Sunday 9 October 2011

ಹಂಬಲಿಸಿದೆ ಮನ

"ಕಾಣದ ಕಡಲಿಗೇ ಹಂಬಲಿಸಿದೆ ಮನ ಕಾಣಬಲ್ಲೆನೆ ಒಂದು ದಿನ " ?? ಒಬ್ಬಳೇ ಕುಳಿತಾಗ ಎಷ್ಟೋ ಬಾರಿ ನಾನು ಕೇಳುವ ಹಾಡಿನ ಸಾಲುಗಳಿವು.
ಎಷ್ಟು ಅರ್ಥಪೂರ್ಣ ವಾಗಿವೆ .ಎಷ್ಟೊಂದು ಭಾವನೆಗಳನ್ನು ಒಳಗೊಂಡಿವೆ .ಹೌದು ಪ್ರತಿಯೊಬ್ಬರ ಮನಸ್ಸು ಕೂಡ ಒಂದಲ್ಲ ಒಂದು ಬಾರಿ ಕಾಣದುದ್ದನ್ನು ಕಾಣಬೇಕೆಂದು ಬಯಸಿರುತ್ತದೆ.ಏನೋ ಒಂದು ಹೊಸತನ್ನು ಸಾಧಿಸಬೇಕೆಂದು ಬಯಸಿರುತ್ತದೆ.ಮುಂದೊಂದು ದಿನ ಕಾಣಬೇಕೆಂಬ ಹಂಬಲ ಇರುತ್ತದೆ.ಕನಸು ನನಸಾಗುವುದೇ ಎಂಬ ಪ್ರಶ್ನೆಯೊಂದು ಬಂದು ಹೋಗುತ್ತಿರುತ್ತದೆ.ಈ ಬದುಕೇ ಹೀಗೆ ಇರದುದ್ದರ ಬಗ್ಗೆ ಆಸಕ್ತಿ ಹೆಚ್ಚು.ಹೊಸತನ್ನು ಹುಡುಕುವುದರಲ್ಲಿ ಸಂತೋಷ ಹೆಚ್ಚು.ನವೀನವಾದುದನ್ನು ಸಾಧಿಸುವುದರಲ್ಲಿ ತೃಪ್ತಿ ಕಂಡುಕೊಳ್ಳುತ್ತದೆ.ಕನಸು ನನಸಾಗಿಸುವ ಬಯಕೆ ಇದ್ದೆ ಇರುತ್ತದೆಇಂತಹದ್ದೊಂದರ ಬಗ್ಗೆ ಸೊಗಸಾಗಿ ಮೂಡಿಬಂದಿರುವ ಈ ಕವಿತೆಯ ಪ್ರತಿ ಸಾಲಿನಲ್ಲೂ ಸಾಕಷ್ಟು ಅರ್ಥ ಅಡಗಿದೆ.ಶಿವರುದ್ರಪ್ಪನವರು ಅದ್ಭುತ ವಾಗಿ ಪದಗಳ ಜೋಡಣೆ ಮಾಡಿದ್ದಾರೆ.ಜೊತೆಗೆ ಅರ್ಥಗರ್ಭಿತವಾಗಿಯು ಇದೆ.ಪ್ರತಿಯೊಬ್ಬರೂ ಒಮ್ಮೆ ಕೇಳಲೇ ಬೇಕಾದ ಭಾವಗೀತೆ ಇದು. ಸುಂದರ ಭಾವವನ್ನೊಳಗೊಂಡಿದೆ.ಕೇಳುತ್ತಿದ್ದರೆ ನಾವೇ ಕಳೆದುಹೋಗುವಂತ ಅನುಭವ ಖಂಡಿತ.

No comments:

Post a Comment