Monday 27 February 2012

ಉತ್ತರ

ಅದೊಂದು ಸುಂದರ ಸಂಜೆ , ಕಡಲ ತೀರದಲ್ಲಿ ಮರಳ ನೆಲ ಕೆದಕುತ್ತ ಮುಳುಗುತ್ತಿರುವ ಸೂರ್ಯನನ್ನು ನೋಡಿ ಬದುಕಿನ ಮುಂಬರುವ ದಿನಗಳ ಬಗ್ಗೆ ಕನಸು ಕಾಣುತ್ತಾ ಹಿಂದೆ ನಡೆದುದರ ಬಗ್ಗೆ ಸಣ್ಣದೊಂದು ನಿತ್ತುಸಿರುಡುತ್ತ ಕುಳಿತಿದ್ದಳು ಮನಸ್ವಿ . ಏಕಾಂತದಲ್ಲಿ ಕುಳಿತು ಯೋಚಿಸುವ ಅವಕಾಶ ತುಂಬಾ ಸಮಯದ ಬಳಿಕ ಸಿಕ್ಕಿತ್ತು ಆಕೆಗೆ ಎಷ್ಟೊಂದು ಪ್ರಶ್ನೆ ಗಳು ಈ ಜೀವನದಲ್ಲಿ ಎಲ್ಲವೂ ಬರಿ ಪ್ರಶ್ನೆಗಳಾಗಿಯೇ ಉಳಿದಿವೆ ಎಂದು ಇವಕ್ಕೆಲ್ಲ ಉತ್ತರ ?
ಕಾಲೇಜಿನಲ್ಲಿ ಕಲೆಯ ಬಗ್ಗೆ ಆಸಕ್ತಿ ಇದ್ದುದರಿಂದ ಕಲೆಯನ್ನೇ ಮುಂದುವರೆಸಿ ಒಳ್ಳೆಯ ಕೆಲಸವನ್ನು ಹುಡುಕಿಕೊಂಡು ಬದುಕುವ ಆಸೆ ಹೊತ್ತ ಸಂದರ್ಭವದು ತಿಳಿದೋ ತಿಳಿಯದೆಯೋ ಪ್ರೀತಿ ಎಂಬ ಮಾಯೆ ಬಂದು ಆವರಿಸಿಕೊಂಡು ಬಿಟ್ಟಿತು. ಆಕಾಶ್ ಕೂಡ ಕಲೆಗೆ ಬೆಲೆ ಕೊಡುವ ಮನಸ್ಸಿಗೆ ಮೌಲ್ಯ ನೀಡುವ ಹುಡುಗ ಇಬ್ಬರ ಆಕರ್ಷಣೆ ಆಸೆ ಆಕಾಂಕ್ಷೆ ಗಳು ಒಂದೇ ಆಗಿರುವಾಗ ಬೇಡ ವೆನ್ನಲು ಕಾರಣಗಳೇ ಸಿಗದಾಯಿತು .ದಿನಕಳೆದಂತೆ ಕಲೆಯ ಬಗ್ಗೆ ಇದ್ದ ಆಸಕ್ತಿ ಕಡಿಮೆ ಆಗುತ್ತಾ ಬಂದಿತ್ತು ಪ್ರೀತಿಯ ಪರಾಕಾಷ್ಟೆಯಲ್ಲಿ ಮುಳುಗಿದ ಇಬ್ಬರಿಗೂ ಎಚ್ಚರಿಸಿದ್ದು ಬದುಕಿನ ಅತಿ ಮುಖ್ಯ ನಿರ್ಧಾರ ಕೈಗೊಳ್ಳಬೇಕಾದ ಹಂತ ತಲುಪಿದಾಗ ,ಅದೊಂದು ದಿನ ಬೆಳಗ್ಗೆ ಎಂದಿನಂತೆ ಆಫಿಸ್ ಹೊರಟ ಮಗಳನ್ನು ತಡೆದು ನಿಲ್ಲಿಸಿದ್ದು ಶಾಮ ರಾಯರು . ಮಗಳು ಇತ್ತೀಚಿಗೆ ಮನೆಗೆ ಬರುವುದು ತಡವಾಗಿದ್ದನ್ನು ಗಮನಿಸಿದ ಅವರು ಇನ್ನು ಮಗಳಿಗೊಂದು ಮಾಡುವೆ ಮಾಡಿ ಬಿಡಬೇಕು ಎಂಬ ನಿರ್ಧಾರಕ್ಕೆ ಬಂದಾಗಿತ್ತು .
ವಿಷಯವನ್ನು ತಿಳಿದ ಆಕಾಶ್ ಗೆ ಒಂದು ಕ್ಷಣ ದಿಕ್ಕೇ ತೋಚದಂತಾಯಿತು ಎಲ್ಲದಕ್ಕೂ ಒಂದು ಮಾರ್ಗ ಇದೆ 'ನೀನೆ ಮನೆಗೆ ಬಂದು ವಿಷಯ ತಿಳಿಸಿ ನೋಡು' ಎಂದು ಮನಸ್ವಿ ತಿಳಿಸಿದ್ದಳು . ಇದು ಸಾಧ್ಯವಾಗದ ಕೆಲಸ ಇಬ್ಬರಮನೆಯಲ್ಲೂ ಒಪ್ಪುವ ಯಾವುದೇ ಲಕ್ಷಣಗಳಿಲ್ಲ ಎಂದು ಯೋಚಿಸಿದ ಆಕಾಶ್ ಗಟ್ಟಿಮನಸ್ಸು ಮಾಡಿ ಮನೆ ಬಿಟ್ಟು ಬಂದು ಬಿಡುವಂತೆ ಮನಸ್ವಿಯಲ್ಲಿ ಕೇಳಿಕೊಂಡ . ಬದುಕಿನ ಅತಿ ಮುಖ್ಯ ಹಂತವಿದು ಇಲ್ಲಿ ತಪ್ಪಿ ನಡೆದರೆ ಬದುಕು ನರಕ ಯೋಚನೆ ಯಲ್ಲಿ ಮುಳುಗಿದವಳಿಗೆ ಉತ್ತರ ಶೂನ್ಯ .ಸಾಕಿ ಸಲಹಿದ ಅಪ್ಪ ಅಮ್ಮ ನ ಬಿಟ್ಟು ಮಾತನಾಡಲು ಹಿಂಜರಿಯುವ ಹುಡುಗನ ಹಿಂದೊಡಿದರೆ ಮುಂದೆ ಕಷ್ಟ ಕಾಲ ದಲ್ಲಿ ಜೊತೆ ನೀಡಲು ಯಾರು ಇಲ್ಲವೆಂಬ ಅರಿವು ಒಂದು ಮನಸ್ಸು ಸೂಚಿಸಿದರೆ ಇಷ್ಟು ದಿನ ಪ್ರೀತಿ ಮಾಡಿ ಒಟ್ಟಿಗೆ ಬಾಳುವ ಪಣ ತೊಟ್ಟ ಹುಡುಗನನ್ನು ಬಿಡುವ ಮನಸ್ಸು ಮಾಡುವದಾದರು ಹೇಗೆ ಎಂಬ ಪ್ರಶ್ನೆ ಇನ್ನೊಂದೆಡೆ.
ಉತ್ತರವೇ ಸಿಗದ ಆ ದಿನಗಳಲ್ಲಿ ಉತ್ತರ ಹುಡುಕುವುದರೊಳಗೆ ಮನಸ್ವಿಗೆ ಶಾಮರಾಯರು ಮದುವೆ ದಿನವನ್ನು ನಿಶ್ಚಯಿಸಿ ಆಗಿತ್ತು .ಆಕಾಶ್ ನನ್ನು ಒಮ್ಮೆ ಭೇಟಿಯಾಗುವ ಮನಸ್ಸಿತ್ತಾದರು ಹೇಗೆ ತಾನೇ ಮುಖ ತೋರಿಸಲಿ ಎಂದು ಅವನನ್ನು ನೋಡುವ ಸಾಹಸ ಮಾಡಲಿಲ್ಲ.ಒಂದು ತಿಂಗಳೊಳಗೆ ಮದುವೆಯ ಶಾಸ್ತ್ರಗಳೆಲ್ಲ ಮುಗಿದು ಹೋಗಿದ್ದವು . ವಸಂತ ಮನಸ್ವಿಯನ್ನು ಮಗುವಿನಂತೆ ನೋಡಿಕೊಲ್ಲತೊಡಗಿದ ಕಳೆದ ದಿನಗಳ ಮೆಲುಕು ಹಾಕಲು ಸಮಯ ಸಿಗದಾಯಿತು . ಆಗೊಮ್ಮೆ ಈಗೊಮ್ಮೆ ಮನಸ್ಸಿನಲ್ಲಿ ಬಂದು ಹೋಗುವ ಆಕಾಶ್ ದಿನಕಳೆದಂತೆ ಮರೆತು ಹೋದ.ಸುಮಾರು ಐದಾರು ವರುಷಗಳ ನಂತರ ಅದೇ ಕಡಲ ತೀರದಲ್ಲಿ ಕುಳಿತಾಗ ಮನಸ್ವಿಗೆ ಹಿಂದಿನ ನೆನಪು ಕಾಡಿತ್ತು ಈಗ ಆಕಾಶ್ ಹೇಗಿರಬಹುದು? ಮದುವೆ ಆಗಿರಬಹುದ ಎಂಬೆಲ್ಲ ಪ್ರಶ್ನೆ ಗಳು ಪ್ರಶ್ನೆ ಯಾಗಿಯೇ ಕಾಡುತಿತ್ತು ಉತ್ತರ ತಿಳಿಯುವ ಕುತೂಹಲ ಇದ್ದರು ಆ ಸಾಹಸಕ್ಕೆ ಕೈ ಹಾಕಲಿಲ್ಲ ಮನಸ್ವಿ .
ಮುಳುಗುತ್ತಿರುವ ಸೂರ್ಯನನ್ನೇ ನೋಡುತ್ತಾ ಯೋಚಿಸುತ್ತಿದ್ದವಳಿಗೆ 'ಅಮ್ಮಾ' ಎಂದು ಓಡಿ ಬರುತ್ತಿರುವ ಮಗನನ್ನು ನೋಡುತ್ತಾ ಯೋಚನಾ ಲಹರಿಯಿಂದ ಹೊರಬಂದಳು ಮಗನ ಹಿಂದೆಯೇ ಓಡಿ ಬಂದ ವಸಂತ ಆಕಾಶ್ ನಿದಾನ ಓಡಬೇಡ ಎನ್ನುತ್ತಿದ್ದ .



ಅರ್ಪಿತಾ


ಈ ನನ್ನ ಲೇಖನವು ಈ ಕನಸುವಿನಲ್ಲಿ ಪ್ರಕಟಗೊಂಡಿದೆ <"http://www.ekanasu.com/2012/02/blog-post_28.html">

Wednesday 15 February 2012

ಬಲು ರುಚಿ ಈ ದೂದ್ ಪೇಡ


ಬೇಕರಿಗಳಲ್ಲಿ ಸಿಗುವ ದೂದ್ ಪೇಡ ತಿಂದು ಎಷ್ಟೊಂದು ರುಚಿಯಾಗಿದೆ ಹೇಗೆ ಮಾಡಬಹುದು ಎಂದು ಯೋಚಿಸುತ್ತಿದ್ದೀರಾ ? ಬಲು ಸುಲಭ. ಈ ಪೇಡ ಮನೆಯಲ್ಲಿಯೇ ಬಲು ಬೇಗ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು :
೧. ಹಾಲು ೨ ಕಪ್
೨. ಸಕ್ಕರೆ ೨ ಕಪ್
೩. ಮಿಲ್ಕ್ ಪೌಡರ್ ಅಥವಾ ಮಿಲ್ಕ್ ಕ್ರೀಂ
೪.ತುಪ್ಪ ೧ ಚಮಚ

ಮೊದಲಿಗೆ ಹಾಲನ್ನು ಚೆನ್ನಾಗಿ ಕುದಿಸಬೇಕು , ಕುದಿಯುತ್ತಿರುವ ಹಾಲಿಗೆ ಸಕ್ಕರೆ ಮಿಶ್ರ ಮಾಡಿ ಹಾಲು ಸ್ವಲ್ಪ ಬತ್ತುವವರೆಗೆ ಕಾಯಬೇಕು. ನಂತರ ಇದಕ್ಕೆ ಮಿಲ್ಕ್ ಪೌಡರ್ ಅಥವಾ ಮಿಲ್ಕ್ ಕ್ರೀಂ ಅನ್ನು ಹಾಕಿ ಚೆನ್ನಾಗಿ (ಸೌಟಿನಿಂದ ) ತಳಹಿಡಿಯದಂತೆ ಕಲಕುತ್ತಿರಬೇಕು. ಗಟ್ಟಿ ಆಗುತ್ತಾ ಬಂದ ನಂತರ ಉಂಡೆ ಮಾಡಬಹುದಾದ ಹದ ತಲುಪುತ್ತಿದ್ದಂತೆ ಒಲೆಯಿಂದ ತೆಗೆದು ಆರಲು ಬಿಡಬೇಕು ಸ್ವಲ್ಪ ಸಮಯದ ನಂತರ ಬೇಕಾದ ಆಕಾರದಲ್ಲಿ ಉಂಡೆ ಮಾಡಬಹುದು. ರುಚಿಯಾದ ದೂದ್ ಪೇಡ ರೆಡಿ .

ಈ ನನ್ನ ಲೇಖನವು ಕನ್ನಡ ಟೈಮ್ ನಲ್ಲಿ ಪ್ರಕಟಗೊಂಡಿದೆ http://www.kannadatimes.com/archives/1013"


ಅರ್ಪಿತಾ ಹರ್ಷ ಲಂಡನ್

Wednesday 8 February 2012

ಪ್ರಶ್ನೆ ?

ಅಂದು ನೀ ಬರುವೆ ಎಂದಿದ್ದೆ
ಬರುವ ದಾರಿಯ ಕಾದು ಸೋತೆ ನಾನು
ಕೊಟ್ಟ ಭರವಸೆಗಳ ಮರೆತೆಯೇಕೆ?
ನನ್ನ ಬಿಟ್ಟು ನೀ ಬರಲಾರದ
ಜಾಗಕ್ಕೆ ಹೋದೆ ಏಕೆ ?
ಬರಲಿಲ್ಲ ಏಕೆ ಎಂದು ಪ್ರಶ್ನಿಸುವ
ಅವಕಾಶ ನೀ ಕೊಡಲಿಲ್ಲ ನನಗೆ
ನೀ ಕೊಟ್ಟಿದ್ದರೆ ಇನ್ನೊಮ್ಮೆ
ಎಲ್ಲೂ ಹೋಗದಂತೆ ಬಿಗಿದಪ್ಪಿ
ನಿಲ್ಲಿಸಿಬಿಡುತ್ತಿದ್ದೆ ಅದಿಲ್ಲದಿದ್ದರೆ
ನಿನ್ನೊಡನೆ ನಾನೂ ಬಂದುಬಿಡುತ್ತಿದ್ದೆ .


ಅರ್ಪಿತಾ

ತೀರ್ಥ ಕ್ಷೇತ್ರ ವರದಪುರ


ಈ ನನ್ನ ಲೇಖನವು ಕನ್ನಡ ಟೈಮ್ ನಲ್ಲಿ ಪ್ರಕಟಗೊಂಡಿದೆ http://www.kannadatimes.com/archives/971



ಅದು ಮಲೆನಾಡಿನ ಪುಟ್ಟಹಳ್ಳಿ ಆದರೆ ಅಲ್ಲಿ ಸದಾ ಭಕ್ತ ಸಾಗರದಿಂದ ಸಾವಿರಾರು ಜನ ಪ್ರತಿದಿನ ಒಗ್ಗೂಡುವ ತೀರ್ಥ ಕ್ಷೇತ್ರ ಅದುವೇ ವರದಪುರ. ಸುತ್ತಮುತ್ತಲಿನ ಜನರಿಗೆ ವರದಳ್ಳಿ .(ವರದ ಹಳ್ಳಿ )
ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಳುಕಿನಿಂದ ೬ಕಿ. ಮಿ ನಲ್ಲಿದೆ.ಪವಾಡ ಪುರುಷರೆಂದೇ ಪ್ರಸಿದ್ಧರಾದ ಶ್ರೀಧರ ಗುರುಗಳ ಪುಣ್ಯ ಕ್ಷೇತ್ರವಿದು .ಹಲವಾರು ವರ್ಷಗಳು ತಪಸ್ಸನ್ನು ಮಾಡಿ ಶ್ರೀಧರರು ಮುಕ್ತಿಹೊಂದಿದ ಸ್ಥಳವಿದು ಈಗ ಇಲ್ಲಿ ಅವರ ಸಮಾಧಿ ಇದೆ. ಆದರು ಭಕ್ತ ಜನರ ಆಗಮನಕ್ಕೆನು ಕೊರತೆ ಇಲ್ಲ . ಪ್ರತಿದಿನ ಸಾವಿರಾರು ಜನ ಬಂದು ಭಕ್ತಿ ಇಂದ ಬೇಡಿಕೊಂಡು ತಮ್ಮ ಇಷ್ಟಾರ್ಥ ನೆರವೆರಿಸಿಕೊಳ್ಳುವ ದೇಶವಿದೆಶಗಳಲ್ಲು ಪ್ರಸಿದ್ದ ಹೊಂದಿದ ಕ್ಷೇತ್ರ .
"ಓಂ ನಮಃ ಶಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣಿ ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ "
ಇದು ಶಾಂತ ಮೂರ್ತಿಯು ಸತ್ಯ ಧರ್ಮ ಸ್ವರುಪಿಯೂ ಆದ ಶ್ರೀಧರ ಸ್ವಾಮೀಜಿಯ ಪಟಣಾ ಸ್ತೋತ್ರ . ಶ್ರೀಧರ ಸ್ವಾಮಿಜಿಯು ದತ್ತಾತ್ರೆಯರ ಇನ್ನೊಂದು ಸ್ವರೂಪ .ದಿವ್ಯ ತೇಜಸ್ಸನ್ನು ಹೊಂದಿದ ಶಾಂತ ಸ್ವರೂಪಿ ಶ್ರೀಧರರು ದೇಶದ ಒಳಿತಿಗಾಗಿ ಸನ್ಯಾಸತ್ವವನ್ನು ಪಡೆದು ಹಲವು ಕಾಲ ನೆಲಸಿ ಭಕ್ತ ರಿಗೆ ಮಾರ್ಗದರ್ಶನ ನೀಡಿ ಮುಕ್ತಿ ಹೊಂದಿದ ಶಾಂತ ಪ್ರದೇಶವಿದು.ಮಲೆನಾಡ ಹಸಿರಿನ ನಡುವೆ ಇರುವ ಕಣ್ಣನ್ನು ತಂಪಾಗಿಸುವ ಆಶ್ರಮ .
ಇಲ್ಲ್ಲಿ ಒಂದು ವಿಶೇಷತೆ ಇದೆ ಸದಾ ಕಾಲ ಗೋಮುಖದಿಂದ ತೀರ್ಥ ಹರಿದು ಬರುತ್ತಿರುತ್ತದೆ . ಈ ತೀರ್ಥವನ್ನು ತುಂಬಿ ಇಟ್ಟರೆ ಎಷ್ಟು ವರ್ಷಗಳಾದರೂ ಹಾಳಾಗದೆ ಉಳಿಯುವುದು ಖಂಡಿತ .ಇದು ಔಷಧೀಯ ಗುಣಗಳನ್ನು ಹೊಂದಿದ ಜಲ ಎಂದೇ ಪ್ರಸಿದ್ಧಿ ಪಡೆದಿದೆ.ಈ ತೀರ್ಥ ದಿಂದ ಸ್ನಾನ ಮಾಡಿದಲ್ಲಿ ಎಂತಹ ಕಾಯಿಲೆ ಇದ್ದರು ಕೂಡ ಗುಣಮುಖ ಆಗುವುದು ಎಂಬ ನಂಬಿಕೆ ಇದೆ. ಗುಣಮುಖವಾಗಿರುವುದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ಇವೆ.ಆದ್ದರಿಂದ ಇದು ತೀರ್ಥ ಕ್ಷೇತ್ರ ಎಂದೇ ಪ್ರಸಿದ್ದಿ ಹೊಂದಿದೆ.ಇಲ್ಲಿ ಪ್ರತಿದಿನ ಅನ್ನಸಂತರ್ಪಣೆ ಯನ್ನುಕೂಡ ಮಾಡಲಾಗುತ್ತದೆ.
ಇಲ್ಲಿ ಒಮ್ಮೆ ಭೇಟಿಕೊಟ್ಟರೆ ಮನಸ್ಸು ಪ್ರಶಾಂತ ವಾಗುತ್ತದೆ.ಮನಸ್ಸಿಗೊಂದು ಚೈತನ್ಯ ಮೂಡುತ್ತದೆ.ಹೊರ ರಾಜ್ಯ ದೇಶಗಳಿಂದ ಕೂಡ ಇಲ್ಲಿಗೆ ಪ್ರತಿದಿನ ಭಕ್ತಾದಿಗಳು ಬರುತ್ತಾರೆ . ಇವರ ಇನ್ನೊಂದು ಶಾಖೆಯು ಬೆಂಗಳೂರಿನ ವಸಂತಪುರ ದಲ್ಲೂ ಕೂಡ ಇದೆ ನೀವು ಒಮ್ಮೆ ಭೇಟಿಕೊಡಿ ಮನಸ್ಸನ್ನು ಶಾಂತವಾಗಿಸಿಕೊಳ್ಳಿ.





ಅರ್ಪಿತಾ ಹರ್ಷ

ಸಂದೇಹ

ಕಣ್ಣಲ್ಲಿ ಒಂದು ಹನಿಯೊಂದು ಬಂದು
ನೀರಾಗಿ ಬೀಳುತಿಹುದೇ ?
ನೀ ನಲ್ಲಿ ಇಂದು ನಾನಿಲ್ಲದೆಯೇ
ಹೀಗೇಕೆ ಕೊರಗುತಿರುವೆ
ಒಂದು ಗಳಿಗೆ ಬಂದು ಎದುರು ನಿಂತು
ನೀ ಕೇಳಬಾರದೇಕೆ?
ಮನಸಲ್ಲೇ ಎಲ್ಲ ನೆನೆನೆನೆಸಿಕೊಂಡು
ಕನಸನ್ನು ಕಾಣುವುದೇಕೆ?
ನಿನಗಾಗಿ ನಾನು ನನಗಾಗಿ ನೀನು
ಇದು ನಿಜವೇ ಎಂಬ ಸಂದೇಹವೇಕೆ ?

Tuesday 7 February 2012

ಮನೆಯಲ್ಲೇ ಮಾಡಿ ಗೋಬಿ ಮಂಚೂರಿ


ಗೋಬಿ ಮಂಚೂರಿ ಎಂದರೆ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರ ಬಾಯಲ್ಲೂ ನೀರು ಬರುವುದು ಖಂಡಿತ . ಇದಕ್ಕಾಗಿ ಹೋಟೆಲ್ ಗಳಿಗೆ ಹೋಗಬೇಕೆಂದಿಲ್ಲ .
ಗೋಬಿಮಂಚುರಿ ಯನ್ನು ರುಚಿಯಾಗಿ ಶುಚಿಯಾಗಿ ಮನೆಯಲ್ಲೇ ಮಾಡಿ ಆನಂದಿಸಬಹುದು .ಒಂದು ವೇಳೆ ಗೋಬಿ (ಹೂಕೋಸು) ಸಿಕ್ಕದಿದ್ದಲ್ಲಿ ಕ್ಯಾಬೇಜ್ (ಎಲೆಕೋಸು) ಕೂಡ ಬಳಸಬಹುದು.



ಗೋಬಿ ಮಂಚೂರಿ ಮಾಡಲು ಬೇಕಾಗುವ ಸಾಮಗ್ರಿಗಳು :
ಗೋಬಿ (ಹೂಕೋಸು) ೧
ಈರುಳ್ಳಿ ೧
ಹಸಿಮೆಣಸಿನಕಾಯಿ ೧
ಗರಂ ಮಸಾಲ ಪುಡಿ ೧/೨ ಚಮಚ
ಮೈದಾ ಹಿಟ್ಟು / ಜೋಳದ ಹಿಟ್ಟು ೧ ಕಪ್
ಬೆಳ್ಳುಳ್ಳಿ ಶುಂಟಿ ಪೇಸ್ಟ್ ೧ ಚಮಚ
ಟೊಮೇಟೊ ಸಾಸ್ ೨ಚಮಚ
ಉಪ್ಪು (ರುಚಿಗೆ ತಕ್ಕಷ್ಟು )
ಕೆಂಪು ಮೆಣಸಿನ ಪುಡಿ ೨ಚಮಚ
ಎಣ್ಣೆ ೧ ಕಪ್ (ಕರಿಯಲು)
ಸಕ್ಕರೆ ೧ ಚಮಚ
ಕೊತ್ತುಂಬರಿ ಸೊಪ್ಪು (ಅಲಂಕಾರಕ್ಕೆ )

ಮಾಡುವ ವಿದಾನ :
೧. ಈರುಳ್ಳಿ , ಗೋಬಿ /ಕ್ಯಾಬೇಜ್ ಮತ್ತು ಕೊತ್ತುಂಬರಿ ಸೊಪ್ಪನ್ನು ತೊಳೆದು ಹೆಚ್ಚಿಟ್ಟುಕೊಳ್ಳಿ .
೨. ಬಾಣಲೆ ಗೆ 2 ಚಮಚ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ತೆಗೆದು ಪಕ್ಕದಲ್ಲಿಡಿ.
೩. ಪಾತ್ರೆಗೆ ಮೈದಾ ಅಥವಾ ಜೋಳದ ಹಿಟ್ಟು , ಮೆಣಸಿನ ಪುಡಿ, ೧ ಚಮಚ ಸಕ್ಕರೆ ,ಉಪ್ಪು ಹಾಕಿ ನೀರು ಬೆರಸಿ ಅದರಲ್ಲಿ ಹುಕೊಸನ್ನು ಅದ್ದಿ ಎಣ್ಣೆಗೆ ಹಾಕಿ ಕರಿದು ಪಕ್ಕದಲ್ಲಿ ತೆಗೆದಿಟ್ಟುಕೊಳ್ಳಿ .
೪. ಬಾಣಲೆಗೆ ೨ ಎಣ್ಣೆ ಚಮಚ ಹಾಕಿ ಕರಿದ ಗೋಭಿ ಮತ್ತು ಕರಿದಿಟ್ಟ ಈರುಳ್ಳಿ ,ಶುಂಟಿ ಬೆಳ್ಳುಳ್ಳಿ ಪೇಸ್ಟ್ ಗರಂ ಮಸಾಲ ಪುಡಿ,ಟೊಮೇಟೊ ಸಾಸ್ ಹಾಕಿ ಮತ್ತೊಮ್ಮೆ ಚೆನ್ನಾಗಿ ಕರಿಯಿರಿ ಮೇಲಿನಿಂದ ಕೊತ್ತುಂಬರಿ ಸೊಪ್ಪನ್ನು ಉದುರಿಸಿ .
ಈಗ ಬಿಸಿಬಿಸಿ ಗೋಬಿ ಮನ್ಚುರಿಯನ್ ಸವಿಯಲು ರೆಡಿ .


ಅರ್ಪಿತ ಹರ್ಷ

ಈ ನನ್ನ ಲೇಖನವು ಕನ್ನಡ ಟೈಮ್ ನಲ್ಲಿ ಪ್ರಕಟಗೊಂಡಿದೆ. http://www.kannadatimes.com/archives/968

Monday 6 February 2012

ಗುಲಾಬಿ ಹೂವಿಗಾಗಿ ಕಾದುಕುಳಿತಿರುವ ಜೀವದ ಗೆಳತಿ

ಈ ನನ್ನ ಲೇಖನವು ದಟ್ಸ್ ಕನ್ನಡ ದಲ್ಲಿ ಪ್ರಕಟಗೊಂಡಿದೆhttp://kannada.boldsky.com/relationship/2012/02/0206-will-you-again-present-me-rose-on-vday-aid0038.html


ಜೀವದ ಒಡೆಯ,

ಕಳೆದ ದಿನಗಳ ಮೆಲುಕು ಎಂದೆಂದು ಅದ್ಬುತ. ಸ್ನೇಹ ಪ್ರೀತಿಯಾಗಿ ಹೊರಹೊಮ್ಮುವಾಗ ಆಗುವ ಆನಂದ ಬಣ್ಣಿಸಲು ಅಸಾದ್ಯ. ನಿನ್ನೊಡನೆ ಕಳೆದ ನೆನಪುಗಳು ಸುಂದರ ಅತಿಸುಂದರ. ಮೊದಲ ಭೇಟಿಯಲ್ಲೇ ಕಣ್ಣ ಸೆಳೆದ ನೀನು ಕಣ್ಣಲ್ಲೇ ಒಪ್ಪಿಗೆ ಸೂಸಿದಾಗ ಮನ ಸಂತೋಷದಿಂದ ಕುಣಿದಿತ್ತು. ನೀ ಕೈಗಿತ್ತ ಆ ಗುಲಾಬಿ ಇಂದು ನನ್ನ ಮುಡಿ ಸೇರಿ ನಗುತ್ತಿದೆ. ಮೊದಲ ಪ್ರೇಮಿಗಳ ದಿನದಂದು ಕಳುಹಿಸಿದ ಆ ಹದಿನೆಂಟು ಕೆಂಪು ಗುಲಾಬಿ ನೋಡಿದಷ್ಟು ಮತ್ತೆ ಮತ್ತೆ ನೋಡಬೇಕೆಂಬ ಹಂಬಲ ತರಿಸಿತ್ತು.

ನೆನಪಿದೆಯ ಗೆಳೆಯ ಅದೇ ಮೊದಲ ಬಾರಿ ನಾನು ನಿಮ್ಮನ್ನು ಭೇಟಿ ಮಾಡಿದಾಗ ಸಮಯ ಕಳೆದುದೇ ತಿಳಿಯದಂತೆ ಹರಟಿದ್ದೆವು. ಆ ದಿನ ನಿಮ್ಮ ಪ್ರತಿ ಮಾತು ಅರ್ಥಪೂರ್ಣವಾಗಿದ್ದವು. ನನ್ನ ಮನ ತಟ್ಟುವಂತೆ ನಿಮ್ಮ ಮಾತಿನಿಂದಲೇ ನನ್ನ ಮೋಡಿ ಮಾಡಿದ್ದಿರಿ. ಮೊದಲ ಭಾರಿಯ ಪ್ರೇಮಿಗಳ ದಿನದಂದು ಬೆಳಗಿನ ಮುಂಜಾವಿನಲಿ ಎದುರು ಬಂದು ನಿಂತು ಕೆಂಪು ಗುಲಾಬಿಯನ್ನು ಕೈಗಿತ್ತಾಗ ಸ್ವರ್ಗಕ್ಕೆ ಮೂರೇ ಗೇಣು ಎಂಬ ನುಡಿ ಮನದಲ್ಲೊಮ್ಮೆ ಮಿಂಚಿತ್ತು.

ಆ ದಿನ ನನ್ನ ಜೀವನದ ಅತ್ಯಂತ ಸಂತೋಷದ ದಿನವಾಗಿತ್ತು. ಅಂದಿನಿಂದ ನನ್ನ ಎಲ್ಲ ಕ್ಷಣಗಳು ಸಂತೋಷವಾಗಿರುವಂತೆ ನೋಡಿಕೊಂಡ ನಿನಗೆ ನನ್ನ ಒಲವೆ ಕಾಣಿಕೆ. ಆ ಪ್ರೇಮಿಗಳ ದಿನದಂದು ಪ್ರಾರಂಭವಾದ ನಮ್ಮ ಜೀವನ ಪ್ರತಿದಿನವೂ ಪ್ರೆಮಿಗಳ ದಿನದಂತೆಯೇ ಸಾಗುತ್ತಿದೆ. ಆದರೂ ನಮ್ಮಿಬ್ಬರ ಆ ಮೊದಲ ಬಾರಿಯ ಪ್ರೇಮಿಗಳ ದಿನ ಎಂದೆಂದಿಗೂ ಹಚ್ಚ ಹಸಿರು. ನೀ ಕೊಟ್ಟ ಆ ಗುಲಾಬಿ ಹೂಗಳ ಎಸಳುಗಳು ನನ್ನ ಡೈರಿಯ ಒಂದೊಂದು ಪುಟದಲ್ಲೂ ನೆನಪುಗಳ ಸರಮಾಲೆಯಾಗಿ ಬೆಚ್ಚಗೆ ಕುಳಿತಿವೆ.

ಮತ್ತೆ ಈ ವರುಷದ ಪ್ರೇಮಿಗಳ ದಿನ ಸನಿಹ ಬಂದಿದೆ. ನಿನ್ನ ಆ ಕೆಂಪು ಗುಲಾಬಿಗಾಗಿ ಕಾಯುತ್ತಾ ಕುಳಿತಿರುವೆ.


ಮುಂಜಾನೆಯ ಆ ಹಿಮ