Monday 27 February 2012

ಉತ್ತರ

ಅದೊಂದು ಸುಂದರ ಸಂಜೆ , ಕಡಲ ತೀರದಲ್ಲಿ ಮರಳ ನೆಲ ಕೆದಕುತ್ತ ಮುಳುಗುತ್ತಿರುವ ಸೂರ್ಯನನ್ನು ನೋಡಿ ಬದುಕಿನ ಮುಂಬರುವ ದಿನಗಳ ಬಗ್ಗೆ ಕನಸು ಕಾಣುತ್ತಾ ಹಿಂದೆ ನಡೆದುದರ ಬಗ್ಗೆ ಸಣ್ಣದೊಂದು ನಿತ್ತುಸಿರುಡುತ್ತ ಕುಳಿತಿದ್ದಳು ಮನಸ್ವಿ . ಏಕಾಂತದಲ್ಲಿ ಕುಳಿತು ಯೋಚಿಸುವ ಅವಕಾಶ ತುಂಬಾ ಸಮಯದ ಬಳಿಕ ಸಿಕ್ಕಿತ್ತು ಆಕೆಗೆ ಎಷ್ಟೊಂದು ಪ್ರಶ್ನೆ ಗಳು ಈ ಜೀವನದಲ್ಲಿ ಎಲ್ಲವೂ ಬರಿ ಪ್ರಶ್ನೆಗಳಾಗಿಯೇ ಉಳಿದಿವೆ ಎಂದು ಇವಕ್ಕೆಲ್ಲ ಉತ್ತರ ?
ಕಾಲೇಜಿನಲ್ಲಿ ಕಲೆಯ ಬಗ್ಗೆ ಆಸಕ್ತಿ ಇದ್ದುದರಿಂದ ಕಲೆಯನ್ನೇ ಮುಂದುವರೆಸಿ ಒಳ್ಳೆಯ ಕೆಲಸವನ್ನು ಹುಡುಕಿಕೊಂಡು ಬದುಕುವ ಆಸೆ ಹೊತ್ತ ಸಂದರ್ಭವದು ತಿಳಿದೋ ತಿಳಿಯದೆಯೋ ಪ್ರೀತಿ ಎಂಬ ಮಾಯೆ ಬಂದು ಆವರಿಸಿಕೊಂಡು ಬಿಟ್ಟಿತು. ಆಕಾಶ್ ಕೂಡ ಕಲೆಗೆ ಬೆಲೆ ಕೊಡುವ ಮನಸ್ಸಿಗೆ ಮೌಲ್ಯ ನೀಡುವ ಹುಡುಗ ಇಬ್ಬರ ಆಕರ್ಷಣೆ ಆಸೆ ಆಕಾಂಕ್ಷೆ ಗಳು ಒಂದೇ ಆಗಿರುವಾಗ ಬೇಡ ವೆನ್ನಲು ಕಾರಣಗಳೇ ಸಿಗದಾಯಿತು .ದಿನಕಳೆದಂತೆ ಕಲೆಯ ಬಗ್ಗೆ ಇದ್ದ ಆಸಕ್ತಿ ಕಡಿಮೆ ಆಗುತ್ತಾ ಬಂದಿತ್ತು ಪ್ರೀತಿಯ ಪರಾಕಾಷ್ಟೆಯಲ್ಲಿ ಮುಳುಗಿದ ಇಬ್ಬರಿಗೂ ಎಚ್ಚರಿಸಿದ್ದು ಬದುಕಿನ ಅತಿ ಮುಖ್ಯ ನಿರ್ಧಾರ ಕೈಗೊಳ್ಳಬೇಕಾದ ಹಂತ ತಲುಪಿದಾಗ ,ಅದೊಂದು ದಿನ ಬೆಳಗ್ಗೆ ಎಂದಿನಂತೆ ಆಫಿಸ್ ಹೊರಟ ಮಗಳನ್ನು ತಡೆದು ನಿಲ್ಲಿಸಿದ್ದು ಶಾಮ ರಾಯರು . ಮಗಳು ಇತ್ತೀಚಿಗೆ ಮನೆಗೆ ಬರುವುದು ತಡವಾಗಿದ್ದನ್ನು ಗಮನಿಸಿದ ಅವರು ಇನ್ನು ಮಗಳಿಗೊಂದು ಮಾಡುವೆ ಮಾಡಿ ಬಿಡಬೇಕು ಎಂಬ ನಿರ್ಧಾರಕ್ಕೆ ಬಂದಾಗಿತ್ತು .
ವಿಷಯವನ್ನು ತಿಳಿದ ಆಕಾಶ್ ಗೆ ಒಂದು ಕ್ಷಣ ದಿಕ್ಕೇ ತೋಚದಂತಾಯಿತು ಎಲ್ಲದಕ್ಕೂ ಒಂದು ಮಾರ್ಗ ಇದೆ 'ನೀನೆ ಮನೆಗೆ ಬಂದು ವಿಷಯ ತಿಳಿಸಿ ನೋಡು' ಎಂದು ಮನಸ್ವಿ ತಿಳಿಸಿದ್ದಳು . ಇದು ಸಾಧ್ಯವಾಗದ ಕೆಲಸ ಇಬ್ಬರಮನೆಯಲ್ಲೂ ಒಪ್ಪುವ ಯಾವುದೇ ಲಕ್ಷಣಗಳಿಲ್ಲ ಎಂದು ಯೋಚಿಸಿದ ಆಕಾಶ್ ಗಟ್ಟಿಮನಸ್ಸು ಮಾಡಿ ಮನೆ ಬಿಟ್ಟು ಬಂದು ಬಿಡುವಂತೆ ಮನಸ್ವಿಯಲ್ಲಿ ಕೇಳಿಕೊಂಡ . ಬದುಕಿನ ಅತಿ ಮುಖ್ಯ ಹಂತವಿದು ಇಲ್ಲಿ ತಪ್ಪಿ ನಡೆದರೆ ಬದುಕು ನರಕ ಯೋಚನೆ ಯಲ್ಲಿ ಮುಳುಗಿದವಳಿಗೆ ಉತ್ತರ ಶೂನ್ಯ .ಸಾಕಿ ಸಲಹಿದ ಅಪ್ಪ ಅಮ್ಮ ನ ಬಿಟ್ಟು ಮಾತನಾಡಲು ಹಿಂಜರಿಯುವ ಹುಡುಗನ ಹಿಂದೊಡಿದರೆ ಮುಂದೆ ಕಷ್ಟ ಕಾಲ ದಲ್ಲಿ ಜೊತೆ ನೀಡಲು ಯಾರು ಇಲ್ಲವೆಂಬ ಅರಿವು ಒಂದು ಮನಸ್ಸು ಸೂಚಿಸಿದರೆ ಇಷ್ಟು ದಿನ ಪ್ರೀತಿ ಮಾಡಿ ಒಟ್ಟಿಗೆ ಬಾಳುವ ಪಣ ತೊಟ್ಟ ಹುಡುಗನನ್ನು ಬಿಡುವ ಮನಸ್ಸು ಮಾಡುವದಾದರು ಹೇಗೆ ಎಂಬ ಪ್ರಶ್ನೆ ಇನ್ನೊಂದೆಡೆ.
ಉತ್ತರವೇ ಸಿಗದ ಆ ದಿನಗಳಲ್ಲಿ ಉತ್ತರ ಹುಡುಕುವುದರೊಳಗೆ ಮನಸ್ವಿಗೆ ಶಾಮರಾಯರು ಮದುವೆ ದಿನವನ್ನು ನಿಶ್ಚಯಿಸಿ ಆಗಿತ್ತು .ಆಕಾಶ್ ನನ್ನು ಒಮ್ಮೆ ಭೇಟಿಯಾಗುವ ಮನಸ್ಸಿತ್ತಾದರು ಹೇಗೆ ತಾನೇ ಮುಖ ತೋರಿಸಲಿ ಎಂದು ಅವನನ್ನು ನೋಡುವ ಸಾಹಸ ಮಾಡಲಿಲ್ಲ.ಒಂದು ತಿಂಗಳೊಳಗೆ ಮದುವೆಯ ಶಾಸ್ತ್ರಗಳೆಲ್ಲ ಮುಗಿದು ಹೋಗಿದ್ದವು . ವಸಂತ ಮನಸ್ವಿಯನ್ನು ಮಗುವಿನಂತೆ ನೋಡಿಕೊಲ್ಲತೊಡಗಿದ ಕಳೆದ ದಿನಗಳ ಮೆಲುಕು ಹಾಕಲು ಸಮಯ ಸಿಗದಾಯಿತು . ಆಗೊಮ್ಮೆ ಈಗೊಮ್ಮೆ ಮನಸ್ಸಿನಲ್ಲಿ ಬಂದು ಹೋಗುವ ಆಕಾಶ್ ದಿನಕಳೆದಂತೆ ಮರೆತು ಹೋದ.ಸುಮಾರು ಐದಾರು ವರುಷಗಳ ನಂತರ ಅದೇ ಕಡಲ ತೀರದಲ್ಲಿ ಕುಳಿತಾಗ ಮನಸ್ವಿಗೆ ಹಿಂದಿನ ನೆನಪು ಕಾಡಿತ್ತು ಈಗ ಆಕಾಶ್ ಹೇಗಿರಬಹುದು? ಮದುವೆ ಆಗಿರಬಹುದ ಎಂಬೆಲ್ಲ ಪ್ರಶ್ನೆ ಗಳು ಪ್ರಶ್ನೆ ಯಾಗಿಯೇ ಕಾಡುತಿತ್ತು ಉತ್ತರ ತಿಳಿಯುವ ಕುತೂಹಲ ಇದ್ದರು ಆ ಸಾಹಸಕ್ಕೆ ಕೈ ಹಾಕಲಿಲ್ಲ ಮನಸ್ವಿ .
ಮುಳುಗುತ್ತಿರುವ ಸೂರ್ಯನನ್ನೇ ನೋಡುತ್ತಾ ಯೋಚಿಸುತ್ತಿದ್ದವಳಿಗೆ 'ಅಮ್ಮಾ' ಎಂದು ಓಡಿ ಬರುತ್ತಿರುವ ಮಗನನ್ನು ನೋಡುತ್ತಾ ಯೋಚನಾ ಲಹರಿಯಿಂದ ಹೊರಬಂದಳು ಮಗನ ಹಿಂದೆಯೇ ಓಡಿ ಬಂದ ವಸಂತ ಆಕಾಶ್ ನಿದಾನ ಓಡಬೇಡ ಎನ್ನುತ್ತಿದ್ದ .



ಅರ್ಪಿತಾ


ಈ ನನ್ನ ಲೇಖನವು ಈ ಕನಸುವಿನಲ್ಲಿ ಪ್ರಕಟಗೊಂಡಿದೆ <"http://www.ekanasu.com/2012/02/blog-post_28.html">

No comments:

Post a Comment