Saturday 16 November 2013

ಉತ್ತರ ವೇಲ್ಸ್ - ಸ್ನೋಡೋನಿಯಾ

My this article has Published in Vijayanext on 15/11/2013


ನಿಸರ್ಗ ಎಂದರೆ ಎಲ್ಲರಿಗೂ ಪ್ರಿಯ.ನಿಸರ್ಗದ ಮಡಿಲಲ್ಲಿ ಕಳೆಯುವುದೆಂದರೆ ಅದರ ಸೊಬಗೇ ಬೇರೆ.ದಿನನಿತ್ಯದ  ಜಂಜಾಟ,ಗಿಜಿ ಗಿಜಿಗುಡುವ ಜನಸಂದಣಿಯಿಂದ ದೂರವಿರಲು,ಮನಸ್ಸಿನ ಉಲ್ಲಾಸ ಹೆಚ್ಚಿಸಲು ಪ್ರಕೃತಿಯ ಮೊರೆ ಹೋಗುವುದು ಉತ್ತಮ ಎನ್ನಬಹುದು.ಸುಂದರ ಪ್ರಕೃತಿಯ ನಡುವೆ ಒಂದೆರಡು ದಿನಗಳನ್ನು ಕಳೆದರೆ ಹೊಸ ಉತ್ಸಾಹ ಬರುವುದು ಖಂಡಿತ.ಅಂತಹ ಪ್ರವಾಸಿ ಪ್ರಿಯರನ್ನು ಕೈಬೀಸಿ ಕರೆಯುವ ತಾಣ ಇಂಗ್ಲೆಂಡ್ ನ ಗಡಿ ಭಾಗದಲ್ಲಿರುವ ವೇಲ್ಸ್.ಅದರಲ್ಲೂ ಉತ್ತರ ವೇಲ್ಸ್ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿದೆ.ಇಲ್ಲಿನ ಎಲ್ಲಾ ಸ್ಥಳಗಳು ಅದ್ಬುತವಾಗಿದ್ದು ಅದನ್ನು ಸವಿಯಲು ಕನಿಷ್ಠ 4 ದಿನವಾದರೂ ಇಲ್ಲಿ ಇರಲೇಬೇಕು.ಆಗಸ್ಟ್ ತಿಂಗಳೆಂದರೆ ಇಂಗ್ಲೆಂಡ್ ನಲ್ಲಿ ಬೇಸಿಗೆ ಮುಗಿಯುವ ಕಾಲ.ಮುಂದಿನ ಬೇಸಿಗೆಯವರೆಗೆ ಕೊರೆಯುವ ಚಳಿಯಲ್ಲಿ ಪ್ರವಾಸ ಕೈಗೊಳ್ಳಲಾಗದು ಎಂಬ ಕಾರಣಕ್ಕೆ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಇಲ್ಲಿನ ಜನರು ವಾರದವರೆಗೆ ಪ್ರವಾಸ ಹೋಗುತ್ತಾರೆ.ಹಾಗೆಯೇ ನಮ್ಮ ಪ್ರಯಾಣ  ನಾರ್ತ್ ವೇಲ್ಸ್ ಗೆ. 

ಸ್ನೋಡೋನಿಯಾ :
ವೇಲ್ಸ್ ಯುನೈಟೆಡ್ ಕಿಂಗ್ ಡಂ ನ ಒಂದು ಅದ್ಬುತ ಸ್ಥಳ.ಇದು ಪೂರ್ವದಲ್ಲಿ ಅಟ್ಲಾಂಟಿಕ್ ಸರೋವರ ಮತ್ತು ಪಶ್ಚಿಮದಲ್ಲಿ ಐರಿಶ್ ಸರೋವರವನ್ನು ಹೊಂದಿದ್ದು ಇಂಗ್ಲೆಂಡ್ ನ ಗಡಿ ಭಾಗದಲ್ಲಿದೆ.ಈ ವೇಲ್ಸ್ ನಲ್ಲಿರುವ  ಅತಿ ಪ್ರಸಿದ್ಧ ಸ್ಥಳವೇ ಸ್ನೋಡೋನಿಯ.ಸ್ನೋಡೋನಿಯ ಇರುವುದು ಉತ್ತರ ವೇಲ್ಸ್ ನಲ್ಲಿ. ಲಂಡನ್ ನಿಂದ ರೈಲಿನಲ್ಲಿ 5  ತಾಸಿನ ಪ್ರಯಾಣ.ಸ್ನೋಡೋನಿಯವನ್ನು ವೇಲ್ಸ್ ನ ರಾಷ್ಟ್ರೀಯ ಉದ್ಯಾನವನ ಎಂದೇ ಕರೆಯಲಾಗುತ್ತದೆ ಮತ್ತು ಇದು ಸುಮಾರು 823 ಎಕರೆ ಜಾಗವನ್ನು ಹೊಂದಿದೆ.ಈ ಸ್ಥಳದ ಹೆಸರು ಸ್ನೋಡೌನ್ ಎಂಬ ಇಂಗ್ಲಿಷ್ ಹೆಸರಿನಿಂದ ಬಂದಿದೆ ಎನ್ನಲಾಗಿದೆ.ಈ ರಾಷ್ಟ್ರೀಯ ಉದ್ಯಾನವನವು 1951 ರಲ್ಲಿ ಇಂಗ್ಲೆಂಡ್ ನ ಮೂರನೇ ಹೆಸರುವಾಸಿ ಉದ್ಯಾನವನವಾಗಿ ಪ್ರಾರಂಭವಾಯಿತು.ವೇಲ್ಸ್ ನ ಸ್ಥಳೀಯ ಭಾಷೆ ವೆಲ್ಶ್ .

ಸ್ನೋಡೋನಿಯವನ್ನು ನೆರಳು,ಬಿಸಿಲು ಮತ್ತು ಇಬ್ಬನಿಗಳ ಸಮಾಗಮ ಎಂದೇ ಹೇಳಬಹುದು.ಸುತ್ತಲೂ ಹಸುರಿನಿಂದ ಕೂಡಿದ್ದು,ದಟ್ಟ ಪರ್ವತಗಳ ನಡುವೆ ಜಲಪಾತ ಮತ್ತು ನದಿಗಳನ್ನು ಕೂಡ ಕಾಣಬಹುದು.ಬೇಸಿಗೆಯಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸುವ ಈ ಸ್ಥಳ ಚಳಿಗಾಲದಲ್ಲಿ ಹಿಮದ ರಾಶಿಯಿಂದ ಕಣ್ಣು ಬಿಡಲಾರದಷ್ಟು ಬಿಳುಪಿನಿಂದ ಕೂಡಿರುತ್ತದೆ ಮತ್ತು ನದಿ,ಜಲಪಾತಗಳು ಕೂಡ ಹಿಮದಂತೆ ಗಟ್ಟಿಯಾಗಿಬಿಟ್ಟಿರುತ್ತದೆ.ಸ್ನೋಡೋನಿಯ ನ್ಯಾಷನಲ್ ಪಾರ್ಕ್ ನ ಪರ್ವತವು 3,560 ಅಡಿ ಎತ್ತರದಲ್ಲಿದ್ದು ಅಲ್ಲಿಯವರೆಗೆ ರೈಲ್ವೇ ಹಳಿಯನ್ನು ಮಾಡಿ ಪ್ರತಿದಿನ ಪ್ರವಾಸಿ ರೈಲನ್ನು ಅಲ್ಲಿ ಹತ್ತಿಸುತ್ತಾರೆ. ಸಾಹಸಪ್ರಿಯರು ಈ ಪರ್ವತವನ್ನು ಸುಮಾರು 5 ತಾಸು ನಡೆದು ಮೇಲೆ ತಲುಪುವವರೂ ಇದ್ದಾರೆ.ತುತ್ತತುದಿ ತಲುಪಿದಾಗ ಬಿರು ಬೇಸಿಗೆಯಲ್ಲೂ ಕೂಡ ಮಂಜು ಮುಸುಕಿರುವುದನ್ನು ಕಾಣಬಹುದು.ಅಲ್ಲಿಂದ ನಿಂತು ಕೆಳಗೆ ಕಾಣುವ ಹಸುರಿನ ಸೊಬಗನ್ನು ಎಷ್ಟು ಕಣ್ಣು ತುಂಬಿಸಿಕೊಂಡರು ಸಾಲದು ಎಂಬಂತಿದೆ.ಇದು ಇಂಗ್ಲೆಂಡ್ ನ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದ್ದು ಈ ರೈಲಿನಲ್ಲಿ ತುತ್ತ ತುದಿಯನ್ನು ಏರಲು ಮತ್ತು ಸುತ್ತಮುತ್ತಲಿನ ಪ್ರಕೃತಿಯ ಸೊಬಗನ್ನು ಸವಿಯಲು ವರ್ಷದಲ್ಲಿ ಸುಮಾರು 6 ಮಿಲಿಯನ್ ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ ಎಂದು ಅಲ್ಲಿನ ಮಾಹಿತಿದಾರರು ಅಭಿಪ್ರಾಯ ತಿಳಿಸುತ್ತಾರೆ.

ವನ್ಯಜೀವಿಗಳು :
ಈ ಉದ್ಯಾನವನದಲ್ಲಿ ಅಪರೂಪದ ಸಸ್ತನಿಗಳಿದ್ದು ಮುಖ್ಯವಾಗಿ ಅತಿ ಹೆಚ್ಚು ತುಪ್ಪಟವನ್ನು ಹೊಂದಿದ ಕುರಿಗಳನ್ನು ಇಲ್ಲಿ ಕಾಣಬಹುದು.ಇದರ ಜೊತೆಗೆ  ಅಪರೂಪದ ರಾವೆನ್,ಮರ್ಲಿನ್ ಇನ್ನೂ ಮುಂತಾದ ಪಕ್ಷಿಗಳನ್ನು ಕೂಡ ಇಲ್ಲಿ ಕಾಣಬಹುದು.

ಒಮ್ಮೆ ಇಲ್ಲಿ ಭೇಟಿ ನೀಡಿದರೆ ಅಲ್ಲಿನ ಪ್ರಕೃತಿಯ ಸೊಬಗು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವುದು ಖಂಡಿತ.ಮತ್ತೆ ಮತ್ತೆ ನೋಡಬೇಕು ಅಲ್ಲೇ ಇದ್ದು ಬಿಡಬೇಕು ಎಂಬಷ್ಟು ಸುಂದರ ಈ ನಾರ್ತ್ ವೇಲ್ಸ್.

ಕಾನ್ವೆ :
ಕಾನ್ವೆ ಎಂಬುದು ಉತ್ತರ ವೇಲ್ಸ್ ನಲ್ಲೇ ಬರುವ ಪುಟ್ಟ ಹಳ್ಳಿ.ಕಾನ್ವೆ ಮೌಂಟೈನ್ ಮತ್ತು ಕಾನ್ವೆ ಕೋಟೆ ಪ್ರವಾಸಿಗರನ್ನು ಆಕರ್ಷಿಸುವ ಸುಂದರ ಸ್ಥಳ.ಕಾನ್ವೆ ಕೋಟೆಯನ್ನು 1283 ರ ಸಮಯದಲ್ಲಿ ಕಟ್ಟಲಾಯಿತು ಎನ್ನಲಾಗುತ್ತದೆ.ಕಾನ್ವೆ ಕ್ಯಾಸೆಲ್ ನಲ್ಲಿ ನಿಂತರೆ ಸುತ್ತಲೂ ಕಾಣುವ ಕಾನ್ವೆ ತೂಗು ಸೇತುವೆ ಮತ್ತು ಸುತ್ತಲ ಹಳ್ಳಿಗಳು ಮನಸೂರೆಗೊಳ್ಳುವುದು ಖಂಡಿತ.ಹತ್ತಿರದಲ್ಲೆ ಬೀಚ್ ಗಳು ಕೂಡ ಇದ್ದು ಬೇಸಿಗೆಯಲ್ಲಿ ಜನರನ್ನು ಹೆಚ್ಚು ಆಕರ್ಷಿಸುತ್ತದೆ.

ಗ್ರೇಟ್ ಒರ್ಮ್ ಕಣಿವೆ ಮತ್ತು ಲ್ಯಾಂಡುಡ್ನೋ:

ಲ್ಯಾಂಡುಡ್ನೋ ಸಮುದ್ರ ಪಕ್ಕದ ಸುಂದರ ನಗರವಾಗಿದ್ದು ಸಮುದ್ರದ ಜೊತೆಗೆ ನಗರವೂ ಕೂಡ ಸಾಕಷ್ಟು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.ಇಲ್ಲಿನ ಸಮುದ್ರದಲ್ಲಿ ಸಾಹಸ ಪ್ರಿಯರಿಗಾಗಿ ಸ್ಪೀಡ್ ಬೋಟ್ ಮುಂತಾದವುಗಳಿವೆ.ಗ್ರೇಟ್ ಒರ್ಮ್ ವ್ಯಾಲಿ ಒಂದು ದ್ವೀಪದಂತಿದ್ದು ಹಸಿರು ಬೆಟ್ಟಗಳು ಮತ್ತು ಕಲ್ಲು ಬಂಡೆಗಳ ನಡುವೆ ಸಣ್ಣ ಸಣ್ಣ ನದಿಗಳನ್ನು ಕೂಡ
ಕಾಣಬಹುದು.ಜೊತೆಗೆ ಇಲ್ಲಿ ಗ್ರೇಟ್ ಒರ್ಮ್ ಜಲಪಾತ ಕೂಡ ಇದೆ.

ಭೇಟಿ ನೀಡಲು ಉತ್ತಮ ಕಾಲ:
ವೇಲ್ಸ್ ಯುನೈಟೆಡ್ ಕಿಂಗ್ಡಮ್ ನಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ.ಚಳಿಗಾಲದಲ್ಲಿ ಅತಿ ಹೆಚ್ಚು ಚಳಿ ಇದ್ದರೂ ಕೂಡ ಹಿಮವನ್ನು ಹೆಚ್ಚು ಇಷ್ಟ ಪಡುವವರು ಈ ಸಮಯದಲ್ಲಿ ಭೇಟಿ ನೀಡಬಹುದು.ಆದರೆ ಬೇಸಿಗೆ ಅತಿ ಹೆಚ್ಚು ಸೂಕ್ತವಾಗಿದ್ದು ಹಸುರಿನ ಸೊಬಗನ್ನು ಕಣ್ಣು ತುಂಬಿಸಿಕೊಳ್ಳಬಹುದು.ಜೂನ್ ನಿಂದ ಸೆಪ್ಟೆಂಬರ್ ಸ್ನೋಡೋನಿಯಕ್ಕೆ ಭೇಟಿ ನೀಡಲು ಉತ್ತಮ ಕಾಲ.ಜೊತೆಗೆ ಪರ್ವತಗಳನ್ನು ಹತ್ತಲು ಸರಿಯಾದ ಶೂವನ್ನು ಬಳಸುವುದು ಉತ್ತಮ.ಚಳಿಗಾಲದಲ್ಲಾದರೆ ದಪ್ಪಉಣ್ಣೆ ಬಟ್ಟೆ ಬೇಕೇಬೇಕು.

ತಲುಪುವ ಮಾರ್ಗ;
ಲಂಡನ್ ನಿಂದ ರೈಲಿನ ಮೂಲಕ ಸುಮಾರು ೫ ತಾಸಿನ ಪ್ರಯಾಣ.ಆದರೆ ಇಲ್ಲಿನ ಸ್ಥಳಗಳನ್ನು ನೋಡಿ ಆನಂದಿಸಲು ಕಾರಿನಲ್ಲಿ ಹೋಗುವುದು ಸೂಕ್ತ.ಅಥವಾ ಲಂಡನ್ ನಿಂದ ಬ್ಯಾಂಗೊರ್ ಎಂಬಲ್ಲಿಗೆ ರೈಲಿನಲ್ಲಿ ಹೋಗಿ ಅಲ್ಲಿಂದ ಕಾರು ಬಾಡಿಗೆಗೆ ಪಡೆದುಕೊಂಡು ಹೋಗಬಹುದು.ಉತ್ತರ ವೇಲ್ಸ್ ನ ಎಲ್ಲಾ ಸ್ಥಳಗಳೂ ಪ್ರವಾಸಿ ಯೋಗ್ಯವಾಗಿದ್ದು ಕಾರಿನಲ್ಲಿ ಹೋದರೆ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಬಹುದು.

Tuesday 6 August 2013

ಡರ್ಡಲ್ ಡೋರ್ ಮತ್ತು ಲಲ್ವರ್ತ್ ಕೋವ್

Published on 13/09/2013 vijayanext



ಪ್ರಕೃತಿಯ ಸೌಂದರ್ಯದ ಎದುರು ಎಲ್ಲವೂ ಗೌಣ! .ಎಷ್ಟು ನಿಜವಾದ ಮಾತು.ಆ ತಾಣಕ್ಕೆ ಹೋದಾಗ ನನಗೆ ಮೊದಲು ಮನಸ್ಸಿಗೆ ಬಂದ ಸಾಲುಗಳಿವು.ಎಷ್ಟು ಅದ್ಭುತವಾದ ನಿಸರ್ಗ ದೃಶ್ಯವೆಂದರೆ ಅದನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಾಗದು.ಕಣ್ಣಿನಲ್ಲೇ ತುಂಬಿಕೊಳ್ಳಬೇಕು.ಹೌದು ನಾನು ಈಗ ಹೇಳಹೊರಟಿರುವುದು ಇಂಗ್ಲೆಂಡ್ ನಲ್ಲಿರುವ ಡರ್ಡಲ್ ಡೋರ್ ಮತ್ತು ಲಲ್ವರ್ತ್ ಕೋವ್ ಬಗ್ಗೆ.

ಡರ್ಡಲ್ ಡೋರ್:
ಇದು ಜುರಾಸಿಕ್ ಕರಾವಳಿಯ ಡೋರ್ ಸೆಟ್ ಹಳ್ಳಿಯಲ್ಲಿರುವ ಸುಣ್ಣದ ಕಮಾನುಗಳನ್ನು ಹೊಂದಿರುವ ಅದ್ಬುತ ನಿಸರ್ಗ ಡರ್ಡಲ್ ಎಂದರೆ ಹಳೆಯ ಇಂಗ್ಲಿಷ್ ನ ಪ್ರಕಾರ ಥಿರ್ಲ್ ಅಂದರೆ ಅದರ ಅರ್ಥ ಡ್ರಿಲ್ ಅಥವಾ ಬೋರ್ ಎಂದಾಗಿದೆ.ಹೆಸರೇ ಹೇಳುವಂತೆ ಇಲ್ಲಿ ಸುಣ್ಣದ ಕಲ್ಲನ್ನು ಕೊರೆದು ಇಟ್ಟಂತಹ ಕಲ್ಲಿನ ಕ್ಲಿಫ್ಸ್ ಇರುವುದರಿಂದ ಇದಕ್ಕೆ ಡರ್ಡಲ್ ಡೋರ್ ಎಂದು ಹೆಸರಿಡಲಾಗಿದೆ.ಕರಾವಳಿ ಕಿನಾರೆಯಲ್ಲಿ ಸುಣ್ಣದ ಕಲ್ಲಿನ ಕಮಾನುಗಳನ್ನು ಹೊಂದಿ ಸುತ್ತಲೂ ಹಸಿರನ್ನು ಹೊಂದಿದ ಜೊತೆಗೆ ತಿಳಿ ನೀಲಿ ಬಣ್ಣದ ನೀರನ್ನು ಹೊಂದಿದ ಬೀಚ್ ಕೂಡ ಇಲ್ಲಿದೆ.
ತಾಣ.ಇಲ್ಲಿ ನೈಸರ್ಗಿಕ ಸುಣ್ಣದ ಬಂಡೆಗಳನ್ನು (ಕ್ಲಿಫ್ಸ್) ಕಾಣಬಹುದು.ಇದು ವೆಲ್ದ್ಸ್ ಎಂಬುವವರ ಖಾಸಗಿ ಒಡೆತನದಲ್ಲಿದೆ.ಅದ್ಬುತ ಸೌಂದರ್ಯವನ್ನು ಒಳಗೊಂದು ಪ್ರವಾಸಿಗರನ್ನು ಅತಿ ಹೆಚ್ಚು ಆಕರ್ಷಿಸುತ್ತಿರುವುದರಿಂದ ಈ ಕುಟುಂಬದವರು ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಿದ್ದಾರೆ.ಡೋರ್ ಸೆಟ್ ಹಳ್ಳಿಯಲ್ಲಿ 12000 ಎಕರೆ ಭೂಮಿಯನ್ನು ವೆಲ್ದ್ಸ್ ಕುಟುಂಬ ಹೊಂದಿದೆ ಅದೇ ಡರ್ಡಲ್ ಡೋರ್.ಇಡೀ ತಾಣವನ್ನು ಲಲ್ವರ್ತ್ ಎಸ್ಟೇಟ್ ಎಂದು ಕರೆಯುತ್ತಾರೆ.

ಇಲ್ಲಿ ತಲುಪಲು ಸುಮಾರು ಹದಿನೈದು ನಿಮಿಷ ಬೆಟ್ಟವನ್ನು ಇಳಿದು ನಂತರ  150 ಮೆಟ್ಟಿಲುಗಳಿದ್ದು ಮೆಟ್ಟಿಲನ್ನು ಇಳಿದು ಕೆಳಗೆ ಹೋದರೆ ಕಮಾನಿನ ರೂಪವನ್ನು ಹೊಂದಿದ ಕಲ್ಲಿನ ಬಂಡೆ ಸುತ್ತಲೂ ನೀಲಿ ನೀರನ್ನು ಕಾಣಬಹುದು.ಸದಾ ಜನರಿಂದ ತುಂಬಿ ತುಳುಕುತ್ತಿರುವ ಈ ಸ್ಥಳ ನೀರಿನ ಅಲೆಗಳೊಂದಿಗೆ ಪ್ರವಾಸಿಗರನ್ನು ಇನ್ನಷ್ಟು ಹತ್ತಿರ ಕರೆಯುತ್ತದೆ.ಇಲ್ಲಿ ಸ್ವಂತ ಬೋಟ್ ಗಳಿದ್ದರೆ ಸ್ವಲ್ಪ ದೂರದ ವರೆಗೆ ಹೋಗಲೂ ಬಹುದು. 

ಮ್ಯಾನ್ ಆಫ್ ವಾರ್ ಬೀಚ್ :
ಡರ್ಡಲ್ ಡೋರ್ ನ ಇನ್ನೊಂದು ಪಕ್ಕದಲ್ಲಿ ಮ್ಯಾನ್ ಆಫ್ ವಾರ್ ಎಂಬ ಬೀಚ್ ಇದೆ.ಈ ಬೀಚ್ ಸನ್ ಬಾತ್ ಮಾಡುವವರಿಗೆ ಹೆಚ್ಚು ಸುಕ್ತವಾಗಿದ್ದು.ಇಲ್ಲಿ ಈಜಾಟವಾಡಬಹುದು.ಸಮುದ್ರದ ಮಧ್ಯದಲ್ಲಿ ಅಲ್ಲಲ್ಲಿ ದೊಡ್ಡ ಕಲ್ಲಿನ ಬಂಡೆಗಳಿದ್ದು ದಡದಲ್ಲಿ ಕುಳಿತು
ನೋಡುವವರಿಗೆ ಮತ್ತು ಛಾಯಾಚಿತ್ರದಲ್ಲಿ ಹೆಚ್ಚು ಆಸಕ್ತಿ ಇರುವವರಿಗೆ ಒಳ್ಳೆಯ ಚಿತ್ರ ತೆಗೆಯಲು ಸೂಕ್ತ ಸ್ಥಳ ಎನ್ನಬಹುದು.ಈ ಬೀಚ್ ಸದಾ ಜನರಿಂದ ತುಂಬಿರುತ್ತದೆ.

ಲಲ್ವರ್ತ್ ಕೋವ್ :
ಡರ್ಡಲ್ ಡೋರ್ ನ  ಇನ್ನೊಂದು ಬದಿಯಲ್ಲಿ ಲಲ್ವರ್ತ್ ಕೋವ್ ಇದೆ.ಸುಮಾರು 1 ವರೆ ಕಿ ಮೀ ಬೆಟ್ಟವನ್ನು ಹತ್ತಿ ಇಳಿದರೆ ಲಲ್ವರ್ತ್ ಕೋವ್ ಸಿಗುತ್ತದೆ .ಈ ಬೆಟ್ಟವನ್ನು ಹತ್ತಲು ಕಲ್ಲು ಹಾಸಿನ ದಾರಿಯನ್ನು ಕೂಡ ಮಾಡಲಾಗಿದೆ.ಇದೊಂದು ರೀತಿ ಟ್ರಕ್ಕಿಂಗ್ ನಂತೆ ಇರುತ್ತದೆ.ಸುತ್ತಲೂ ದಟ್ಟ ಹಸಿರಿನಿಂದ ಕೂಡಿರುವುದರಿಂದ ತಂಪು ಗಾಳಿ ಸೋಕುತ್ತಿರುತ್ತದೆ.ಎತ್ತರದ ಬೆಟ್ಟ ಹತ್ತಿದಾಗ ಇಡೀ ಲಲ್ವರ್ತ್ ಕೋವ್ ಮತ್ತು ಡರ್ಡಲ್ ಡೋರ್ ಅನ್ನು ಮೇಲಿನಿಂದ ನೋಡಬಹುದು.

ಲಲ್ವರ್ತ್ ಕೋವ್ ನಲ್ಲಿ ಬೋಟ್ ರೈಡಿಂಗ್ ನ ವ್ಯವಸ್ಥೆ ಇದೆ. ಸುಮಾರು ಅರ್ಧ ಗಂಟೆ ಸಮುದ್ರದ ಮಧ್ಯ ಭಾಗದ ವರೆಗೆ ಹೋಗಿ ನಂತರ ಡರ್ಡಲ್ ಡೋರ್ ನ ಹತ್ತಿರ ಹೋಗಿ ಅಲ್ಲಿನ ಕಮಾನನ್ನು ಹತ್ತಿರದಿಂದ ತೋರಿಸಿ ಪುನಃ ಹಿಂತಿರುಗಿ ಕರೆತರುತ್ತಾರೆ. ಅಲ್ಲಿಯೇ ಪಕ್ಕದಲ್ಲಿ ದ್ವೀಪದ ರೀತಿಯಿದ್ದು ಸುತ್ತಲೂ ನೀರಿನಿಂದ ಕೂಡಿ ಮಧ್ಯೆ ಎತ್ತರ ಕಲ್ಲು ಬಂಡೆಗಳಿವೆ.ರಾಕ್ ಕ್ಲೈಂಬಿಂಗ್ ಇಷ್ಟ ಪಡುವವರು ಇದನ್ನು ಹತ್ತಬಹುದು.ಹತ್ತಿ ಅಲ್ಲಿಂದ ಇಡೀ ಲಲ್ವರ್ತ್ ನ ನೋಟವನ್ನು ಆಸ್ವಾದಿಸಬಹುದು. ಇಷ್ಟೆಲ್ಲಾ ಮಾಡಲು ಒಂದು ವೀಕೆಂಡ್ ಇದಕ್ಕೆಂದೇ ಮೀಸಲಿಡಬೇಕು. 

ಭೇಟಿ ನೀಡಲು ಉತ್ತಮ ಕಾಲ :

ವರ್ಷದ 6 - 7 ತಿಂಗಳು ಇಂಗ್ಲೆಂಡಿನಲ್ಲಿ ಚಳಿಗಾಲ ಇರುವುದರಿಂದ ಮೇ ನಿಂದ ಅಗಸ್ಟ್ ನ ಬೇಸಿಗೆಯಲ್ಲಿ ಇಲ್ಲಿಗೆ ಹೋಗುವುದು ಸೂಕ್ತ.ಸುತ್ತಲೂ ಪ್ರಕೃತಿ ಯ ಹಸಿರು ಇರುವುದರಿಂದ ಗಾಳಿ ಅಧಿಕವಾಗಿರುತ್ತದೆ.

ಟ್ರಕ್ಕಿಂಗ್ ಮಾಡಲು ಬೇಕಾಗುವ ಶೂ ಹಾಕಿಕೊಂಡು ಹೋಗುವುದು ಒಳ್ಳೆಯದು.ಅದೊಂದು ಹಳ್ಳಿ ಆಗಿರುವುದರಿಂದ ತಿನ್ನಲು ಏನಾದರೂ ಕೊಂಡು ಹೋಗುವುದು ಸೂಕ್ತ. 

ತಲುಪುವ ಮಾರ್ಗ 

ಲಂಡನ್ ನಿಂದ ವೂಲ್ ಗೆ ರೈಲಿನ ಮೂಲಕ ತಲುಪಬಹುದು ಅಲ್ಲಿಂದ ಟ್ಯಾಕ್ಸಿ ಮಾಡಿಸಿಕೊಂಡು ಹೋಗಬೇಕು. ಲಂಡನ್ ನಿಂದ ಇಂಗ್ಲೆಂಡ್ ನ ವೂಲ್ ಗೆ 3 ತಾಸಿನ ಪ್ರಯಾಣ. 

ಡರ್ಡಲ್ ಡೋರ್ ನಿಂದ ಲಲ್ವರ್ತ್ ಕೋವ್ ಗೆ ಬೆಟ್ಟ ಹತ್ತಿ ಹೋಗಲಾಗದವರು ರಸ್ತೆ ಮೂಲಕ ಟ್ಯಾಕ್ಸಿ ಮಾಡಿಸಿಕೊಂಡು ಹೋಗಬಹುದು ಆದರೆ ಈ ಪ್ರಕೃತಿ ಸೌಂದರ್ಯ ಸಿಗುವುದಿಲ್ಲ. 

Friday 19 July 2013

ಸ್ತ್ರಾಟ್ ಫೋರ್ಡ್ ಅಪಾನ್ ಅವನ್ (Stratford upon avon) Shakspear's birth place

Published in vijayanext on 19/07/12 


ಶೇಕ್ಸ್ ಪಿಯರ್  ಹೆಸರು ಯಾರು ತಾನೇ ಕೇಳಿಲ್ಲ ? 15 & 16 ನೆ ಶತಮಾನದಲ್ಲಿ ತನ್ನ ಕಾವ್ಯದ ಮೂಲಕ ನಾಟಕದ ಮೂಲಕ ಇಡೀ ಜಗತ್ತಿನ ಮೆಚ್ಚುಗೆ ಗಳಿಸಿದಾತ, ಈತ ಇಂಗ್ಲಿಷ್ ಕವಿ. ಈತನನ್ನು ಇಂಗ್ಲೆಂಡ್ ನ ರಾಷ್ಟ್ರ ಕವಿ ಎಂದು ಕರೆಯಲಾಗುತ್ತಿತ್ತು. ಈತ ಹುಟ್ಟಿದ್ದು,ಬೆಳೆದಿದ್ದು ಸ್ತ್ರಾಟ್ ಫೋರ್ಡ್ ಅಪಾನ್ ಅವನ್ ಎಂಬಲ್ಲಿ. ಈತ ತನ್ನ 18 ನೆ ವಯಸ್ಸಿನಲ್ಲಿ ತನಗಿಂತ ದೊಡ್ಡವಳಾದ 26 ವರ್ಷದ ಆನ್ನೆ ಹ್ಯಾಥವೆ ಎಂಬುವವಳನ್ನು ಮದುವೆಯಾದ. ನಂತರ 3 ಮಕ್ಕಳು. ಇದು ಶೇಕ್ಸ್ ಪಿಯರ್ ನ ವೈಯಕ್ತಿಕ ಜೀವನದ ಕಥೆ. ನಂತರ ಆತ ದೊಡ್ಡ ನಾಕಕಾರನಾದ ಇವನು ಬರೆದ ನಾಟಕಗಳು ಜಗತ್ತಿನಾದ್ಯಂತ ಹೆಸರು ಪಡೆಯಿತು ಇಂದಿಗೂ ಪಡೆಯುತ್ತಲೇ ಇದೆ. ಇಂಗ್ಲಿಷ್ ಸಾಹಿತ್ಯವನ್ನು ಓದಲು ಮುಂದಾದರೆ ಮೊದಲು ಬರುವುದು ಶೇಕ್ಸ್ ಪಿಯರ್ . ಆತನ ಕವನಗಳ ಬಗ್ಗೆ ನಾಟಕಗಳ ಬಗ್ಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯದಷ್ಟು ಎನ್ನಬಹುದು. ಆತನ ಎಷ್ಟೋ ಕವನಗಳು ನಾಟಕಗಳು ಜಗತ್ತಿನ ಬೇರೆಬೇರೆ ಭಾಷೆಗಳಿಗೆ ಸಾಕಷ್ಟು ಅನುವಾದವಾಗಿದೆ ಎಂಬುದೆಲ್ಲ ಎಲ್ಲರಿಗೂ ತಿಳಿದಿರುವ ವಿಷಯ. ಶೇಕ್ಸ್ ಪಿಯರ್ ಹುಟ್ಟಿದ ಈ ಸ್ತ್ರಾಟ್ ಫೋರ್ಡ್ ಲಂಡನ್ ನಿಂದ ೩-೪ ಗಂಟೆಗಳ ಪ್ರಯಾಣವಷ್ಟೆ ಹಾಗಾಗಿ ನಾವು ಇದನ್ನು ನೋಡಲೇ ಬೇಕು ಎಂದು ಅಲ್ಲಿ ಹೋದೆವು. 
ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷ ಇಲ್ಲಿಗೆ 3 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಸ್ಥಳಕ್ಕೆ ಪ್ರವೇಶಿಸುತ್ತಿದ್ದಂತೆ ನಮಗೆ ಸ್ತ್ರಾಟ್ಫೋರ್ಡ್ ಆನ್ ಅವನ್ ನ ಕ್ಲಾಕ್ ಸಿಗುತ್ತದೆ ಮತ್ತು ಅಲ್ಲೇ ಪಕ್ಕದಲ್ಲಿ ದೊಡ್ಡ ಮಾರ್ಕೆಟ್ ಇದೆ ಇದು ಇಲ್ಲಿನ ಜನಪ್ರಿಯ ಮಾರ್ಕೆಟ್ ಆಗಿದೆ. ಪ್ರತಿ ವಾರ ಇಲ್ಲಿ ಸಂತೆ ನಡೆಯುತ್ತದೆ ರಸ್ತೆ ಬದಿಗಳಲ್ಲಿ ವಿವಿಧ ವಸ್ತುಗಳನ್ನು ಮಾರಟಕ್ಕೆ ಇಟ್ಟುಕೊಂಡಿರುತ್ತಾರೆ.ಇಲ್ಲಿ ರಸ್ತೆ ಬದಿಗಳಲ್ಲಿ ಸ್ಟ್ರೀಟ್ ಪ್ಲೇ ಮಾಡಿ ತೋರಿಸ್ತುತ್ತಾರೆ ಇದು ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ. ಶೇಕ್ಸ್ಪಿಯರ್ ನ ನಾಟಕಗಳ ತುಣುಕನ್ನು ಇಲ್ಲಿ ನೋಡಬಹುದು. 
ವಿಲಿಯಂ ಶೇಕ್ಸ್ಪಿಯರ್ ಹುಟ್ಟಿದ ಮನೆಯನ್ನು ಪ್ರವಾಸಿ ಸ್ಥಳವಾಗಿಸಲಾಗಿದೆ. ಇಲ್ಲಿ ಪ್ರವೇಶಿಸುತ್ತಿದ್ದಂತೆ ಶೇಕ್ಸ್ ಪಿಯರ್ ನ ಹುಟ್ಟು ಮತ್ತು ಆತನ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ನೀಡಲಾಗುತ್ತದೆ ನಂತರ ಆತನ ಮನೆಗೆ ಪ್ರವೇಶ ನೀಡಲಾಗುತ್ತದೆ. ಶೇಕ್ಸ್ ಪಿಯರ್ ಮಗುವಾಗಿದ್ದಾಗಿನಿಂದ ಆತನ ತಾಯಿ ಮೇರಿ ಕಾಲ್ಪನಿಕ ಕಥೆಗಳನ್ನು ಹೇಳುತ್ತಿದ್ದಳಂತೆ ಇದರಿಂದ ಪ್ರೇರಿತನಾದ ಈತ ಕವನ,ನಾಟಕಗಳನ್ನು ರಚಿಸಲು ಯಶಸ್ವಿಯಾದ ಎನ್ನಲಾಗುತ್ತದೆ .  ಈ ಮನೆ ಸುಮಾರು 600 ವರ್ಷಗಳ ಹಿಂದಿನದಾಗಿದ್ದು ಸುತ್ತಲು ಉದ್ಯಾನವನವನ್ನು ಕಟ್ಟಿ ಸುಂದರವಾಗಿ ನಿರ್ವಹಿಸಲಾಗುತ್ತಿದೆ.ಇದನ್ನು ಈಗ ವಸ್ತು ಸಂಗ್ರಹಾಲಯವನ್ನಾಗಿ ಮಾಡಲಾಗಿದೆ .  ಒಳಭಾಗದಲ್ಲಿ ಶೇಕ್ಸ್ಪಿಯರ್ ಬಳಸಿದ ತೊಟ್ಟಿಲು ಮನೆಯ ಅಡುಗೆ ಮನೆ ವಸ್ತುಗಳು,ಮನೆಯಲ್ಲಿ ಬಳಸುತ್ತಿದ್ದ ಇತರ ವಸ್ತುಗಳನ್ನು ಇಡೀ ಮನೆಯನ್ನು ಆಟ ನಾಟಕಗಳಿಗೆ ಬಳಸುತ್ತಿದ್ದ ವಸ್ತ್ರಗಳನ್ನು ಕಾಣಬಹುದು. ಅಲ್ಲಿಯೇ ಒಂದು ಪುಸ್ತಕ ಮಳಿಗೆ ಕೂಡ ಇದೆ ಇಲ್ಲಿ ಶೇಕ್ಸ್ಪಿಯರ್ ಬರೆದ ಎಲ್ಲಾ ಪುಸ್ತಕಗಳು ಲಭ್ಯವಿದೆ. 

ಆನ್ ಹ್ಯಾಥವೇ  ಕಾಟೇಜ್ :
ಶೇಕ್ಸ್ಪಿಯರ್ ಮನೆಯಿಂದ ಒಂದು ಕಿ ಮೀ ಅಂತರದಲ್ಲಿ ಶೇಕ್ಸ್ ಪಿಯರ್ ಹೆಂಡತಿ ಹ್ಯಾಥವೆ ಮನೆಯಿದೆ. ಆಕೆ ತನ್ನ ಬಾಲ್ಯದ ದಿನಗಳನ್ನು ಇಲ್ಲಿ ಕಳೆದಳು ಎನ್ನಲಾಗಿದೆ. ಇಲ್ಲಿ 12 ರೂಮುಗಳಿದ್ದು ಆಗಿನ ಕಾಲದಲ್ಲಿ ಬಳಸಲಾದ ಎಲ್ಲಾ ವಸ್ತುಗಳನ್ನು ಇಡಲಾಗಿದೆ. ಹೊರಗೆ ದೊಡ್ಡ ಉದ್ಯಾನವನ ಜೊತೆಗೆ ಇಲ್ಲಿ ಫಾರ್ಮ್ ಇದೆ ಇದರಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆಯಲಾಗುತ್ತದೆ. 90 ಎಕರೆ ಭೂಮಿಯಲ್ಲಿ ಇರುವ ಈ ಕಾಟೇಜ್ ನಲ್ಲಿ ಕಾಡು ಕೂಡ ಇದೆ .  ಜೊತೆಗೆ ಸುಂದರವಾದ ಉದ್ಯಾನವನವಿದೆ ಇಡೀ ಸ್ಥಳವನ್ನು ನೋಡಲು ಸುಮಾರು ೩ ತಾಸು ಬೇಕು. 1969 ರಲ್ಲಿ ಇದು ಬೆಂಕಿಬಿದ್ದು ಸಂಪೂರ್ಣ ನಾಶ ಹೊಂದುವ ಹಂತದಲ್ಲಿತ್ತು ನಂತರ ಇದನ್ನು ಮತ್ತೆ ನವೀಕರಿಸಲಾಯಿತು. 

ನಷ್ಸ್ ಹೌಸ್ ಮತ್ತು ನ್ಯೂ ಪ್ಲೇಸ್ 

ಇದು ಶೇಕ್ಸ್ಪಿಯರ್ ನ ಮೊಮ್ಮಗಳ ಗಂಡನ ಮನೆ ಎನ್ನಲಾಗಿದೆ ಇದನ್ನು ಈಗ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದ್ದು . ಇದು
17 ನೆ ಶತಮಾನದ ಮನೆ. ಇದರ ಸುತ್ತಲು ಸುಂದರವಾದ ಉದ್ಯಾನವನ ನಿರ್ಮಿಸಲಾಗಿದೆ . ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5 ರ ವರೆಗೆ ಪ್ರವಾಸಿಗರಿಗೆ ನೋಡಲು ಅವಕಾಶ ಕಲ್ಪಿಸಿಕೊದಲಾಗುತ್ತದೆ. ಮನೆಯ ಮೇಲ್ಬಾಗದಲ್ಲಿ ಶೇಕ್ಸ್ ಪಿಯರ್ ಬರೆದ ಪುಸ್ತಕಗಳಲ್ಲಿ ಬರುವ ವ್ಯಕ್ತಿಗಳ ಸಣ್ಣ ಮಾಹಿತಿ ನೀಡುವ ಫಲಕ ನೇತು ಹಾಕಲಾಗಿದೆ. ಇದನ್ನು ನೋಡಿದವರಿಗೆ ಶೇಕ್ಸ್ಪಿಯರ್ ನ ಒಥೆಲೊ ,ಹ್ಯಾಮ್ಲೆಟ್,ರೋಮಿಯೋ ಜೂಲಿಯಟ್ ಇವುಗಳನ್ನೆಲ್ಲ ಓದಲೇ ಬೇಕು ಎಂದೆನಿಸದೆ ಇರಲಾರದು. 

ಇಷ್ಟೇ ಅಲ್ಲದೆ ಇಲ್ಲಿ 3 ಥಿಯೇಟರ್ ಗಳಿದ್ದು ಅವುಗಳಲ್ಲಿ ಶೇಕ್ಸ್ ಪಿಯರ್ ನ ಡ್ರಾಮ ನಡೆಯುತ್ತಿರುತ್ತದೆ. ಒಂದು ದಿನಪೂರ್ತಿ ನೋಡಿದರೂ ಮುಗಿಯದ ಮನ ತಣಿಯದ ಹಳ್ಳಿ ಈ ಸ್ತ್ರಾಟ್ಫೋರ್ಡ್ ಅವನ್ . ಒಟ್ಟಾರೆಯಾಗಿ ಇಂಗ್ಲೆಂಡ್ ನ ಚಿಕ್ಕ ಹಳ್ಳಿಯ ಸಣ್ಣ ಮನೆಯಲ್ಲಿ ಬೆಳೆದ ಈತ ಜಗತ್ಪ್ರಸಿದ್ದವಾದದ್ದು ನಿಜವಾಗಲು ಮಹತ್ ಸಾಧನೆ. 

ಇದು ಉತ್ತರ ಇಂಗ್ಲೆಂಡ್ ನಲ್ಲಿ ಬರುತ್ತದೆ. ಬರ್ಮಿಂಗ್ ಹ್ಯಾಮ್ ನಿಂದ 1 ಗಂಟೆ ಪ್ರಯಾಣ.ಭಾತರದಿಂದ ಲಂಡನ್ ಪ್ರವಾಸಕ್ಕೆ ಬಂದವರು  ಲಂಡನ್ ನಿಂದ ರೈಲಿನಲ್ಲಿ 3 ತಾಸಿನಲ್ಲಿ ತಲುಪಬಹುದು. ನಗರದ ಮದ್ಯದಲ್ಲಿಯೆ ಎಲ್ಲ ಸ್ಥಳಗಳಿರುವುದರಿಂದ ಬಸ್ ನಲ್ಲಿ ಎಲ್ಲಿ ಬೇಕಾದರೂ ಸುಲಭವಾಗಿ ತಲುಪಬಹುದು. ನಡೆದುಕೊಂಡು ಹೋದರು ಕೂಡ ಇದೊಂದು ಸುಂದರ ಸ್ಥಳ. 

ವರ್ಷದ 6 ತಿಂಗಳು ಚಳಿಯಿಂದ ಕೂಡಿರುವುದರಿಂದ ಇಲ್ಲಿ ಹೋಗಲು ಸೂಕ್ತ ಸಮಯ ಜೂನ್ ನಿಂದ ಸೆಪ್ಟೆಂಬರ್ . 

ಅರ್ಪಿತಾ ಹರ್ಷ 
ಲಂಡನ್ 

Friday 31 May 2013

ಕೆಂಟರ್ಬರಿ (ಇಂಗ್ಲೆಂಡ್) ಪ್ರವಾಸಿ ಕಥೆ

Published in Sakhi Magazine

ಇದು ಮೇ ತಿಂಗಳು ಲಂಡನ್ ನಲ್ಲೀಗ ಬೇಸಿಗೆ ಸುಮಾರು ೬ ತಿಂಗಳು ಕೊರೆಯುವ ಚಳಿಯಿಂದ ಬೇಸತ್ತ ಜನರೆಲ್ಲಾ ಹೊರಹೊರಟು ಪ್ರವಾಸ ಕೈಗೊಳ್ಳುವ ಸಮಯ . ಮೇ ತಿಂಗಳು ಬಂತೆಂದರೆ ಪ್ರವಾಸಿ ತಾಣಗಳು ಗಿಜಿ ಗಿಜಿ . ಟಿಕೆಟ್ ಗಳಿಗೆ ಉದ್ದದ ಕ್ಯೂ . ಇಲ್ಲಿಯ ಚಳಿ ಎಷ್ಟು ಕಷ್ಟವೋ ಹಾಗೆಯೇ ಇಲ್ಲಿಯ ಬೇಸಿಗೆಯ ಸೂರ್ಯನ ಪ್ರಖರತೆಯನ್ನು ಎದುರಿಸುವುದೂ ಕೂಡ ಅಷ್ಟೇ ಕಷ್ಟ . ಕೇವಲ ಹದಿನೈದು ಡಿಗ್ರಿ ಇದ್ದರೂ ಕೂಡ ಸನ್ ಬರ್ನ್ ಆಗುವ ಸಾದ್ಯತೆ ಬಹಳ ಹೆಚ್ಚು ಹಾಗಿರುತ್ತದೆ ಇಲ್ಲಿಯ ವಾತಾವರಣ . ಅದೇನೇ ಇರಲಿ ಅದಕ್ಕೆಲ್ಲ ಬದಲಿ ಪರಿಹಾರವನ್ನು ಕಂಡುಕೊಂಡು ಇಲ್ಲಿನ ಜನ ಹೊರಹೊರಟು ಬಿಡುತ್ತಾರೆ ಮೇ ಬಂತೆಂದರೆ . ಹಾಗೆಯೇ ನಾವು ಸ್ನೇಹಿತರೆಲ್ಲ ಕೂಡ ಸೇರಿ ಪ್ರವಾಸಕ್ಕೆ ಹೊರಟೆವು .


ಹೊರದೇಶಗಳು ಸಾಕಷ್ಟು ಅಭಿವೃದ್ದಿ ಹೊಂದಿದ ದೇಶಗಳು ಸಾಕಷ್ಟು ಮುಂದುವರೆದಿದೆ ಎಂಬುದು ಎಲ್ಲಾರಿಗೂ  ಗೊತ್ತಿರುವ ವಿಷಯಗಳೇ . ಹಾಗೆಯೇ ಇಂಗ್ಲೆಂಡ್ ಕೂಡ . ಆದರೆ ಇಲ್ಲಿನ ಕೆಲವೊಂದು ಪ್ರದೇಶಗಳನ್ನು ಹಾಗೆಯೇ ನೋಡಲು ಚಂದ . ಹಿಂದೆ ಹೇಗಿತ್ತು ಎಂಬುದನ್ನು ನೋಡುತ್ತಿದ್ದಂತೆಯೇ ತಿಳಿಸುವಂತೆ ಅಷ್ಟೇ ಸ್ವಚ್ಚವಾಗಿ ಇಟ್ಟುಕೊಂಡಿರುವುದು ಇಂಗ್ಲೆಂಡ್ . ಇದನ್ನು ಖಂಡಿತ ಮೆಚ್ಚಲೇ ಬೇಕು . ನಮ್ಮ ಭಾರತದವರಿಗೆ ಹಸಿರು , ಮರಗಿಡಗಳು , ದಟ್ಟ ಕಾಡುಗಳು  ಬಹಳಷ್ಟು ಇಷ್ಟವಾಗುತ್ತವೆ ಕಾರಣವೆಂದರೆ ನಾವು ಬೆಳೆದು ಬಂದಿರುವುದು ಅಂತಹ ಪ್ರದೇಶದಲ್ಲಿಯೇ . ಹಾಗೆ ಇಷ್ಟಪಟ್ಟು ನಾವು ಹೋದ ಸ್ಥಳವೆ ಕೆಂಟರ್ಬರಿ .

ಕೆಂಟರ್ಬರಿ ಇರುವುದು ಸೌತ್ಈಸ್ಟ್ ಇಂಗ್ಲೆಂಡ್ ನಲ್ಲಿ . ಇದನ್ನು ಕೆಥೆದ್ರಲ್ ಸಿಟಿ ಎಂದೇ ಕರೆಯುತ್ತಾರೆ . ಹೆಸರಿಗೆ ತಕ್ಕಂತೆ ಕೆಂಟರ್ಬರಿ ಕೆಥೆದ್ರಲ್ ತುಂಬಾ ಪ್ರಖ್ಯಾತಿ ಹೊಂದಿದೆ . ಮತ್ತು ನೋಡಲೇ ಬೇಕಾದ ಸ್ಥಳ ಕೂಡ . ಇದು ಕೆಂಟ್ ಎಂಬ ಪ್ರದೇಶಕ್ಕೆ ಸೇರಿದೆ . ಕೆಂಟ್ ನಲ್ಲಿ  ಕೆಂಟರ್ಬರಿ, ವಿಸ್ಟೆಬಲ್  ಮತ್ತು ಹೆರ್ನ್ ಬೇ ಎಂಬ ೩ ಸ್ಥಳಗಳು ಪ್ರವಾಸಿ ಯೋಗ್ಯ ಸ್ಥಳಗಳಾಗಿವೆ .  

ಕ್ಯಾಂಟರ್ ಬರಿ ಪೂರ್ವ ಇಂಗ್ಲೆಂಡ್ ನ ಹಳೆಯ ಕಾಲದ ನಿದರ್ಶನ ಎನ್ನಬಹುದು . ೧೧ ನೆ ಶತಮಾನದ ಇತಿಹಾಸಾವನ್ನು ಇಲ್ಲಿ ಕಾಣಬಹುದು . ಕಿಂಗ್ ಹೆನ್ರಿ ಎಬುವವರು ಇದನ್ನು ಕಟ್ಟಿದರು ಎಂದು ಹೇಳಲಾಗುತ್ತದೆ . ಕ್ಯಾಂಟರ್ ಬರಿ ಕೋಟೆ ಈಗ ಪಾಳುಬಿದ್ದ ಕೊತೆಯಾಗಿದೆ ಇದು ೧೦೭೦ ರಲ್ಲಿ ಕಲ್ಲಿನಿಂದ ಕತ್ತಲಾಗಿತ್ತು ಇಲ್ಲಿ ಈಗ ಕೇವಲ ಅರ್ಧ ಕೆಡವಿ ಬಿದ್ದ ಕೋಟೆಯನ್ನು ಕಾಣಬಹುದು . 

ಅಲ್ಲಿಯೇ ಪಕ್ಕದಲ್ಲಿ ದೊಡ್ಡದಾದ ಗಾರ್ಡನ್ ನಿರ್ಮಿಸಲಾಗಿದೆ ನೋಡಲು ಸುಂದರವಾಗಿದ್ದು ಒಳಗೆ ಕಾರಂಜಿ ಮತ್ತು ಟುಲಿಪ್ ಹೂಗಳು ಕಣ್ಮನ ಸೆಳೆಯುತ್ತವೆ . ಅಲ್ಲಿಂದ ಮುಂದೆ ನಮ್ಮ ಪ್ರಯಾಣ ಹೊರಟಿದ್ದು ಕ್ಯಾಂಟರ್ಬರಿ ಪಂಟಿಂಗ್ ಗೆ . ಇದು ಸುಮಾರು ೪೫ ನಿಮಿಷಗಳ ಕಾಲ ನೀರಿನಲ್ಲಿ ಬೋಟಿಂಗ್ ಮೂಲಕ ಕ್ಯಾಂಟರ್ಬರಿಯನ್ನು ತೊರಿಸಲಾಗುತ್ತದೆ.  ಸುತ್ತಲೂ ಹಸಿರಿನಿಂದ ಕೂಡಿದ ಈ ಸ್ಥಳ ಹಳೆಯ ಕಾಲದ ಮನೆಗಳು ಆಗಿನ ಹಳ್ಳಿ ಹೇಗಿತ್ತು ಎಂಬುದರ ಸಣ್ಣ ಮಾಹಿತಿಯನ್ನು ನೀಡಿತು . 

 ಈಗ ಸಾಕಷ್ಟು ಕಟ್ಟಡಗಳು ಅವನತಿಯ ಹಂತದಲ್ಲಿದ್ದರು ಕೂಡ ೧೧ ನೆ ಶತಮಾನದ ಇತಿಹಾಸವನ್ನು ಇಷ್ಟು ಚೆನ್ನಾಗಿ ಇಟ್ಟುಕೊಂಡಿರುವುದು ನಿಜಕ್ಕೂ ಆಶ್ಚರ್ಯವೆ ಸರಿ .  ಇಂಗ್ಲೆಂಡ್ ನಲ್ಲಿ ಸಾಮಾನ್ಯವಾಗಿ (ಕಂಟ್ರಿ ಸೈಡ್ ) ಹಸಿರಿನಿಂದ ತುಂಬಿದ ಹಳ್ಳಯಂತೆ ಭಾಸವಾಗುವ ಸ್ಥಳಗಳಿಗೆ ಹೋದರೆ ಅಲ್ಲೆಲ್ಲ ಪಂಟಿಂಗ್ (ಬೋಟಿಂಗ್) ಇದ್ದೆ ಇರುತ್ತದೆ . ಒಮ್ಮೆ ಈ ಪಂಟಿಂಗ್ ನಲ್ಲಿ ಹೋಗಿಬಂದರೆ ಇಡೀ ಹಳ್ಳಿಯನ್ನು ನೋಡಬಹುದು ಹಸಿರಿನಿಂದ ತುಂಬಿದ ಪ್ರಕೃತಿಯ ಸೊಬಗನ್ನು ಸವಿಯಬಹುದು  . 

ಕೆಂಟರ್ಬರಿ ಕೆಂಟ್ (ಕಂಟ್ರಿ ಸೈಡ್) ನಲ್ಲಿ ಬರುವ ಒಂದು ಸ್ಥಳವಷ್ಟೇ . ಇಂತಹ ಸಾಕಷ್ಟು ಹಳ್ಳಿ ಗಳು ಆಸುಪಾಸುಗಳಲ್ಲಿ ಸಾಕಷ್ಟಿದೆ .ಈಗ ಬೇಸಿಗೆಯ ಸಮಯವಾದ್ದರಿಂದ ಬೀಚ್ ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಇಲ್ಲಿನ ಜನ . ವರ್ಷದ ೫ ತಿಂಗಳು ಕೊರೆಯುವ ಚಳಿಯಲ್ಲಿ ಇರಬೇಕಾದುದರಿಂದ ಮೇ ತಿಂಗಳು ಬಂತೆಂದರೆ ಸನ್ ಬಾತ್ ಗಾಳಿ ಕಾಯುತ್ತಿರುತ್ತಾರೆ. ಕೆಂಟ್ ನಲ್ಲಿರುವ ಬೀಚ್ಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ . ನೀರನ್ನು ಇಷ್ಟಪಡುವವರು ಬೇಕಾದಷ್ಟು ಆಟವಾಡಲು ಇದೊಂದು ಒಳ್ಳೆ ಅವಕಾಶ . ಕೆಂಟರ್ಬರಿ ಇಂದ ಸುಮಾರು ಅರ್ಧಗಂಟೆ ಬಸ್ ನಲ್ಲಿ ಪ್ರಯಾಣಿಸಿದರೆ ವಿಸ್ತೆಬಲ್ ಎಂಬ ಹಳ್ಳಿಯಿದೆ ಇಲ್ಲಿಯಾ ದೊಡ್ಡ ಬೀಚ್ ಪ್ರಸಿದ್ಧಿ ಹೊಂದಿದೆ . ಬೇಸಿಗೆ ಬಿಸಿಲಿಗೆ ಜನ ಬೀಚ್ ನಲ್ಲಿ ಸನ್ ಬಾತ್ ಗೆ ತಯಾರಾಗಿದ್ದರು . 




ಒಟ್ಟಾರೆಯಾಗಿ ಕೆಂಟರ್ಬರಿ ಇಂಗ್ಲೆಂಡ್ ನ ಇತಿಹಾಸಕ್ಕೊಂದು ಮಾದರಿಯಂತಿದೆ . ಹಸಿರು , ಹೂವು , ಬೀಚ್ ಗಳು ಮನಸ್ಸಿಗೆ ಉಲ್ಲಾಸ ತುಂಬಿತು . 


Monday 20 May 2013

ಬಾಳೆಹಣ್ಣಿನ ಪೂರಿ




ಬೇಕಾಗುವ ಸಾಮಗ್ರಿಗಳು 
ಬಾಳೆಹಣ್ಣು  ೨ 
ಸಕ್ಕರೆ ಅರ್ಧ (ಸಣ್ಣ )ಕಪ್ 
ಗೋದಿ ಹಿಟ್ಟು (ಬೇಕಾದಷ್ಟು) ೨ ಕಪ್ 

೧. ಚೆನ್ನಾಗಿ ಹಣ್ಣಾದ ಬಾಳೆ ಹಣ್ಣನ್ನು ನುರಿದು ಗೋದಿ ಹಿಟ್ಟಿನೊಂದಿಗೆ ಸಕ್ಕರೆ ಮತ್ತು ಚಿಟಿಕಿ ಉಪ್ಪು ಸೇರಿಸಿ ನೀರು ಬೆರೆಸಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿಡಿ . 
೨ . ಬಾಣಲೆಯಲ್ಲಿ ೨ ಕಪ್ ಎಣ್ಣೆ ಹಾಕಿ ಕಾಯಿಸಿ . 
೩. ತಯಾರಿಸಿಟ್ಟ  ಹಿಟ್ಟನ್ನು ಸಣ್ಣ ಸಣ್ಣ (ನಿಂಬೆ ಹಣ್ಣಿನ ) ಗಾತ್ರದ ಉಂಡೆ ಮಾಡಿ ಲಟ್ಟಿಸಿ ಎಣ್ಣೆಯಲ್ಲಿ ಕರಿಯಿರಿ . 

ಬಿಸಿಬಿಸಿ ಪೂರಿಯನ್ನು ತುಪ್ಪದೊಂದಿಗೆ ಸವಿಯಿರಿ :)

Monday 13 May 2013

ಇಂಗ್ಲೆಂಡ್ ನಲ್ಲೀಗ ಸ್ಪ್ರಿಂಗ್(ಹೂವುಗಳ ) ಕಾಲ

Published in Udayavani (AVALU suppliment ) 15/05/2013

ಹೇಳಿ ಕೇಳಿ ಇದು ಮೇ ತಿಂಗಳು . ಇಂಗ್ಲೆಂಡ್ ನಂತ ದೇಶಕ್ಕೆ ಲವಲವಿಕೆಯ ಕಾಲವಿದು . ಅಂತು ಎಲ್ಲರು ಕಾಯುತ್ತಿರುವ ಸ್ಪ್ರಿಂಗ್ ಕಾಲ ಬಂದುಬಿಟ್ಟಿತು ಎಂಬುದು ಸಂತಸದ ವಿಷಯ . ಇಷ್ಟು ಸಂತೋಷಕ್ಕೆ ಕಾರಣ ಏನೆಂದರೆ ಅಕ್ಟೋಬರ್ ತಿಂಗಳಿಗೆ ನಿಧಾನವಾಗಿ ಪ್ರಾರಂಭವಾದ ಚಳಿ, ದಿನಗಳು ಕಳೆದಂತೆ ಕೆಟ್ಟ ಚಳಿ ಯಾಗಿ ಪರಿಣಮಿಸಿ ಜನವರಿ ತಿಂಗಳು ಬರುವಷ್ಟರಲ್ಲಿ ಕೊರೆಯಲು ಪ್ರಾರಂಭಿಸಿ ಮಧ್ಯದಲ್ಲಿ ಹಿಮ ಕೂಡ ಬಿದ್ದು ಎಲ್ಲರನ್ನು ತಬ್ಬಿಬ್ಬು ಗೊಳಿಸಿಬಿದುತ್ತದೆ ಇಲ್ಲಿನ ಚಳಿ . 
ಸುಮಾರು -೮ ರವರೆಗೆ ಹೋಗುವ ಈ ಚಳಿಗೆ ಹೊರಗೆ ಕಾಲಿಡುವಾಗ ಫುಲ್ ಪ್ಯಾಕ್ ಆಗಿರಲೇಬೇಕು . ಇನ್ನು ಪ್ರತಿದಿನ ಆಫೀಸ್ ಗೆ ಹೋಗುವವರ ಗೋಳು ಕೇಳ ಕೂಡದು ಅಷ್ಟು ಭಯಾನಕವಾಗಿರುತ್ತದೆ. ಬೆಳಿಗ್ಗೆ ೬ ಗಂಟೆಗೆ ಎದ್ದು ತಿಂಡಿ ಮತ್ತು ಮಧ್ಯಾನ್ಹ ಬಾಕ್ಸ್ ಗೆ ಲಂಚ್ ತಯಾರು ಮಾಡುವಷ್ಟರಲ್ಲಿ ಸಾಕುಸಾಕು ಈ ದೇಶ ಹೊರಟುಬಿಡುವ ನಮ್ಮ ತಾಯ್ನಾಡಿಗೆ ಎನಿಸುವುದು ಖಂಡಿತ . ಇಷ್ಟೆಲ್ಲದರ ಜೊತೆಗೆ ಈ ವರ್ಷ ಏಪ್ರಿಲ್ ನಲ್ಲೂ ಕೂಡ ಸ್ನೋ ಫಾಲ್ ಆಗುವುದರ ಜೊತೆಗೆ ನಮ್ಮ ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿಬಿಟ್ಟಿತ್ತು . 
ಬಹುಷಃ ಈ ವರ್ಷ ಬಿಸಿಲೇ ಬರುವುದಿಲ್ಲ ಎಂಬ ಭಾವ ಮೂಡಿಬಿಟ್ಟಿತ್ತು . ಸುಮಾರು ೭ ತಿಂಗಳಿನಿಂದ ಕಾಯುತ್ತಿದ್ದ ಸೂರ್ಯನ ಕಿರಣಗಳು ಈಗ ನಿಧಾನವಾಗಿ ಬೀಳುತ್ತಿದೆ . ನಮ್ಮ ಭಾರತದ ಜನರು ೬ ತಿಂಗಳು ಒಳ ಕುಳಿತವರು ಈಗ ಮತ್ತೆ ಹೊರಸುತ್ತಲು ಪ್ರಾರಂಭಿಸಿಯಾಗಿದೆ . ಇನ್ನು ಇಂಗ್ಲೆಂಡ್ ನ ಜನರಿಗೆ ಇಲ್ಲಿನ ಚಳಿಗೆ ಹೊಂದಿಕೊಂಡು ಈಗ ತಾನೇ ಬೀಳುತ್ತಿರುವ ಸೂರ್ಯನ ಹೊOಗಿರನದಿಂದ ವಾತಾವರಣ ೧೫  ಡಿಗ್ರಿ ಗೆ ಬಂದಿರುವುದನ್ನು ಸಹಿಸಲಾಗದೆ ಬೀಚ್ ಗಳನ್ನು ಹುಡುಕಿ ಹೊರಟಿದ್ದಾರೆ . 
ಈ ಮೇ ತಿಂಗಳು ಇಷ್ಟವಾಗುವುದು ಇಲ್ಲಿನ ಗಿಡಮರಗಳ ಚಿಗುರುವಿಕೆಗೆ ಎಲ್ಲಿ ನೋಡಿದರೂ  ಹಚ್ಚ ಹಸಿರು . ಹೊರ ಹೊರಟರೆ ಮರದ ತುಂಬೆಲ್ಲ ತುಬಿರುವ ಹೂವುಗಳು , ಎಲ್ಲರ ಮನೆಯ ಮುಂಬಾಗದ ಗಾರ್ಡನ್ ಗಳಲ್ಲಿ ಕೆಂಪು ,ಹಳದಿ ,ನೇರಳೆ , ಬಿಳಿ ಹೀಗೆ ವಿವಿಧ ಬಣ್ಣದಿಂದ ಕಣ್ಸೆಳೆಯುವ ಹೂವುಗಳು . ಇಲ್ಲಿನ ಹೂವುಗಳು ವಿವಿದ ರೀತಿಯವು . ಇವುಗಳಲ್ಲಿ ಕೆಲವು ರಸ್ತೆಬದಿಗಳಲ್ಲಿ ತನ್ನಿಂದ ತಾನೇ ಹುಟ್ಟಿಕೊಳ್ಳುವುದು . ನೋಡಲು ಆಕರ್ಷಕವಾಗಿರುವ ಹೂವುಗಳು . ಇಲ್ಲಿ ಹೂವುಗಳನ್ನು ಮುಡಿಯಲು ಬಳಸುವುದಿಲ್ಲವಾದ್ದರಿಂದ ಕೇವಲ ಡೆಕೊರೆಶನ್ ಮತ್ತು ಬೊಕೆ ಗಳನ್ನೂ ತಯಾರಿಸಲು ಬಳಸಲಾಗುತ್ತದೆ. 

ಟುಲಿಪ್ : ವಿವಿಧ ಬಣ್ಣದ ಟುಲಿಪ್ ಹೂವುಗಳು ಇಂಗ್ಲೆಂಡ್ ಮತ್ತಿತರ ಪಾಶ್ಚಾತ್ಯ ದೇಶಗಳ ಆಕರ್ಷಣೆಗೆ ಪ್ರಮುಖವಾದ ಹೂವುಗಳು . ಇವುಗಳಲ್ಲಿ ಕೆಂಪು, ಬಿಳಿ , ಹಳದಿ ಇನ್ನಿತರ ಬಣ್ಣಗಳನ್ನು ಕಾಣಬಹುದು . 

ಬ್ಲೂ ಬೆಲ್ : ಇದು ನೇರಳೆ ಬಣ್ಣದ ಹೂವಾಗಿದೆ ಇದನ್ನು ಮುಗಿಯದ ಪ್ರೀತಿಯ ಸಂಕೇತವಾಗಿ ಬಳಸಲಾಗುತ್ತದೆ . ಇದು ಸಣ್ಣ ಗಂಟೆಯ (ಬೆಲ್) ರೂಪದಲ್ಲಿರುವುದರಿನ್ದ ಇದನ್ನು ಬ್ಲೂ ಬೆಲ್ ಎಂದು ಕರೆಯಲಾಗುತ್ತದೆ. ಇದು ಗೊಂಚಲುಗಳ ರೂಪದಲ್ಲಿ ಕಾಣಸಿಗುತ್ತವೆ. 

ಅಡೋನಿಸ್ : ಇದು ಹಳದಿ ಬಣ್ಣದ ಹೂವು ಗಳಾಗಿದ್ದು ಸಾಮಾನ್ಯವಾಗಿ ಏಪ್ರಿಲ್ ಮೇ ತಿಂಗಳಿನಲ್ಲಿ ರಸ್ತೆಯ ಬದಿಗಳಲ್ಲಿ ರಾಶಿ ಗಟ್ಟಲೆ ಹೂವು ಬಿಟ್ಟಿರುವುದನ್ನು ಕಾಣಬಹುದು . 

ಆಲ್ಮಂಡ್ ಬ್ಲಾಸಂಸ್ : ಈ ಹೂವು ಮರದಲ್ಲಿ ಬಿಡುವ ಹೂವಾಗಿದೆ ಇದು ಗುಲಾಬಿ ಮಿಶ್ರಿತ ಬಿಳಿ ಬಣ್ಣದಲ್ಲಿ ಇರುತ್ತದೆ . ಇದು ಕೂಡ ಮೇ ತಿಂಗಳಿನಲ್ಲಿ ಹೂವು ಬಿಟ್ಟು ಇಡೀ  ಮರವನ್ನೇ ಅಲಂಕರಿಸಿರುತ್ತದೆ.ಸಾಮಾನ್ಯವಾಗಿ ಇಲ್ಲಿನ ಎಲ್ಲ  ರಸ್ತೆ ಬದಿಗಳಲ್ಲಿ ಈ ಮರ ಇರುವುದರಿಂದ ಇದು ನೋಡುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ . 

ಬ್ಯಾಚುಲರ್ ಬಟನ್ : ಇದನ್ನು ಕಾರ್ನ್ ಫ್ಲವರ್ ಎಂದು ಕೂಡ ಕರೆಯುತ್ತಾರೆ . ಇದು ನೋಡಲು ನಮ್ಮ ಭಾರತದಲ್ಲಿ ದೊರೆಯುವ ಸೇವಂತಿಗೆ ಹೂವಿನಂತೆ ಇರುತ್ತದೆ. ಇದನ್ನು  ನೀಲಿ , ನೇರಳೆ , ಬಿಳಿ , ಕೆಂಪು ಹೀಗೆ ಬೇರೆಬೇರೆ ಬಣ್ಣಗಳಲ್ಲಿ ಕಾಣಬಹುದು .  

ಧಾಲಿಯ : ನಮ್ಮ ಭಾರತದಲ್ಲಿ ಬೆಳೆಯುವ ಡೇರೆ ಹೂವುಗಳನ್ನು ಇಲ್ಲಿ ಧಾಲಿಯ ಎಂದು ಕರೆಯಲಾಗುತ್ತದೆ. ಇದು ಕೂಡ ಇಂಗ್ಲೆಂಡ್ ನ ಆಕರ್ಷಕ ಹೂವುಗಳಲ್ಲಿ ಒಂದಾಗಿದೆ . 

ಎವರ್ ಲಾಸ್ಟಿಂಗ್ ಫ್ಲವರ್ : ಇದು ಪುಟ್ಟ ಪುಟ್ಟ ಕೆಂಪು ಹೂವುಗಳಾಗಿದ್ದು ನೋಡಲು ಆಕರ್ಷಕವಾಗಿದೆ . ಸಣ್ಣ ಗಿಡದಲ್ಲಿ ಬೆಳೆಯುವ ಈ ಹೂವು ಏಪ್ರಿಲ್ ತಿಂಗಳಿನಲ್ಲಿ ಸರ್ವೇ ಸಾಮಾನ್ಯ . 

ಜೆರ್ಬೇರ : ಇದು ಬೊಕೆ ಗಳನ್ನೂ ಮಾಡಲು ಬಳಸುವ ಮುಖ್ಯ ಹುವುಗಳಲ್ಲಿ ಒಂದಾಗಿದ್ದು ನೋಡಲು ಬಹಳ ಆಕರ್ಶಕವಾಗಿರುತ್ತವೆ. ಸ್ವಲ್ಪ ಮಟ್ಟಿಗೆ ನಮ್ಮ ಸೂರ್ಯಕಾಂತಿ ಹೂವುಗಳನ್ನು ಹೊಲುತ್ತವೆ.  ಇದು ಕೂಡ ಬೇರೆಬೇರೆ ಬಣ್ಣಗಳಲ್ಲಿ ದೊರೆಯುವುದು ಆದರೂ ಕೇಸರಿ, ಹಳದಿ, ಬಿಳಿ, ಮತ್ತು ನೀಲಿ ಬಣ್ಣಗಳು ಹೆಚ್ಚು ಪ್ರಖ್ಯಾತಿ ಹೊಂದಿವೆ . 

ಇದಲ್ಲದೆ ಯಾಪಾಲ್ ಬ್ಲಾಸಂ , ಆಪ್ರಿಕಾಟ್  ಬ್ಲಾಸಂ , ಬಟರ್ ಕಪ್ ,  ಕ್ಯಾಕ್ಟಸ್ , ಕಾರ್ನೆಶನ್  ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಾಕಷ್ಟು ಹೊಸ ಹೂವುಗಳಿವೆ .  ಇವುಗಳೆಲ್ಲ ಇಂಗ್ಲೆಂಡ್ ನಲ್ಲಿ ಪ್ರಾರಂಭವಾದ ಈ ಸ್ಪ್ರಿಂಗ್ ನ ಆಕರ್ಷಕ ಅಥಿತಿ ಗಳು . ಇದು ನೋಡುಗರಿಗೆ ಲವಲವಿಕೆ ತರುವುದರಲ್ಲಿ ಯಾವುದೇ ಅನುಮಾನವಿಲ್ಲ . 


ಅರ್ಪಿತಾ ಹರ್ಷ 
ಲಂಡನ್

Monday 6 May 2013

ಇದು ಇಂಗ್ಲೆಂಡ್ ನ ತಿರುಪತಿ

This article is published in vijayakarnataka on 4/05/13


ತಿರುಪತಿಯ ಬಾಲಾಜಿ ಎಂದರೆ ಎಲ್ಲರ ಮೆಚ್ಚಿನ ದೇವರು , ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿದೆ ಹಾಗೆ
ಕಷ್ಟ ಕಾಲದಲ್ಲೆಲ್ಲ್ಲ ನೆನಪಿಸಿಕೊಳ್ಳುವುದು ನಮ್ಮ ತಿರುಪತಿಯ ವೆಂಕಟರಮಣ ನನ್ನು . ತಿರುಪತಿ ಗೆ ಜೀವನದಲ್ಲಿ ಒಮ್ಮೆಯಾದರೂ  ಹೋಗಬೇಕು ಎಂಬ ಕನಸು ಬಹಳಷ್ಟು ಜನರದಾಗಿರುತ್ತದೆ ಹಾಗೆ ತಿರುಪತಿಗೆ ಹೋದರೆ ಅಂದುಕೊಂಡಿರುವುದೆಲ್ಲ ಆಗುತ್ತದೆ ಎಂಬುದು ಎಲ್ಲರ ಅನಿಸಿಕೆ ಕೂಡ .  ಇಂಗ್ಲೆಂಡಿನಲ್ಲಿ ಸಾಕಷ್ಟು ಭಾರತೀಯರಿದ್ದಾರೆ ಅವರೆಲ್ಲರ ತಿರುಪತಿ ಗೆ ಹೋಗುವ ಕನಸು ಈಡೇರಿಸಲು ಇಂಗ್ಲೆಂಡ್ ನಲ್ಲು ಕೂಡ ಒಂದು ಬಾಲಾಜಿ ದೇವಸ್ಥಾನವಿದೆ . ಇಂಗ್ಲೆಂಡ್ ನಲ್ಲಿ ನೆಲಸಿರುವ ಜನರಿಗೆ ಇದೇ ತಿರುಪತಿ . 
ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ಎಂಬಲ್ಲಿ ವೆಂಕಟರಮಣನ ದೇವಸ್ಥಾನವಿದೆ . ಇದು ಇಂಗ್ಲೆಂಡ್ ನ ಮಧ್ಯಭಾಗದಲ್ಲಿ ಬರುತ್ತದೆ. ಲಂಡನ್ ನಿಂದ ಟ್ರೈನ್ ನಲ್ಲಿ ಸುಮಾರು ೨ ತಾಸಿನ ಪ್ರಯಾಣ . ಇದು ಇಂಗ್ಲೆಂಡ್ ನ ಅತಿ ದೊಡ್ಡ ದೇವಸ್ಥನವಾಗಿದ್ದು ನೋಡಲು  ಸಹ ತಿರುಪತಿ ದೇವಸ್ಥಾನ ದ ರೀತಿಯೇ ಇದೆ. ಬರ್ಮಿಂಗ್ ಹ್ಯಾಮ್ ನಿಂದ ೧ ಗಂಟೆಗಳ ಕಾಲ ಬಸ್ ನಲ್ಲಿ ಹೋಗಬೇಕು . ಇದು ಸ್ವಲ್ಪ ಹಳ್ಳಿಯನ್ತಿರುವ  ಪ್ರದೇಶದಲ್ಲಿ ನಿರ್ಮಿಸಲಾಗಿದೆ . ಗುಡ್ಡದ ಮೇಲೆ ದೇವಸ್ಥಾನವನ್ನು ನಿರ್ಮಿಸಲಾಗಿದೆ . ವಿಶಾಲವಾದ ಜಾಗವನ್ನು ಹೊಂದಿದ ಈ ದೇವಸ್ಥಾನದಲ್ಲಿ ವೆಂಕಟರಮಣ ಮುಖ್ಯ ದೇವರು ಜೊತೆಗೆ ಹನುವಂತ,ಗಣಪತಿ, ನವಗ್ರಹ , ಲಕ್ಷ್ಮಿ ದೇವಿ ಗಳ ಮೂರ್ತಿ ಗಳನ್ನೂ ಕಾಣಬಹುದು . ಆದರೆ ಎಲ್ಲ ದೇವಸ್ಥಾನಗಳಂತೆ ಇಲ್ಲೂ ಕೂಡ ಛಾಯಾಚಿತ್ರ ತೆಗೆಯುವುದನ್ನು ನಿಷೇದಿಸಲಾಗಿದೆ . 

ಇಲ್ಲಿ ಹೋಗಲು ಎಲ್ಲ ದಿನಗಳು ಕೂಡ ಪಸಕ್ತ ದಿನಗಳೇ ವರ್ಷದ ೩೬ ೫  ದಿನಗಳು ಕೂಡ ಇದು ತೆರೆದಿರುತ್ತದೆ. ಮತ್ತು ಸದಾ ಬಕ್ತಾದಿಗಳಿಂದ ತುಮ್ಬಿರುತ್ತದೆ. ಉತ್ತರ ಭಾರತ ದಕ್ಷಿಣ ಭಾರತದ ಸಾಕಷ್ಟು ಭಕ್ತಾದಿಗಳನ್ನು ಪ್ರತಿದಿನ ಕಾಣಬಹುದು . ಜೊತೆಗೆ ಪ್ರತಿ ದಿನ ಅನ್ನಸಂತರ್ಪಣೆ ವ್ಯವಸ್ಥೆ ಕೂಡ ಮಾದಲಾಗಿದೆ. ವಿಶೇಷ ಹಬ್ಬದ ದಿನಗಳಲ್ಲಿ ಸಾವಿರಾರು ಜನರಿಗೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಆಂದ್ರ ಸ್ಟೈಲ್ ಅಡುಗೆ ಮಾಡ ಲಾಗುತ್ತದೆ. 

ತಿರುಪತಿ ಯಲ್ಲಿ ದೊರೆಯುವಂತೆ ಇಲ್ಲೂ ಕೂಡ ಲಾಡು ದೊರೆಯುತ್ತದೆ. ವಿವಿಧ ರೀತಿಯ ಪೂಜೆ ಮಾದುವ ಅವಕಾಶವಿದೆ ಅದರೊಂದಿಗೆ ತಿರುಪತಿಯ ಲಾಡನ್ನು ಕೂಡ ನೀಡಲಾಗುತ್ತದೆ .ಹೆಚ್ಚು ಬೇಕಾದಲ್ಲಿ ಕೊಂಡುಕೊಳ್ಳಬಹುದು .  ಪ್ರತಿ ದಿನ ಸಾವಿರಾರು ಲಾಡುಗಳು ಸೇಲ್ ಆಗುತ್ತದೆ . ವಿವಿದ ರೀತಿಯ ಪೂಜೆಗಳನ್ನು ಕೂಡ ಮಾಡಲಾಗುತ್ತದೆ. ಮದ್ಯಾನ್ಹ 1 2 ಗಂಟೆಗೆ ಮಹಾಮಂಗಳಾರತಿ ಮಾಡಲಾಗುತ್ತದೆ . ಅದಲ್ಲದೆ ಸಂಜೆ ೪ ಗಂಟೆಗೆ ಪುನಃ ಅರ್ಚನೆ ಮಾಡಲಾಗುತ್ತದೆ. ಮದ್ಯಾನ್ಹ 1 ರಿಂದ ಊಟದ ವ್ಯವಸ್ಥೆ ಪ್ರತ್ಯೇಕ ಕೊನೆಯಲ್ಲಿ ಮಾಡಲಾಗಿದ್ದು ೩ ಗಂಟೆಯವರೆಗೂ ಉದ್ದವಾದ ಕ್ಯು ಇರುತ್ತದೆ. 

 ತಿರುಪತಿಯಲ್ಲಿ ೨ ನಿಮಿಷದಲ್ಲಿ ವೆಂಕಟರಮಣನ ದರ್ಶನ ಮಾಡಿಕೊಂಡು ಮುಂದೆ ಹೋಗಬೇಕಾಗಬಹುದು ಆದರೆ ಇಲ್ಲಿ ೨ ಗಂಟೆ ಬೇಕಾದರೂ ಅಲ್ಲೇ ಕುಳಿತುಕೊಳ್ಳುವ ಅವಕಾಶವಿರುತ್ತದೆ. ಜೊತೆಗೆ ಸತ್ಯನಾರಾಯಣ ಪೂಜೆ ಇನ್ನಿತರ ಪೂಜೆಗಳನ್ನು ಕೂಡ ಅಲ್ಲೇ ಮಾಡಿಸ ಲಾಗುತ್ತದೆ . ಲಂಡನ್ ನಿಂದ ಮಿಡ್ ಲ್ಯಾಂಡ್ ಮತ್ತು ವರ್ಜೀನಿಯಾ ಟ್ರೈನ್ ಗಳು ಬಿರ್ಮಿಂಗ್ ಹ್ಯಾಮ್ ಗೆ ಹೊಗುತ್ತದೆ.


ಅರ್ಪಿತಾ ಹರ್ಷ 
ಲಂಡನ್

Monday 29 April 2013

ಆರತಿ ತಟ್ಟೆ


ಮನೆಯಲ್ಲಿ ಏನಾದರೂ ಪೂಜೆಗಳು ನಡೆಯುತ್ತಿರುತ್ತವೆ. ಆಗೆಲ್ಲ ಹೊಸ ರೀತಿಯ ಆರತಿ ತಟ್ಟೆ ತಯಾರಿಸಿ ಅದನ್ನು ದೇವರ ಆರತಿಗೆ ಬಳಸಲಾಗುತ್ತದೆ . ಇದು ನೋಡಲು ಕೂಡ ಆಕರ್ಷಕವಾಗಿರುತ್ತದೆ ಎಂದು ಮಲೆನಾಡು ಪ್ರದೇಶಗಳಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿರುವ ಪದ್ಧತಿಗಳಲ್ಲಿ ಆರತಿ ತಟ್ಟೆ ಸಿಂಗರಿಸುವುದು ಕೂಡ ಒಂದು ಪದ್ಧತಿ ಎಂಬಂತೆಯೇ ನಡೆದುಕೊಂಡು ಬರುತ್ತಿದೆ . ಆರತಿ ತಟ್ಟೆಯನ್ನು ವಿವಿಧ ರೀತಿಯಲ್ಲಿ ತಯಾರಿಸಬಹುದು . ಆರತಿ ತಟ್ಟೆಗೆ ದೀಪದ ಎಣ್ಣೆ ಸವರಿ ಅದರ ಮೇಲೆ ಕುಂಕುಮವನ್ನು ಅಥವಾ ಅರಿಸಿನವನ್ನು ಉದುರಿಸಿ ನನತರ ಬೆಂಕಿ ಕಡ್ಡಿಯ ತುದಿಯಿಂದ ಬೇಕಾದ ರೀತಿಯ ದೇವರ  ಚಿತ್ರವನ್ನು ಅಥವ ರಂಗೋಲಿಯನ್ನು ಬರೆದರೆ ಆಕರ್ಷನೀಯವಾಗಿರುತ್ತದೆ .  ಆದರೆ ನವರಾತ್ರಿಗಳಲ್ಲಿ ೯ ದಿನಗಳೂ  ಕೂಡ ಆರತಿ ಮಾಡಬೇಕಾದಾಗ ಪ್ರತಿ ದಿನ ತಯಾರು ಮಾಡುವುದು ಸ್ವಲ್ಪ ಕಷ್ಟವೇ . ಅಂತಹ ಸಂಧರ್ಭ ಗಳಲ್ಲಿ ಉಪಯೋಗಕ್ಕೆ ಬರುವಂತೆ ಹೀಗೆ ಮಾಡಿ ನೋಡಿ . ಎಲ್ಲರ ಮನ ಗೆಲ್ಲಿ . 

ಬೇಕಾಗುವ ಸಾಮಗ್ರಿಗಳು :
೧ ಸ್ಟೀಲ್ ತಟ್ಟೆ ( ಬೇಕಾದ ಸೈಜ್ ದು .. )
ಕೆಂಪು ಮತ್ತು ಹಳದಿ ಬಣ್ಣ (ಪೈಂಟ್ ಮಾಡಲು ಬಳಸುವ ಬಣ್ಣದ ಡಬ್ಬಿ)
ಪೈಂಟ್ ಬ್ರಷ್ (ಸಣ್ಣ ಎಳೆ ಬರುವನ್ತದ್ದು ) 

೧. ಮೊದಲು ಸ್ಟೀಲ್ ತಟ್ಟೆಯನ್ನು ಚೆನ್ನಾಗಿ ತೊಳೆದು ಒಣಗಿಸಿ ಒರೆಸಿ ಇಟ್ಟುಕೊಳ್ಳಿ . 
೨. ನಂತರ ಹಳದಿ ಬಣ್ಣವನ್ನು ಪ್ಲೇಟ್ ನ ಪೂರ್ಣ ಭಾಗಕ್ಕೆ ಒಂದು ಕೋಟ್ ಹಚ್ಚಿ ಬಿಸಿಲಿನಲ್ಲಿ ಇಡಿ . 
೩. ಸಂಪೂರ್ಣವಾಗಿ ಒಣಗಿದ ನಂತರ ಬೇಕಾದಲ್ಲಿ ಇನ್ನೊಂದು ಕೊಟ್ ಹಚ್ಚಿ ಒಣಗಿಸಿ  . 
೪. ನಂತರ ಕೆಂಪು ಬಣ್ಣದಿಂದ ಬೇಕಾದ ರೀತಿಯ ಚಿತ್ರ ಅಥವಾ ರಂಗೋಲಿಯನ್ನು ಹೊಸ ರೀತಿಯ ಡಿಸೈನ್ ಅನ್ನು ಪೇಂಟಿಂಗ್ ಬ್ರಷ್ ನಿಂದ  ಬಿಡಿಸಿ ಪುನಃ ಬಿಸಿಲಲ್ಲಿ ಇಟ್ಟು  ಒಣಗಿಸಿ . 
ನೋಡಲು ಕೂಡ ಸುಂದರವಾಗಿ ಕಾಣುವ ಇದು ವರ್ಷಗಳ ವರೆಗೆ ಬಣ್ಣ ಮಾಸುವುದಿಲ್ಲ ಮನೆಯಲ್ಲಿ ಏನಾದರೂ  ಪುಜೆಗಳಿರುವ ದಿನಗಳಲ್ಲಿ ಬಳಸಬಹುದು . ಜೊತೆಗೆ ಸುಲಭವೂ ಹೌದು . 


ಅರ್ಪಿತಾ ಹರ್ಷ 
ಲಂಡನ್

Wednesday 24 April 2013

ಆ ಬಾಲ್ಯ

ಈ ನನ್ನ ಲೇಖನವು ಉದಯವಾಣಿಯಲ್ಲಿ ಪ್ರಕಟವಾಗಿದೆ 24/04/13



ಮನಸ್ಸಿಗೆ ಬೇಸರವಾದರೆ ಕೆಲವೊಮ್ಮೆ ಹಾಡು ಕೇಳಿದರೆ ಏನೋ ಒಂದು ರೀತಿಯ ನೆಮ್ಮದಿ ದೊರಕುವುದುಂಟು . ಅಂತಹ ಹಾಡುಗಳಲ್ಲಿ ನನಗೆ ಬಹಳ ಹತ್ತಿರವೆನಿಸುವ  ಹಾಡೆಂದರೆ ಜಗಜಿತ್ ಸಿಂಗ್ ರ 

ಏ ದೌಲತ್ ಬಿ ಲೇಲೋ ಶರಾರಥ್ ಬಿ ಲೇಲೋ
 ಭಲೇ ಛೀನ್  ಲೇ ಮುಜ್ ಸೆ ಮೇರಿ ಜವಾನಿ 
ಮಗರ್ ಲೌಟ್  ದೋ ಮುಜ್ಕೋ ಬಚ್ಪನ್ ಕಾ  ಸಾವನ್ 
ವೋ ಕಾಗಜ್ ಕಿ ಕಷ್ತಿ ವೋ ಭಾರೀಶ್ ಕಾ ಪಾನಿ .


ಈ ಸಂಪತ್ತು ಈ ಯೌವನ ಏನನ್ನು ಬೇಕಾದರೂ ನನ್ನಿಂದ ಕಿತ್ತುಕೊ ಆದರೆ ನನಗೆ ನನ್ನ ಬಾಲ್ಯವನ್ನು ಮತ್ತು ಬಾಲ್ಯದಲ್ಲಿ ಆ ಮಳೆಯ ನೀರಿನಲ್ಲಿ  ಕಾಗದದ ದೋಣಿಯಲ್ಲಿ ಆಡುತ್ತಿದ್ದ ಆ ದಿನಗಳನ್ನು ಪುನಃ ಹಿಂತಿರುಗಿಸು ಎಂಬ ಸಾಲುಗಳು ಬಾಲ್ಯದ ನೂರಾರು ನೆನಪುಗಳನ್ನು ಕಣ್ಣೆದುರು ತಂದು ನಿಲ್ಲಿಸುತ್ತದೆ .

 ಈ ಹಾಡು ನನ್ನನ್ನು ಬಹಳ ಹಳೆಯ ಕಾಲಕ್ಕೆ ಕರೆದೊಯ್ಯುತ್ತದೆ . ಆ ಕಾರಣಕ್ಕಾಗಿ ನನಗೆ ಈ ಹಾಡು ಬಹಳ ಇಷ್ಟ ಕೂಡ . ಈ ಹಾಡಿನ ಪ್ರತಿ ಪದಗಳು ಬಹಳ ಸೊಗಸಾಗಿದೆ . ಮತ್ತು ಅರ್ಥವತ್ತಾಗಿದೆ .  ಎಲ್ಲರೂ  ತಮ್ಮ ಬಾಲ್ಯವನ್ನು ಇಷ್ಟಪಡುತ್ತಾರೆ ಆದರೆ ಅದು ಮರಳಿ ಬಾರದ ದಿನಗಳು.  ಆದರೂ ಕಳೆದುಹೋದ ಆ ಬಾಲ್ಯದ ನೆನಪು ಯಾವಾಗಲೂ ಬಹಳ ಸೊಗಸು . ಆದ ಕಾರಣಕ್ಕೆ ನನಗೆ ಈ ಹಾಡು ಏನೋ ಒಂದು ರೀತಿ ಮನಸ್ಸಿಗೆ ತಟ್ಟುತ್ತದೆ . 

ಮಗುವಿನಲ್ಲಿರುವ ಆ ಮುಗ್ದತೆ , ಸ್ವಚ್ಚಂದ ಮನಸ್ಸು, ಎಲ್ಲರೊಡನೆ ಬೆರೆಯುವ ಪರಿ , ಕ್ಷಣ ಕ್ಷಣದಲ್ಲೂ ಕಾಣುವ ಆ ಕುಶಿ , ಬೇರೆಯವರ ಏಳಿಗೆಯನ್ನು ಕರುಬದೆ ಬೆಳೆಯುವ ಆ ದಿನಗಳು  ಇವುಗಳೆಲ್ಲ ಬೆಳೆದು ದೊಡ್ಡವರಾದಂತೆ ನಾವೆಲ್ಲೋ ಕಳೆದುಕೊಳ್ಳುತ್ತಿದ್ದೇವೆ ಎಂದೆನಿಸುತ್ತದೆ .  

 ಇದು ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು . ಬಾಲ್ಯದ ದಿನಗಳನ್ನು ಮತ್ತಷ್ಟು ಕೆದಕುತ್ತದೆ. ಕೆಲವೊಮ್ಮೆ ನೋವಿನಲ್ಲೂ ಸುಖವಿರುತ್ತದೆ ಹಾಗೆಯೇ ಕಳೆದು ಹೋದ ಬಾಲ್ಯ ಹಿಂತಿರುಗಿ ಬರಲಾದಕ್ಕೆ ಬೇಸರವಿದ್ದರೂ ಅದನ್ನು ನೆನಪಿಸುವ ಈ ಹಾಡಿನಲ್ಲಿ ಸಂತೋಷವಿದೆ . ಜೊತೆಗೆ ಕೇಳಿದಷ್ಟು ಬೇಸರ ಬರದ ಮನಸ್ಸಿಗೆ ನಾಟುವ ಪದ ವರ್ಣನೆ .  ಬೇಸರವಾದ ಕ್ಷಣಗಳಲ್ಲಿ ಈ ಹಾಡುಗಳನ್ನು ಕೇಳಿ ನನ್ನ ಮನಸ್ಸನ್ನು ಸಹಜ ಸ್ಥಿತಿ ಗೆ ತರಿಸುವ ಈ ಹಾಡು ನನಗೆ ಒಂದು ರೀತಿಯ ಸ್ಪೂರ್ತಿ . 


ಅರ್ಪಿತಾ ಹರ್ಷ 
ಲಂಡನ್ 

Tuesday 16 April 2013

ಬಸ್ ಪ್ರಯಾಣದ ಮೋಜು

Pulished in Sakhi agust 1st Sakhi magazine 


ಮೊದಲೆಲ್ಲ ನನಗೆ ದೂರದ ಪ್ರಯಾಣ ಎಂದರೆ ಇಷ್ಟ,  ಒಬ್ಬಳೇ ಹೋಗಬೇಕು ಎಂದರೆ ಸ್ವಲ್ಪ ಹೆಚ್ಚೇ ಇಷ್ಟ . ಕಿಟಕಿಯ ಪಕ್ಕದಲ್ಲಿ ಕುಳಿತು ಇಷ್ಟವಾದ ಹಾಡುಗಳನ್ನು ಒಂದಾದ ಮೇಲೊಂದರಂತೆ ಗುನುಗಿಕೊಳ್ಳುತ್ತಾ ಹೋಗುವುದೆಂದರೆ ಬಹಳ ಕುಶಿ.  ಹಾಗೆ ಹೋಗುವಾಗಲೆಲ್ಲ ನನ್ನ ಕನಸಿಗೆ ಯೋಚನಾ ಲಹರಿಗೆ ಯಾರೂ  ಅಡ್ಡಿ ಬರುವುದಿಲ್ಲವಾದ್ದರಿಂದ (ಬಂದರೂ ನನಗೆ ಅದರ ಬಗ್ಗೆ ಗಮನವಿಲ್ಲದಿರುವುದರಿಂದ) ನನಗೆ ಒಬ್ಬಳೇ ಕುಳಿತು ದೂರ ಹೋಗುವುದೆಂದರೆ ಇಷ್ಟವಾಗುತ್ತಿತ್ತು ಜೊತೆಗೆ ಕಾಲೇಜು ದಿನಗಳಲ್ಲಿ ಒಬ್ಬಳೇ ಹೋಗುವ ಅನಿವಾರ್ಯತೆ ಕೂಡ ಬರುತ್ತಿತ್ತು .  ಈಗ ಹೋಗಬೇಕೆಂದರು ಅವಕಾಶ ಸಿಗದಿದುದಕ್ಕೆ ಸ್ವಲ್ಪ ಬೇಸರವೂ  ಇದೆ .  ಹಾಗೆ ಹೋಗುವಾಗಲೆಲ್ಲ ಏನಾದರೊಂದು ನೆನಪಿನಲ್ಲಿ ಉಳಿಯುವಂತಹದ್ದು ಆಗುತ್ತಿತ್ತು . ಇಲ್ಲದಿದ್ದರೆ ಹೊಸ ಫ್ರೆಂಡ್ಸ್ ಸಿಗುತ್ತಿದ್ದರು . 

ಈಗ ನಾಲ್ಕು ವರ್ಷದ ಹಿಂದೆ ನಡೆದ ಘಟನೆ . ಹಾಗೆ ಒಮ್ಮೆ ಬೇಸಿಗೆ ರಜೆ ಬಂದಾಗ ಮನೆಗೆ ಹೋಗಲು ಉಜಿರೆಯಿಂದ ಸಾಗರದ ಬಸ್ ಹತ್ತ ಬೇಕಾಗಿತ್ತು . ಶಾಂತಿಸಾಗರ ಎಂಬ ಒಂದೇ ಬಸ್ ಬೆಳ್ತಂಗಡಿ ಇಂದ ಡೈರೆಕ್ಟ್ ಸಾಗರಕ್ಕೆ ಹೋಗುತ್ತಿತ್ತು . ಹಾಗಾಗಿ ಬೆಳಗ್ಗೆ ಮುಂಜಾನೆ ಉಜಿರೆಯಿಂದ ಬೆಳತಂಗಡಿಗೆ ಒಂದು ಬಸ್ ಹಿಡಿದು ಹೊರಟೆ . ರಜೆಗೆಂದು ಹೊರಟಿದ್ದರಿಂದ ಕೈಯಲ್ಲಿ ಎರಡು ಬ್ಯಾಗ್ ನಷ್ಟು ಲಗೇಜ್ ಇತ್ತು . ಬಸ್ ಹತ್ತಿದ್ದೆ ಪಕ್ಕದಲ್ಲಿ ಒಬ್ಬರು ಬಂದು ಕುಳಿತರು . ಜೊತೆಗೆ ಆ ಗಂಡಸು ನನ್ನೇ ನೋಡುತ್ತಿದ್ದ ನನಗೆ ಕೆಟ್ಟ ಕೋಪ ಬಂದಿತ್ತು . ಆತ ನನ್ನನ್ನು ನೋಡುತ್ತಿದ್ದನೋ ಅಥವಾ ಅದು ನನ್ನ ಭ್ರಮೆಯೋ ಎಂಬುದು ಬಗೆಹರಿಯದ ವಿಷಯ .      ಹದಿನೈದು ನಿಮಿಷದಲ್ಲಿ ನನ್ನ ಸ್ಟಾಪ್ ಬಂದಿದ್ದು ನನಗೆ ಬಹಳ ಸಂತೋಷವಾಯಿತು . ಅವನನ್ನು ಕೆಕ್ಕರಿಸಿ ನೋಡಿ ಇಳಿದುಬಂದೆ . 
ಇಳಿಯುವಷ್ಟರಲ್ಲಿ ಶಾಂತಿಸಾಗರ ಹೊರಡುತ್ತಿತ್ತು ಓಡಿ  ಹೋಗಿ ಹತ್ತಿಕೊಂಡೆ . ಆತನೂ ಬಸ್ ಹತ್ತಿದ ಮತ್ತೆ ನನ್ನ ನೋಡಿದ ನನಗೆ ಇನ್ನೂ ಕೋಪ ಬಂತು ಸ್ವಲ್ಪ ಹೊತ್ತಿನಲ್ಲಿ  ಟಿಕೆಟ್ ಕೇಳಲು ಕಂಡಕ್ಟರ್ ಬಂದು ಕೇಳಿದ್ದಕ್ಕೆ ಇಲ್ಲ ನಾ ಈ ಬ್ಯಾಗ್ ಅನ್ನು ತಲುಪಿಸಲು ಬಂದೆ ಎಂದರು ... 
ನೋಡುತ್ತೇನೆ ನನ್ನದೇ ಬ್ಯಾಗ್ ಇಳಿಯುವ ಭರದಲ್ಲಿ ಒಂದು ಬ್ಯಾಗ್ ಬಿಟ್ಟು ಬಂದುಬಿಟ್ಟಿದ್ದೆ ಪಾಪ ಆತ  ಅದನ್ನು ಗಮನಿಸಿ ನನಗೆ ಹಿಂತಿರುಗಿಸಲು ಬಂದರೆ ನಾನು ಕೆಕ್ಕರಿಸಿ ನೋಡಿಬಿಟ್ಟಿದ್ದೆ .  ಅವರು ನನಗೆ ಬ್ಯಾಗ್ ಹಿಂತಿರುಗಿಸಿದರು ನಾನು ಥ್ಯಾಂಕ್ಸ್ ಹೇಳಿದೆ ಆತ ಏನೂ  ಹೇಳದೆ ಹಿಂತಿರುಗಿ ಹೋದ  ಬಸ್ ಜೋರಾಗಿ ಹೊರಟಿತು . 
ಒಮ್ಮೊಮ್ಮೆ ಅಪಾರ್ಥ ದಿಂದಾಗಿ ಒಳ್ಳೆಯವರನ್ನು ಕೆಟ್ಟವರು ಎಂದುಕೊಳ್ಳುವ ಪರಿಸ್ಥಿತಿ ಬಂದುಬಿಡುತ್ತದೆ . ಅವರು ಸಹಾಯಕ್ಕೆ ಬಂದರೆ ನಾನು ತಪ್ಪು ತಿಳಿದುಕೊಂಡು ಬಿಟ್ಟಿದ್ದೆ . ಮನೆಗೆ ಬಂದು ಹೀಗಾಯಿತು ಎಂದು ಕತೆ ಹೇಳಿದರೆ ಎಲ್ಲರೂ  ಗೊಳ್ ಎಂದು ನಕ್ಕು ಆ ನಂತರ ಆತನನ್ನು ಹೊಗಳಿದರು ನನ್ನನ್ನು ತೆಗಳಿದರು . 

ಅರ್ಪಿತಾ ಹರ್ಷ 
ಲಂಡನ್ .

ಬರ್ಮಿಂಗ್ ಹ್ಯಾಮ್ ಬಾಲಾಜಿ ಟೆಂಪಲ್

ಭಾರತದಲ್ಲಿ ತಿರುಪತಿ ಎಂದರೆ ಎಲ್ಲರೂ  ಒಮ್ಮೆ ಹೆಮ್ಮೆ ಪಡುತ್ತಾರೆ. ಒಮ್ಮೆಯಾದರೂ  ವೆಂಕಟರಮಣನ ಸನ್ನಿಧಿಗೆ ಹೋಗಿ ದರ್ಶನ ಪಡೆದು ಪುನೀತರಾಗಬೇಕು ಎಂದು ಬಯಸುತ್ತಾರೆ. ಹಾಗೆಯೇ ಈ ಇಂಗ್ಲೆಂಡ್ ಗೆ ಬರ್ಮಿಂಗ್ ಹ್ಯಾಮ್ ಎಂಬಲ್ಲಿರುವ

ಬಾಲಾಜಿ ಟೆಂಪಲ್ ಪ್ರಸಿದ್ದಿ ಪಡೆದಿದೆ. ಇಂಗ್ಲೆಂಡ್ ನಲ್ಲಿರುವ ಭಾರತೀಯರಿಗೆ ಬರ್ಮಿಂಗ್ ಹ್ಯಾಮ್  ನ ವೆಂಕಟರಮಣ ದೇವಸ್ಥಾನವೇ  ತಿರುಪತಿ ಟೆಂಪಲ್ ಎಂದರೆ ತಪ್ಪಲ್ಲ. ಹಾಗೆ ನಮಗೂ ಲಂಡನ್ ನಿಂದ ಬರ್ಮಿಂಗ್ ಹ್ಯಾಮ್  ಗೆ ಹೋಗಬೇಕೆನ್ನುವುದು ಬಹಳ ದಿನಗಳ ಆಸೆಯಾಗಿತ್ತು . ಹಾಗೆ ಫ್ರೆಂಡ್ಸ್ ಎಲ್ಲ ಸೇರಿ ಕಳೆದ ಈಸ್ಟರ್ ನಲ್ಲಿ ೪ ದಿನಗಳ ರಜೆ ಇರುವುದರಿಂದ ಇದೇ  ಸೂಕ್ತ ಸಮಯ ಎಂದು ಹೊರಟುಬಿಟ್ಟೆವು . 
ಲಂಡನ್ ನಿಂದ ಸುಮಾರು ೩ ತಾಸುಗಳ ಪ್ರಯಾಣ . ಲಂಡನ್ ನಿಂದ ಟ್ರೈನ್ ನಲ್ಲಿ ಹೊರತು ಬಿರ್ಮಿಂಗ್ ಹ್ಯಾಮ್  ನಲ್ಲಿ ಇಳಿದು ನಂತರ ಅಲ್ಲಿಂದ ಬಸ್ ನಲ್ಲಿ ಹೋಗಬೇಕು .ಟೆಂಪಲ್ ಪ್ರತಿ ದಿನ ಬೆಳಿಗ್ಗೆ ೭ ಗಂಟೆ ಇಂದ ಮದ್ಯಾನ್ಹ ೨ ಗಂಟೆಯವರೆಗೆ ಮತ್ತು ಮದ್ಯಾನ್ಹ ೪ ಗಂಟೆಯಿಂದ ಸಂಜೆ ೮ ಗಂಟೆಯವರೆಗೆ ತೆರೆದಿರುತ್ತದೆ. ಸರಿಯಾಗಿ ೧೨ ಗಂಟೆಗೆ ಮಹಾ ಮಂಗಳಾರತಿ , ಪೂಜೆಗಳು ನೆರವೇರುತ್ತದೆ. ನಂತರ ಸಂಜೆ ೪ ಗಂಟೆಯಿಂದ ಅರ್ಚನೆ ಆರಂಭವಾಗುತ್ತದೆ.  
ನಾವು ಬೆಳಗ್ಗೆ ಸರಿಯಾಗಿ ೭.೩೦ ಕ್ಕೆ ಮನೆಯಿಂದ ಹೊರಟೆವು ನಾವಿರುವ ಸ್ಥಳದಿಂದ ಲಂಡನ್ ಯುಸ್ಟನ್  ಎಂಬಲ್ಲಿಗೆ ಹೋಗಿ ಅಲ್ಲಿಂದ ಡೈರೆಕ್ಟ್ ಟ್ರೈನ್ ಹೋಗುವುದಾಗಿ ಮೊದಲೇ ನಿರ್ಧರಿಸಿಕೊಂಡಿದ್ದೆವು. ಬಿರ್ಮಿಂಗ್ ಹ್ಯಾಮ್  ರೈಲು ನಿಲ್ಧಾಣಕ್ಕೆ  ಹೋಗಿ ತಲುಪುವಾಗ ೧೨.೩೦ ಆಗಿತ್ತು . ನಮಗೆ ಇರುವುದು ಒಂದೇ ದಾರಿ ೨ ಗಂಟೆಯೊಳಗೆ ಬಿರ್ಮಿಂಗ್ ಹ್ಯಾಮ್ ಟೆಂಪಲ್ ತಲುಪಬೇಕು ಇಲ್ಲದಿದ್ದರೆ ಸಂಜೆ ೪ ಗಂಟೆಯವರೆಗೆ ಬೇರೆಡೆ ಹೋಗಿ ನಂತರ ಟೆಂಪಲ್ ಗೆ ಹೋಗಬೇಕು . ಬರ್ಮಿಂಗ್ ಹ್ಯಾಮ್  ಸ್ಟೇಷನ್ ನಿಂದ ಟೆಂಪಲ್ ಗೆ ೪೫ ನಿಮಿಷದ ಪ್ರಯಾಣವಾಗಿತ್ತು ಅಂತು ಎಲ್ಲರ ಒಪ್ಪಿಗೆ ಮೇರೆಗೆ ಟೆಂಪಲ್ ಗೆ ಮೊದಲು ಹೋದೆವು . ಅಷ್ಟರಲ್ಲಾಗಲೇ ನಮ್ಮ ಹೊಟ್ಟೆ ತಾಳ ಹಾಕುತ್ತಿತ್ತು . ಅಲ್ಲಿ ಊಟದ ವ್ಯವಸ್ಥೆ ಇರುವುದರಿಂದ ಪ್ರಸಾದ ಊಟ ಸೇವಿಸಿ ನಂತರ ಹೊರಗೆ ಹೋಳಿಯ ಓಕುಳಿ ಆಟ ಆಡುವ ವ್ಯವಸ್ಥೆ ಕಲ್ಪಿಸಲಾಗಿತ್ತು ನಾವು ಆಟವಾಡಿ ಒಳ ಹೋಗುವಷ್ಟರಲ್ಲಿ ಸರಿಯಾಗಿ ೩.೩೦ ಆದದ್ದರಿಂದ ಒಂದರ್ದ ಗಂಟೆ ದೇವಸ್ಥಾನದಲ್ಲಿ ಕುಳಿತು ನಂತರ ಅರ್ಚನೆ ಮಾಡಿಸಿಕೊಂಡು ಲಡ್ಡು ತೆಗೆದುಕೊಂಡು ಮನೆಕಡೆ ಹೊರಟೆವು .

Friday 5 April 2013

ಹುಚ್ಚಿ ! (ಕಥೆ)


ಮನೆ ಕ್ಲೀನ್ ಮಾಡುತ್ತಾ ಸುಸ್ತಾದ ಅಂಬಿಕ ಗಂಡನೊಡನೆ ಕೂಗುತ್ತಿದ್ದಳು 'ಇಷ್ಟೆಲ್ಲಾ ಮಾಡೋದು ಎಷ್ಟು ಕಷ್ಟ ಗೊತ್ತ ಒಬ್ಬಳೇ ಮಾಡ್ಬೇಕು ಯಾರು ಹೆಲ್ಪ್ ಗೆ ಬರಲ್ಲ ಹೋಗಿ ಹೋಗಿ ಈ ದೊಡ್ಡ ಮನೆಗೆ ಬಂದು ಕುಳಿತಿದ್ದೀರ ಆ ಮನೆಯಿಂದ ಈ ಮನೆಗೆ ಸೇರಿಸೋ ಅಷ್ಟರಲ್ಲಿ ನಾ ಹಾಸ್ಪಿಟಲ್ ಸೇರೋದು ಖಂಡಿತ ' .  ಅದಕ್ಕೆ ಗಣಪತಿ 'ಅಯ್ಯೋ ನೀ ಮೊದಲೇ ಹೇಳಿದ್ರೆ ಬರ್ತಾ ಆ ಪುಷ್ಪ ಳನ್ನಾದ್ರು ಕರ್ಕೊಂಡು ಬರ್ತಿದ್ದೆ'  . ಅಂಬಿಕ ಳ  ಸುಸ್ತೆಲ್ಲ ಒಮ್ಮೆಲೇ ಮಾಯಾವಾಗಿ ಮುಖದಲ್ಲಿ ಚಿಲ್ಲನೆ ಒಂದು ನಗು ಬಂತು . ಅಲ್ಲೇ ಕುಳಿತಿದ್ದ ಸರಳಳಿಗೆ   ಇವರ ಸರಳ ಭಾಷೆ ಒಗಟಂತೆ  ಕಾಣುತ್ತಿತ್ತು . 'ಅತ್ತೆ ಅದು ಯಾರು ಪುಷ್ಪ ಎಂದರೆ?' ಕೇಳಿಯೇ ಬಿಟ್ಟಳು  .' ಅಯ್ಯೋ ಸರಳಾ ನೀ ನೋಡ್ಲಿಲ್ವಾ ಅದೇ ಆ ಹುಚ್ಚಿ ,ಇರು ತೋರಿಸ್ತೀನಿ ಇವತ್ತು ಸಂಜೆ ಪೇಟೆ ಕಡೆ ಹೋದಾಗ' ಎಂದರು ಅತ್ತೆ  . ಸರಳ ಈಗ ಸಂಜೆ ಆಗುವುದನ್ನೇ ಕಾಯುತ್ತಿದ್ದಳು .


ಸಂಜೆ ಎಂದಿನಂತೆ ಪೇಟೆಯ ಕಡೆಗೆ ಹೊರಟಾಗ ಅದೇ ನೋಡು ಅಲ್ಲಿ ಮಾರಮ್ಮನ ಗುಡಿ ಮುಂದೆ ಕುಂತವಳೇ ಆ ಹುಚ್ಚಿ ಪುಷ್ಪ ಎಂದು ಬೇಗ ಬೇಗ ಮುಂದೆ ಹೋಗುತ್ತಿದ್ದರೆ ಸರಳ ಳ   ಕಣ್ಣು ಆ ಪುಷ್ಪಳನ್ನೇ ನೋಡುತ್ತಿತ್ತು . ಹಿಂದೆ ತಿರುಗಿ ತಿರುಗಿ ನೋಡುತ್ತಾ ಹೋದವಳಿಗೆ ಆ ದಿನವೆಲ್ಲ ಅವಳೇ ಕಣ್ಣೆದುರು.  

ಪುಷ್ಪ ಹೆಸರೆಷ್ಟು ಚಂದವಿದೆ .ಹೆತ್ತವರು ಮಗಳ ಬಗ್ಗೆ ಎಷ್ಟು ಕನಸು ಕಂಡಿರಬಹುದು ಆ ಹೆಸರಿಡುವಾಗ ! ಆಕೆ ನೋಡಲೇನು ಹುಚ್ಚಿ ಎನಿಸುವುದಿಲ್ಲ . ಬಣ್ಣ ಸ್ವಲ್ಪ ಕಂದು , ಒಂದು ಪ್ಯಾಂಟ್ ಮತ್ತು ಶರ್ಟ್ ಹಾಕಿಕೊಂಡಿರುತ್ತಾಳೆ ಜೊತೆಗೆ ಬಾಯ್ ಕಟ್ ಬಹುಷಃ ಯಾರೋ ಕನಿಕರದಿಂದ ಅವಳ ಕೂದಲನ್ನು ಕಟ್ ಮಾಡಿ ಸ್ವಲ್ಪ ಸ್ವಚ್ಚವಾಗಿರುವಂತೆ ನೋಡಿಕೊಂಡಿರಬೇಕು . ಆಕೆಯದು ಕರ್ಲಿ ಹೇರ್ ಅಂತಾರಲ್ಲ ಹಾಗೆ . 

ದೇವಸ್ಥಾನದ ಮುಂದೆ ಅವಳ ವಾಸ . ಹಾಗಂತ ರಾತ್ರಿ ೭ ಗಂಟೆಯ ಮೇಲೆ ಆಕೆ ಅಲ್ಲಿ ಕಾಣುವುದೇ ಇಲ್ಲ ಎಲ್ಲಿ ಹೋಗುತ್ತಾಳೆ ಎಂಬುದು ಯಾರಿಗೂ ತಿಳಿಯದ ವಿಷಯ . ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಮಾರಮ್ಮನ ದೇವಸ್ಥಾನದ ಬಾಗಿಲು ತೆಗೆದ ತಕ್ಷಣ ಆಕೆ ಅಲ್ಲಿ ಹಾಜರ್ ಮತ್ತೆ ಸಂಜೆ ೭ ಗಂಟೆಗೆ ಗುಡಿ ಮುಚ್ಚಿದ ಮೇಲೆ ಅಲ್ಲಿಂದ ಆಕೆ ಕದಲುವುದು . ಬಿರುಬಿಸಿಲಿಗೂ ಅಂಜದೆ ಕುಳಿತ ಆಕೆಯನ್ನು ಆ ಮಾರಮ್ಮ ಒಂದು ದಾರಿ ತೋರಿಸಬಾರದೆ?ಎಂದೆನಿಸದೆ ಇರಲಿಲ್ಲ ಸರಳಳಿಗೆ .

ಮೂರು ನಾಲ್ಕು ದಿನಗಳು ಹೀಗೆ ಪೇಟೆ ಗೆ ಹೋಗುವಾಗಲೆಲ್ಲ ಆಕೆಯನ್ನು ನೋಡಿ ಬಂದಾದ ಮೇಲೆ ಮತ್ತೆ ಕೇಳಿದಳು ಅಂಬಿಕಳನ್ನು 'ಅತ್ತೆ  ಆ ಪುಷ್ಪ ಯಾಕೆ ಹಾಗಾಗಿದ್ದು? ಪಾಪ ಅಲ್ವಾ?'

ಹ್ಮ ನನಗೂ  ಸರಿಯಾಗಿ ಗೊತ್ತಿಲ್ಲ ಯಾಕೆ ಎಂದು ಅವರಿವರು ಹೇಳಿದ್ದು ಹೇಳಬಹುದು ಅವಳದೊಂದು ಪ್ರೀತಿಯಲ್ಲಿ ಬಿದ್ದ ಕಥೆ ಒಂದು ಹುಡುಗನನ್ನು ಬಹಳ ಇಷ್ಟ ಪಡುತ್ತಿದ್ದಳಂತೆ ಅವನೂ  ಹಾಗೂ  ಹೀಗೂ ಇವಳನ್ನು ಅವನಿಷ್ಟದಂತೆ ಕುಣಿಸಿ ಕೊನೆಗೆ ಅದ್ಯಾವುದೋ ಒಂದು ಪ್ಯಾಂಟು ಶರ್ಟು ಹಾಕಿರೋ ಹುಡುಗಿ ನಿನಗಿಂತ ಚನ್ನಾಗಿದ್ದಾಳೆ  ಅಂತ ಇವಳನ್ನು ಬಿಟ್ಟು ಅವಳೊಡನೆ ಓಡಿ ಹೋಗಿ ಬಿಟ್ಟನಂತೆ.

 ಅಂದಿನಿಂದ ಈಕೆ  ಮಾರಮ್ಮನ ಗುಡಿಯಲ್ಲಿ ಕೈಮುಗಿದು ಕುಳಿತುಕೊಂಡು ಆತನ ಬರುವಿಕೆ ಗೆ ಕಾಯುತ್ತಿದ್ದಳಂತೆ ದಿನ ಕಳೆದಂತೆ ಅನ್ನ  ನೀರು ಬಿಟ್ಟು ಕುಳಿತ  ಈಕೆಯನ್ನು ಜನ ಹುಚ್ಚಿ ಎನ್ನಲು  ಪ್ರಾರಂಭಿಸಿದರು . ಕೊನೆಗೆ ಅದ್ಯಾರೋ ಅವಳ ಹರಿದ ಬಟ್ಟೆ ನೋಡಲಾಗದೆ ಅವಳಿಗೆ ಹಳೆಯದೊಂದು ಪ್ಯಾಂಟು ಶರ್ಟು ಕೊಟ್ಟರು ಕಾಣುತ್ತೆ ಅವಳು ಅದನ್ನು ಹಾಕಿ ಮಾರಮ್ಮ ಕೊನೆಗೂ ದಯೆ ತೋರಿದಳು ಪ್ಯಾಂಟು ಶರ್ಟು ಹಾಕಿಕೊಂಡೆ ಇನ್ನು ಆ ಹುಡುಗ ಬಂದರೆ ತನ್ನ ಇಷ್ಟಪಡುತ್ತಾನೆ ಎಂದು ಅಲ್ಲೇ ಕಾಯುತ್ತಾ ಕುಳಿತು ಕೊಂಡಿರುತ್ತಾಳೆ  .ಪಾಪ ಆ ಹುಡುಗ ತಿರುಗಿ ಬಂದಿಲ್ಲ ಬಂದರೂ  ಈಕೆಯನ್ನ ಗುರುತಿಸಲಾರ. ಗುರುತಿಸಿದರೂ  ಹುಚ್ಚಿ ಯನ್ನು ಯಾರಾದರೂ  ಕಟ್ಟಿಕೊಳ್ಳಲು ಸಾಧ್ಯವೇ? 

ಸರಳ ಮನಸ್ಸಲ್ಲೇ ಅಂದುಕೊಂಡಳು ಆಕೆ ನೋಡಲು ಹುಚ್ಚಿಯಂತೆ ಕಾಣುವುದಿಲ್ಲ ,ಅವಳಿಗೆ ಹುಚ್ಚು ಹಿಡಿದಿರುವುದು ಪ್ಯಾಂಟು ಶರ್ಟಿ ನದು. ಜನ ಆಕೆಯನ್ನೇ ಹುಚ್ಚಿ ಮಾಡಿಬಿಟ್ಟಿದ್ದಾರೆ!!. ಪ್ರೀತಿ ಏನೆಲ್ಲಾ ಮಾಡಿಬಿಡುತ್ತದೆ. ಕಣ್ಣಲ್ಲಿ ನೀರು ತುಂಬಿಕೊಂಡ ಸರಳ ಯೋಚಿಸುತ್ತಿದ್ದಳು .

ಅರ್ಪಿತಾ ಹರ್ಷ 
ಲಂಡನ್ 

Thursday 21 March 2013

ಮುಹೂರ್ತ !

ಬೆಳಿಗ್ಗೆ ಮುಂಚೆ ಹತ್ತು ಗಂಟೆಗೆಲ್ಲ ಮುಹೂರ್ತ ತಾವು ತಪ್ಪದೆ ಬರಬೇಕು . ಇರುವ ಒಬ್ಬಳೇ ಮಗಳನ್ನು ಶ್ರೀಮಂತರ ಮನೆಗೆ ಕೊಡ್ತಿದ್ದೇನೆ . ಜೊತೆಗೆ ಹುಡುಗ ಬಹಳ ಒಳ್ಳೆಯವ ನನ್ನ ಮಗಳಿಗೆ ಅಂತಾನೆ ಕಳಿಸಿದ್ದಾನೆ ದೇವರು. ಸಾಫ್ಟ್ವೇರ್ ಇಂಜಿನಿಯರ್ ಒಳ್ಳೆ ಸಂಬಳ . ನಂದು ಬಡ ಕುಟುಂಬ ಆದರು ನನ್  ಮಗಳು ಅದೃಷ್ಟ ಮಾಡಿಕೊಂಡಿದಾಳೆ ನೋಡಿ ಎಂದು ನಗುತ್ತ ಹೇಳುತ್ತಿದ್ದ ಶಾಮ ಭಟ್ಟರ ಮಗಳ ಮಾಡುವೆ ಪತ್ರಿಕೆ ತೆಗೆದುಕೊಂಡ ಕಮಲಮ್ಮ ಒಮ್ಮೆ ನೊಂದು ಕೊಂದರು . ಹುಡುಗ ಅದೇ ಪ್ರದೀಪ . ಒಳ್ಳೆ ಹುಡುಗ .ಹುಡುಗಿ ಅದೃಷ್ಟ ಮಾಡಿರಬೇಕು . ಅಷ್ಟು ಹೇಳಿ ಹೊರಟುಹೋದರು ಶಾಮ ಭಟ್ಟರು . ಊಟಕ್ಕೆ ಇರಿ ಎಂದು ಹೇಳುವಷ್ಟು ಆಸಕ್ತಿ ಇರಲಿಲ್ಲ ಕಮಲಮ್ಮನಿಗೆ. ಆ ಕರಾಳ ನೆನಪಿನ ದಿನಗಳಿಗೆ ಮೊರೆಹೊಕ್ಕರು.
                                        ---------------------------------
ಎಷ್ಟು ಚಂದವಿತ್ತು ಆ ದಿನಗಳು . ಮಗಳು ಪ್ರತಿಮಾ ಮನೆಲಿದ್ದ ದಿನಗಳವು .ಅಪ್ಪ ಅಮ್ಮನ ಮುದ್ದಿನ ಮಗಳು ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಪ್ರೀತಿಗೂ ಕೂಡ. ಅಪ್ಪ ನ ಪ್ರೀತಿ , ಅಣ್ಣ ನ ಕೀಟಲೆ ಚೇಷ್ಟೆ ಎಲ್ಲದಕ್ಕೂ ಕೇಳಿಕೊಂಡು ಬಂದಿರಬೇಕು ಎಂದು ನೋಡಿದವರು ಕಣ್ಣು ಹಾಕುವರೆನೋ ಎಂಬಷ್ಟು ನಗು ಆ ಮನೆಯಲ್ಲಿತ್ತು .

ಮೊದಮೊದಲು ಅಪ್ಪ ಕಾಲೇಜಿಗೆ ಹೋಗುತ್ತಿದ್ದ ಮಗಳಿಗೆ ವಿಪರೀತ ಸಲುಗೆ ಕೊಟ್ಟಿದ್ದ. ಅಂದಿನ ಕಾಲದಲ್ಲಿ ಯಾರ ಹತ್ತಿರವೂ ಮೊಬೈಲ್ ಇರಲಿಲ್ಲ .ಇಡೀ  ಕಾಲೇಜಿನಲ್ಲಿ ಇವಳದೊಂದೇ ಮೊಬೈಲ್ ಎಲ್ಲರ ಕಣ್ಣು ಈಕೆಯ ಮೇಲೆಯೇ. ನೋಡಲು ಬೆಳ್ಳಗೆ ತೆಳ್ಳಗೆ ತಿದ್ದಿ ತೀಡಿದಂತಿದ್ದ ಪ್ರತಿಮಾ ಪಡ್ಡೆ ಹುಡುಗರ ಕನಸಿನಲ್ಲಿ ಹೋಗಲು ಕಾಲೇಜು ಪ್ರಾರಂಭವಾಗಿ ಬಹಳದಿನ ತೆಗೆದುಕೊಳ್ಳಲಿಲ್ಲ. ಸ್ವಲ್ಪ ಚಲ್ಲು ಚಲ್ಲಾಗಿ ಆಡುತ್ತಿದ್ದ ಪ್ರತಿಮಾ ಳಿಗೂ ಇದೊಂದು ಹಬ್ಬದಂತೆ ಅನಿಸುತ್ತಿತ್ತು .  ಕಾಲೇಜಿನ ಹೆಸರಿನಲ್ಲಿ ಪ್ರತಿ ದಿನ ಹೀಗೇ ಕಳೆದುಹೋಗುತ್ತಿತ್ತು.ಓದುವುದರ ಬಗ್ಗೆ ಮೊದಲಿನಿಂದಲೂ ಸ್ವಲ್ಪ ಹಿಂದಿದ್ದ ಪ್ರತಿಮಾ ಳಿಗೆ ಈಗ ಓದಿನ ಕಡೆ ಸ್ವಲ್ಪವೂ  ಗಮನವಿರಲಿಲ್ಲ.

ದಿನನಿತ್ಯ ಕಾಲೇಜಿಗೆ ಬಂದು ಹೋಗುವುದು ತಡವಾಗುತ್ತಿತ್ತು. ಬೆಳಗ್ಗೆ ಮನೆಯಿಂದ ೭ ಗಂಟೆಗೆಲ್ಲ ಹೊರಟರೆ ಸಂಜೆ ಮನೆ ಸೇರುತ್ತಿದ್ದುದು ಸಂಜೆ ೮ ಗಂಟೆಗೆ . ಅಪ್ಪ ತೋಟದ ಕೆಲಸ , ಗೆಳೆಯರು , ನೆಂಟರ ಮನೆ ಹೀಗೆ ಬ್ಯುಸಿ ಆಗಿ ಹೋಗುತ್ತಿದ್ದುದರಿಂದ ಅಷ್ಟೊಂದು ತಲೆಗೆ ಹಚ್ಚಿಕೊಳ್ಳಲಿಲ್ಲ. ಆದರೆ ಅಮ್ಮನಿಗೆ ಹಾಗಾದೀತೇ? ಎಷ್ಟಾದರೂ ಮಗಳು , ಹೆಣ್ಣು ಮಕ್ಕಳು ಸಂಜೆ ೬ ರ ಒಳಗೆ ಮನೆ ಸೇರಬೇಕು ಎಂದು ಮೊದಲಿನಿಂದಲೂ ಕೇಳಿಕೊಂಡು ,ಪಾಲಿಸಿಕೊಂಡು , ಹೇಳಿಕೊಂಡು ಬಂದವರು .

ಒಂದು ದಿನ ಕಮಲಮ್ಮ ,ಗಂಡ ಸುಬ್ರಾಯರು ಮನೆಗೆ ಬರುವುದನ್ನೇ ಕಾಯುತ್ತ ಕುಳಿತಿದ್ದರು . ಮಗಳು ಮನೆಗೆ ಬರುವುದಕ್ಕೂ ಗಂಡ ಮನೆಗೆ ಬರುವುದಕ್ಕೂ ಸರಿ ಹೋಯಿತು . ಹೇಳಬೇಕೆಂದಿರುವ ಮಾತು ಮನಸಲ್ಲೇ ಬಚ್ಚಿಟ್ಟು ಕೊಳ್ಳಬೇಕಾಯಿತು . ಇಷ್ಟಕ್ಕೂ ತನ್ನ ಸ್ವಂತ ಮಗಳನ್ನು ಅನುಮಾನಿಸಲಾದೀತೇ? ಆದರೂ ಮುನ್ನೆಚ್ಚರಿಕೆ ಒಳ್ಳೆಯದು ಎಂಬುದು ಮನಸಿನ ಒಂದು ಮೂಲೆಯಲ್ಲಿ ಹಾಡು ಹೋಯಿತು .

ಇತ್ತ ಸುಬ್ರಾಯರು ಊಟಕ್ಕೆ ಕುಳಿತಾಗ ಮಗಳಿಗೆ ಕೇಳಿದರು ' ಏನು ಹೇಗೆ ನಡೀತಿದೆ ನಿನ್ನ ಕಾಲೇಜು ? ಪರೀಕ್ಷೆ ಹತ್ತಿರಬೇರೆ ಬಂತು ಇನ್ನೇನು ಸೆಕೆಂಡ್ ಪಿಯುಸಿ ಗೆ ಹೋಗಿಬಿಡುತ್ತಿ.ಕಾಲೇಜು ಸ್ವಲ್ಪ ದೂರ ನಿಂಗೆ ಹತ್ತಿರದ್ದು ಬೇಕಾದರೆ ಹೇಳು ಇಲ್ಲೇ ಸೀಟು  ಕೊಡಿಸುವ ವ್ಯವಸ್ಥೆ ಮಾಡಿಸುವ'ಎಂದರು.

' ಹೌದು ಅಪ್ಪ ಕಾಲೇಜು ತುಂಬಾ ಚೆಂದ , ನನಗೆ ಈ ಕಾಲೇಜು ಬಿಟ್ಟು ಬೇರೆಡೆಗೆ ಹೋಗೋಕೆ ಇಷ್ಟ ಇಲ್ಲ ದೂರವಾದರೂ  ನಾ ಅಲ್ಲೇ ಹೋಗೋದು 'ಎಂದಳು . ಸರಿ ಹಾಗಿದ್ದರೆ ಎಂದ ಸುಬ್ರಾಯರಿಗೆ ಎಲ್ಲಿಲ್ಲದ ಸಂತೋಷ ಮಗಳಿಗೆ ಓದಿನಲ್ಲಿ ಏನು ಆಸಕ್ತಿ ಎಂದು . ಆದರೆ ಕಮಲಮ್ಮ ಮಗಳ ಮುಖದಲ್ಲಿ ವ್ಯಕ್ತವಾದ ಅದ್ಯಾವುದೋ ಅವ್ಯಕ್ತ ಭಾವವೊಂದಿದೆ ಎಂದರಿತರು . ಬೆಳಿಗ್ಗೆ ಹೋದವಳು ಸಂಜೆ ಬರುತ್ತಾಳೆ . ಮೊನ್ನೆ ಪಕ್ಕದೂರಿನ ಪದ್ಮ ಹೇಳಿದಳು ತನ್ನ ಮಗಳು ಅದೇ ಕಾಲೇಜು ೫ ಗಂಟೆಗೆಲ್ಲ ಮನೆಯಲ್ಲಿರ್ತಾಳೆ ನಿನ್ ಮಗಳೇನು ಸಂಗೀತ ಕಲಿತಾಳ?  ಇಲ್ಲ ಅವಳಿಗೆ ಕ್ಲಾಸ್ ಮುಗಿಯೊದೆ ಅಷ್ಟೊತ್ತಿಗಂತೆ ಆಮೇಲೆ ಬಸ್ ಸಿಗಲ್ವಂತೆ ಎಂದ ಕಮಲಮ್ಮಳಿಗೆ  ಪದ್ಮ ಅದೆಂತ ಇವಳಿಗೊಂದು ಸ್ಪೆಷಲ್ ಕ್ಲಾಸ್ ತಗೊಬಿಡ್ತಾರಂತ? ಕೇಳಿದಾಗ ಕಮಲಮ್ಮಳಲ್ಲಿ ತಿರುಗಿ ಉತ್ತರವಿರಲಿಲ್ಲ. ಯೋಚನೆಗೆ ಬಿದ್ದಳು . ಹೌದಲ್ಲವಾ ಆದರೂ  ಎಂದು ಏನೂ  ಮುಚ್ಚಿಡದ ಮಗಳ ಬಗ್ಗೆ ಅನುಮಾನಿಸುವುದು ಸರಿಯಲ್ಲ .

 ಹೀಗೆ ದಿನ ಕಳೆಯುತ್ತಿತ್ತು . ಯಾವುದಕ್ಕೂ ಇನ್ನು ತಡ ಮಾಡುವುದಲ್ಲ ಮಗಳು ೨ ಪಿಯುಸಿ ಮುಗಿತಿದ್ದಂತೆ ಒಂದು ಒಳ್ಳೆ ಹುಡುಗನನ್ನ ನೋಡಿ ಮದುವೆ ಮಾಡಿಬಿಟ್ಟರೆ ಒಂದು ನಿಶ್ಚಿಂತೆ. ಹಾಗೆ ಗಂಡನಲ್ಲಿ ಹೇಳಿದ್ದಕ್ಕೆ ' ಏನಂತ ತಿಳಿದಿ ನೀನು ನನ್ನ ಮಗಳು ಇನ್ನು ಕೂಸು  ಆಕೆಗೆ ಮದುವೇನ ? ಇನ್ನು ನಾಲ್ಕು ವರ್ಷ ಅದರ ಬಗ್ಗೆ ಮಾತಾಡ ಕೂಡದು ' ಎಂದ ಗಂಡನನ್ನು ಕುಳ್ಳಿರಿಸಿ ಇವತ್ತಲ್ಲ ನಾಳೆ ಮದುವೆ ಮಾಡಲೇ ಬೇಕು ಈಗ ಕಾಲ ಬದಲಾಗಿದೆ . ದೊಡ್ಡವರ ಮನೆ ಹುಡುಗಿ ಅಂದ್ರೆ ಜನ ದುಂಬಾಲು ಬೀಳ್ತಾರೆ. ಕಾಲೇಜಿಂದ ಬೇರೆ ಬೇಗ ಬರ್ತಿಲ್ಲ ಅವಳು ನಾಳೆ ದಿನ ಏನಾದ್ರೂ ಆದ್ರೆ ನಮ್ಮ ಮಾನ ಮರ್ಯಾದೆ ಏನಾಗಬೇಡ? ನೀವೇ ಹೇಳಿ .
ಯೋಚನೆಗೆ ಬಿದ್ದರು ಸುಬ್ರಾಯರು . ಕಮಲಾ ಯಾವತ್ತು ಹೀಗಂದವಳಲ್ಲ ಅವಳ ಮಾತಲ್ಲಿ ಹುರುಳಿ ರುತ್ತೆ ಬೆಂಕಿ ಹೋಗೆ ಆದರೆ ಹೀಗೆ ಮಾತಾಡುವವಳಲ್ಲ .

 ಹೀಗೆ ಯೋಚಿಸಿದವರಿಗೆ ಮೊನ್ನೆ ತಾನೇ ಬಸ್ ನಲ್ಲಿ ಸಿಕ್ಕಿ ಹೇಳಿದ ಗೆಳೆಯನ ನೆನಪಾಯಿತು . ಒಂದು ಫೋನ್ ಮಾಡಿಬಿಟ್ಟರು .ಯಾವತ್ತಿದ್ರೂ ಮದುವೆ ಮಾಡಿ ಕೊಡೋದೇ ನಿನ್ನ ಮಗನಿಗೆ ಕೊಟ್ಟರೆ ನೀನೆ ಮುಂದೆ ಓದುಸ್ತಿ ಅಂತ ಬೇರೆ ಹೇಳಿದ್ದಿ ಹಾಗಾಗಿ ಈ ಯೋಚನೆ ಬಂತು ಯಾವುದಕ್ಕೂ ಮನೆಯಲ್ಲಿ ಒಮ್ಮೆ ವಿಚಾರಿಸಿ ಮುಂದುವರೆಯುವ. ಅಷ್ಟೇ ಉಳಿದಿದ್ದೆಲ್ಲ ನೋಡ ನೋಡುತ್ತಿದ್ದಂತೆ ಮುಂದುವರೆದು ಆಯಿತು . ಎಲ್ಲಿ ನೋಡಿದರು ಪ್ರತಿಮಾಳ  ಮದುವೆಯಂತೆ ಅನ್ನುವುದೊಂದು ದೊಡ್ಡ ಸುದ್ದಿ . ಮಗಳಿಗಾಗಿ ಬಂಗಾರದ ಹೊರೆಯನ್ನೇ ಮಾಡಿಸಿದರು ಸುಬ್ರಾಯರು. ಪ್ರತಿಮಾ ಎಲ್ಲವೂ  ಮಾಮುಲಿನಂತೆಯೇ ಇದೆ ಎಂಬಂತಿದ್ದಳು . ಮದುವೆಯ ದಿನವೂ ನಿಶ್ಚಯಿಸಿ ಆಯಿತು. ಇನ್ನು ೩ ತಿಂಗಳಿದೆ ಅಷ್ಟರಲ್ಲಿ  ಕಾಲೇಜು ಕೂಡ ಮುಗಿಯುತ್ತದೆ .ಮುಂದಿನದೆಲ್ಲವು ಅವಳಿಷ್ಟದಂತೆ . ಇಶತವಿದ್ದರೆ ಓದಬಹುದು ಇಲ್ಲದಿದ್ದರೆ ಸಂಸಾರವಿದೆ.

ಒಂದು ದಿನ ಮದ್ಯಾನ್ಹ ಮನೆಗೆ ಬಂದ  ಮಗ ಅಮ್ಮ ಏನಾಗೋಯ್ತು ಎಂದು ದುಃಖ ತಪ್ತ ನಾಗಿ ಕುಸಿದು ಬಿದ್ದ . ಅಯ್ಯೋ ಏನಾಯ್ತೋ ಎಂದು ನೀರು ಹಾಕಿ ಏಳಿಸಿದವರಿಗೆ ಆಘಾತ ಕಾದಿತ್ತು . ಮಗಳು ಮನೆ ಬಿಟ್ಟು ಓಡಿ  ಹೋಗಿದ್ದಾಳೆ .  ಕಾಲೆಜಿನದೆ ಹುಡುಗ . ತಂದೆ ತಾಯಿ ಕೂಲಿ ಕೆಲಸ ಮಾಡಿ ಮಗನನ್ನು ಓದಿಸುತ್ತಿದ್ದರೆ. ವಿಷಯ ತಿಳಿದ ಸುಬ್ರಾಯರು ಮನುಷ್ಯರಾಗಿರಲಿಲ್ಲ. ಅವಳು ಸಿಗಲಿ ಕೊಚ್ಚಿ ಹಾಕುತ್ತೇನೆ ಎಂದರು ಅಸಹಾಯಕರಾಗಿ ಅತ್ತರು.ಗೋಗರೆದರು.

ಊರಿನವರು ನೆಂಟರಿಷ್ಟರು ಎಲ್ಲರೂ ಬಂದರು ಒಬ್ಬೊಬ್ಬರು ಒಂದೊಂದು ಹೇಳಿದರು ನೀವು ಕೊಟ್ಟ ಸಲುಗೆ ಬಹಳವಾಗಿಯು ಎಂದು ಕೆಲವರೆಂದರೆ , ಆಕೆ ಮೊದಲಿನಿಂದಲೂ ಸ್ವಲ್ಪ ಚಲ್ಚಲ್ ಆಗಿ ಆಡುತ್ತಿದ್ದಳು ನಮಗೆ ಗೊತ್ತಿತ್ತು ಇದು ಹೀಗೆ ಆಗುವುದು ಎಂದು ಕೆಲವರಂದರು. ಹತ್ತಿರದ ನೆಂಟರು ಅವಳ ಜಾತಕವೇ ಸರಿ ಇರಲಿಲ್ಲ ಎಂದರು . ನೂರು ಜನ ನೂರು ರೀತಿಯಲ್ಲಿ ಮಾತನಾಡಿದರು . ಸಮಾಧಾನದ ನೆಪದಲ್ಲಿ ಬಂದು ಮನಸ್ಸಿಗೆ ಇನ್ನಷ್ಟು ಇರಿದರು . ಹೋದ ಮಗಳು ತಿರುಗಿ ಬರಲಿಲ್ಲ .ಅಂದಿನಿಂದ  ಕಮಲಮ್ಮ ಸುಬ್ರಾಯರು ಮನೆ ಹೊಸಿಲು ದಾಟಿ ಹೊರಹೊಗಲಿಲ್ಲ .ಇದೆಲ್ಲ ಆಗಿ ಆಗಲೇ ೨-೩ ವರ್ಷವಾಗಿತ್ತು . ಆಗೀಗ ಯಾರಿಂದನೋ ಬಂಡ ಸುದ್ದಿಯಿಂದ ತಿಳಿದಿದ್ದು ಪ್ರತಿಮ ಈಗ ಮುದ್ದಾದ ಗಂಡು ಮಗುವೊಂದರ ತಾಯಿ . ಗಂಡನ ಜೊತೆಗೆ ತಾನು ಕೂಲಿ ಕೆಲಸದಲ್ಲಿ ತೊಡಗಿಕೊಂಡಿದ್ದಾಳೆ. ಅಪ್ಪ ಅಮ್ಮ ತೋರಿದ ಆ ಪ್ರೀತಿಗಿಂತ ಕಷ್ಟಪಟ್ಟು ದುಡಿಯುವ ಈ ಪ್ರೀತಿಯೇ ಮೇಲೆನಿಸಿರಬೇಕು !!.ಕಮಲಮ್ಮ ನಿಟ್ಟುಸಿರುಬಿಟ್ಟರು ಎಲ್ಲ ಸರಿಯಿದ್ದರೆ ಪ್ರದೀಪ ಇಂದು ತಮ್ಮ ಅಳಿಯ ಆಗುತ್ತಿದ್ದ . ಮೊಮ್ಮಗು ರಾಜಕುಮಾರನಾಗುತ್ತಿದ್ದ.

                         -----------------------------------------------------------------------

ಮಗು ರಚ್ಚೆ ಹಿಡಿದು ಅಳುತ್ತಿತ್ತು . ಏನು ಮಾಡಿದರೂ  ಸುಮ್ಮನಿರಲಿಲ್ಲ. ಕೊನೆಗೆ ಇದ್ದ ಸಣ್ಣ ರೂಮಿನಲ್ಲಿ ಒಂದು ತೊಟ್ಟಿಲು ತಂದು ಕಟ್ಟಬೇಕು . ಹೇಗಾದರು ಮಾಡಿ ಈ ತಿಂಗಳು ಕೆಲಸ ಮಾಡಿದ ದುಡ್ಡು ಗಂಡನಿಗೆ ಸಿಗದಂತೆ ಉಳಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದ ಪ್ರತಿಮಳಿಗೆ  ಸುದೀರ ಹೇಳಿದ 'ಇವತ್ತು ಮೂರು ಜನ ಗೆಳೆಯರನ್ನ ಕರ್ಕೊಂಡು ಬರ್ತೀನಿ ಮದ್ಯಾನಕ್ಕೆ ಒಳ್ಳೆ ಅಡಿಗಿ ಮಾಡ್ ಹಾಕು . ಬಾಡುಟ ಅಂದ್ರ ನನ್ ಗೆಳೆಯರಿಗೆ ಬಾಳ್ ಚೊಲೊ ಹಿಡುಸ್ತದ'  , ಎನ್ನುತ್ತಾ ಹೊರಹೋದ ಗಂಡನನ್ನ ಮರೆಯಾಗುವವರೆಗೂ ಕಿಟಕಿಯ ಸಂದಿಯಿಂದ ನೋಡುತ್ತಿದ್ದ ಪ್ರತಿಮಳ ನೆನಪು ಅಮ್ಮ ಹೊಟ್ಟೆ ತುಂಬಾ ಮಾಡಿ ಹಾಕುತ್ತಿದ್ದ ಸೊಪ್ಪಿನ ಸಾರನ್ನು ನೆನೆಸಿ ಕಣ್ಣೀರು ಸುರಿಸಿದವು !!!.

ಅರ್ಪಿತಾ ಹರ್ಷ 
ಲಂಡನ್ 

ಒಮ್ಮೊಮ್ಮೆ ಹೀಗೂ ಆಗುವುದು

ಈ ನನ್ನ ಲೇಖನವು ೨೬/೦೩/೧೩ ಉದಯವಾಣಿಯಲ್ಲಿ ಪ್ರಕಟಗೊಂಡಿದೆ 


ಈಗ ಸುಮಾರು ವರ್ಷಗಳ ಹಿಂದಿನ ಕಥೆ ಇದು . ಕಥೆ ಎಂದರೆ ಕಥೆಯಲ್ಲ ನಿಜವಾಗಿ ನಡೆದ ಘಟನೆ .ಆಗ ನಾನು ೭ ನೆ ಕ್ಲಾಸ್ ನಲ್ಲಿದ್ದೆ .ನಮ್ಮದು ಮಲೆನಾಡಿನ ಹಳ್ಳಿ . ಮಳೆಗಾಲದ ಒಂದು ದಿನ ವಾಗಿತ್ತು. ಮಳೆಗಾಲದ ದಿನಗಳಲ್ಲಿ ಅಲ್ಲಿ ಸುರಿಯುವ ಮಳೆ ನೋಡಿಯೇ ಆನಂದಿಸಬೇಕು. ಹೀಗಿರುವಾಗ ಒಂದು ದಿನ ಮಳೆ ಸುರಿಯುತ್ತಿತ್ತು ನಾವೆಲ್ಲಾ ಊಟ ಮಾಡಿ ಬೇಗ ಮಲಗಿದ್ದೆವು . ಅಣ್ಣ ಮಾತ್ರ ಪ್ರತಿ ಬುದವಾರ ಟಿವಿಯಲ್ಲಿ ಬರುವ ಒಂದು ಸಿ ಐ ಡಿ ಷೋ ಒಂದನ್ನು ನೋಡಿಯೇ ಮಲಗುವುದಾಗಿತ್ತು . ಹಾಗೆ ಒಂದು ಬುದವಾರ ಸಿ ಐ ಡಿ  ಷೋ ನೋಡುತ್ತಿದ್ದ ಅದರಲ್ಲಿ ತೋರಿಸುತ್ತಿದ್ದ ಕೊಲೆ ಆತನಿಗೆ ಬಹಳ ಭಯ ಹುಟ್ಟಿಸಿತ್ತು .ಆಗಿನ್ನೂ ಆತ  ೮ನೆ ತರಗತಿ . ಅದೇ ಸಮಯಕ್ಕೆ ಕರೆಂಟ್ ಹೋಗಿಬಿಟ್ಟಿತ್ತು . ಮಳೆಗಾಲದಲ್ಲಿ ಆಗಾಗ ಕರೆಂಟ್ ತೆಗೆಯುತ್ತಿರುತ್ತಾರೆ. 

ಆತ  ಹೆದರುತ್ತಲೇ ಮಲಗಲು ನಿಧಾನವಾಗಿ ನಡೆದು ಬರುತ್ತಿದ್ದ . ಆಗೆಲ್ಲ ನಮ್ಮ ಮನೆಯಲ್ಲಿ ಎಲ್ಲರು ಸಾಲಾಗಿ ಮಲಗಿರುತ್ತಿದ್ದೆವು .ಅಣ್ಣ  ಒಬ್ಬೊಬ್ಬರನ್ನೇ ದಾಟಿ ಮುಂದೆ ಹೋಗಿ ತನ್ನ ಜಾಗದಲ್ಲಿ ಮಲಗಿಕೊಳ್ಳಬೇಕು. ಹಾಗೆಯೇ ಬರುತ್ತಿದ್ದ ಅಷ್ಟರಲ್ಲಿ ಅಪ್ಪ - ಅಣ್ಣನ ಕೈ ಹಿಡಿದು ಜೋರಾಗಿ ಕೂಗಿಕೊಂಡರು  ಅಣ್ಣ ಅಪ್ಪನಿಗಿಂತ ಜೋರಾಗಿ ಕೂಗಿಕೊಂಡ. ಎಲ್ಲರೂ  ಏನಾಯಿತು ಎಂದು ಎದ್ದು ಗಾಬರಿಗೊಂಡೆವು .  ಅಷ್ಟರಲ್ಲಿ ಹೋದ ಕರೆಂಟ್ ಪುನಃ ಬಂದಿತ್ತು .
ಇತ್ತ ನಿದ್ದೆಗೆ ಜಾರುತ್ತಿದ್ದ ಅಪ್ಪನಿಗೆ ಕನಸೊಂದು ಬೀಳುತ್ತಿತ್ತು . ಕನಸಿನಲ್ಲಿ ಮನೆಯಲ್ಲಿರುವ ಅಡಕೆಯನ್ನು ಕದಿಯಲು ಕಳ್ಳರು ಮನೆಗೆ ನುಗ್ಗಿದ್ದರು . ಅಪ್ಪ ಅದನ್ನು ನೋಡುತ್ತಿದ್ದಾರೆ ದೂರದಲ್ಲೆಲ್ಲೋ ಅಡಿಕೆಯನ್ನು ಸುರಿಯುವ ಶಬ್ದ ಕೂಡ ಕೇಳುತ್ತಿದೆ . ಆದರೆ ಕಣ್ಣು ಬಿಟ್ಟು ಹಿಡಿಯಲು ಆಗುತ್ತಿಲ್ಲ. 
ಕಣ್ಣು ಬಿಡಲು ಆಗದಂತೆ ಏನೋ ಮಾಡಿದ್ದರೆ ಹೀಗೆ ಕನಸು ಮುಂದುವರೆಯುತ್ತಿರುವಾಗ ಅಣ್ಣ ಅಪ್ಪನನ್ನು ದಾಟಿಕೊಂಡು ಮುಂದೆ ಹೋಗುತ್ತಿದ್ದ ಅಪ್ಪ ಕಳ್ಳ ಎಂದುಕೊಂಡು ಹಿಡಿದುಕೊಂದುಬಿಟ್ಟರು . 
ಇನ್ನೇನು ಹೊಡೆಯಬೇಕು ಅನ್ನುವಷ್ಟರಲ್ಲಿ ಅಣ್ಣ ನು ಕೂಗಿಕೊಂಡ ಅಪ್ಪನು ಕೂಗಿಕೊಂಡರು. 

ಮಳೆಗಾಲ ವಾದದ್ದರಿಂದ ಮನೆಯ ಹಿಂದೆ ಕಟ್ಟಿದ್ದ ತಗಡಿನ ಮೇಲೆ ನೀರು ರಭಸವಾಗಿ ಬೀಳುತ್ತಿತ್ತು . ಆ ನೀರು ಬೀಳುವ ಶಬ್ದ ಅಡಿಕೆಯನ್ನು ಸುರಿದರೆ ಬೀಳುವ ಶಬ್ದದಂತೆಯೇ ಇತ್ತು ಅದು ಅಪ್ಪನಿಗೆ ದೂರದಲ್ಲಿ ಕೇಳುತ್ತಿದುದ್ದರಿಂದ ಅಡಿಕೆ ಕಡಿಯುತ್ತಿದ್ದಾರೆ ಎಂದು ಕೊಂಡಿದ್ದರು. ಆಗಷ್ಟೇ ದಾರವಾಹಿನೋಡಿ ಬರುತ್ತಿದ್ದ ಅಣ್ಣನಿಗೆ ಹಿಂದಿನಿಂದ ಯಾರೋ ಹಿಂಬಾಲಿಸುತ್ತಿದ್ದಾರೆ ಎನ್ನಿಸುತ್ತಿತ್ತು .  ಹಾಗಾಗಿ ಅವನಿಗೆ ಅಪ್ಪ ಕೈಹಿಡಿದ ತಕ್ಷಣ ಭಯವಾಗಿ ಕೂಗಿಕೊಂಡಿದ್ದ .
ಅದೇ ಸಮಯಕ್ಕೆ ಹೋಗಿದ್ದ ಕರೆಂಟ್ ಪುನಃ ಬಂದಿತ್ತು . ಇಲ್ಲದಿದ್ದರೆ ಅನಾಹುತವಾಗುತ್ತಿತ್ತು . 

ಅರ್ಪಿತಾ ಹರ್ಷ 
ಲಂಡನ್ 

Wednesday 13 March 2013

ಸಸ್ಯ ಶಾಮಲ

ಅದೊಂದು ಸುಂದರ ಮನೆ . ದೂರದಿಂದ ನೋಡಿದರೆ ದೊಡ್ಡದೊಂದು ಮನೆಯ ಸುತ್ತಲು ಹಚ್ಚ ಹಸುರಿನಿಂದ ಕಂಗೊಳಿಸುವ ತೋಟ . ಬಿಸಿಲಿನಿಂದ ಸೂರ್ಯ ಕಣ್ಣು ಕುಕ್ಕಿ ಬೆವರಿಳಿಸುತ್ತಿದ್ದರೆ ಆ ಮನೆಗೆ ಹೊಕ್ಕು ಹಸುರಿನ ಜೊತೆಗೆ ಗಾಳಿಯಿಂದ ಮನಸ್ಸಿಗೆ ಸ್ವಲ್ಪ ಹಾಯೇನಿಸಿಕೊಳ್ಳೋಣ ಎಂದೆನಿಸದೆ ಇರದು . ಅಂತಹದೊಂದು ವಾತಾವರಣ  ಇರುವುದು ಕುಮಟ ದ ಶಾಮಲ ಜಗನಾಥ್ ಮನೆಯಲ್ಲಿ, ಮನೆಯ ಸುತ್ತಲಿರುವ ತೋಟದಲ್ಲಿ ,

ಕರಾವಳಿಯ ತೀರದ ಕುಮಟದ ಹತ್ತಿರದಲ್ಲಿ ದೊಡ್ಡದೊಂದು ಮನೆ ಕಟ್ಟಿಸಿ ಕೊಂಡಾಗ  ಸುತ್ತಲು ಬರೀ ಬಯಲು ಬೇಸಿಗೆಯ ಬಿಸಿ ಬೇಗೆಯನ್ನು ನೀಗಲು ಮಲೆನಾಡಿನಿಂದ ಬಂದ ಎಂತವರಿಗೂ  ಕೂಡ ಬಹಳ ಕಷ್ಟವೆನಿಸುತ್ತಿತ್ತು ಅಂತಹ ದಿನಗಳಲ್ಲಿ ಕೃಷಿಯ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇದ್ದ ಶಾಮಲರವರು ಪುಟ್ಟದೊಂದು ಗಾರ್ಡನ್ ತಯಾರಿಸುವ ಯೋಜನೆ ಹಾಕಿಕೊಂಡರು . ದಾಸವಾಳ, ಗುಲಾಬಿ, ತುಂಬೆ, ಸೇವಂತಿಗೆ ಹೀಗೆ ಹೂವುಗಳಿಂದ ಪ್ರಾರಂಭಿಸಿದ ಗಾರ್ಡನ್ ಬರಬರುತ್ತ ದೊಡ್ಡದೊಂದು ತೋಟವಾಯಿತು ಎಂಬುದು ನಿಜಕ್ಕೂ ಆಶ್ಚರ್ಯವೇ ಸರಿ . ಶಾಮಲ ಅವರಿಗಿದ್ದ ಆಸಕ್ತಿ ಕೇವಲ ಹುವುಗಳೇ ಏಕೆ ತರಕಾರಿಗಳನ್ನು ಬೆಳೆಯಬಹುದು ಎಂದು ಪ್ರಾರಂಭಿಸುವಲ್ಲಿ ಉತ್ಸಾಹ ಹೆಚ್ಚಿಸಿತು . 
ಈಗ ಅವರ ತೋಟದಲ್ಲಿ ಬೆಳೆಯದ ತರಕಾರಿಗಲಿಲ್ಲ. ಇದರ ನಡುವೆ ಬೋನ್ಸಾಯ್ ಬಗ್ಗೆ ಹೆಚ್ಚು ಆಸಕ್ತಿ ಹುಟ್ಟಿಸಿಕೊಂಡ ಶಾಮಲ ರವರು ಪತಿಯ ಸಹಕಾರದೊಂದಿಗೆ ಅದನ್ನು ಪ್ರಾರಂಭಿಸಿದರು . ಶಾಮಲ ಅವರ ಮನೆಗೆ ಹೋದರೆ ಬಾಗಿಲಲ್ಲೇ ಪುಟ್ಟ ಪುಟ್ಟ ಗಿಡಗಳಲ್ಲಿ ನಿಂಬು , ಮಾವು, ಎಲ್ಲವು ನಮ್ಮನ್ನು ಸ್ವಾಗತಿಸುತ್ತವೆ. ೫೦ ಕ್ಕೂ ಹೆಚ್ಚು ಬೇರೆಬೇರೆ ರೀತಿಯ ಬೋನ್ಸಾಯ್ ಗಿಡಗಳಿವೆ .ಇವರ ವಿವಿದ ರೀತಿಯ ಬೋನ್ಸಾಯ್ ಗಿಡಗಳನ್ನು ಮದುವೆ  ಇನ್ನಿತರ ಕಾರ್ಯಕ್ರಮಗಳಿಗೆ ಅಲಂಕಾರಕ್ಕಾಗಿ ತೆಗೆದುಕೊಂಡು ಹೋಗುವವರು ಉಂಟು . ತೋಟದ ನಡುವೆಯೇ ಸಣ್ಣ ಪುಟ್ಟ ಕೊಳಗಳ ರೀತಿಯ ಟ್ಯಾಂಕ್ ನಿರ್ಮಿಸಿ ಗಾರ್ಡನ್ ಅಂದವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ತೋಟಕ್ಕೆ ಬೇಕಾದ ಗೊಬ್ಬರಗಳನ್ನು ನೀಡುತ್ತಿದ್ದುದ್ದು  ದನಕರುಗಳು ಅದರ  ಬಗ್ಗೆಯೂ ಯೋಚಿಸಿದ ಶಾಮಲ ರವರು ಮನೆಯ ಮುಂದೊಂದು ದೊಡ್ಡ ಟ್ಯಾಂಕ್ ಕಟ್ಟಿಸಿ  ಬಿಸಿಲಿನ ಬೇಗೆ ನೀಗಿಸಿಕೊಳ್ಳಲು ದನಕರುಗಳಿಗೆ ನೀರಿನ ವ್ಯವಸ್ಥೆ ಕೂಡ ಮಾಡಿದ್ದಾರೆ.  ಬಾಳೆ , ತೆಂಗು , ತರಕಾರಿಗಳಾದ ಬೀನ್ಸ್, ಬದನೇಕಾಯಿ, ಟೊಮೇಟೊ , ಮೆಣಸಿನ ಕಾಯಿ ಇವುಗಳಿಗೆ ಕೊರತೆಇಲ್ಲ. ಇವೆಲ್ಲಕ್ಕೂ ಸಾಕಷ್ಟು ಶ್ರಮ ಬೇಕು .  ಮನೆಯ ಅಡುಗೆ , ಇಬ್ಬರು ಮಕ್ಕಳ ವಿದ್ಯಾಭ್ಯಾಸ ದ ಜೊತೆಗೆ ದೊಡ್ಡ ಮಟ್ಟದಲ್ಲಿ ಗಾರ್ಡನಿಂಗ್ ಮಾಡಿ ಯಶಸ್ವಿಯಾಗುವುದರಲ್ಲಿ ಶಾಮಲರವರ ಶ್ರಮ ಅಪಾರ. ಅದಕ್ಕೆ ಸರಿಯಾಗಿ ಸಾಥ್ ನೀಡುವುದರಲ್ಲಿ ಪತಿ ಮತ್ತು ಮಕ್ಕಳು ಕೂಡ ಜೊತೆಯಾಗಿದ್ದಾರೆ ಎಂದು ಸಂತೋಷದಿಂದ ಹಂಚಿಕೊಳ್ಳುತ್ತಾರೆ ಶಾಮಲರವರು .
ಇದಿಷ್ಟೇ ಅಲ್ಲ ಶಾಮಲರವರ ಹವ್ಯಾಸಗಳು ಹಲವು ಸುಧಾ ತರಂಗಗಳಲ್ಲಿ ಬರುವ ಧಾರಾವಾಹಿಗಳನ್ನು ಒಟ್ಟುಗೂಡಿಸಿ ಕಾದಮ್ಬರಿಯಾಗಿ ಜೋಡಿಸಿಟ್ಟಿದ್ದಾರೆ.  ಹೌಸ್ ಡೆಕೊರೇಶನ್ ಕೂಡ ಇವರ ಇಷ್ಟದ ಹವ್ಯಾಸ . ಗ್ಲಾಸ್ ಪೇಂಟಿಂಗ್ , ಹೂವಿನ ಕುಂಡಗಳು , ವಿವಿದ ರೀತಿಯ ಹೂವುಗಳು, ಹೀಗೆ ಇವರ ಮನೆಯ ಗೋಡೆ ಮತ್ತು ಶೋಕೇಸ್ ಗಳು ತುಂಬಿಹೋಗಿವೆ . ಮನೆಗೆ ಬಂದವರ ಗಮನ ಸೆಳೆದಿವೆ. 

ಲಂಡನ್ ಲೈಫ್ ಸ್ಟೈಲ್

 Published in Sakhi Magazine ...May 1st 2013


ತಾಯ್ತನ ಎನ್ನುವುದು ಒಂದು ಸುಂದರ ಅನುಭವ . ಅದಕ್ಕಾಗಿ ಕಾಯುವವರು ಬಹಳ ಹಾಗೆ ಅದರ ಸಿದ್ದತೆ ಮತ್ತು ಮಗು ಹುಟ್ಟಿದ ನಂತರ ನಡೆಸುವ ಬಾಳಂತನ  ಇವು ಕೂಡ ಸಾಕಷ್ಟು . ನಮ್ಮ ದೇಶದಲ್ಲಿ ತಾಯಿಯಾಗುತ್ತಿದ್ದಂತೆ ಪ್ರಾರಂಭವಾಗುತ್ತದೆ ಮುನ್ನೆಚ್ಚರಿಕೆ ಅದರಲ್ಲೂ ದಿನ ತುಂಬಿದ ಬಸುರಿಗಂತೂ ಕುಳಿತಲ್ಲೇ ಸೇವೆ ಎನ್ನುವಷ್ಟು . ಹಾಗೆಯೇ ಮಗು ಹುಟ್ಟಿದ ೩ ತಿಂಗಳು ಮನೆಯಿಂದ ಎಲ್ಲೂ ಹೊರ ಹೊರಡುವುದಿಲ್ಲ ಅದರಲ್ಲೂ ಮೊದಲ ಮಗುವಾದರಂತೂ  ಸರಿಯಾಗಿ ೩ ತಿಂಗಳು ಬಾಳಂತನ  ಮಾಡಿ ಕೊಂಡರೆಯೇ  ಗಟ್ಟಿ ಎಂಬುದು ಮೊದಲಿನಿಂದಲೂ ಬೆಳೆದು ಬಂದ ಪದ್ಧತಿ  ಮತ್ತು ಅದು ಈಗಲೂ ಬೆಳೆದುಕೊಂಡು  ಎಲ್ಲರೂ  ನಡೆಸಿಕೊಂಡು ಕೂಡ ಬರುತ್ತಿದ್ದಾರೆ.  ಇಂಜಿನಿಯರ್ ಗೆಳತಿಯೊಬ್ಬಳು ಹೇಳಿದ್ದಳು ಅವಳು ಹೆರಿಗೆಯ ದಿನಗಳು ಹತ್ತಿರಬರುತ್ತಿದ್ದಂತೆ ರಜೆ ತೆಗೆದುಕೊಂಡರೆ ಆನ್ ಸೈಟ್ ನ ಕ್ಲೈಂಟ್ ಗಳು ಇನ್ನೊಂದು ವಾರದಲ್ಲಿ ಬರುತ್ತೀರಾ ಕೇಳಿದರು ಎಂದು . ಆಶ್ಚರ್ಯವಾಗಿತ್ತು ಆಗ. ಆದರೆ ಈ ಲಂಡನ್ ಗೆ ಬಂದ  ಮೇಲೆ ಅದರ ಬಗ್ಗೆ ಪೂರ್ಣ ಮಾಹಿತಿ ದೊರೆಯಿತು . 

ಇಲ್ಲಿ ಹೆಣ್ಣು ಮಕ್ಕಳು ೧೫ ವರ್ಷದಿಂದಲೇ ತಾಯಿಯಾಗಿರುವ ಸಾಕಷ್ಟು ಉದಾಹರಣೆಗಳಿವೆ . ಅದು ತಪ್ಪು ಎಂದು ಇಲ್ಲಿಯ ಜನ ಹೇಳುವುದಿಲ್ಲ. ಹಾಗೆಯೇ ೪೦ ವರ್ಷದವರು ಕೂಡ ತಾಯಿಯಾಗುತ್ತಾರೆ. ಆದರೆ ನಮ್ಮ ಭಾರತಕ್ಕೂ ಈ ಇಂಗ್ಲೆಂಡ್ ಗು ಬಹಳಷ್ಟು ವ್ಯತ್ಯಾಸವಿದೆ. ಇಲ್ಲಿ ತುಂಬು ಬಸುರಿ ಒಂಬತ್ತು ತಿಂಗಳು ನಾಳೆಗೆ ಡ್ಯು ಡೇಟ್ ಅಂದರೂ  ಕೂಡ ನಿರಾಳವಾಗಿ ಯಾವುದೇ ತೊಂದರೆ ಇಲ್ಲದಂತೆ ಆಫೀಸ್ ಗೆ ಹೋಗುತ್ತಾಳೆ . ಡಾಕ್ಟರ್ ಕೊಟ್ಟ ಡೇಟ್ ನಂತರ ಇನ್ನೇನು ಲೇಬರ್ ಪೈನ್ ತುಂಬಾ ಕಾಣುತ್ತಿದೆ ಎಂದಾಗ ಮಾತ್ರ ಆಫೀಸ್ ಗೆ ರಜೆ ಹಾಕಿ ಆಸ್ಪತ್ರೆ ಗೆ ಅಡ್ಮಿಟ್ ಆಗುತ್ತಾರೆ. ಜೊತೆಗೆ ಇಲ್ಲಿ ಯಾವುದೇ ಕಾರಣಕ್ಕೂ ಸಿಸೇರಿಯನ್ ಮಾಡುವುದಿಲ್ಲ ಈ ಕಾರಣದಿಂದ ಸಾಕಷ್ಟು ಹೆಂಗಳೆಯರು ಪ್ರಾಣ ಕಳೆದುಕೊಂಡಿರುವ  ಉದಾಹರಣೆಗಳು  ಕೂಡ ಇವೆ . ಆದರೆ ನಾರ್ಮಲ್ ಡೆಲಿವರಿ ಆಗಬೇಕು ಎಂಬುದು ಡಾಕ್ಟರ ಕೊಡುವ ಅಭಿಪ್ರಾಯ.  ಆದರೂ  ನಾರ್ಮಲ್ ಡೆಲಿವರಿ ಆಗುವುದರ ಮೂಲಕ ಮತ್ತಷ್ಟು ಬಲಿಷ್ಟರಾಗುತ್ತಾರೆ ಎಂಬುದು ಸತ್ಯ .

ಒಮ್ಮೆ ಪ್ರಸಿದ್ಧ ಮೇಡಂ ತುಸ್ಸಾದ್ ನನ್ನು ನೋಡಲು ಹೋಗಿದ್ದೆವು ಅಲ್ಲಿ ದೊಡ್ಡ ಕ್ಯು ಇದ್ದ ಕಾರಣ ಒಬ್ಬರ ಹಿಂದೆ ಒಬ್ಬರು ಟಿಕೆಟ್ ಪಡೆಯಲೋಸುಗ ನಿಂತಿದ್ದೆವು . ನನ್ನ ಮುಂದೇ ನಿಂತಿರುವ ಹೆಣ್ಣುಮಗಳಿಗೆ ಸುಮಾರು ೩೦ ರ ಅಸುಪಾಸಿರಬಹುದು ಕೈಯಲ್ಲೊಂದು ಪುಟ್ಟ ಮಗುವಿತ್ತು . ಅದೆಷ್ಟು ಪುಟ್ಟ ಮಗುವಾಗಿತ್ತೆಂದರೆ ಕಣ್ಣು ಕೂಡ ಆಗಷ್ಟೇ ಬಿಟ್ಟಂತೆ  ಇತ್ತು . ನನಗೆ  ಕುತೂಹಲ ತಡೆಯಲಾಗಲಿಲ್ಲ ಕೇಳಿದೆ ಎಷ್ಟು ತಿಂಗಳ ಮಗುವಿದು ಅಂತ ಅವರೆಂದರು ೪ ದಿನದ ಹಿಂದೆ ಹುಟ್ಟಿದ್ದು ಎಂದು , ಆಕೆ ಆ ಮಗುವನ್ನು ಎತ್ತಿಕೊಂಡು ಕ್ಯೂನಲ್ಲಿ ಸುಮಾರು ೨ ತಾಸುಗಟ್ಟಲೆ ನಿಂತಿದ್ದಳು ಮತ್ತು ನಂತರ ೨ ತಾಸು ಸಂಗ್ರಹಾಲಯ ಸುತ್ತಿ ಹೋದಳು . ನಿಜಕ್ಕೂ ಆಶ್ಚರ್ಯವೆನಿಸುತ್ತದೆ .  ಇಂಗ್ಲೆಂಡ್ ನಲ್ಲಿ ಬಾಳಂತನ  ಎಂದು ಯಾವುದೇ ರೀತಿಯಲ್ಲಿ ಆರೈಕೆ ಮಾಡಿಕೊಳ್ಳುವುದಿಲ್ಲ ಉಳಿದ ದಿನಗಳಂತೆಯೇ  ಇರುತ್ತಾರೆ ಎಂಬುದು ವಿಶೇಷವೆ ಸರಿ . 

ಹಾಗೆಯೇ ಇಲ್ಲಿಯ ಜನ ಮಗುವನ್ನು ಕಾರ್ ನಲ್ಲಿ ಕರೆದುಕೊಂಡು ಹೋಗುವಾಗ ಹಿಂಬದಿಯಲ್ಲಿ ಒಂಟಿಯಾಗಿ ಕೂರಿಸಿರುತ್ತಾರೆ. ಮಗುವಿನ ಸುತ್ತಲೊಂದು ಬೆಲ್ಟ್ ಹಾಕಿ ಹಿಂದಿನ ಸೀಟಿನಲ್ಲಿ ಒಂಟಿಯಾಗಿ ಮಗು ಕುಳಿತಿರುತ್ತದೆ. ಇದರಿಂದ ಮಗು ಸ್ವತಂತ್ರವಾಗಿ ಬೆಳೆಯಲಿ ಎಂಬ ಉದ್ದೇಶದಿಂದ ಈ ರೀತಿಯಾಗಿ ಬೆಳೆಸುತ್ತಾರೆ . ಮಗುವಿಗೆ ಒಂದು ಆರು ತಿನ್ಗಲಾಗುತ್ತಿದ್ದಂತೆ ಪ್ರತ್ಯೇಕವಾದ ರೂಂ ನಲ್ಲಿ ಮಲಗಿಸುತ್ತಾರೆ. ಇದರಿಂದ ಮಗು ಬೇರೆಯವರ ಮೇಲೇ ಅವಲಂಬಿತವಾಗಿರುವುದಿಲ್ಲ . ಮುಂದೆ ತನ್ನ ಕಾಲ ಮೇಲೆ ತಾನು ನಿಲ್ಲುವಷ್ಟು ಸಾಮರ್ಥ್ಯವನ್ನು ಹೊಂದುತ್ತದೆ ಎಂಬುದು ಅವರು ನೀಡುವ ಅಭಿಪ್ರಾಯ .

ಇಲ್ಲಿ ಚಳಿಗಾಲದಲ್ಲಿ -೪ ವರೆಗೂ ಚಳಿ ಇರುತ್ತದೆ . ಕೆಲವೊಮ್ಮೆ ಹಿಮ ಕೂಡ ಬೀಳುತ್ತಿರುತ್ತದೆ. ಆದರೆ ಇಲ್ಲಿ ಹುಟ್ಟಿದ ಪುಟ್ಟ ಮಗುವು ಕೂಡ ಈ ವಾತಾವರಣವಕ್ಕೆ ಬಹುಬೇಗ ಹೊಂದಿಕೊಂದುಬಿದುತ್ತವೆ. ಗೆಳತಿಯೊಬ್ಬಳಿಗೆ ಲಂಡನ್ ನಲ್ಲಿಯೇ ಮಗುವಾಗಿತ್ತು ಆ ಮಗು ಎಷ್ಟೊಂದು ಭಿನ್ನವಾಗಿತ್ತೆಂದರೆ ಮಗುವಿಗೆ ಅಮ್ಮ ಸದಾ ಜೊತೆಗಿರಬೇಕು ಎಂದೆನಿಸುತ್ತಲೇ ಇರಲಿಲ್ಲ . ಅದರಷ್ಟಕ್ಕೆ ಅದು ಆಡಿಕೊಂಡು ಇದ್ದುಬಿಡುತ್ತಿತ್ತು . ಹಾಗೆಯೇ ಇಂತಹ ಮಕ್ಕಳು ಬೆಳೆದು ದೊಡ್ದವರಾಗುತ್ತಿದ್ದಂತೆ ಸಂಬಂಧ ಗಳಿಗೆ ಬೆಲೆ ಕೊಡುವುದಿಲ್ಲ .ಯಾರು ಇಲ್ಲದೆಯೇ ಕೂಡ ಬದುಕಿಬಿಡಬಲ್ಲವು  ಎಂಬುದು ಕೂಡ ವಿಷಾದನೀಯ . ಆದರೆ ಇಲ್ಲಿಯ ಪೋಷಕರು ಮಕ್ಕಳಿಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಮಕ್ಕಳಿಗೆ ಹೊಡೆಯುವುದಿಲ್ಲ ಬಹಳ ಪ್ರೀತಿಯಿಂದ ತಿದ್ದುತ್ತಾರೆ. ಇಲ್ಲಿಯ ಸರ್ಕಾರಿ ಕಟ್ಟುಪಾಡುಗಳು ಹಾಗೆ ಇವೆ ಇಲ್ಲಿ ಮಕ್ಕಳನ್ನು ಹೊಡೆಯುವಂತಿಲ್ಲ ಪ್ರೀತಿಯಿಂದ ಮನ ಗೆಲ್ಲಬೇಕು ಎನ್ನುತ್ತಾರೆ. ಶಾಲೆಗಳಿಗೆ ಸೇರಿದ ಮಗುವಿಗೆ ಸುಮಾರು ೫ ವರ್ಷಗಳವರೆಗೆ ಕೇವಲ ಆಟಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ನಂತರ ನಿಧಾನವಾಗಿ ಪಾಠ ಪ್ರಾರಂಭಿಸುತ್ತಾರೆ. ಇದು ಲಂಡನ್ ನ ಲೈಫ್ ಸ್ಟೈಲ್ .