Thursday 15 December 2011

ಅಮೃತವೀ ಜೇನು


ಚಿಕ್ಕಂದಿನಿಂದ ಜೇನುಹುಳಗಳನ್ನು ಹತ್ತಿರದಿಂದ ನೋಡಿದ್ದೆ. ನನ್ನ ಅಪ್ಪನಿಗೆ ಜೇನು ಹಿಡಿದು ಪೆಟ್ಟಿಗೆ ತುಂಬಿ ಇಡುವುದು ಅದರಿಂದ ತುಪ್ಪವನ್ನು ತೆಗೆದು ತಾಜಾ ತುಪ್ಪ ತಿನ್ನುವುದೆಂದರೆ ಎಲ್ಲಿಲ್ಲದ ಸಂತೋಷ.ನಾನು
ಎಷ್ಟೋ ಭಾರಿ ಜೆನಿನಿಂದ ಕಚ್ಚಿಸಿಕೊಂಡು ಅದಕ್ಕೆ ಶಾಪ ಹಾಕಿದ್ದಿದೆ . ಆದರೆ ಅದರಿಂದಾಗುವ ಉಪಯೋಗ ಬಹಳ .ಜೇನಿನ ಬಗ್ಗೆ ತಿಳಿಸುವ ಸಣ್ಣ ಪ್ರಯತ್ನ ಇಲ್ಲಿ.
೧)ಒಂದು ಜೇನುಹುಳು ಸುಮಾರು ೧೫೦ ಮಿಲಿಯನ್ ವರ್ಷಗಳ ವರೆಗೆ ಜೇನುತುಪ್ಪವನ್ನು ನೀಡುವ ಶಕ್ತಿಯನ್ನು ಹೊಂದಿರುತ್ತದೆ ಎಂದರೆ ನಿಜಕ್ಕೂ ಅಚ್ಚರಿಯ ವಿಷಯವೇ ಸರಿ.
೨) ಜೇನುಹುಳುಗಳು ಎಂದಿಗೂ ನಿದ್ದೆ ಮಾಡುವುದಿಲ್ಲ .
೩)ಒಂದು ಜೇನುಹುಳು ಒಂದು ಗಂಟೆಗೆ ಸುಮಾರು ೧೫ ಮೈಲಿನಷ್ಟು ದೂರ ಹಾರಬಲ್ಲದು.
೪)ಪ್ರಪಂಚದಲ್ಲೇ ಮಾನವನಿಗಾಗಿ ಆಹಾರ ತಯಾರಿಸಬಲ್ಲ ಏಕೈಕ ಹುಳವೆಂದರೆ ಜೇನುಹುಳ.
೫)ಜೇನು ಹುಳಗಳಿಗೆ ಒಟ್ಟು ೫ ಕಣ್ಣು ಗಳಿರುತ್ತವೆ .
೬)ಜೇನು ಹುಳಗಳು ಸಾಮಾನ್ಯವಾಗಿ ಚಳಿಗಾಲದಲ್ಲಿ ಜೇನುತುಪ್ಪ ನೀಡುತ್ತದೆ ಏಕೆಂದರೆ ಈ ಸಮಯದಲ್ಲಿ ಅವುಗಳಿಗೆ ಹೂವುಗಳು ಸಿಗುವುದು ವಿರಳ.
೭)ಜೇನು ಹುಳುಗಳಲ್ಲಿ ರಾಣಿ ಜೇನಿಗೆ ಹೆಚ್ಚು ಪ್ರಾಮುಖ್ಯತೆ.
೮)ಒಂದು ರಾಣಿ ಜೇನು ಒಮ್ಮೆ ೨೦೦೦ ಮೊಟ್ಟೆಗಳನ್ನಿಡುತ್ತದೆ.
೯) ಒಂದು ಜೇನು ಗೂಡಿನಿಂದ ಒಂದು ವರ್ಷದಲ್ಲಿ ೪೦೦ ಪೌಂಡ್ ನಷ್ಟು ಜೇನುತುಪ್ಪ ತೆಗೆಯಬಹುದು.
ಇದು ಜೇನು ಹುಳುವಿನ ಬಗ್ಗೆಯಾದರೆ ಇನ್ನು ಜೇನಿನಿಂದ ನಮಗೆ ದೊರೆಯುವ ಉಪಯೋಗಗಳು ಅನೇಕ.


ನೈಸರ್ಗಿಕವಾಗಿ ದೊರೆಯುವ ಜೇನು ತುಪ್ಪವನ್ನು ದಿನವು ಸೇವಿಸುವುದರಿಂದ ಅನೇಕ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ.ಪ್ರತಿದಿನ ಬೆಳಿಗ್ಗೆ ಮುಂಜಾನೆ ಎದ್ದೊಡನೆ ಬಿಸಿ ನೀರಿನೊಂದಿಗೆ ಒಂದು ಚಮಚ ಜೇನು ತುಪ್ಪ ಹಾಕಿ ಕುಡಿಯುವುದರಿಂದ ಕೊಬ್ಬಿನ ಅಂಶ ಕಡಿಮೆಯಾಗಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣ ದಲ್ಲಿಡುವಲ್ಲಿ ಸಹಾಯ ಮಾಡುತ್ತದೆ.
ನೆಗಡಿಯಿಂದ ಬಳಲುತ್ತಿರುವವರು ೩ ದಿನಗಳ ಕಾಲ ಒಂದೊಂದು ಚಮಚ ಜೇನುತುಪ್ಪ ಜೊತೆಗೆ ದಾಲ್ಚಿನ್ನಿ ಪುಡಿ ಬೆರೆಸಿ ತಿನ್ನುವುದರಿಂದ ನೆಗಡಿಯನ್ನು ದೂರ ಗೊಳಿಸಬಹುದು .
ಇನ್ನು ಹೊಟ್ಟೆಗೆ ಸಂಬಂಧ ಪಟ್ಟ ಹೊತ್ತೆಹುಳು , ಹೊಟ್ಟೆ ಹುಣ್ಣು ಇವುಗಳ ಶಮನಕ್ಕು ಕೂಡ ಜೇನುತುಪ್ಪ ಸಹಕಾರಿ.
ಸುಟ್ಟ ಗಾಯಗಳಾದಲ್ಲಿ ತಕ್ಷಣ ಜೇನುತುಪ್ಪ ಸವರುವುದರಿಂದ ನೋವು ಕಡಿಮೆಯಾಗುವುದರೊಂದಿಗೆ ಬಾವು ಬರುವುದಿಲ್ಲ.ಯಾವುದೇ ರೀತಿಯ ಗಾಯಗಳ ಮೇಲೆ ಜೇನುತುಪ್ಪ ಹಚ್ಚುವುದರಿಂದ ಬೇಗ ಗುಣವಾಗಬಹುದು.
ಜೇನು ತುಪ್ಪವನ್ನು ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ .ಜೊತೆಗೆ ತ್ವಚೆ ಹೊಳಪಿನಿಂದ ಕೂಡಿರುತ್ತದೆ.ಮುಖದಲ್ಲಿ ನೆರಿಗೆಗಳಾಗದಂತೆ ತಡೆಯುವಲ್ಲಿ ಕೂಡ ಇದರ ಪಾತ್ರವಿದೆ.ಜೇನುತುಪ್ಪದಲ್ಲಿ ವಿಟಮಿನ್ B1,B2.C.B6 ಗಳಿರುತ್ತದೆ.ನಿದ್ರಾ ರೋಗದಿಂದ ಬಳಲುತ್ತಿದ್ದರೆ ಒಂದು ಚಮಚ ಜೇನುತುಪ್ಪ ತಿನ್ನುವುದರಿಂದ ಪ್ರತಿದಿನ ಚೆನ್ನಾಗಿ ನಿದ್ದೆ ಮಾಡಬಹುದು .
ಅತಿಯಾದ ಬೊಜ್ಜಿನಿಂದ ಬಳಲುತ್ತಿರುವವರಿಗೆ ಜೇನು ತುಪ್ಪ ಒಳ್ಳೆಯ ಔಷಧ .ಜೇನುತುಪ್ಪ ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ .ಪ್ರತಿದಿನ ಒಂದು ಚಮಚ ಜೇನುತುಪ್ಪ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಶಕ್ತಿ ದೊರೆಯುತ್ತದೆ.ಜೇನುಹುಳ ಕಚ್ಚಿಸಿಕೊಂಡರೆ ಭಯಪಡಬೇಕಿಲ್ಲ ಜೇನಿಗೆ ನಮ್ಮ ದೇಹ ದಲ್ಲಿರುವ ನಂಜಿನ ಅಂಶವನ್ನು ತೆಗೆದು ಹಾಕುವ ಶಕ್ತಿ ಇದೆ.
ಅಡುಗೆ ಮಾಡುವಾಗ ಸಕ್ಕರೆಯ ಬದಲು ಜೇನುತುಪ್ಪ ವನ್ನು ಬಳಸುವುದರಿಂದ ಆರೋಗ್ಯ ವೃದ್ಧಿಸಿಕೊಳ್ಳ ಬಹುದು.ಹೀಗೆ ಜೇನು ಅಮೃತ ವಿದ್ದಂತೆ

No comments:

Post a Comment