Friday 9 March 2012

ಒಗ್ಗಟ್ಟಿನಲ್ಲಿ ಬಲವಿದೆ !!

ಈ ನನ್ನ ಲೇಖನವು ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ


ಕರ್ನಾಟಕ ಮೊದಲಿನಿಂದಲೂ ತನ್ನದೇ ಆದ ಘನತೆ ಗೌರವ ಹೊಂದಿದ ರಾಜ್ಯವಾಗಿತ್ತು ಆದರೆ ಇತ್ತೀಚಿಗೆ ಹಲವಾರು ಹಗರಣಗಳು ನಡೆದು ಕರ್ನಾಟಕದ ಬಗ್ಗೆ ದೇಶ ವಿದೇಶಗಳಲ್ಲಿ ಮಾತನಾಡಿಕೊಳ್ಳುವ ಪ್ರಸಂಗ ಬಂದಿರುವುದು ನಿಜಕ್ಕೂ ಶೋಚನೀಯ. ರಾಜಕೀಯ ಎಂಬುದು ಎಲ್ಲೆಡೆ ಇದ್ದೆ ಇದೆ .ಎಲ್ಲ ರಾಜ್ಯಗಳಲ್ಲೂ ಒಂದಿಲ್ಲೊಂದು ಘಟನೆಗಳು ನಡೆಯುತ್ತಲೇ ಇರುತ್ತದೆ . ಆದರೆ ಕರ್ನಾಟಕದಲ್ಲಿ ಒಗ್ಗಟ್ಟು ಕಡಿಮೆ ಆಗಿರುವುದರಿಂದ ಸಣ್ಣ ವಿಷಯಗಳನ್ನು ದೊಡ್ದದನ್ನಾಗಿಸಿ ಅಪಪ್ರಚಾರ ಗಿಟ್ಟಿಸಿ ಕೊಳ್ಳುತ್ತಿದೆ .ವಿರೋದ ಪಕ್ಷಗಳ ಹೋರಾಟ ,ಶಾಸಕರ ಪ್ರಕರಣಗಳು ನಾಚಿಕೆಗೇಡಿನ ಕೆಲಸ . ಇವನ್ನೆಲ್ಲ ಬಿಟ್ಟು ರಾಜ್ಯದ ಉನ್ನತಿಗೆ ಏನು ಮಾಡಬೇಕು ಎಂಬುದರ ಬಗ್ಗೆ ಯೋಚಿಸಿ ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿದಲ್ಲಿ ಇಂತಹ ಅವಮಾನಕರ ಘಟನೆಗಳು ಆಗುವುದನ್ನು ತಪ್ಪಿಸಬಹುದು ಜೊತೆಗೆ ಸಾಧನೆ ಮಾಡಬಹುದು . ಕರ್ನಾಟಕ ಎಂಬ ಹೆಸರು ಕೇಳಿದೊಡನೆ ಅಲ್ಲಿ ಒಂದು ಸಾಧನೆಯ ನೆನಪಾಗಬೇಕೆ ಹೊರತು ಇಂತಹ ಅಪಮಾನಕರ ಘಟನೆಗಳಲ್ಲ .ಒಗ್ಗಟ್ಟಿನಿಂದ ನಾವೆಲ್ಲಾ ಒಂದು ಎಂಬ ಭಾವನೆಗಲಿದ್ದಲ್ಲಿ ಲಾಯರ್, ಪೋಲಿಸ್, ಮಾಧ್ಯಮ ಹೀಗೆ ಅವರವರಲ್ಲೇ ಗಲಾಟಿಯಾಗುವ ಇದರಿಂದ ರಾಜ್ಯದ ಹೆಸರು ಕೆಡಿಸುವುದನ್ನು ತಪ್ಪಿಸಬಹುದು .

ಅರ್ಪಿತಾ.c.ರಾವ್
ಲಂಡನ್



No comments:

Post a Comment