Friday 11 November 2011

ಶಂಕರನಾಗ್ ಕನಸು ನನಸಾಗಿದೆ


ಹೊನ್ನಾವರದ ನಾಗರಕಟ್ಟೆ ಎಂಬಲ್ಲಿ ಹುಟ್ಟಿ ಬೆಳೆದ ಶಂಕರನಾಗ್ , ತಮ್ಮ ಗಡಸು ಧ್ವನಿ , ಸೂಕ್ಷ್ಮ ಕಣ್ಣು , ಗಡ್ಡ ಬೆಳೆದ ಮುಖ ಇದರಿಂದಲೇ ಜನರ ಮನ ಸೆಳೆದ ವ್ಯಕ್ತಿ. ಬದುಕಿದ್ದ ಕೇವಲ ಮೂವತ್ತಾರು ವರ್ಷಗಳಲ್ಲಿ ಸಾಧನೆಯ ಶಿಖರವನ್ನೇರಿದವರು. ಕೇವಲ ನಟ ಮಾತ್ರವಲ್ಲದೆ ನಿರ್ದೇಶಕರು ಆಗಿ ಜನ ಮೆಚ್ಚುಗೆ ಗಳಿಸಿದವರು.ಹುಟ್ಟುಭಾಷೆ ಕೊಂಕಣಿಯಾದರು ಕನ್ನಡವನ್ನು ಬಹುಬೇಗ ರೂಡಿಸಿಕೊಂಡವರು. ಕರಾಟೆ ಕಿಂಗ್ ಆಟೋ ರಾಜ ಎಂದು ಜನಪ್ರಿಯ ಗೊಂಡವರು.ನಾಟಕದಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರನ್ನು ಬೆಳಕಿಗೆ ತರುವಲ್ಲಿ ಗಿರೀಶ್ ಕಾರ್ನಾಡ್ ರ ಪಾತ್ರವಿದೆ.ಗಿರೀಶ್ ಕಾರ್ನಾಡ ನಿರ್ದೇಶನದ "ಒಂದಾನೊಂದು ಕಾಲದಲ್ಲಿ" ಶಂಕರ ರ ಮೊದಲ ಚಲನಚಿತ್ರ.ಈ ಚಿತ್ರಕ್ಕೆ ಪ್ರಶಸ್ತಿ ಕೂಡ ಲಭಿಸಿತ್ತು. ಅಲ್ಲಿಂದ ಪ್ರಾರಂಭ ಇವರ ಸಾಧನೆ."ಮಿಂಚಿನ ಓಟ" "ನೋಡಿಸ್ವಾಮಿ ನಾವಿರೋದೆ ಹೀಗೆ","ಗೀತ""ಒಂದು ಮುತ್ತಿನ ಕತೆ" ಇವೆಲ್ಲ ಇವರದೇ ನಿರ್ದೇಶನದ ಚಲನಚಿತ್ರ .ಮೊದಲ ಭಾರಿಗೆ ಇವರದೇ ನಿರ್ದೇಶನದ "ಮಿಂಚಿನ ಓಟ" ಕೂಡ ಪ್ರಶಸ್ತಿ ಗಿಟ್ಟಿಸಿಕೊಂಡಿತು.ಶಂಕರನಾಗ್ ಎಂಬತ್ತರ ದಶಕದಲ್ಲೇ ಕಂಡ ಕನಸುಗಳು ಬಹಳ.ಇಂದು ಬೆಂಗಳೂರಿನಲ್ಲಿ ಹೆಸರುವಾಸಿಯಾಗಿರುವ ಕಂಟ್ರಿ ಕ್ಲಬ್ ಇವರೇ ಪ್ರಾರಂಭಿಸಿದ್ದು.ಒಮ್ಮೆ ಲಂಡನ್ ಗೆ ಭೇಟಿ ನೀಡಿದ್ದ ಶಂಕರನಾಗ್ ರವರಿಗೆ ಬೆಂಗಳುರಿನಲ್ಲು ಮೆಟ್ರೋ ಪ್ರಾರಂಭಿಸಬೇಕು ಎಂಬ ಯೋಜನೆಯೊಂದು ಆ ದಿನಗಳಲ್ಲೇ ಇತ್ತು .ಆದರೆ ಅಪಘಾತದಿಂದ ೧೯೯೦ ರಲ್ಲಿ ನಿಧನರಾದರು.ಇಂದು ಬೆಂಗಳೂರಿನಲ್ಲಿ ಮೆಟ್ರೋ ಪ್ರಾರಂಭವಾಗಿದೆ . ಜನರೆಲ್ಲಾ ಸಂತೋಷದಿಂದ ಮೆಟ್ರೋ ಪ್ರಯಾಣ ಮಾಡುತ್ತಿದ್ದಾರೆ.ಸಾಕಷ್ಟು ಸಮಯ ಉಳಿತಾಯವಾಗುತ್ತಿದೆ.ಟ್ರಾಫಿಕ್ ಸಮಸ್ಯೆ ಕಡಿಮೆ ಆಗಬಹುದೆಂಬ ನಂಬಿಕೆಯಿದೆ.ಎಷ್ಟೋ ವರ್ಷಗಳ ಹಿಂದೆ ಶಂಕರನಾಗ್ ಕಂಡ ಕನಸು ನನಸಾಗಿದೆ.ಆದರೆ ಅವರೇ ನಮ್ಮೊಂದಿಗಿಲ್ಲದಿರುವುದು ವಿಷಾದನೀಯ.