Thursday 21 March 2013

ಮುಹೂರ್ತ !

ಬೆಳಿಗ್ಗೆ ಮುಂಚೆ ಹತ್ತು ಗಂಟೆಗೆಲ್ಲ ಮುಹೂರ್ತ ತಾವು ತಪ್ಪದೆ ಬರಬೇಕು . ಇರುವ ಒಬ್ಬಳೇ ಮಗಳನ್ನು ಶ್ರೀಮಂತರ ಮನೆಗೆ ಕೊಡ್ತಿದ್ದೇನೆ . ಜೊತೆಗೆ ಹುಡುಗ ಬಹಳ ಒಳ್ಳೆಯವ ನನ್ನ ಮಗಳಿಗೆ ಅಂತಾನೆ ಕಳಿಸಿದ್ದಾನೆ ದೇವರು. ಸಾಫ್ಟ್ವೇರ್ ಇಂಜಿನಿಯರ್ ಒಳ್ಳೆ ಸಂಬಳ . ನಂದು ಬಡ ಕುಟುಂಬ ಆದರು ನನ್  ಮಗಳು ಅದೃಷ್ಟ ಮಾಡಿಕೊಂಡಿದಾಳೆ ನೋಡಿ ಎಂದು ನಗುತ್ತ ಹೇಳುತ್ತಿದ್ದ ಶಾಮ ಭಟ್ಟರ ಮಗಳ ಮಾಡುವೆ ಪತ್ರಿಕೆ ತೆಗೆದುಕೊಂಡ ಕಮಲಮ್ಮ ಒಮ್ಮೆ ನೊಂದು ಕೊಂದರು . ಹುಡುಗ ಅದೇ ಪ್ರದೀಪ . ಒಳ್ಳೆ ಹುಡುಗ .ಹುಡುಗಿ ಅದೃಷ್ಟ ಮಾಡಿರಬೇಕು . ಅಷ್ಟು ಹೇಳಿ ಹೊರಟುಹೋದರು ಶಾಮ ಭಟ್ಟರು . ಊಟಕ್ಕೆ ಇರಿ ಎಂದು ಹೇಳುವಷ್ಟು ಆಸಕ್ತಿ ಇರಲಿಲ್ಲ ಕಮಲಮ್ಮನಿಗೆ. ಆ ಕರಾಳ ನೆನಪಿನ ದಿನಗಳಿಗೆ ಮೊರೆಹೊಕ್ಕರು.
                                        ---------------------------------
ಎಷ್ಟು ಚಂದವಿತ್ತು ಆ ದಿನಗಳು . ಮಗಳು ಪ್ರತಿಮಾ ಮನೆಲಿದ್ದ ದಿನಗಳವು .ಅಪ್ಪ ಅಮ್ಮನ ಮುದ್ದಿನ ಮಗಳು ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಪ್ರೀತಿಗೂ ಕೂಡ. ಅಪ್ಪ ನ ಪ್ರೀತಿ , ಅಣ್ಣ ನ ಕೀಟಲೆ ಚೇಷ್ಟೆ ಎಲ್ಲದಕ್ಕೂ ಕೇಳಿಕೊಂಡು ಬಂದಿರಬೇಕು ಎಂದು ನೋಡಿದವರು ಕಣ್ಣು ಹಾಕುವರೆನೋ ಎಂಬಷ್ಟು ನಗು ಆ ಮನೆಯಲ್ಲಿತ್ತು .

ಮೊದಮೊದಲು ಅಪ್ಪ ಕಾಲೇಜಿಗೆ ಹೋಗುತ್ತಿದ್ದ ಮಗಳಿಗೆ ವಿಪರೀತ ಸಲುಗೆ ಕೊಟ್ಟಿದ್ದ. ಅಂದಿನ ಕಾಲದಲ್ಲಿ ಯಾರ ಹತ್ತಿರವೂ ಮೊಬೈಲ್ ಇರಲಿಲ್ಲ .ಇಡೀ  ಕಾಲೇಜಿನಲ್ಲಿ ಇವಳದೊಂದೇ ಮೊಬೈಲ್ ಎಲ್ಲರ ಕಣ್ಣು ಈಕೆಯ ಮೇಲೆಯೇ. ನೋಡಲು ಬೆಳ್ಳಗೆ ತೆಳ್ಳಗೆ ತಿದ್ದಿ ತೀಡಿದಂತಿದ್ದ ಪ್ರತಿಮಾ ಪಡ್ಡೆ ಹುಡುಗರ ಕನಸಿನಲ್ಲಿ ಹೋಗಲು ಕಾಲೇಜು ಪ್ರಾರಂಭವಾಗಿ ಬಹಳದಿನ ತೆಗೆದುಕೊಳ್ಳಲಿಲ್ಲ. ಸ್ವಲ್ಪ ಚಲ್ಲು ಚಲ್ಲಾಗಿ ಆಡುತ್ತಿದ್ದ ಪ್ರತಿಮಾ ಳಿಗೂ ಇದೊಂದು ಹಬ್ಬದಂತೆ ಅನಿಸುತ್ತಿತ್ತು .  ಕಾಲೇಜಿನ ಹೆಸರಿನಲ್ಲಿ ಪ್ರತಿ ದಿನ ಹೀಗೇ ಕಳೆದುಹೋಗುತ್ತಿತ್ತು.ಓದುವುದರ ಬಗ್ಗೆ ಮೊದಲಿನಿಂದಲೂ ಸ್ವಲ್ಪ ಹಿಂದಿದ್ದ ಪ್ರತಿಮಾ ಳಿಗೆ ಈಗ ಓದಿನ ಕಡೆ ಸ್ವಲ್ಪವೂ  ಗಮನವಿರಲಿಲ್ಲ.

ದಿನನಿತ್ಯ ಕಾಲೇಜಿಗೆ ಬಂದು ಹೋಗುವುದು ತಡವಾಗುತ್ತಿತ್ತು. ಬೆಳಗ್ಗೆ ಮನೆಯಿಂದ ೭ ಗಂಟೆಗೆಲ್ಲ ಹೊರಟರೆ ಸಂಜೆ ಮನೆ ಸೇರುತ್ತಿದ್ದುದು ಸಂಜೆ ೮ ಗಂಟೆಗೆ . ಅಪ್ಪ ತೋಟದ ಕೆಲಸ , ಗೆಳೆಯರು , ನೆಂಟರ ಮನೆ ಹೀಗೆ ಬ್ಯುಸಿ ಆಗಿ ಹೋಗುತ್ತಿದ್ದುದರಿಂದ ಅಷ್ಟೊಂದು ತಲೆಗೆ ಹಚ್ಚಿಕೊಳ್ಳಲಿಲ್ಲ. ಆದರೆ ಅಮ್ಮನಿಗೆ ಹಾಗಾದೀತೇ? ಎಷ್ಟಾದರೂ ಮಗಳು , ಹೆಣ್ಣು ಮಕ್ಕಳು ಸಂಜೆ ೬ ರ ಒಳಗೆ ಮನೆ ಸೇರಬೇಕು ಎಂದು ಮೊದಲಿನಿಂದಲೂ ಕೇಳಿಕೊಂಡು ,ಪಾಲಿಸಿಕೊಂಡು , ಹೇಳಿಕೊಂಡು ಬಂದವರು .

ಒಂದು ದಿನ ಕಮಲಮ್ಮ ,ಗಂಡ ಸುಬ್ರಾಯರು ಮನೆಗೆ ಬರುವುದನ್ನೇ ಕಾಯುತ್ತ ಕುಳಿತಿದ್ದರು . ಮಗಳು ಮನೆಗೆ ಬರುವುದಕ್ಕೂ ಗಂಡ ಮನೆಗೆ ಬರುವುದಕ್ಕೂ ಸರಿ ಹೋಯಿತು . ಹೇಳಬೇಕೆಂದಿರುವ ಮಾತು ಮನಸಲ್ಲೇ ಬಚ್ಚಿಟ್ಟು ಕೊಳ್ಳಬೇಕಾಯಿತು . ಇಷ್ಟಕ್ಕೂ ತನ್ನ ಸ್ವಂತ ಮಗಳನ್ನು ಅನುಮಾನಿಸಲಾದೀತೇ? ಆದರೂ ಮುನ್ನೆಚ್ಚರಿಕೆ ಒಳ್ಳೆಯದು ಎಂಬುದು ಮನಸಿನ ಒಂದು ಮೂಲೆಯಲ್ಲಿ ಹಾಡು ಹೋಯಿತು .

ಇತ್ತ ಸುಬ್ರಾಯರು ಊಟಕ್ಕೆ ಕುಳಿತಾಗ ಮಗಳಿಗೆ ಕೇಳಿದರು ' ಏನು ಹೇಗೆ ನಡೀತಿದೆ ನಿನ್ನ ಕಾಲೇಜು ? ಪರೀಕ್ಷೆ ಹತ್ತಿರಬೇರೆ ಬಂತು ಇನ್ನೇನು ಸೆಕೆಂಡ್ ಪಿಯುಸಿ ಗೆ ಹೋಗಿಬಿಡುತ್ತಿ.ಕಾಲೇಜು ಸ್ವಲ್ಪ ದೂರ ನಿಂಗೆ ಹತ್ತಿರದ್ದು ಬೇಕಾದರೆ ಹೇಳು ಇಲ್ಲೇ ಸೀಟು  ಕೊಡಿಸುವ ವ್ಯವಸ್ಥೆ ಮಾಡಿಸುವ'ಎಂದರು.

' ಹೌದು ಅಪ್ಪ ಕಾಲೇಜು ತುಂಬಾ ಚೆಂದ , ನನಗೆ ಈ ಕಾಲೇಜು ಬಿಟ್ಟು ಬೇರೆಡೆಗೆ ಹೋಗೋಕೆ ಇಷ್ಟ ಇಲ್ಲ ದೂರವಾದರೂ  ನಾ ಅಲ್ಲೇ ಹೋಗೋದು 'ಎಂದಳು . ಸರಿ ಹಾಗಿದ್ದರೆ ಎಂದ ಸುಬ್ರಾಯರಿಗೆ ಎಲ್ಲಿಲ್ಲದ ಸಂತೋಷ ಮಗಳಿಗೆ ಓದಿನಲ್ಲಿ ಏನು ಆಸಕ್ತಿ ಎಂದು . ಆದರೆ ಕಮಲಮ್ಮ ಮಗಳ ಮುಖದಲ್ಲಿ ವ್ಯಕ್ತವಾದ ಅದ್ಯಾವುದೋ ಅವ್ಯಕ್ತ ಭಾವವೊಂದಿದೆ ಎಂದರಿತರು . ಬೆಳಿಗ್ಗೆ ಹೋದವಳು ಸಂಜೆ ಬರುತ್ತಾಳೆ . ಮೊನ್ನೆ ಪಕ್ಕದೂರಿನ ಪದ್ಮ ಹೇಳಿದಳು ತನ್ನ ಮಗಳು ಅದೇ ಕಾಲೇಜು ೫ ಗಂಟೆಗೆಲ್ಲ ಮನೆಯಲ್ಲಿರ್ತಾಳೆ ನಿನ್ ಮಗಳೇನು ಸಂಗೀತ ಕಲಿತಾಳ?  ಇಲ್ಲ ಅವಳಿಗೆ ಕ್ಲಾಸ್ ಮುಗಿಯೊದೆ ಅಷ್ಟೊತ್ತಿಗಂತೆ ಆಮೇಲೆ ಬಸ್ ಸಿಗಲ್ವಂತೆ ಎಂದ ಕಮಲಮ್ಮಳಿಗೆ  ಪದ್ಮ ಅದೆಂತ ಇವಳಿಗೊಂದು ಸ್ಪೆಷಲ್ ಕ್ಲಾಸ್ ತಗೊಬಿಡ್ತಾರಂತ? ಕೇಳಿದಾಗ ಕಮಲಮ್ಮಳಲ್ಲಿ ತಿರುಗಿ ಉತ್ತರವಿರಲಿಲ್ಲ. ಯೋಚನೆಗೆ ಬಿದ್ದಳು . ಹೌದಲ್ಲವಾ ಆದರೂ  ಎಂದು ಏನೂ  ಮುಚ್ಚಿಡದ ಮಗಳ ಬಗ್ಗೆ ಅನುಮಾನಿಸುವುದು ಸರಿಯಲ್ಲ .

 ಹೀಗೆ ದಿನ ಕಳೆಯುತ್ತಿತ್ತು . ಯಾವುದಕ್ಕೂ ಇನ್ನು ತಡ ಮಾಡುವುದಲ್ಲ ಮಗಳು ೨ ಪಿಯುಸಿ ಮುಗಿತಿದ್ದಂತೆ ಒಂದು ಒಳ್ಳೆ ಹುಡುಗನನ್ನ ನೋಡಿ ಮದುವೆ ಮಾಡಿಬಿಟ್ಟರೆ ಒಂದು ನಿಶ್ಚಿಂತೆ. ಹಾಗೆ ಗಂಡನಲ್ಲಿ ಹೇಳಿದ್ದಕ್ಕೆ ' ಏನಂತ ತಿಳಿದಿ ನೀನು ನನ್ನ ಮಗಳು ಇನ್ನು ಕೂಸು  ಆಕೆಗೆ ಮದುವೇನ ? ಇನ್ನು ನಾಲ್ಕು ವರ್ಷ ಅದರ ಬಗ್ಗೆ ಮಾತಾಡ ಕೂಡದು ' ಎಂದ ಗಂಡನನ್ನು ಕುಳ್ಳಿರಿಸಿ ಇವತ್ತಲ್ಲ ನಾಳೆ ಮದುವೆ ಮಾಡಲೇ ಬೇಕು ಈಗ ಕಾಲ ಬದಲಾಗಿದೆ . ದೊಡ್ಡವರ ಮನೆ ಹುಡುಗಿ ಅಂದ್ರೆ ಜನ ದುಂಬಾಲು ಬೀಳ್ತಾರೆ. ಕಾಲೇಜಿಂದ ಬೇರೆ ಬೇಗ ಬರ್ತಿಲ್ಲ ಅವಳು ನಾಳೆ ದಿನ ಏನಾದ್ರೂ ಆದ್ರೆ ನಮ್ಮ ಮಾನ ಮರ್ಯಾದೆ ಏನಾಗಬೇಡ? ನೀವೇ ಹೇಳಿ .
ಯೋಚನೆಗೆ ಬಿದ್ದರು ಸುಬ್ರಾಯರು . ಕಮಲಾ ಯಾವತ್ತು ಹೀಗಂದವಳಲ್ಲ ಅವಳ ಮಾತಲ್ಲಿ ಹುರುಳಿ ರುತ್ತೆ ಬೆಂಕಿ ಹೋಗೆ ಆದರೆ ಹೀಗೆ ಮಾತಾಡುವವಳಲ್ಲ .

 ಹೀಗೆ ಯೋಚಿಸಿದವರಿಗೆ ಮೊನ್ನೆ ತಾನೇ ಬಸ್ ನಲ್ಲಿ ಸಿಕ್ಕಿ ಹೇಳಿದ ಗೆಳೆಯನ ನೆನಪಾಯಿತು . ಒಂದು ಫೋನ್ ಮಾಡಿಬಿಟ್ಟರು .ಯಾವತ್ತಿದ್ರೂ ಮದುವೆ ಮಾಡಿ ಕೊಡೋದೇ ನಿನ್ನ ಮಗನಿಗೆ ಕೊಟ್ಟರೆ ನೀನೆ ಮುಂದೆ ಓದುಸ್ತಿ ಅಂತ ಬೇರೆ ಹೇಳಿದ್ದಿ ಹಾಗಾಗಿ ಈ ಯೋಚನೆ ಬಂತು ಯಾವುದಕ್ಕೂ ಮನೆಯಲ್ಲಿ ಒಮ್ಮೆ ವಿಚಾರಿಸಿ ಮುಂದುವರೆಯುವ. ಅಷ್ಟೇ ಉಳಿದಿದ್ದೆಲ್ಲ ನೋಡ ನೋಡುತ್ತಿದ್ದಂತೆ ಮುಂದುವರೆದು ಆಯಿತು . ಎಲ್ಲಿ ನೋಡಿದರು ಪ್ರತಿಮಾಳ  ಮದುವೆಯಂತೆ ಅನ್ನುವುದೊಂದು ದೊಡ್ಡ ಸುದ್ದಿ . ಮಗಳಿಗಾಗಿ ಬಂಗಾರದ ಹೊರೆಯನ್ನೇ ಮಾಡಿಸಿದರು ಸುಬ್ರಾಯರು. ಪ್ರತಿಮಾ ಎಲ್ಲವೂ  ಮಾಮುಲಿನಂತೆಯೇ ಇದೆ ಎಂಬಂತಿದ್ದಳು . ಮದುವೆಯ ದಿನವೂ ನಿಶ್ಚಯಿಸಿ ಆಯಿತು. ಇನ್ನು ೩ ತಿಂಗಳಿದೆ ಅಷ್ಟರಲ್ಲಿ  ಕಾಲೇಜು ಕೂಡ ಮುಗಿಯುತ್ತದೆ .ಮುಂದಿನದೆಲ್ಲವು ಅವಳಿಷ್ಟದಂತೆ . ಇಶತವಿದ್ದರೆ ಓದಬಹುದು ಇಲ್ಲದಿದ್ದರೆ ಸಂಸಾರವಿದೆ.

ಒಂದು ದಿನ ಮದ್ಯಾನ್ಹ ಮನೆಗೆ ಬಂದ  ಮಗ ಅಮ್ಮ ಏನಾಗೋಯ್ತು ಎಂದು ದುಃಖ ತಪ್ತ ನಾಗಿ ಕುಸಿದು ಬಿದ್ದ . ಅಯ್ಯೋ ಏನಾಯ್ತೋ ಎಂದು ನೀರು ಹಾಕಿ ಏಳಿಸಿದವರಿಗೆ ಆಘಾತ ಕಾದಿತ್ತು . ಮಗಳು ಮನೆ ಬಿಟ್ಟು ಓಡಿ  ಹೋಗಿದ್ದಾಳೆ .  ಕಾಲೆಜಿನದೆ ಹುಡುಗ . ತಂದೆ ತಾಯಿ ಕೂಲಿ ಕೆಲಸ ಮಾಡಿ ಮಗನನ್ನು ಓದಿಸುತ್ತಿದ್ದರೆ. ವಿಷಯ ತಿಳಿದ ಸುಬ್ರಾಯರು ಮನುಷ್ಯರಾಗಿರಲಿಲ್ಲ. ಅವಳು ಸಿಗಲಿ ಕೊಚ್ಚಿ ಹಾಕುತ್ತೇನೆ ಎಂದರು ಅಸಹಾಯಕರಾಗಿ ಅತ್ತರು.ಗೋಗರೆದರು.

ಊರಿನವರು ನೆಂಟರಿಷ್ಟರು ಎಲ್ಲರೂ ಬಂದರು ಒಬ್ಬೊಬ್ಬರು ಒಂದೊಂದು ಹೇಳಿದರು ನೀವು ಕೊಟ್ಟ ಸಲುಗೆ ಬಹಳವಾಗಿಯು ಎಂದು ಕೆಲವರೆಂದರೆ , ಆಕೆ ಮೊದಲಿನಿಂದಲೂ ಸ್ವಲ್ಪ ಚಲ್ಚಲ್ ಆಗಿ ಆಡುತ್ತಿದ್ದಳು ನಮಗೆ ಗೊತ್ತಿತ್ತು ಇದು ಹೀಗೆ ಆಗುವುದು ಎಂದು ಕೆಲವರಂದರು. ಹತ್ತಿರದ ನೆಂಟರು ಅವಳ ಜಾತಕವೇ ಸರಿ ಇರಲಿಲ್ಲ ಎಂದರು . ನೂರು ಜನ ನೂರು ರೀತಿಯಲ್ಲಿ ಮಾತನಾಡಿದರು . ಸಮಾಧಾನದ ನೆಪದಲ್ಲಿ ಬಂದು ಮನಸ್ಸಿಗೆ ಇನ್ನಷ್ಟು ಇರಿದರು . ಹೋದ ಮಗಳು ತಿರುಗಿ ಬರಲಿಲ್ಲ .ಅಂದಿನಿಂದ  ಕಮಲಮ್ಮ ಸುಬ್ರಾಯರು ಮನೆ ಹೊಸಿಲು ದಾಟಿ ಹೊರಹೊಗಲಿಲ್ಲ .ಇದೆಲ್ಲ ಆಗಿ ಆಗಲೇ ೨-೩ ವರ್ಷವಾಗಿತ್ತು . ಆಗೀಗ ಯಾರಿಂದನೋ ಬಂಡ ಸುದ್ದಿಯಿಂದ ತಿಳಿದಿದ್ದು ಪ್ರತಿಮ ಈಗ ಮುದ್ದಾದ ಗಂಡು ಮಗುವೊಂದರ ತಾಯಿ . ಗಂಡನ ಜೊತೆಗೆ ತಾನು ಕೂಲಿ ಕೆಲಸದಲ್ಲಿ ತೊಡಗಿಕೊಂಡಿದ್ದಾಳೆ. ಅಪ್ಪ ಅಮ್ಮ ತೋರಿದ ಆ ಪ್ರೀತಿಗಿಂತ ಕಷ್ಟಪಟ್ಟು ದುಡಿಯುವ ಈ ಪ್ರೀತಿಯೇ ಮೇಲೆನಿಸಿರಬೇಕು !!.ಕಮಲಮ್ಮ ನಿಟ್ಟುಸಿರುಬಿಟ್ಟರು ಎಲ್ಲ ಸರಿಯಿದ್ದರೆ ಪ್ರದೀಪ ಇಂದು ತಮ್ಮ ಅಳಿಯ ಆಗುತ್ತಿದ್ದ . ಮೊಮ್ಮಗು ರಾಜಕುಮಾರನಾಗುತ್ತಿದ್ದ.

                         -----------------------------------------------------------------------

ಮಗು ರಚ್ಚೆ ಹಿಡಿದು ಅಳುತ್ತಿತ್ತು . ಏನು ಮಾಡಿದರೂ  ಸುಮ್ಮನಿರಲಿಲ್ಲ. ಕೊನೆಗೆ ಇದ್ದ ಸಣ್ಣ ರೂಮಿನಲ್ಲಿ ಒಂದು ತೊಟ್ಟಿಲು ತಂದು ಕಟ್ಟಬೇಕು . ಹೇಗಾದರು ಮಾಡಿ ಈ ತಿಂಗಳು ಕೆಲಸ ಮಾಡಿದ ದುಡ್ಡು ಗಂಡನಿಗೆ ಸಿಗದಂತೆ ಉಳಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದ ಪ್ರತಿಮಳಿಗೆ  ಸುದೀರ ಹೇಳಿದ 'ಇವತ್ತು ಮೂರು ಜನ ಗೆಳೆಯರನ್ನ ಕರ್ಕೊಂಡು ಬರ್ತೀನಿ ಮದ್ಯಾನಕ್ಕೆ ಒಳ್ಳೆ ಅಡಿಗಿ ಮಾಡ್ ಹಾಕು . ಬಾಡುಟ ಅಂದ್ರ ನನ್ ಗೆಳೆಯರಿಗೆ ಬಾಳ್ ಚೊಲೊ ಹಿಡುಸ್ತದ'  , ಎನ್ನುತ್ತಾ ಹೊರಹೋದ ಗಂಡನನ್ನ ಮರೆಯಾಗುವವರೆಗೂ ಕಿಟಕಿಯ ಸಂದಿಯಿಂದ ನೋಡುತ್ತಿದ್ದ ಪ್ರತಿಮಳ ನೆನಪು ಅಮ್ಮ ಹೊಟ್ಟೆ ತುಂಬಾ ಮಾಡಿ ಹಾಕುತ್ತಿದ್ದ ಸೊಪ್ಪಿನ ಸಾರನ್ನು ನೆನೆಸಿ ಕಣ್ಣೀರು ಸುರಿಸಿದವು !!!.

ಅರ್ಪಿತಾ ಹರ್ಷ 
ಲಂಡನ್ 

No comments:

Post a Comment