗೆ ಪ್ರತಿದಿನ ಇಲ್ಲಿ ಪ್ರಸಾದ ರೂಪದಲ್ಲಿ ಅಣ್ಣ ಸಂತರ್ಪಣೆ ಯನ್ನು ನಡೆಸಲಾಗುತ್ತದೆ.ಬೆಳಗ್ಗೆ 8 ರಿಂದ ಸಂಜೆ 8 ರವರೆಗೆ ತೆರೆದಿರುತ್ತದೆ. ಮತ್ತು ಮಹಾಮಂಗಳಾರತಿ ಕೂಡ ಪ್ರತಿದಿನ ನಡೆಯುತ್ತದೆ.

ವೆಂಬ್ಲಿಯ  ಸನಾತನ ದೇವಸ್ಥಾನ :
ಇತ್ತೀಚಿಗೆ ಪ್ರಾರಂಭವಾದ ದೇವಸ್ಥಾನ ವೆಂಬ್ಲಿ  ಯ  ಸನಾತನ ದೇವಸ್ಥಾನ . ಇದು 2010 ರಲ್ಲಿ ಪ್ರಾರಂಭವಾಯಿತು ಇದನ್ನು ಕಟ್ಟಲು 14 ವರ್ಷಗಳು ಬೇಕಾದವು ಎಂಬುದು ಅಲ್ಲಿಯ ಮಾಹಿತಿದಾರರಿಂದ ತಿಳಿದುಬಂದ ವಿಷಯ . ಸುಮಾರು 2.4 ಎಕರೆಯಷ್ಟು ಜಾಗದಲ್ಲಿ ಈ ದೇವಸ್ಥಾನವನ್ನು ಕಟ್ಟಲಾಗಿದೆ.ಇದು ಗುಜರಾತಿ ಮಾದರಿಯ ದೇವಸ್ಥಾನವಾಗಿದೆ .ಹೆಸರೇ ಹೇಳುವಂತೆ ಇದು ಹಳೆಯ ದೇವಸ್ಥಾನದಂತೆ ತೋರುತ್ತದೆ. ದೇವಸ್ಥಾನದ ಶಿಖರವು 66 ಅಡಿ ಉದ್ದ ಹೊಂದಿದ್ದು ಪ್ರಸಿದ್ಧಿ ಪಡೆದಿದೆ.
ನೀಸ್ಡನ್  ನ ಸ್ವಾಮಿನಾರಾಯಣ ದೇವಸ್ಥಾನ :


ಇದು ಕೂಡ ಗುಜರಾತಿ ದೇವಸ್ಥಾನ ಇದು ಲಂಡನ್ ನಲ್ಲಿರುವ ಎಲ್ಲ ದೇವಸ್ಥಾನಗಳಲ್ಲಿ ಅತಿ ವಿಶಾಲವಾದ ಜಾಗವನ್ನು ಹೊಂದಿರುವ ದೇವಸ್ಥಾನ . ಇದನ್ನು ಆಗಸ್ಟ್ 20, 1995 ರಲ್ಲಿ ಪ್ರಾರಂಭಿಸಲಾಯಿತು .ಇದನ್ನು ನೀಸ್ಡನ್  ದೇವಸ್ಥಾನ ಎಂದು ಕರೆಯುತ್ತಾರೆ. ಈ ದೇವಸ್ಥಾನದ ಎದುರಿಗೆ ಇವರದೇ ಸಂಸ್ಥೆಯ ಶಾಲೆಯನ್ನು ಕೂಡ  ಕಟ್ಟಲಾಗಿದೆ . ಜೊತೆಗೆ ಇವರದೇ ಆದ ಚಾರಿಟಿ ಗಳು ಕೂಡ ಇವೆ.ಇದನ್ನು ಪ್ರಾಚೀನ ವೈದಿಕ ದರ್ಮದ ಪ್ರಕಾರವಾಗಿ ಮತ್ತು ಭಾರತೀಯ ವಸ್ತು ಶಾಸ್ತ್ರದ ಪ್ರಕಾರ  ಕಟ್ಟಲಾಗಿದೆ ಎನ್ನಲಾಗುತ್ತದೆ.  ಜೊತೆಗೆ ಈ ದೇವಸ್ಥಾನ ಸಂಪೂರ್ಣವಾಗಿ ಬಲ್ಗೇರಿಯನ್ ಲೈಮ್ ಸ್ಟೋನ್ ಮತ್ತು ಇಟಾಲಿಯನ್ ಮಾರ್ಬಲ್ ಮತ್ತು ಭಾರತದ ಅಂಬಾಜಿ ಕಲ್ಲಿನಿಂದ  2 ವರೆ ವರ್ಷಗಳೊಳಗೆ ಕಟ್ಟಲಾಗಿದೆ. ಇಲ್ಲಿ ಶ್ರೀಕೃಷ್ಣ , ಸ್ವಾಮಿನಾರಾಯಣ ನ ಮೂರ್ತಿಗಳಿವೆ. ದೇವಸ್ಥಾನದ ಹೊರಗೂ ಕೂಡ ವಿಶಾಲವಾದ ಸ್ಥಳವಿದ್ದು ಅಲ್ಲಿ ಸಣ್ಣದೊಂದು ಉದ್ಯಾನವನವನ್ನು ಕೂಡ ನಿರ್ಮಿಸಲಾಗಿದೆ .ಇದಲ್ಲದೆ  ಭಾರತದಿಂದ ಬಂದ  ಎಲ್ಲ ರಾಷ್ಟ್ರಪತಿ ಪ್ರಧಾನಮಂತ್ರಿಗಳು ಗಣ್ಯ ವ್ಯಕ್ತಿಗಳು ಭೇಟಿನೀಡುವ ದೇವಸ್ಥಾನ ಇದಾಗಿದೆ.

ಇದಿಷ್ಟೇ ಅಲ್ಲ ಲಂಡನ್ ನಿಂದ ಹೊರಗೆ ಅಂದರೆ ಸುಮಾರು ಒಂದು ಗಂಟೆ ಪ್ರಯಾಣದಲ್ಲಿ ಸಿಗುವ ಬರ್ಮಿಂಗ್ ಹ್ಯಾಮ್ ನ ದೇವಸ್ಥಾನ ಕೂಡ ಇಲ್ಲಿ ಪ್ರಸಿದ್ಧಿ . ಹೀಗೆ ಸಾಕಷ್ಟು ದೇವಾಲಯಗಳು ಪ್ರತಿದಿನವೂ ಭಾರತೀಯ ಪೂಜೆ ಪುನಸ್ಕಾರಗಳಲ್ಲಿ ನಡೆಯುತ್ತಿದೆ .



Tuesday 18 December 2012

ಬೇಸ್ತು ಬಿದ್ದದ್ದು


ಈ ನನ್ನ ಲೇಖನವು ಹೊಸದಿಗಂತ ಮಂದಾರ ಸಿರಿ ಪುರವಣಿಯಲ್ಲಿ ಪ್ರಕಟಗೊಂಡಿದೆ http://www.hosadigantha.in/news_img/01-02-2013-14.pdf



ಹೌದು ನೆನಪುಗಳೇ ಹಾಗೆ ಗರಿಬಿಚ್ಚಿ ಕುಣಿಯುವ ನವಿಲ ಹಾಗೆ ಇದ್ದಕ್ಕಿದ್ದಂತೆ ದೋ ಎಂದು ಸುರಿಯುವ ಮಲೆನಾಡ ಮಳೆಯ ಹಾಗೆ ಒಮ್ಮೆ ಸುರಿಯಲು ಪ್ರಾರಂಭಿಸಿದರೆ 2 ತಾಸುಗಳು ಸುರಿಯುತ್ತಲೇ ಇರುತ್ತದೆ ಆ ಮಲೆನಾಡ ಪರಿಸರದಲ್ಲಿ ಬೆಳೆದ ನನಗೆ ಅಂತಹ  ಮಳೆಯ ನೆನಪೇ ಒಂದು ಸಂಭ್ರಮ .ಲಂಡನ್ ನಲ್ಲಿ ಗಿಟಿ ಗಿಟಿ  ಎಂದು ಹನಿ ಹಾಕಿ ಇಡೀ  ದಿನದ ಮೂಡನ್ನೆಲ್ಲ  ಹಾಳು  ಮಾಡುವ ಈ ಮಳೆಯನ್ನೂ ನೋಡಿದರೆ ಅಯ್ಯೋ ಎಂದೆನಿಸುತ್ತದೆ. ಹಾಗೆ ಮಳೆಗಾಲದ ಜೊತೆ ನನಗೆ ಮೊದಲಿನಿಂದಲೂ ಬಹಳ ನಂಟು ಈಗಲೂ ಹಾಗೊಂದು ಮಳೆ ಏನಾದರು ಇಲ್ಲಿ ಸುರಿದುಬಿಟ್ಟರೆ ಹೋಗಿ ನಿಂತು ನೆನೆದು ನೆನೆದು ಸಂತೋಷಪಡಬೇಕು ಎಂಬುದು ನನ್ನ ಬಹಳ ದಿನದ ಆಸೆ. 
 ನಮ್ಮದು ಮಕ್ಕಳ ಸೈನ್ಯವೆಲ್ಲ ಕೆಲವೊಮ್ಮೆ ಮಳೆಗಾಲದಲ್ಲಿ ಮಾವನ ಮನೆಯಲ್ಲಿ ಒಟ್ಟು ಸೇರುವ ಪರಿಪಾಟವಿತ್ತು . ಹೀಗೆ ಒಮ್ಮೆ ಎಲ್ಲರು ಒಟ್ಟು ಸೇರಿದ್ದಾಗ ಬೆಟ್ಟ ಸುತ್ತಲು ಹೊರಟೆವು ಹೋರಾಟ ಸ್ವಲ್ಪ ಹೊತ್ತಿನಲ್ಲೆಯೇ ಮಳೆ ಎಲ್ಲಿಲ್ಲದಂತೆ ಸುರಿಯಲು ಪ್ರಾರಂಭಿಸಿತು ನಮಗೆ ಮಳೆಯಲು ನೆನೆಯಲು ಸಿಕ್ಕಿದ್ದು ಇದೇ ಅವಕಾಶ ಎಂಬ ಕುಶಿ ಒಂದು ಕಡೆಯಾದರೆ ಮನೆಯಲ್ಲಿ ಬಾಯಿಗೆಬಂದಂತೆ ಬಯ್ಯುತ್ತಾರೆ ಎಂಬ ಹೆದರಿಕೆ ಇನ್ನೊಂದು ಕಡೆ . ಅಂತು 4-5 ಜನರಿಗೆ ಇರುವ 2 ಕೊಡೆಯಲ್ಲಿ ಹೇಗೋ ಹೊಂದಾಣಿಕೆ ಮಾಡಿಕೊಂಡು ನೆನೆದುಕೊಂಡು ಮನೆಗೆ ಬಂದೆವು . ಬಂದು ಚಪ್ಪಲಿ ಬಿಚ್ಚಿ ಮನೆಯೊಳಗೇ ಓಡಿ  ನಾವೆಲ್ಲು ಹೋಗಿಲ್ಲ ಎಂಬಂತೆ ಮತ್ತು ಹೋಗಿಲ್ಲ ಎಂದು ಎಲ್ಲರನ್ನು ಯಾಮಾರಿಸಿದ ಕುಶಿಯಲ್ಲಿ ಎಲ್ಲರು ಮುಸಿಮುಸಿ ನಕ್ಕು ಸಂತೋಷಪಡುತ್ತಿದ್ದೆವು . ಅಷ್ಟರಲ್ಲಿ ಹೊರಗಿನಿಂದ ಬಂಡ ಅಜ್ಜ ಇದೇನಿದು ಮನೆಯ ತುಂಬೆಲ್ಲ ರಕ್ತ ಎನ್ನುತ್ತಾ ಒಳಗೆ ಬಂದರು ನಾವೆಲ್ಲಾ ಏನಾಯಿತು ಎಂದು ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿದ್ದೆವು ಅಜ್ಜ ಯಾರು ಹೊರಗೆ ಹೋಗಿದ್ದಿರಿ ಹೇಳಿ ಎಂದು ಕೇಳಿದರು ನಾವೆಲ್ಲಾ  ನಾವ್ಯಾರು ಹೋಗಿಲ್ಲ ಎಂದು ಉತ್ತರ ಕೊಟ್ಟೆವು . ಹಾಗಾದರೆ ಉಂಬಳ  ಕಚ್ಚಿದ್ದು ಯಾರಿಗೆ ? ಅದು ಕಚ್ಚಿದರೆ ಗೊತ್ತೇ ಆಗುವುದಿಲ್ಲ ಎಂದೆಲ್ಲ ಬಣ್ಣಿಸಲು ಪ್ರಾರಂಭಿಸಿದರು ಅದನ್ನು ಕೇಳಿ ನಮಗೆ ಎಲ್ಲಿಲ್ಲದ ಭಯ ಹುಟ್ಟಿ ಎಲ್ಲರು ನಾ ಮುಂದು ತಾ ಮುಂದು ಎನ್ನುತ್ತಾ ಅಜ್ಜ ನಾನು ಹೋಗಿದ್ದೆ ನೋಡು ಉಂಬಳ  ನನಗೆ ಕಚ್ಚಿದೆಯ ಎಂದು ಕೇಳುತ್ತ ಮುಂದೆ ಹೋದೆವು .ನಮ್ಮ ಮಲೆನಾಡಿನ ಕೆಲವು  ಭಾಗಗಳಲ್ಲಿ ಮಳೆಗಾಲದಲ್ಲಿ ಉಂಬಳ  ದ ಹಾವಳಿ ಬಹಳ .ಎಲ್ಲಿ ಕಾಲಿಟ್ಟರು ಕಾಲಿಗೊಂದು ಕಚ್ಚಿಹಿಡಿದುಕೊಂಡು ಬಿಡುತ್ತದೆ. ಆ ನಂತರ ಸುಣ್ಣ ಹಾಕಿ ಕಾಲಿನಿಂದ ಬರುತ್ತಿರುವ ರಕ್ತವನ್ನು ನಿಲ್ಲಿಸಬೇಕು . ಆದರೆ ಆ ದಿನ ಯಾರಿಗೂ ಉಂಬಳ  ಕಚ್ಚಿರಲಿಲ್ಲ ನಮ್ಮ ಗುಟ್ಟನ್ನು ರಟ್ಟು ಮಾಡುವ ಉದ್ದೇಶದಿಂದ ಅಜ್ಜ ಹಾಗೆ ಕೇಳಿದ್ದ ನಾವೆಲ್ಲಾ ಬೆಸ್ತುಬಿದ್ದಿದ್ದೆವು .




ಅರ್ಪಿತಾ ರಾವ್ 
ಲಂಡನ್ 

Tuesday 11 December 2012

ಬದುಕು

ಈ ನನ್ನ ಕವನವು ಈ ಕನಸು ವಿನಲ್ಲಿ ಪ್ರಕಟಗೊಂಡಿದೆ <a>"http://www.ekanasu.com/2012/12/blog-post_27.html" <a/>

ಸೂರ್ಯ ಮುಳುಗುವ ಹೊತ್ತು 
ಹಕ್ಕಿಗಳು ಹೊರಟಿವೆ ಮನೆಯ ಕಡೆಗೆ 
ಸಂಜೆ ಬಾನಲಿ ಸೂರ್ಯ 
ಅಣಕಿಸುತಿರುವ  ನನ್ನ ನೋಡಿ 
ನಿನ್ನದೇನಿದು  ಬದುಕು ಬರೀ ರಾಡಿ !

ಹಾರಾಡುವ ಹಕ್ಕಿಗಳಿಗೋ 
ಸ್ವಚ್ಚಂದದ  ಬದುಕು 
ಮಾನವ ನ ಬದುಕೋ 
ಬರೀ ಒಡಕು ಒಡಕು !

ಹಾರಾಡ ಬೇಕಿದೆ ಹಕ್ಕಿಯಂತೆ 
ಇಲ್ಲದಿರೆ ಮನದ  ತುಂಬಾ ಬರೀ ಬೇಡದಾ  ಚಿಂತೆ 
ಕಲಿಯಬೇಕಿದೆ ಹಕ್ಕಿಗಳ ನೋಡಿ 
ಬದುಕೆಂಬುದು ಒಂದು ಮೋಡಿ !

ಮುಳುಗುತಿರುವನೇ  ಸೂರ್ಯ 
ಮುಪ್ಪಿನ ಸುಳಿವು ನೀಡಿ ?
ಮುಗಿದುಹೋಯಿತೇ ಬದುಕು 
ನಾಲ್ಕು ದಿನಗಳು  ಕೂಡಿ ?






ಅರ್ಪಿತಾ ರಾವ್ 



Monday 10 December 2012

ಬದಲಾಗದಿರು

ಈ ನನ್ನ ಕವನವು ಈ ಕನಸುವಿನಲ್ಲಿ ಪ್ರಕಟಗೊಂಡಿದೆ  http://www.ekanasu.com/2012/12/blog-post_26.html

ಕಳೆಯಬೇಕಿದೆ ಬದುಕಿನ ಬಹಳಷ್ಟು ದಿನಗಳನ್ನು 
ಕಲಿಯಬೇಕಿದೆ ಬದುಕು ಹಸನಾಗಿಸುವುದನ್ನು 

ನೆನ್ನೆಯ ನಿನ್ನೆಗಳು ಇಂದು 
ದಿನಗಳಾಗಿ ಉಳಿದಿಲ್ಲ 
ಅದು ಬರಿ ನೆನಪಾಗಿಹೊಯಿತಲ್ಲ !

ಬದುಕಿನ ಪ್ರತಿ ಕ್ಷಣಗಳಲ್ಲಿ 
ಜೊತೆಯಾಗಿರುವೆ ಎಂದು ಬಂದೆ 
ದಿನಕಳೆದಂತೆ ನಿನ್ನಲ್ಲೇ ನೀ ಕಳೆದುಹೋದೆ 

ನಗು ತುಂಬಿ ಹರಟುತ್ತಿರುವ 
ಆ ದಿನಗಳು ಇಂದು ಬರೀ ನೆನಪು 
ಉಸಿರಾಟದ ಶಬ್ದ ಕಿವಿಗೆ ರಾಚುತ್ತಿರುವ 
ಈ ಕರಾಳ ದಿನಗಳೇ ಇಂದಿನ ಬದುಕು !!

ಕಳೆಯಬೇಕಿದೆ ಇನ್ನೂ  ಸಾಕಷ್ಟು 
ದಿನಗಳು ಜೊತೆಯಲ್ಲಿ 
ಸುಂದರ ದಿನಗಳು ಮರೆಯಾಗಲು 
ನಾ ತಪ್ಪು ಮಾಡಿದ್ದೆಲ್ಲಿ ?

ಬರಬಹುದು ಬದುಕಿನಲ್ಲಿ ಸಾಕಷ್ಟು ಗೊಂದಲಗಳು 
ನೀ ಕೊಟ್ಟಿದ್ದೆ ಮಾತು ಆಗೆಲ್ಲ 
ನಾ ನಿನ್ನೊಂದಿಗಿರುವೆ ಹಗಲು ಇರುಳು 

ಬೆಳಗು ಕತ್ತಲು  ಎಂಬುದು ಪ್ರಕೃತಿ ನಿಯಮ 
ಹಾಗೆಯೇ ಬದುಕೆಂಬುದು 
ನೋವು ನಲಿವುಗಳ ಸಂಗಮ 

ನಾ ಬಲ್ಲೆ ಪರಿವರ್ತನೆ ಜಗದ ನಿಯಮ 
ಆದರೂ  ನಾ ಕೆಳುವುದೊಂದೇ 
ಬದಲಾಗದಿರು ನೀ ಕಳೆದುಕೊಂಡು ಸಂಯಮ !!



ಅರ್ಪಿತಾ ರಾವ್ 
ಲಂಡನ್




Thursday 29 November 2012

ಹೆಸರುಬೇಳೆ ವಡೆ


ಹೆಸರು ಬೇಳೆ ಎಲ್ಲರ ಮನೆಯಲ್ಲೂ ಇದ್ದೆ ಇರುತ್ತದೆ ಈ ಚಳಿಯಲ್ಲಿ ಬಿಸಿಬಿಸಿ ಯಾಗಿ ತಿನ್ನುವುದೆಂದರೆ ಯಾರಿಗೆ ತಾನೇ ಇಷ್ಟವಾಗೋಲ್ಲ ಹೇಳಿ . ಹಾಗಾಗಿ ಇಲ್ಲಿದೆ ನೋಡಿ ಹೆಸರುಬೇಳೆ ವಡೆ . ತಯಾರಿಸುವುದು ಕೂಡ ಅಷ್ಟೇ ಸುಲಭ .

ಬೇಕಾಗುವ ಸಾಮಗ್ರಿಗಳು :
ಹೆಸರುಬೇಳೆ - 1 ಕಪ್ 
ಬೆಳ್ಳುಳ್ಳಿ -1 ಎಸಳು 
ಶುಂಟಿ - 1 ಇಂಚು 
ಕಡಲೆಹಿಟ್ಟು -3 ಚಮಚ 
ಕೆಂಪು ಮೆಣಸಿನ ಪುಡಿ - 1 ಚಮಚ 
ಜೀರಿಗೆ ಪುಡಿ - ಅರ್ದ ಚಮಚ 

ಹೆಸರುಬೇಳೆಯನ್ನು 3-4 ಗಂಟೆಗಳ ಕಾಲ ನೆನೆಸಿಡಬೇಕು .
ಬೆಳ್ಳುಳ್ಳಿ ಶುಂಟಿ ನೆನೆಸಿಟ್ಟ ಹೆಸರುಬೇಳೆಯನ್ನು ನೀರುಬೆರೆಸದೆ ರುಬ್ಬಿಕೊಳ್ಳಬೇಕು . 
ನಂತರ ಇದಕ್ಕೆ ಕಡಲೆಹಿಟ್ಟು, ಕೆಂಪು ಮೆಣಸು, ಜೀರಿಗೆ ಪುಡಿ ಬೆರೆಸಬೇಕು 
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಈ ಹಿಟ್ಟನ್ನು ಸೌಟಿನಿಂದ ಹಾಕಿ ಕಾರಿದರೆ ಹೆಸರುಬೇಳೆ  ವಡ  ರೆಡಿ  .

Wednesday 28 November 2012

ಮನಸ್ಸೆಂಬ ಚಿಟ್ಟೆ

ಈ ನನ್ನ ಕವನವು ೦೪.೦೨.೧೩ ರ ಪಂಜುವಿನಲ್ಲಿ ಪ್ರಕಟಗೊಂಡಿದೆ http://www.panjumagazine.com/?p=462


ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ 
ನೋಡಲು ಕಣ್ಣುಗಳು ಸಾಲದು
ಮೈಯ ಮೇಲೆಲ್ಲಾ ಕಪ್ಪು ಕಂಗಳು
ನೋಡುಗರ ಕಣ್ಮನ ಸೆಳೆಯುವುದು 

ಅಲ್ಲಿಂದಿಲ್ಲಿಗೆ ಹಾರುವೆ 
ಹಿಡಿಯಲು ಹೋದರೆ ಓಡುವೆ 
ಜಗದ ಸೃಷ್ಟಿಯ ಮೆಚ್ಚಲೇ ಬೇಕು 
ನಿನಗೆ ನೀನೆ ಸಾಟಿಯಿರಬೇಕು 

ಒಮ್ಮೆ ಇಲ್ಲಿ ಒಮ್ಮೆ ಇನ್ನೆಲ್ಲೋ 
ಹಾರುವ ನಿನ್ನನು ನೋಡಿದರೆ 
ಮನಸು ಕೂಡ ನಿನ್ನೊಡನೆಯೇ 
ಕುಣಿಯುತ ಹೊರಡುವುದು ಬೇರೆಡೆಗೆ !!



Thursday 12 July 2012

ಬಂಧನವಾಗದಿರಲಿ ಹೆಣ್ಣು ನೋಡುವ ಸಂಪ್ರದಾಯ

ಕೆಲವು ಸಂಪ್ರದಾಯಗಳನ್ನು ಬಿಟ್ಟುಕೊಡಲು ಹಿರಿಯರು ತಯಾರಿರುವುದಿಲ್ಲ ಇದರಿಂದ ಮಗಳ ಮನಸ್ಸಿಗೆ ನೋವಾಗುವುದು ಎಂಬ ಬಗ್ಗೆ ಗಮನ ಹರಿಸುವುದೇ ಇಲ್ಲ .ಗೆಳತಿಯೊಬ್ಬಳಲ್ಲಿ ಮದುವೆಯ ಬಗ್ಗೆ ಕೇಳಿದಾಗ "ನನಗಂತೂ ಮದುವೆ ಆಗಬೇಕೆಂಬ ಆಸೆಯೇ ಹೊರಟುಹೋಗಿದೆ ಬಂದವರ ಮುಂದೆ ಅಲಂಕಾರ ಮಾಡಿ ಕುಳಿತುಕೊಂಡು ಬೇಸರ ಆಗಿಬಿಟ್ಟಿದೆ " ಹೀಗೆ ಉತ್ತರ ಬಂತು.ಇದು ಕೇವಲ ಒಬ್ಬರ ಉತ್ತರವಲ್ಲ ಈಗಿನ ಸಾಕಷ್ಟು ಹೆಣ್ಣು ಮಕ್ಕಳ ಅಭಿಪ್ರಾಯ ಅದರಲ್ಲೂ ಹಳ್ಳಿ ಕಡೆಗಳಲ್ಲಿ ಈ ಸಂಪ್ರದಾಯಗಳು ಇನ್ನು ಮುಂದುವರೆದುಕೊಂಡು ಹೋಗುತ್ತಿರುವುದು ನಿಜಕ್ಕೂ ಆಶ್ಚರ್ಯವೇ ಸರಿ. 
ಹೌದು ಈಗಲೂ ಕೂಡ ಎಷ್ಟೋ ಮನೆಗಳಲ್ಲಿ ಮಗಳನ್ನು ಅಲಂಕರಿಸಿ ಗಂಡಿನವರ ಎದುರು ಕೂರಿಸಿವ ಸಂಪ್ರದಾಯವಿದೆ .ಆದರೆ ಪ್ರತಿ ಭಾರಿಯೂ ಹೀಗೆ ಬಂದವರ ಮುಂದೆ ಕುರಿಸುವುದಕ್ಕಿಂತ ಮೊದಲೇ ವಿಚಾರಿಸಿ ಫೋಟೋ  ನೋಡಿ ಸಂಭಂದ ಗಳು ಎರಡು ಕಡೆಯಲ್ಲಿ  ಒಪ್ಪಿಗೆ ಇದ್ದಲ್ಲಿ ಮುಂದುವರೆದರೆ ಹೆಣ್ಣು ಮತ್ತು ಗಂಡು ಯಾರ ಮನಸ್ಸಿಗೂ ಕೂಡ ಘಾಸಿಯಾಗದು .
ಹೆಣ್ಣು ಮಗಳು ವಯಸ್ಸಿಗೆ ಬರುತ್ತಿದ್ದಂತೆ ಮದುವೆ ಮಾಡಿ ಬಿಡಬೇಕೆಂಬ  ಆತುರ ಎಲ್ಲ ತಂದೆ ತಾಯಿಯರಲ್ಲೂ ಇದ್ದೆ ಇರುತ್ತದೆ ಆದರೆ ಮಗಳ ಬಗ್ಗೆ ಒಮ್ಮೆ ಯೋಚಿಸಿ . ವರನನ್ನು ಹುಡುಕುವ ಮೊದಲು ಮಗಳಿಗೆ ಇಷ್ಟವಿದೆಯೋ ಇಲ್ಲವೋ ಎಂಬ ಬಗ್ಗೆ ಒಮ್ಮೆ ಗಮನಹರಿಸಿ. ಯಾವ ರೀತಿಯ ವರ ಬೇಕು ಎಂಬುದನ್ನು ಅವರಲ್ಲೇ ಕೇಳಿಬಿಟ್ಟರೆ ಹುಡುಕುವುದು ಸುಲಭವಾಗುತ್ತದೆ. ಜಾತಕ ಕೊಡುವಾಗ ೧೦-೧೫ ಕಡೆ ಒಟ್ಟಿಗೆ ಕೊಟ್ಟು ಎಲ್ಲರನ್ನು ಮನೆಗೆ ಕರೆಸಿ ಮಗಳನ್ನು ಎಲ್ಲರ ಮುಂದೆ ಅಲಂಕರಿಸಿ ಕೂರಿಸಿ ನಂತರ ಬೇಡ ವೆಂದಾಗ ಮಗಳ ಮನಸ್ಸಿಗೆ ಸಾಕಷ್ಟು ಘಾಸಿ ಆಗಬಹುದು ಎಂಬುದರ ಬಗ್ಗೆ ಗಮನವಿರಲಿ.
ಹಾಗೆಯೇ ಕೆಲವೊಮ್ಮೆ ಗಂಡು ಕೂಡ ಇಷ್ಟವಿಲ್ಲದೆ ತಂದೆ ತಾಯಿಯರ ಒತ್ತಾಯಕ್ಕಾಗಿ ಹೆಣ್ಣನ್ನು ನೋಡಲು ಬರುವ ಸಂಧರ್ಭಗಳು ಕೂಡ ಸಾಕಷ್ಟಿವೆ . ಇಷ್ಟವಿಲ್ಲದಿದ್ದರೆ ಮೊದಲೇ ಕಡಾಖಂಡಿತವಾಗಿ ತಿಳಿಸಿಬಿಡಿ ಹುಡುಗಿ ನೋಡಲು ಹೋಗಿ ಆಕೆಯ ಭಾವನೆಗೆ ಧಕ್ಕೆಯುಂಟು ಮಾಡುವುದು ಸರಿಯಲ್ಲ.
ಒಬ್ಬರನ್ನೊಬ್ಬರು ನೋಡದೆಯೇ ತೀರ್ಮಾನ ತೆಗೆದುಕೊಲ್ಲಲಾಗದು ನಿಜ ಆದರೆ ಹಾಗೆ ನೋಡಲೇಬೇಕಾದ ಸಂದರ್ಭದಲ್ಲಿ ೧-೨ ಜನ ಮಾತ್ರ ಸೇರಿ ನೋಡಿ ನಂತರ ಮುಂದಿನ ತೀರ್ಮಾನ ಕೈಗೊಳ್ಳುವುದು ಸೂಕ್ತ .ಇಲ್ಲದಿದ್ದರೆ ಮದುವೆ ಯಾ ಬಗ್ಗೆ ಮದುವೆಯಾಗುವ ಮೊದಲೇ ಬಂಧನವಾಗಿ ಕಾಣಬಹುದು .
ಹಳೆಯ ಸಂಪ್ರದಾಯವನ್ನು ಬಿಡಬಾರದು ಎಂಬ ಹಟದಲ್ಲಿ ಈ ರೀತಿ  ಮಾಡುವುದರಿಂದಾಗಿ ಎಷ್ಟೋ ಹೆಣ್ಣು ಮಕ್ಕಳು ಮದುವೆ ಆಗಬೇಕೆಂಬ ಭಾವನೆಯಿಂದ ಹೊರಬರುವಂತಾಗಿದೆ . ಇದರ ಬಗ್ಗೆ ಪೋಷಕರ ಗಮನ ಹರಿಸಿದಲ್ಲಿ ಸಾಕಷ್ಟು ಹೆಣ್ಣುಮಕ್ಕಳು ಸಂತೋಷಪಡಬಹುದು .

ಕನವರಿಕೆ

ಮನದ ಮೂಲೆಯಲ್ಲೆಲ್ಲೋ ನೆನಪುಗಳ
ಚಡಪಡಿಕೆ
ಬೇಸರ ಕಳೆಯಲು ನಿನ್ನದೇ ಹಾಡಿನ
ಸಾಲುಗಳ ಗುನುಗುನಿಸುವಿಕೆ
 ಹಗಲು ಇರುಳು ನಿನದೆ ಕನವರಿಕೆ
ಸಾಕು ನಿನ್ನ ಅಗಲುವಿಕೆ
ಬಾ ಬೇಗ ಸನಿಹಕೆ .

-ಅರ್ಪಿತಾ ಹರ್ಷ
 

Thursday 28 June 2012

ಕೇಂಬ್ರಿಡ್ಜ್- ಪ್ರವಾಸಿ ಕಥನ

ಕೇಂಬ್ರಿಡ್ಜ್ ಹೆಸರು ಕೇಳದವರಾರಿಲ್ಲ?  ಜಗತ್ಪ್ರಸಿದ್ಧಿ ಪಡೆದ ಕೇಂಬ್ರಿಡ್ಜ್ ನಲ್ಲಿ ಓದುವ ಅವಕಾಶವಂತು ಸಿಗಲಿಲ್ಲ ನೋಡುವ ಅವಕಾಶ ಇರುವಾಗ ಬಿಡಬಾರದೆಂದು ತೀರ್ಮಾನಿಸಿ ಕೇಂಬ್ರಿಡ್ಜ್ ಗೆ ಇತ್ತೀಚಿಗೆ ಹೋಗಿದ್ದೆವು.ಲಂಡನ್ ನಿಂದ  ಕೇಂಬ್ರಿಡ್ಜ್ ಗೆ ಸುಮಾರು ೮೦ ಕಿಲೋಮೀಟರ್ . ಕೇಂಬ್ರಿಡ್ಜ್ ಅನ್ನು ಒಂದು ದಿನದಲ್ಲಿ ನೋಡಿ ಮುಗಿಸಬಹುದು. ಹಾಗೆ ನಾವು ಹೊರಟಿದ್ದು ಒಂದು ವೀಕೆಂಡ್ ನಲ್ಲಿ. ಕೇಂಬ್ರಿಡ್ಜ್  ಯುನೈಟೆಡ್ ಕಿಂಗ್ಡಮ್ ನಲ್ಲಿರುವ ಒಂದು ಪುಟ್ಟ ಸಿಟಿ . ಇಲ್ಲಿ ಎಲ್ಲಿ ನೋಡಿದರು ಕಾಲೇಜು ಗಳು .ಕೇಂಬ್ರಿಡ್ಜ್ ಕಾಲೇಜುಗಳಿಗೆ ಹೆಸರುವಾಸಿ ನಿಜ ಆದರೆ ಇದೊಂದು ಪ್ರವಾಸಿ ತಾನವಾಗ್ ಮಾರ್ಪಟ್ಟಿದೆ .
ಕೇಂಬ್ರಿಡ್ಜ್ ನಲ್ಲಿ ಸ್ಟೇಜ್ ಕೋಚ್ ಬಸ್ ಇದೆ ಇದರಲ್ಲಿ ಒಮ್ಮೆ ಟಿಕೆಟ್ ತೆಗೆದುಕೊಂಡರೆ ಬೆಳಗಿನಿಂದ ಸಂಜೆಯವರೆಗೆ ಎಲ್ಲಿ ಬೇಕಾದರೂ ಸುತ್ತಬಹುದು ಇದರಲ್ಲಿ  ಕೇಂಬ್ರಿಡ್ಜ್ ನ ನೋಡಬೇಕಾದ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗಲಾಗುತ್ತದೆ ಜೊತೆಗೆ ಗೈಡ್ ಕೂಡ ನೀಡಲಾಗುತ್ತದೆ. ಹೀಗೆ ನಾವು ಮೊದಲು ಹೋದ ಸ್ಥಳವೆಂದರೆ ಕೇಂಬ್ರಿಡ್ಜ್ ಬಟಾನಿಕಲ್ ಗಾರ್ಡನ್ ಇದೊಂದು ಅದ್ಭುತ ಉದ್ಯಾನವನ ಇಡೀ ಉದ್ಯಾನವನವನ್ನು ಸರಿಯಾಗಿ  ನೋಡಲು ಅರ್ಧ ದಿನವೇ ಬೇಕಾಗಬಹುದು.೧೮೪೬ ರಲ್ಲಿ ಇದನ್ನು ತೆರೆಯಲಾಯಿತು ಇಲ್ಲಿ ಒಳಹೊಕ್ಕರೆ ವಿವಿಧ ಬಗೆಯ, ವಿವಿದ ಬಣ್ಣಗಳ ಹೂಗಳನ್ನು ಕಾನವಹುದು ಜೊತೆಗೆ ಕೊಳ ಮತ್ತು ಕಾರಂಜಿಯನ್ನು ಒಳಗೊಂಡಿದೆ ಇದು ಒಂಬತ್ತು ರಾಷ್ಟ್ರಗಳ ಬೇರೆಬೇರೆ ರೀತಿಯ ಗಿಡಗಳ ಸಂಗ್ರಹವನ್ನು ಒಳಗೊಂಡಿರುವುದು ಇಲ್ಲಿಯ ವಿಶೇಷವೆ ಸರಿ. ಸ್ಟೇಜ್ ಕೋಚ್ ಬಸ್ ನಲ್ಲಿಯೇ ಇದರ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಅಲ್ಲಿಂದ ೧೫ ನಿಮಿಷಗಳ ಬಸ್ ಪ್ರಯಾಣದ ನಂತರ ನಮಗೆ ಸಿಗುವುದೇ ಅಮೆರಿಕನ್ ಸೇಮೆಟರಿ. ೧೯೫೬ರಲ್ಲಿ ಇದನ್ನು ಸ್ಥಾಪಿಸಲಾಯಿತು .೨ ನೆ ಮಹಾಯುದ್ದದಲ್ಲಿ ಮಡಿದ ಅಮೆರಿಕನ್ ಸೈನಿಕರ ಸ್ಮರಣಾರ್ಥವಾಗಿ ಇದನ್ನು ನಿರ್ಮಿಸಲಾಗಿದೆ ಇದರ ಜೊತೆಗೆ ಇಲ್ಲಿ ಮೆಮೋರಿಯಲ್ ಕೂಡ ಕಟ್ಟಲಾಗಿದ್ ಇದನ್ನು ಪೋರ್ಟ್ ಲ್ಯಾಂಡ್ ಕಲ್ಲಿನಿಂದ ಕೆತ್ತಲಾಗಿದೆ . ಸುತ್ತಲು ಹಸಿರಿನಿಂದ ಕೂಡಿದ ಈ ಪ್ರದೇಶದ  ಮಧ್ಯದಲ್ಲಿ  ಸಾವಿರಾರು ಹುತಾತ್ಮರ  ಗೋರಿಯನ್ನು ನೋಡಬಹುದು .
ಇಲ್ಲಿಂದ ಸುಮಾರು ೧೦ ನಿಮಿಷಗಳ ಬಸ್ ಪ್ರಯಾಣಿಸಿದರೆ ಸಿಗುವುದೇ ಪಂಟಿಂಗ್ ಇದು ಕೇಂಬ್ರಿಡ್ಜ್ ನ ಆಕರ್ಷಕ ಸ್ಥಳ ಕೇಂಬ್ರಿಡ್ಜ್ ಗೆ ಬಂದವರು ಪಂಟಿಂಗ್ ಮಾಡದೆ ಹಿಂದಿರುಗುವುದಿಲ್ಲ.ಕೇಂಬ್ರಿಡ್ಜ್ ನ  ಪ್ರಸಿದ್ಧಿ ಪಡೆದ ವಿಶ್ವವಿಧ್ಯಾಲಯಗಳ ಹಿಂಬದಿಯಲ್ಲಿ ಒಂದು ಹರಿಯುವ ಕೊಳವನ್ನು ನಿರ್ಮಿಸಲಾಗಿದೆ ಬೋಟ್ ಹುಟ್ಟು ಹಾಕಲು ಅಭ್ಯಾಸವಿದ್ದಲ್ಲಿ ನಾವೇ ಬೋಟ್ ನಡೆಸಿಕೊಂಡು ಹೋಗಬಹುದು ಅದಿಲ್ಲದಿದ್ದಲ್ಲಿ ೪೫ ನಿಮಿಷಗಳ ಬೋಟ್ ಟ್ರಿಪ್ ಗೆ ಹೋಗಬಹುದು  ಇದರ ಜೊತೆ ಗೈಡ್ ಕೂಡ ನೀಡಲಾಗುತ್ತದೆ. ಕ್ವೀನ್ಸ ಕಾಲೇಜಿನಿಂದ ಪ್ರಾರಂಭಿಸಿ ಕಿಂಗ್ಸ್ ಕಾಲೇಜ್ ,ಟ್ರಿನಿಟಿ ಕಾಲೇಜ್, ಮತ್ತು ಸೈಂಟ್ ಜೋನ್ಸ್ ಕಾಲೇಜ್ ಗಳವರೆಗೆ ಎಲ್ಲ ಕಾಲ್ಲೆಗೆಗಳನ್ನು ಕೂಡ ನೋಡಬಹುದು. ಇದರಲ್ಲಿ ಟ್ರಿನಿಟಿ ಕಾಲೇಜ್ ಪ್ರಪಂಚದಲ್ಲೇ ಅತ್ಯಂತ ದುಭಾರಿ ಕಾಲೇಜ್ ಎಂಬುದು ಅಲ್ಲಿ ಸಿಕ್ಕ ಮಾಹಿತಿ. ಜೊತೆಗೆ ಇದು ಅತ್ಯಂತ ವಿಶಾಲವಾದ ಕಾಲೇಜ್ ಕೂಡ ಹೌದು. ಇದರ ಒಳ ಭಾಗದಲ್ಲಿ ಚರ್ಚ್ ಕೂಡ ಇದೆ . ೨೦ನೆ ಶತಮಾನದಲ್ಲಿ ಇಲ್ಲಿ ಓದಿದ ೩೧ ಜನರಿಗೆ ನೊಬೆಲ್ ಪ್ರಶಸ್ತಿ ದೊರೆತಿದೆ ಎಂಬುದು ಟ್ರಿನಿಟಿ ಕಾಲೇಜ್ ನ ಹೆಮ್ಮೆ.  ೧೨ ನೆ ಶತಮಾನದಲ್ಲಿ ಮೊದಲ ಭಾರಿಗೆ ಕೇಂಬ್ರಿಡ್ಜ್ ವಿಶ್ವವಿಧ್ಯಾಲಯ ವನ್ನು ಸ್ಥಾಪಿಸಲಾಯಿತು. ಪೀಟರ್ ಹೌಸ್ ಎಂಬುದು ಮೊತ್ತ ಮೊದಲು ಪ್ರಾರಂಭವಾದ ಕಾಲೇಜ್ ಎಂಬುದು ಇಲ್ಲಿ ಸಿಕ್ಕ ಮಾಹಿತಿ.೧೨೪೮ರಲ್ಲಿ ಮೊದಲ ಕಾಲೇಜ್ ಪ್ರಾರಂಭವಾಗಿದೆ. ಇದಲ್ಲದೆ ಕಿಂಗ್ಸ್ ಮತ್ತು ಸೈಂಟ್ ಜೋನ್ಸ್ ಕಾಲೇಜು ಗಳು ಕೂಡ ಅಷ್ಟೇ ಪ್ರಖ್ಯಾತಿಯನ್ನು ಪಡೆದಿದೆ.ಹೀಗೆ ಒಂದರ ಪಕ್ಕದಲ್ಲಿ ಒಂದು ಎಂಬಂತೆ ೪-೫ ಕಾಲೇಜ್ ಗಳನ್ನೂ ನೋಡಬಹುದು. ೧೨-೧೩ ನೆ ಶತಮಾನದ ಅತಿ ಪ್ರಾಚೀನ ಕಟ್ಟಡಗಳು ಇಂದಿಗೂ ಹಾಗೆಯೇ ಇರುವುದು ವಿಶೇಷತೆ ಎನಿಸದಿರದು.ಆರಂಭದಲ್ಲಿ ಕೇಂಬ್ರಿಡ್ಜ್ ನಲ್ಲಿ ಕೇವಲ ಪುರುಷರಿಗೆ ಮಾತ್ರ ಓದುವ ಅವಕಾಶವಿತ್ತು ೧೮೬೯ ರಲ್ಲಿ ಮೊದಲ ಭಾರಿಗೆ ಗ್ರಿತನ್ ಕಾಲೇಜ್ ನಲ್ಲಿ ಮಹಿಳೆಯರಿಗೆ ವಿದ್ಯಾಭ್ಯಾಸದ ಅವಕಾಶ ಕಲ್ಪಿಸಲಾಯಿತು ಜೊತೆಗೆ ಜಗತ್ಪ್ರಸಿದ್ಧಿ ಹೊಂದಿರುವುದರಲ್ಲಿ ಮೆಚ್ಚೆಲೇ ಬೇಕಾದ ಸಂಗತಿ. ಜೊತೆಗೆ ೪೫ ನಿಮಿಷಗಳ ಪಂಟಿಂಗ್ ಕುಶಿ ಕೊಡುವುದಂತೂ ನಿಜ. ಪಂಟಿಂಗ್ ಕೇಂಬ್ರಿಡ್ಜ್ ನ ಜನಪ್ರಿಯತೆಯನ್ನು ಹೆಚ್ಚಿಸಿದೆ .ಇಲ್ಲಿ ಬಂದವರೆಲ್ಲರೂ ಎಲ್ಲಿ ಹೋಗಲಾಗದಿದ್ದರೂ  ಕೇಂಬ್ರಿಡ್ಜ್ ನ ಬೋಟಿಂಗ್ ನಲ್ಲಿ ಹೋಗಿ ಎಲ್ಲ ಕಾಲೇಜ್ ಗಳನ್ನೂ ನೋಡಿ ಬರುತ್ತಾರೆ. ಪ್ರತಿ ಕಾಲೇಜ್ ನ ಲೈಬ್ರರಿಗಳು ಕೂಡ ಅಷ್ಟೇ ಪ್ರಸಿದ್ಧಿ ಪಡೆದಿದೆ.


.
ಇಲ್ಲಿಂದ ೧೦ ನಿಮಿಷಗಳ ಅಂತರದಲ್ಲಿ ರೌಂಡ್ ಚರ್ಚ್ ಎಂಬ ಚರ್ಚ್ ಇದೆ ಇದು ಕೇವಲ
ಕೇಂಬ್ರಿಡ್ಜ್ ನಲ್ಲೆ ಅಲ್ಲ ಇಂಗ್ಲೆಂಡ್ ನಲ್ಲೆ ೨ ನೆಯ ಅತಿ ಹಳೆಯ ಕಟ್ಟಡ ಎನ್ನಲಾಗಿದೆ. ಹೆಸರೇ ಹೇಳುವಂತೆ  ಕಲ್ಲಿನಿಂದ ಕೆತ್ತಿದ ವೃತ್ತಾಕಾರದ ಚರ್ಚ್ ಇದು. ಇದು ಕೂಡ ಇಲ್ಲಿನ ಪ್ರಸಿದ್ಧ ಚರ್ಚ್ ಆಗಿದೆ .ಫಿಟ್ಸ್ ವಿಲಿಯಂ ಮ್ಯೂಸಿಯಂ ಇಲ್ಲಿಯ ಮತ್ತೊಂದು ಆಕರ್ಷಣೆ. ಇಲ್ಲಿ ಪ್ರತಿ ತಿನ್ಗಲಿನಲ್ಲು ಬೇರೆ ಬೇರೆ ರೀತಿಯ ವಸ್ತು ಪ್ರದರ್ಶನವನ್ನು ನೀಡಲಾಗುತ್ತದೆ ಹೆಚ್ಚಾಗಿ ಕಲ್ಲಿನಿಂದ ಮಾಡಿದ ವಿವಿದ ರೀತಿಯ ವಿಗ್ರಹಗಳನ್ನು ಕಾಣಬಹುದು  .
ಕ್ವೀನ್ಸ ಕಾಲೇಜ್ ನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಲು ಒಂದು ಬ್ರಿಡ್ಜ್ ಅನ್ನು ಕಟ್ಟಲಾಗಿದೆ ಅದನ್ನು ಮ್ಯಾತಮೆಟಿಕಾಲ್  ಬ್ರಿಡ್ಜ್ ಎಂದು ಕರೆಯಲಾಗುತ್ತದೆ. ಇದನ್ನು ತ್ರಿಬುಜಾಕಾರದಲ್ಲಿ ಮರದ ಕೋಲನ್ನು ಉಪಯೋಗಿಸಿ ಗಣಿತ ಶಾಸ್ತ್ರದ ಪ್ರಕಾರ ಎಷ್ಟೇ ಭಾರವಾದರೂ ಸಹಿಸುವಂತೆ ಬಲಯುತವಾಗಿ ಕಟ್ಟಲಾಗಿದೆ ಆದ್ದರಿಂದ ಇದಕ್ಕೆ ಈ ಹೆಸರು ಬಂದಿದೆ ಎಂಬುದು ಇಲ್ಲಿ ಸಿಗುವ ಮಾಹಿತಿ .



ಒಟ್ಟಾರೆಯಾಗಿ ಒಂದು ದಿನದಲ್ಲಿ ನೋಡಿ ಮುಗಿಸಬಹುದಾದ ಮನಸ್ಸಿಗೆ ಮುದ ನೀಡುವ ತಾಣ ಕೇಂಬ್ರಿಡ್ಜ್ .




Wednesday 20 June 2012

ಬೇಸ್ತು ಬೀಳಿಸಿದ ಕಾಲೇಜಿನ ಮೊದಲ ದಿನ


ಈ ನನ್ನ ಲೇಖನವು ೬/೬/೨೦೧೨ ರ ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ  http://www.vijayanextepaper.com/svww_zoomart.php?Artname=20120706a_019101003&ileft=39&itop=701&zoomRatio=130&AN=20120706a_019101003



ಹೈ ಸ್ಕೂಲ್ ಮುಗಿದ ನಂತರ ಕಾಲೇಜಿಗೆ ಸೇರಿದಾಗ ಊರಿನಲ್ಲೇ ಕಾಲೇಜಿಗೆ ಹೋಗುತ್ತಿದ್ದ ಸಿನಿಯರ್ಸ್ ಕಾಲೇಜಿನಲ್ಲಿ ಹುಡುಗರು ಹಾಗಿರುತ್ತಾರೆ ಹೀಗಿರುತ್ತಾರೆ ಎಂದು ಹೇಳುತ್ತಿದ್ದರು ಹಾಗೆ ನಾನು ಸೇರಿದ್ದ ಕಾಲೇಜು ಮನೆಯಿಂದ ಹತ್ತಿರವೇ ಇದ್ದದ್ದರಿಂದ ನಮ್ಮ ಹಳ್ಳಿಯ ಎಲ್ಲ ಸೀನಿಯರ್ಸ್ ಅದೇ ಕಾಲೇಜಿನಲ್ಲಿ ಓದುತ್ತಿದ್ದರು .ನಮ್ಮ ಪಕ್ಕದಮನೆಯ ಅಕ್ಕ ಹಿಂದಿನ ವರ್ಷದಲ್ಲಿ ಕಾಲೇಜಿಗೆ ಮೊದಲಭಾರಿ ಸೇರಿದ್ದರು .ಕಾಲೇಜಿನ ಮೊದಲ ದಿನ ಒಬ್ಬ ಹುಡುಗ ಒಂದು ಪುಸ್ತಕವನ್ನು ಹಿಡಿದು ಒಳ ಬಂದಾಗ ಲೆಕ್ಚರರ್ ಎಂದು ತಿಳಿದು ಎದ್ದು ನಿಂತಿದ್ದೆವು ಆ ನಂತರ ನಿಜವಾದ ಲಕ್ಚರರ್ ಬಂದಾಗಲೇ ಗೊತ್ತಾಗಿದ್ದು ಅವನು ನಮ್ಮನ್ನು ಬೇಸ್ತು ಬೀಳಿಸಲು ಮಾಡಿದ ನಾಟಕವೆಂದು ಎಂದು ಹೇಳಿ ಆ ದಿನ ನಡೆದ ಘಟನೆಯ ವಿವರ ನೀಡಿ ನಾವೆಲ್ಲಾ ಸೇರಿ ನಕ್ಕಿದ್ದೆವು , ನೀನು ಕೂಡ ಹುಷಾರಾಗಿರು ಒಮ್ಮೊಮ್ಮೆ ಸೀನಿಯರ್ಸ್ ಸುಳ್ಳು ಹೇಳಿ ಎಲ್ಲರನ್ನು ನಗುವಂತೆ ಮಾಡುತ್ತಾರೆ ಎಂದು ಬುದ್ದಿ ಹೇಳಿದ್ದಳು .
ಸರಿ ನಾನು ಮೊದಲ ದಿನ ಹೋದ ಸ್ವಲ್ಪ ಸಮಯದಲ್ಲೇ ಇನ್ನು ತರಗತಿ ಪ್ರಾರಂಭವಾಗುವ ಮೊದಲೇ ಒಬ್ಬರು ಒಂದು ನೋಟ್ ಬುಕ್ ಹಿಡಿದು ಬಂದರು ನನಗೆ ಅಕ್ಕ ಹೇಳಿದ್ದು ನೆನಪಿನಲ್ಲಿದ್ದದ್ದರಿಂದ ಎದ್ದು ನಿಲ್ಲದೆ ಸುಮ್ಮನೆ ಕುಳಿತಿದ್ದೆ .ಉಳಿದವರೆಲ್ಲರೂ ಎದ್ದು ನಿಂತಿದ್ದರು . ನನಗೆ  ಮನದಲ್ಲಿ ಕುಶಿಯಾಗಿತ್ತು ಇವರೆಲ್ಲರೂ ಬೇಸ್ತು ಬೀಳುತ್ತಿದ್ದಾರೆ ನಾನು ಬೀಳಲಿಲ್ಲ ಎಂದು ,ಆದರೆ ಬಂದವರು ನಿಜವಾಗಿಯೂ ಲಕ್ಚರರ್ ಆಗಿದ್ದರು ಎಂದು ಅವರು ತಮ್ಮ ಪರಿಚಯ ಮಾಡಿಕೊಂಡಾಗ ತಿಳಿಯಿತು . ಸಧ್ಯ ಅವರು ನಾನು ಎದ್ದು ನಿಲ್ಲದಿದ್ದ ಬಗ್ಗೆ ಗಮನಹರಿಸಿಲ್ಲದಿದ್ದರಿಂದ ನಾನು ಬಚಾವ್ ಆಗಿದ್ದೆ .ಈ ಭಾರಿ ನಾನು ಕೂಡ ಬೇಸ್ತು ಬಿದ್ದಿದ್ದೆ .



ಅರ್ಪಿತಾ ಹರ್ಷ

Tuesday 19 June 2012

ಅಮರ ಮಧುರ ಸ್ನೇಹ

ಈ ನನ್ನ ಲೇಖನವು ಅವಧಿ ಮ್ಯಾಗಜಿನ್ ನಲ್ಲಿ ಪ್ರಕಟಗೊಂಡಿದೆ  http://avadhimag.com/?p=55895

ಆಕೆ ನನಗೆ ಬಹಳ ಆತ್ಮೀಯ ಗೆಳತಿ ಬಹಳ ದಿನಗಳ ವರೆಗೆ ಒಟ್ಟಿಗೆ ಕೆಲಸ ಮಾಡಿದವರು ನಾವು . ಇಬ್ಬರು ಸದಾಕಾಲ ನಗುತ್ತ , ಮಾತನಾಡುತ್ತ ಮುಂದಿನ ದಿನಗಳ ಬಗ್ಗೆ ಯೋಚಿಸುತ್ತ ಕಳೆದ ದಿನಗಳು ಬಹಳ. ಅನಿವಾರ್ಯ ಕಾರಣದಿಂದ ಕೆಲಸ ಬಿಟ್ಟು ಹೋಗಿದ್ದರಿಂದ ಫೋನ್ ಕೂಡ ಮಾಡದ ಪರಿಸ್ಥಿತಿ ಬಂದೊದಗಿತ್ತು. ಸುಮಾರು ಒಂದು ವರೆ ವರ್ಷದ ನಂತರ ಮತ್ತೊಮ್ಮೆ ಫೋನ್ ಮಾಡಿದಾಗ ಆಕೆಗಾದ ಸಂತೋಷ ನೋಡಿ ಇಷ್ಟು ದಿನ ಫೋನ್ ಮಾಡದೆ ಏನೋ ಒಂದು ವಸ್ತುವನ್ನು ನಾನೇ ಕೈಯಾರೆ ಮಿಸ್ ಮಾಡಿಕೊಂಡಂತೆ ಅನಿಸಿತ್ತು. ಸುಮಾರು ಒಂದು ಗಂಟೆ ಹಳೆಯ ಸುಂದರ ದಿನಗಳ ಮೆಲುಕು ಹಾಕಿದೆವು ಆ ದಿನಗಳು ಮತ್ತೆ ಬರಲಾರದು ನಿಜ ಆದರೆ ಅಂತಹ ದಿನಗಳ ನೆನಪೇ ಎಷ್ಟೊಂದು ಸಂತೋಷ ನೀಡುತ್ತದೆ ಎಂದು ಮತ್ತೆ ಮತ್ತೆ ನೆನಪಿಸಿಕೊಂಡೆವು.
ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಸುಮ್ಮನೆ ಕುಳಿತು ಯೋಚಿಸುತ್ತಿದ್ದೆ ಹಿಂದೆ ಕಳೆದ ದಿನಗಳು ಯಾವಾಗಲು ಸುಮಧುರ . ಅಂತಹ ಸುಮಧುರ ದಿನಗಳಿಗೆ ಕಾರಣರಾದವರು ನಿಜಕ್ಕೂ ಮಧುರ. ಸ್ನೇಹಿತರು ಎಲ್ಲಿ ಹೋದರು ಸಿಕ್ಕಿಯಾರು ಹೊಸ ಸ್ನೇಹ ಮಾಡಿಕೊಲ್ಲುವುದೇನು ಕಷ್ಟದ ಕೆಲಸವಲ್ಲ ಆದರೆ ಮಾಡಿಕೊಂಡ ಸ್ನೇಹವನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ .ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ದೂರವಾಗಬೇಕಾಗುತ್ತದೆ. ಇನ್ನು ಕೆಲವೊಮ್ಮೆ ನಾವೇ ಕಾರಣ ಹುಡುಕಿ ದೂರವಾಗಿಬಿಡುತ್ತೇವೆ. ಕೆಲವೊಮ್ಮೆ ಬೇರೆ ಕೆಲಸ ಕ್ಕೆ ಸೇರಿದರೆ ಅಥವಾ ಮದುವೆ ಆಗಿ ಬೇರೆ ಸ್ಥಳಗಳಿಗೆ ಹೋದರೆ ಹೀಗೆ ನಾನಾ ಕಾರಣಗಳಿಗೆ ದೂರವಾಗುವುದುಂಟು . ಆದರೆ ಈಗ ಮೊಬೈಲ್ ಎನ್ನುವುದು ಹಳ್ಳಿಗಳಲ್ಲೂ ಕೂಡ ಎಲ್ಲರ ಮನೆಗಳಲ್ಲೂ ಇದ್ದೆ ಇರುತ್ತದೆ. ಪ್ರತಿ ದಿನ ಫೋನ್  ಮಾಡಲಾಗದಿದ್ದರೂ ತಿಂಗಳಿಗೊಮ್ಮೆಯಾದರೂ ಆತ್ಮೀಯ ಸ್ನೇಹಿತರಿಗೆ ಫೋನ್ ಮಾಡುತ್ತಿರಬೇಕು ಇದರಿಂದ ಬಾಂಧವ್ಯ ಯಾವತ್ತು ಮುರಿದುಬೀಳುವುದಿಲ್ಲ. ಆ ಗೆಳತಿ ಎಲ್ಲಿ ಹೋದಳೋ ಹೇಗಿದ್ದಾಳೋ ಎಂಬ ಯೋಚನೆ ಇರುವುದಿಲ್ಲ. ಹಳೆಯ ಸ್ನೇಹ ಯಾವತ್ತಿಗೂ ಗಟ್ಟಿ . ಬಾಲ್ಯದಿಂದಲೂ ಬೆಳೆದು ಬಂದ ಸ್ನೇಹ ಎಂದಿಗೂ ನೆನಪಿರುವನ್ತದ್ದು .ಇಂತಹ ಸ್ನೇಹ ಗಟ್ಟಿ ಕೂಡ .ನಮ್ಮ ಜೀವನದ ಪ್ರತಿಹಂತದಲ್ಲೂ ಸ್ನೇಹಿತರು ಬೇಕೇ ಬೇಕು . ಕಷ್ಟ ಸುಖ ಹಂಚಿಕೊಳ್ಳಲು ಸ್ನೇಹಿತರೆ ಬೇಕು . ಕೇವಲ ಕಷ್ಟದ ಕಾಲದಲ್ಲಿ ಸಹಾಯ ಪಡೆದು ಮರೆತುಬಿಡುವುದು ಸೂಕ್ತವಲ್ಲ . ಈಗಂತೂ ಫೇಸ್ ಬುಕ್ ,ಮೊಬೈಲ್ ,ಸ್ಕೈಪ್ , ಹೀಗೆ ಸಾಕಷ್ಟು ಅವಕಾಶಗಳಿವೆ ಸ್ನೇಹವನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಿಕೊಳ್ಳಲು ಆದ್ದರಿಂದ ಸ್ನೇಹವನ್ನು ಉಳಿಸಿಕೊಳ್ಳೋಣ .ಬೆಳೆಸಿಕೊಳ್ಳೋಣ .ಸ್ನೇಹ ಅವಶ್ಯಕತೆಗೆ ಮಾತ್ರವಾಗಿರದೆ
  ಅಮರವಾಗಿರಲಿ .




ಅರ್ಪಿತಾ ಹರ್ಷ .

Thursday 14 June 2012

ನೆರೆಹೊರೆಯವರೊಂದಿಗಿನ ಸಲುಗೆಗೆ ಮಿತಿ ಇರಲಿ

ಸ್ವಂತ ಮನೆಯಿಲ್ಲದವರಿಗೆ ಎಷ್ಟೋ ಭಾರಿ ತಕ್ಷಣಕ್ಕೆ ಬೇರೆ ಮನೆಯೊಂದಕ್ಕೆ ಶಿಫ್ಟ್ ಆಗುವ ಅನಿವಾರ್ಯತೆ ಬಂದೊದಗುತ್ತದೆ . ಹಲವಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸವಾಗಿದ್ದು ಬೇರೆ ಸ್ಥಳಕ್ಕೆ ಹೋಗಬೇಕಾದಾಗ ಎಲ್ಲವೂ ಹೊಸದು. ಪರಿಚಯವಾದ ಹಲವಾರು ಸ್ನೇಹಿತರು ದೂರವಾಗುವುದು ಅನಿವಾರ್ಯವಾಗುತ್ತದೆ.ಹೊಸ ಮನೆ ಹೊಸ ಜಾಗಗಳಿಗೆ ಹೋಗಬೇಕಾಗುವುದು ಅನಿವಾರ್ಯ ಆದರೆ ಹೋದ ಬಳಿಕ ಜಾಗರೂಕರಾಗಿರಬೇಕು . ಹೊಸ ಜಾಗಗಳಿಗೆ ಹೋದಮೇಲೆ ಹೊಸ ಪರಿಚಯ ಆಗಲೇ ಬೇಕು . ಅದರಲ್ಲೂ ಮನೆಯಲ್ಲಿಯೇ ಇರುವ ಮಹಿಳೆಯರಿಗೆ ಜೊತೆಗಾರರು ಬೇಕೇ ಬೇಕು . ಅಕ್ಕ -ಪಕ್ಕ ಇರುವವರ ಪರಿಚಯ ಮಾಡಿಕೊಳ್ಳಬೇಕಾಗುತ್ತದೆ . ಒಂಟಿಯಾಗಿ ಇರುವ ಸಂದರ್ಭಗಳು ಬಂದಾಗ ಪರಿಚಯದವರು ಅಕ್ಕಪಕ್ಕದಲ್ಲಿದ್ದಾರೆ ಎಂದರೆ ಏನೋ ಒಂದು ರೀತಿಯ ಧೈರ್ಯ . ದಿನದಲ್ಲಿ ಕೆಲವು ಕ್ಷಣ ಗಳನ್ನಾದರು
ಮಾತನಾಡುತ್ತ ಕಳೆಯಬಹುದು ಮನಸ್ಸನ್ನು ಫ್ರೆಶ್ ಮಾಡಿಕೊಳ್ಳಬಹುದು .
ಆದರೆ ಹೀಗೆ ಅಪರಿಚಿತರನ್ನು ಪರಿಚಯ ಮಾಡಿಕೊಳ್ಳುವಲ್ಲಿ ಎಚ್ಚರವಿರಬೇಕು . ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಹೆಚ್ಚು ಹೊತ್ತಿನ ಕೆಲಸವಲ್ಲ. ಆದರೆ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಕಷ್ಟದ ಕೆಲಸ. ಎಲ್ಲರ ಮನೋಭಿಪ್ರಾಯಗಳು ಒಂದೇ ರೀತಿಯಾಗಿ ಇರುವುದಿಲ್ಲ. ಕೆಲವೊಮ್ಮೆ ಗುರುತು ಪರಿಚಯ ಇಲ್ಲದವರು ಬೇಗ ಸ್ನೇಹಿತರಾಗುತ್ತಾರೆ ಇನ್ನು ಕೆಲವೊಮ್ಮೆ ಅನುಮಾನಸ್ಪದವಾಗಿ ವರ್ತಿಸುತ್ತಾರೆ. ದಿನ ಕಳೆಯಲು ಒಂದು ಸಾಥ್ ಬೇಕು ನಿಜ .ಆದರೆ ಈಗಿನ ಕಾಲದಲ್ಲಿ ಸ್ನೇಹಿತರನ್ನು ಮಾಡಿಕೊಲ್ಲುವಾಗ ಕೂಡ ಬಹಳಷ್ಟು ಎಚ್ಚರಿಕೆ ಇಟ್ಟಿರುವುದು ಒಳ್ಳೆಯದು.
ನೆರೆಹೊರೆಯವರೊಂದಿಗೆ ಸಂಪರ್ಕ ಬೆಳೆಸುವ ಮುನ್ನ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು .
1.ದಿನವನ್ನು ಒಳ್ಳೆಯ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಹರಟೆ ಹೊಡೆಯುವುದು ಮನೆಯ ವಿಷಯಗಳನ್ನು ಇತರರೊಂದಿಗೆ ಹೇಳಿಕೊಳ್ಳುವುದು ಮಾಡುವುದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಕಷ್ಟದಲ್ಲಿ ಸಾಂತ್ವನ ಅಥವಾ ಕನಿಕರದ ಮಾತನಾಡಬಹುದು ಆದರೆ ನಮ್ಮ ಸಮಸ್ಯೆಗಳಿಗೆ ನಾವೇ ಉತ್ತರ ಕಂಡುಕೊಳ್ಳಬೇಕು. 
2.ದಿನದ ಕೆಲವಷ್ಟು ಗಂಟೆಗಳನ್ನು ಪುಸ್ತಕ ಓದುವುದು ಅಥವಾ ಬರವಣಿಗೆ ಅಥವಾ ಕಸೂತಿ ಹೀಗೆ ಸದುಪಯೋಗಪಡಿಸಿಕೊಂಡರೆ ಬೇಸರವೆನಿಸುವುದಿಲ್ಲ . ಜೊತೆಗೆ ದಿನದಲ್ಲಿ ಒಂದಾದರು ಒಳ್ಳೆಯ ಕೆಲಸ ಮಾಡಿದ್ದರ ಸಂತೋಷ ಸಿಗುತ್ತದೆ.
 3.ಅಕ್ಕಪಕ್ಕದವರೊಂದಿಗೆ ಹೆಚ್ಚು ಸಲಿಗೆ ಬೇಡ.
4.ಆದಷ್ಟು ಕುಶಲೋಪರಿ ಮತ್ತು ಲೋಕಾಭಿರಾಮ ವಿಷಯಗಳನ್ನು ಮಾತ್ರ ಮಾತನಾಡುವುದು ಸೂಕ್ತ.
ಮನೆಯ ಒಳಗಿನ  ವಿಷಯಗಳನ್ನು ಹೇಳುವುದು ಮತ್ತು ಅವರ ಮನೆಯ ವಿಷಯಗಳನ್ನು 
ಕೇಳುವುದು ಎರಡು ಹಿತಕರವಲ್ಲ. ಸಣ್ಣ ವಿಷಯಗಳು ಬಿನ್ನಭಿಪ್ರಾಯ ತಂದಿಡಬಹುದು.
5.ಎಲ್ಲರಿಗೂ ಹೆಚ್ಚು ಸಲುಗೆ ಕೊಡಬಾರದು. ಒಂದು ಎರಡು ಜನರನ್ನು ಮಾತ್ರ ಸ್ನೇಹಿತರನ್ನಾಗಿ ಮಾಡಿಕೊಂಡರೆ ಉತ್ತಮ.
ಒಟ್ಟಾರೆಯಾಗಿ ಅಕ್ಕಪಕ್ಕದವರು ಜೊತೆಗೆ ಬೇಕು ನಿಜ ಅವರೊಂದಿಗೆ ಸಂಪರ್ಕದಲ್ಲಿರುವುದರಲ್ಲಿ ತಪ್ಪಿಲ್ಲ ಆದರೆ ಅವರ ವ್ಯಕ್ತಿತ್ವವನ್ನು ಮೊದಲು ಅರಿತು ನಂತರ ಗಾಢ ಸ್ನೇಹ ಮಾಡಿಕೊಳ್ಳುವುದು ಉತ್ತಮ ಇಲ್ಲವಾದಲ್ಲಿ ನೆರೆ ನಿಜವಾದ ಹೊರೆಯಾಗಿಬಿದಬಹುದು .


ಅರ್ಪಿತಾ ಹರ್ಷ .

Thursday 7 June 2012

ಗೆಣಸಿನ ಹಲ್ವಾ


ಈ ನನ್ನ ಲೇಖನವು ಈ ಕನಸು ವಿನಲ್ಲಿ ಪ್ರಕಟಗೊಂಡಿದೆ http://www.ekanasu.com/2012/06/blog-post_4372.html



ಸಿಹಿಯಾದ ಗೆಣಸಿನ ಹಲ್ವಾ ಬೇರೆ ಹಲ್ವಗಳಿಗಿಂತ ಹೆಚ್ಚು ರುಚಿ ನೀಡುತ್ತದೆ . ಮಾಡುವ ವಿಧಾನವು ಕೂಡ ಬಲು ಸುಲಭ . ಮನೆಯಲ್ಲಿಯೇ ಮಾಡಿ ಸವಿಯಿರಿ 

ಬೇಕಾಗುವ ಸಾಮಗ್ರಿಗಳು 

ಗೆಣಸು -೪-೫
ಸಕ್ಕರೆ - ೧ ಕಪ್
ತುಪ್ಪ - ಅರ್ಧ ಕಪ್
ಏಲಕ್ಕಿ ಪುಡಿ - ಸ್ವಲ್ಪ 
ಗೋಡಂಬಿ ಮತ್ತು ದ್ರಾಕ್ಷಿ ಅಲಂಕರಿಸಲು 

ಗೆಣಸನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಬೇಕು . ಬೇಡ ನಂತರ ಸಿಪ್ಪೆ ತೆಗೆದು ನುರಿಯ ಬೇಕು . ಆ ನಂತರ ಬಾಣಲೆಗೆ ತುಪ್ಪವನ್ನು ಹಾಕಿ ನುರಿದಿಟ್ಟ ಗೆಣಸನ್ನು ಹಾಕಿ ಹುಟ್ಟಿನಿಂದ ಚೆನ್ನಾಗಿ ಕಲಸುತ್ತಿರಬೇಕು . ಈಗ ಸಕ್ಕರೆಯನ್ನು ಹಾಕಿ ಮಿಶ್ರ ಮಾಡಬೇಕು , ಸಕ್ಕರೆ ಕರಗಿ ಚೆನ್ನಾಗಿ ಮಿಶ್ರಗೊಂಡು ನಂತರ ಏಲಕ್ಕಿ ಪುಡಿಯನ್ನು ಹಾಕಿ ಹಲ್ವದ ಹದ ಬರುವವರೆಗೆ ಸೌಟಿನಿಂದ ಚೆನ್ನಾಗಿ ತಿರಿಸಬೇಕು. ನಂತರ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿದು ಹಾಕಬೇಕು . 
ಪ್ಲೇಟ್ ನಲ್ಲಿ ಹಾಕಿ ಚೌಕಾಕಾರವಾಗಿ ಕತ್ತರಿಸಲು ಬಹುದು ಅಥವಾ ಬೌಲ್ ನಲ್ಲಿ ಹಾಕಿಯೂ ತಿನ್ನಬಹುದು .



ಅರ್ಪಿತಾ ಹರ್ಷ 
ಲಂಡನ್ 

ಇಂಗ್ಲೆಂಡ್ ನ ಒಂದು ಹಳ್ಳಿ ಚಿಚೆಸ್ಟರ್

ಈ ನನ್ನ ಲೇಖನವು ಜೂನ್ ೮ ರ ವಿಜಯ ನೆಕ್ಸ್ಟ್ ನಲ್ಲಿ ಪ್ರಕಟವಾಗಿದೆ ----


ನಮ್ಮ ಭಾರತಕ್ಕೆ ಹೋಲಿಸಿದರೆ ಹೊರದೇಶಗಳಲ್ಲಿ ಆಧುನೀಕತೆ ಹೆಚ್ಚು ಎಂದೆನಿಸುತ್ತದೆ ಜೊತೆಗೆ ಬಹುಬೇಗ ಅಭಿವೃದ್ಧಿಹೊಂದಿದ ದೇಶಗಳು ಹಾಗೆ ಇಂಗ್ಲೆಂಡ್ ಹಲವಾರು ದೇಶಗಳ ಮೇಲೆ ದಬ್ಬಾಳಿಕೆ ನಡೆಸಿ ಬಹುಬೇಗ ಅಭಿವೃದ್ಧಿಪಡೆದುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯಹೀಗೆ ಅಭಿವೃದ್ಧಿ ಹೊಂದಿದ ನಾಡಿಗೆ ಬಂದು ನೆಲಸಿದ ಮೇಲೆ ಇಲ್ಲಿಯಹಳೆಯ ಕಾಲದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗಿತ್ತುಅದಕ್ಕೋಸ್ಕರವೇ ನಾವು ಹೋಗಿದ್ದು   ಚಿಚೆಸ್ಟರ್ ಎಂಬ ಪ್ರವಾಸಿಸ್ಥಳಕ್ಕೆಚಿಚೆ ಸ್ಟರ್ ಇರುವುದು ದಕ್ಷಿಣ ಇಂಗ್ಲೆಂಡ್ ನಲ್ಲಿಇದೊಂದು ಹಳ್ಳಿ ಎಂಬುದು ಇಲ್ಲಿಯ ಜನರ ಅಭಿಪ್ರಾಯ ಹಾಗೆಂದರೆ ಇದುನಮ್ಮ ಹಳ್ಳಿಗಳ ರೀತಿ ಇರುವುದಿಲ್ಲ ನಮಗೆ ಇದೊಂದು ದೊಡ್ಡ ಸಿಟಿ ಎಂದೇ ಎನಿಸಿತುಚಿಚೆ ಸ್ಟರ್ ಅನ್ನು ಕ್ಯಥೆದ್ರಾಲ್ ಸಿಟಿಎಂದು ಕರೆಯುತ್ತಾರೆ ಹೆಸರೇ ಹೇಳುವಂತೆ ಇಲ್ಲಿಯ ಕ್ಯಥೆದ್ರಾಲ್ ತುಂಬಾ ಪ್ರಖ್ಯಾತಿ ಹೊಂದಿದೆ .  
ಚಿಚೆ ಸ್ಟರ್ ಬಹಳ ಹಳೆಯ ಇತಿಹಾಸ ಹೊಂದಿರುವ ಸ್ಥಳ ಇದು ಲಂಡನ್ ನಿಂದ ೮೫ ಕಿಲೋಮೀಟರ್ ದೂರದಲ್ಲಿದೆ . ಲಂಡನ್ನಿಂದ ರೈಲಿನಲ್ಲಿ ಹೋದರೆ (ಇಲ್ಲಿಯ ಟ್ರೈನ್ ತುಂಬಾ ಫಾಸ್ಟ್ ಆಗಿರುವುದರಿಂದ  )   ಗಂಟೆಗಳು ಬೇಕಾಗುತ್ತದೆ . ಚಿಚೆ ಸ್ಟರ್ರೈಲ್ವೆ ಸ್ಟೇಷನ್ ನಿಂದ ಕೇವಲ ೧೫ ನಿಮಿಷದ ನಡುಗೆಯಷ್ಟೇ ಕ್ಯಾಥೆಡ್ರಲ್ ತಲುಪಲು . ಸೈಂಟ್ ರಿಚರ್ಡ್ ಎಂಬುವವರುಹುಟ್ಟುಹಾಕಿದ ಚುರ್ಚ್ ಇದುಇದರ ಪಕ್ಕದಲ್ಲೇ ಒಂದು ಉದ್ಯಾನವನವು ಇದೆ ಇದನ್ನು ಪ್ಯಾಲೇಸ್ ಗಾರ್ಡನ್ ಎಂದುಕರೆಯಲಾಗುತ್ತದೆ ಸುಮಾರು 5 ಎಕರೆಯಷ್ಟು ಜಾಗವನ್ನು ಸುಂದರ ಹೂವು ಮತ್ತು ಹಸಿರುಗಳಿಂದ ತುಂಬಿರುವಂತಹಉದ್ಯಾನವನವಾಗಿ ನಿರ್ಮಿಸಲಾಗಿದೆ.
ಇದು ಇರುವುದು ಚಿಚೆ ಸ್ಟರ್  ಸಿಟಿ  ಮಧ್ಯದಲ್ಲಿ . ಅಲ್ಲಿಂದ ಬಸ್ ನಲ್ಲಿ ಸುಮಾರು ಅರ್ಧಗಂಟೆ ಯಷ್ಟು ಪ್ರಯಾಣಿಸಿದರೆ ಒಂದು ಮ್ಯೂಸಿಯಂ ಇದೆ . ಇದನ್ನು ವೀಲ್ಡ್ ಡೊನಾಲ್ಡ್ ಮ್ಯೂಸಿಯಂ ಎಂದು ಕರೆಯಲಾಗಿದೆವೀಲ್ಡ್ ಡೊನಾಲ್ಡ್ ಮ್ಯೂಸಿಯಂ೫೦ ಎಕರೆಯಷ್ಟು ವಿಸ್ತಾರವಾಗಿದೆ.ಇದು ಓಪನ್ ಏರ್ ಮ್ಯೂಸಿಯಂ .ಇಲ್ಲಿ ಸುಮಾರು ೫೦ ಐತಿಹಾಸಿಕ ಮನೆಗಳನ್ನುಕಾಣಬಹುದು.
೧೭ರ ದಶಕದಲ್ಲಿ ಇಂಗ್ಲಂಡ್ ಹೇಗಿತ್ತು ಎಂಬುದರ ಸಚಿತ್ರವನ್ನು ಇಲ್ಲಿ ಕಾಣಬಹುದು.ಜೊತೆಗೆ ನೂರಾರು ವರ್ಷಗಳ ಹಿಂದೆಯೇಮಾಡುತ್ತಿದ್ದ ಗ್ಲಾಸ್ ಪೇಂಟಿಂಗ್ , ಅಡುಗೆ ಪದ್ಧತಿ ಇವುಗಳೆಲ್ಲ ಇಂದು ಕೂಡ ಅದೇ ರೀತಿಯಲ್ಲಿ ಕಾಪಾಡಿಕೊಂಡು ಬಂದಿರುವುದುವಿಶೇಷವೆ ಸರಿ.ನಮ್ಮ ಹಳ್ಳಿಗಳಲ್ಲಿ ನೋಡಬಹುದಾದ ಸೋಗೆ ಮನೆಗಳು ಇಲ್ಲೂ ಕೂಡ ಇದ್ದವುಸ್ವಲ್ಪ ಶ್ರೀಮಂತರಮನೆಗಳಾದರೆ ಮನೆಯ ಮೇಲೊಂದು ಮಹಡಿ ಜೊತೆಗೆ ಮಕ್ಕಳಿಗೊಂದು ಕೊಠಡಿ , ಬಾಳಂತಿ ಯಾರಿಗಾಗಿಯೇ ಒಂದು ಕೊಠಡಿ,ಅಡುಗೆ ಮನೆ , ಇವುಗಳೆಲ್ಲ ಇದ್ದವು ಎಂಬುದಕ್ಕೆ ಸಾಕ್ಷಿ ರೂಪದಲ್ಲಿ ನೋಡಬಹುದು.
ಮನೆಯ ನೆಲವು ಕೂಡ ಮಣ್ಣಿನ ನೆಲವಾಗಿತ್ತು ಜೊತೆಗೆ ಶ್ರೀಮಂತರ ಮನೆ ಹಂಚಿನ ಮನೆಯಾಗಿತ್ತುಮನೆಯ ಹಿಂಬದಿಯಲ್ಲಿತರಕಾರಿಗಳನ್ನು ಬೆಳೆಯುತ್ತಿದ್ದರುಮತ್ತು ಮನೆಯ ಎದುರು ಅಥವಾ ಪಕ್ಕದಲ್ಲಿ ಒಂದು ಕೊಟ್ಟಿಗೆ ಯನ್ನು ನಿರ್ಮಿಸಲಾಗಿತ್ತು ಅಲ್ಲಿಕೋಳಿ , ಕುದುರೆಹಸುಹಂದಿಇವುಗಳೆಲ್ಲ ಇದ್ದವು ಎಂಬುದಕ್ಕೆ ನಿದರ್ಶನವಾಗಿ ಈಗಲೂ ಕೂಡ ಅಲ್ಲಿ ಅವೆಲ್ಲವನ್ನುಸಾಕುತ್ತಿದ್ದಾರೆ
ಇಲ್ಲಿ ಕುದುರೆ ಗಾಡಿಗಳಿದ್ದವು ಜನರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರೆಳಲು ಕುದುರೆ ಗಾಡಿಗಳನ್ನೇಬಳಸುತ್ತಿದ್ದರುನಮ್ಮ ಹಳ್ಳಿಗಳಲ್ಲಿ ಎತ್ತಿನ ಗಾಡಿ ಇದ್ದ ಹಾಗೆ ) .
ಜೊತೆಗೆ ಸಂತೆಗಳು ನಡೆಯುತ್ತಿದ್ದವು ,
ಜೊತೆಗೆ ಇಲ್ಲಿಯ ಹಳೆಯ ಕಾಲದ ಶಾಲೆಗಳು ಕೂಡ ಹೇಗಿದ್ದವು ಎಂಬುದನ್ನು ಕೂಡ ನೋಡಬಹುದಾಗಿದೆಇಲ್ಲಿ ಪ್ರಾಥಮಿಕಶಾಲೆಗಳಲ್ಲಿ ಅಂದಿನ ಕಾಲದಲ್ಲೇ ಕಡ್ಡಾಯವಾಗಿ ಅಬ್ಯಾಕಸ್ ಅನ್ನು ಹೇಳಿಕೊಡುತ್ತಿದ್ದರುಮನೆಗಳಲ್ಲಿ ಅತ್ತಗಳು ಇರುತ್ತಿದ್ದವುಹಳೆಯ ಬುತ್ತಿಗಳನ್ನು ಬೇಡದ ವಸ್ತುಗಳನ್ನು ಅತ್ತಗಳಲ್ಲಿ ಹಾಕಿ ಇಡುತ್ತಿದ್ದರುಮನೆಗಳು ಕೂಡ ನಮ್ಮ ಹಳ್ಳಿಗಳಲ್ಲಿ ಇರುವ ಹಾಗೆಒಂದೊಂದು ಮಾರಿನಲ್ಲಿ ಒಂದೊಂದು ಮನೆಗಳಿವೆಮನೆಯ ಎದುರು ಬೇಲಿಗಳಿವೆ. ಒಂದು ಹಳ್ಳಿಯಲ್ಲಿ ಇರುವಂತೆ ಇಲ್ಲೂ ಕೂಡಕೆರೆ ಇರುತ್ತಿತ್ತು .
ಇವೆಲ್ಲವುಗಳಲ್ಲಿ ನಮ್ಮ ತಂಡದ ಮನಸೆಳೆದದ್ದೆಂದರೆ ಅಡುಗೆ ಮನೆಹಳೆಯ ಕಾಲದ ಅಡುಗೆ ಮನೆಗಳು ಪಿಂಗಾಣಿ ಪತ್ರೆಗಳಿಂದಕೂಡಿದೆಈಗಲೂ ಅಲ್ಲಿ ಹಳೆಯ ಕಾಲದಲ್ಲಿ ಹೇಗೆ ಈಗಿನಂತೆ ಎಲೆಕ್ಟ್ರಿಕ್ ಒಲೆಗಳನ್ನು ಬಳಸದೆ ಸೌದೆ ಒಲೆಗಳಿಂದ ಅಡುಗೆಮಾಡುತ್ತಿದ್ದರು ಎಂಬುದನ್ನು ತೋರಿಸುತ್ತಾರೆಈಗ ಇಲ್ಲಿ ಎಲ್ಲರ ಮನೆಗಳಲ್ಲಿ ಓವೆನ್ ಗಳು ಮೈಕ್ರೊವೊವನ್ ಗಳುಖಂಡಿತವಾಗಿ ಇದ್ದೆ ಇರುತ್ತದೆಆದರೆ ಆಗಿನಕಾಲದಲ್ಲಿ ತವಾದಲ್ಲಿ ಬ್ರೆಡ್  ಅನ್ನು ಕೈಯಲ್ಲಿ ತಟ್ಟಿ(ನಾವು ರೊಟ್ಟಿ ತಟ್ಟುವಂತೆ)ತಯಾರಿಸುತ್ತಿದ್ದರು . ಸೋಪ್ಪುಗಳನ್ನೆಲ್ಲ ಮನೆಯ ಹಿಂಬಾಗದಲ್ಲೇ ಬೆಳೆಯುತ್ತಿದ್ದರು ಅವುಗಳಿಂದ ಸಲಾಡ್ ಗಳನ್ನೂ ತಯಾರಿಸಿತಿನ್ನುತ್ತಿದ್ದರು .
ಇಲ್ಲಿಯ ಚಳಿಗಾಲಗಳಲ್ಲಿ ಹೀಟರ್ ಗಳಿಲ್ಲದೆ ಬದುಕುವುದು ಕಷ್ಟ ಎಲ್ಲ ಮನೆಗಳಲ್ಲೂ ಎಲೆಕ್ಟ್ರಿಕ್ ಹೀಟರ್ ಗಳು ಇದ್ದೆ ಇರುತ್ತದೆ.ಆಗಿನ ಕಾಲದಲ್ಲಿ ಚಿಮಣಿಗಳು ಇರುತ್ತಿತ್ತುಮನೆಯ ಒಂದು ಭಾಗದಲ್ಲಿ ಕಟ್ಟಿಗೆಗಳನ್ನು ಹಾಕಿ ಬೆಂಕಿ ಹಚ್ಹ್ಚಿಡುತ್ತಿದ್ದರು  ಬೆಂಕಿ ಇಡೀಕೊಠಡಿಯನ್ನು ಬೆಚ್ಚಗೆ ಇಡುತ್ತಿತ್ತು ಎಂಬುದನ್ನು  ಮ್ಯೂಸಿಯಂ ನಲ್ಲಿ ಪ್ರತ್ಯಕ್ಷವಾಗಿ ನೋಡಬಹುದು.
ಇಲ್ಲಿನ ಮಹಿಳೆಯರು ಕಸೂತಿ ಹೊಲಿಗೆಗಳನ್ನು ಮಾಡುತ್ತಿದ್ದರು ಎಂಬುದನ್ನು ತೋರಿಸಲು ಒಂದು ಪ್ರತ್ಯೇಕ ಮನೆಯನ್ನೇನಿರ್ಮಿಸಿದ್ದಾರೆಇಂಗ್ಲೆಂಡ್ ನಲ್ಲಿ ಪ್ರಮುಖವಾಗಿ ಬೆಳೆಯುವ ಬೆಳೆ ಓಟ್ಸ್ ಮತ್ತು ಗೋದಿ ಅದನ್ನು ಶೇಕರಿಸಿ ಇಡಲು ಪ್ರತಿಮನೆಯಲ್ಲೂ ಒಂದು ಪಣತ ಇರುತ್ತಿತ್ತು.
೫೦ ಎಕರೆಯ ಜಾಗದಲ್ಲಿ ೧೭  ಶತಮಾನದಲ್ಲಿ ಲಂಡನ್  ಹಳ್ಳಿಗಳು ಹೇಗಿದ್ದವು ಎಂಬುದನ್ನು ಈಗ ಓಪನ್ ಏರ್ ಮ್ಯೂಸಿಯಂ ಮಾಡಿದ್ದಾರೆ ದೇಶದವರು ಬೇಗ ಅಭಿವೃದ್ಧಿ ಹೊಂದಿದ್ದಾರೆ ನಾವು ಅಭಿವೃದ್ಧಿ ಹೊಂದುತ್ತಿದ್ದೇವೆ ಅಷ್ಟೇ ವ್ಯತ್ಯಾಸ .
ಚಿಚೆ ಸ್ಟರ್ ನೋಡಲು ಸಾಕಷ್ಟು ಸ್ಥಳಗಳಿವೆ ಕನಿಷ್ಠ  ದಿನಗಳಾದರೂ ಬೇಕು . ಓಪನ್ ಏರ್ ಮ್ಯೂಸಿಯಂ ನಿಂದ ಅರ್ಧಗಂಟೆಬಸ್ ನಲ್ಲಿ ಬಂದರೆ ಅಲ್ಲಿ ವೆಸ್ಟ್ ವಿಟ್ಟೆರಿಂಗ್ ಎಂಬ ಬೀಚ್ ಇದೆಮೇ ತಿಂಗಳು ಇಲ್ಲಿ ಸೂರ್ಯ ಬಿಸಿಲು ಬಿಡುವ ಕಾಲವಾದದ್ದರಿಂದ(ಸ್ಪ್ರಿಂಗ್ಹಿಮ , ಚಳಿಯಿಂದ ಹೊರಹೊರಡಲಾರದೆ ಬೇಸತ್ತ ಇಲ್ಲಿಯ ಜನ ಮೇ ತಿಂಗಳಿನಲ್ಲಿ ಬೀಚ್ ಗಳಿಗೆ ಹೋಗಿ ಸನ್ ಬಾತ್ಮಾಡಲು ಇಷ್ಟ ಪಡುತ್ತಾರೆ . ಮೇ , ಜೂನ್ ತಿಂಗಳಿನಲ್ಲಿ  ಬೀಚ್ ಜನರಿಂದ ಗಿಜಿಗುಟ್ಟುತ್ತಿರುತ್ತದೆ.
ಒಟ್ಟಾರೆ ಚಿಚೆ ಸ್ಟರ್ ಹಸಿರಿನಿಂದ ತುಂಬಿದ ಒಂದು ಹಳ್ಳಿ .



ಅರ್ಪಿತಾ ಹರ್ಷ 
ಲಂಡನ್