Wednesday 24 April 2013

ಆ ಬಾಲ್ಯ

ಈ ನನ್ನ ಲೇಖನವು ಉದಯವಾಣಿಯಲ್ಲಿ ಪ್ರಕಟವಾಗಿದೆ 24/04/13



ಮನಸ್ಸಿಗೆ ಬೇಸರವಾದರೆ ಕೆಲವೊಮ್ಮೆ ಹಾಡು ಕೇಳಿದರೆ ಏನೋ ಒಂದು ರೀತಿಯ ನೆಮ್ಮದಿ ದೊರಕುವುದುಂಟು . ಅಂತಹ ಹಾಡುಗಳಲ್ಲಿ ನನಗೆ ಬಹಳ ಹತ್ತಿರವೆನಿಸುವ  ಹಾಡೆಂದರೆ ಜಗಜಿತ್ ಸಿಂಗ್ ರ 

ಏ ದೌಲತ್ ಬಿ ಲೇಲೋ ಶರಾರಥ್ ಬಿ ಲೇಲೋ
 ಭಲೇ ಛೀನ್  ಲೇ ಮುಜ್ ಸೆ ಮೇರಿ ಜವಾನಿ 
ಮಗರ್ ಲೌಟ್  ದೋ ಮುಜ್ಕೋ ಬಚ್ಪನ್ ಕಾ  ಸಾವನ್ 
ವೋ ಕಾಗಜ್ ಕಿ ಕಷ್ತಿ ವೋ ಭಾರೀಶ್ ಕಾ ಪಾನಿ .


ಈ ಸಂಪತ್ತು ಈ ಯೌವನ ಏನನ್ನು ಬೇಕಾದರೂ ನನ್ನಿಂದ ಕಿತ್ತುಕೊ ಆದರೆ ನನಗೆ ನನ್ನ ಬಾಲ್ಯವನ್ನು ಮತ್ತು ಬಾಲ್ಯದಲ್ಲಿ ಆ ಮಳೆಯ ನೀರಿನಲ್ಲಿ  ಕಾಗದದ ದೋಣಿಯಲ್ಲಿ ಆಡುತ್ತಿದ್ದ ಆ ದಿನಗಳನ್ನು ಪುನಃ ಹಿಂತಿರುಗಿಸು ಎಂಬ ಸಾಲುಗಳು ಬಾಲ್ಯದ ನೂರಾರು ನೆನಪುಗಳನ್ನು ಕಣ್ಣೆದುರು ತಂದು ನಿಲ್ಲಿಸುತ್ತದೆ .

 ಈ ಹಾಡು ನನ್ನನ್ನು ಬಹಳ ಹಳೆಯ ಕಾಲಕ್ಕೆ ಕರೆದೊಯ್ಯುತ್ತದೆ . ಆ ಕಾರಣಕ್ಕಾಗಿ ನನಗೆ ಈ ಹಾಡು ಬಹಳ ಇಷ್ಟ ಕೂಡ . ಈ ಹಾಡಿನ ಪ್ರತಿ ಪದಗಳು ಬಹಳ ಸೊಗಸಾಗಿದೆ . ಮತ್ತು ಅರ್ಥವತ್ತಾಗಿದೆ .  ಎಲ್ಲರೂ  ತಮ್ಮ ಬಾಲ್ಯವನ್ನು ಇಷ್ಟಪಡುತ್ತಾರೆ ಆದರೆ ಅದು ಮರಳಿ ಬಾರದ ದಿನಗಳು.  ಆದರೂ ಕಳೆದುಹೋದ ಆ ಬಾಲ್ಯದ ನೆನಪು ಯಾವಾಗಲೂ ಬಹಳ ಸೊಗಸು . ಆದ ಕಾರಣಕ್ಕೆ ನನಗೆ ಈ ಹಾಡು ಏನೋ ಒಂದು ರೀತಿ ಮನಸ್ಸಿಗೆ ತಟ್ಟುತ್ತದೆ . 

ಮಗುವಿನಲ್ಲಿರುವ ಆ ಮುಗ್ದತೆ , ಸ್ವಚ್ಚಂದ ಮನಸ್ಸು, ಎಲ್ಲರೊಡನೆ ಬೆರೆಯುವ ಪರಿ , ಕ್ಷಣ ಕ್ಷಣದಲ್ಲೂ ಕಾಣುವ ಆ ಕುಶಿ , ಬೇರೆಯವರ ಏಳಿಗೆಯನ್ನು ಕರುಬದೆ ಬೆಳೆಯುವ ಆ ದಿನಗಳು  ಇವುಗಳೆಲ್ಲ ಬೆಳೆದು ದೊಡ್ಡವರಾದಂತೆ ನಾವೆಲ್ಲೋ ಕಳೆದುಕೊಳ್ಳುತ್ತಿದ್ದೇವೆ ಎಂದೆನಿಸುತ್ತದೆ .  

 ಇದು ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು . ಬಾಲ್ಯದ ದಿನಗಳನ್ನು ಮತ್ತಷ್ಟು ಕೆದಕುತ್ತದೆ. ಕೆಲವೊಮ್ಮೆ ನೋವಿನಲ್ಲೂ ಸುಖವಿರುತ್ತದೆ ಹಾಗೆಯೇ ಕಳೆದು ಹೋದ ಬಾಲ್ಯ ಹಿಂತಿರುಗಿ ಬರಲಾದಕ್ಕೆ ಬೇಸರವಿದ್ದರೂ ಅದನ್ನು ನೆನಪಿಸುವ ಈ ಹಾಡಿನಲ್ಲಿ ಸಂತೋಷವಿದೆ . ಜೊತೆಗೆ ಕೇಳಿದಷ್ಟು ಬೇಸರ ಬರದ ಮನಸ್ಸಿಗೆ ನಾಟುವ ಪದ ವರ್ಣನೆ .  ಬೇಸರವಾದ ಕ್ಷಣಗಳಲ್ಲಿ ಈ ಹಾಡುಗಳನ್ನು ಕೇಳಿ ನನ್ನ ಮನಸ್ಸನ್ನು ಸಹಜ ಸ್ಥಿತಿ ಗೆ ತರಿಸುವ ಈ ಹಾಡು ನನಗೆ ಒಂದು ರೀತಿಯ ಸ್ಪೂರ್ತಿ . 


ಅರ್ಪಿತಾ ಹರ್ಷ 
ಲಂಡನ್ 

No comments:

Post a Comment