Tuesday 18 December 2012

ಬೇಸ್ತು ಬಿದ್ದದ್ದು


ಈ ನನ್ನ ಲೇಖನವು ಹೊಸದಿಗಂತ ಮಂದಾರ ಸಿರಿ ಪುರವಣಿಯಲ್ಲಿ ಪ್ರಕಟಗೊಂಡಿದೆ http://www.hosadigantha.in/news_img/01-02-2013-14.pdf



ಹೌದು ನೆನಪುಗಳೇ ಹಾಗೆ ಗರಿಬಿಚ್ಚಿ ಕುಣಿಯುವ ನವಿಲ ಹಾಗೆ ಇದ್ದಕ್ಕಿದ್ದಂತೆ ದೋ ಎಂದು ಸುರಿಯುವ ಮಲೆನಾಡ ಮಳೆಯ ಹಾಗೆ ಒಮ್ಮೆ ಸುರಿಯಲು ಪ್ರಾರಂಭಿಸಿದರೆ 2 ತಾಸುಗಳು ಸುರಿಯುತ್ತಲೇ ಇರುತ್ತದೆ ಆ ಮಲೆನಾಡ ಪರಿಸರದಲ್ಲಿ ಬೆಳೆದ ನನಗೆ ಅಂತಹ  ಮಳೆಯ ನೆನಪೇ ಒಂದು ಸಂಭ್ರಮ .ಲಂಡನ್ ನಲ್ಲಿ ಗಿಟಿ ಗಿಟಿ  ಎಂದು ಹನಿ ಹಾಕಿ ಇಡೀ  ದಿನದ ಮೂಡನ್ನೆಲ್ಲ  ಹಾಳು  ಮಾಡುವ ಈ ಮಳೆಯನ್ನೂ ನೋಡಿದರೆ ಅಯ್ಯೋ ಎಂದೆನಿಸುತ್ತದೆ. ಹಾಗೆ ಮಳೆಗಾಲದ ಜೊತೆ ನನಗೆ ಮೊದಲಿನಿಂದಲೂ ಬಹಳ ನಂಟು ಈಗಲೂ ಹಾಗೊಂದು ಮಳೆ ಏನಾದರು ಇಲ್ಲಿ ಸುರಿದುಬಿಟ್ಟರೆ ಹೋಗಿ ನಿಂತು ನೆನೆದು ನೆನೆದು ಸಂತೋಷಪಡಬೇಕು ಎಂಬುದು ನನ್ನ ಬಹಳ ದಿನದ ಆಸೆ. 
 ನಮ್ಮದು ಮಕ್ಕಳ ಸೈನ್ಯವೆಲ್ಲ ಕೆಲವೊಮ್ಮೆ ಮಳೆಗಾಲದಲ್ಲಿ ಮಾವನ ಮನೆಯಲ್ಲಿ ಒಟ್ಟು ಸೇರುವ ಪರಿಪಾಟವಿತ್ತು . ಹೀಗೆ ಒಮ್ಮೆ ಎಲ್ಲರು ಒಟ್ಟು ಸೇರಿದ್ದಾಗ ಬೆಟ್ಟ ಸುತ್ತಲು ಹೊರಟೆವು ಹೋರಾಟ ಸ್ವಲ್ಪ ಹೊತ್ತಿನಲ್ಲೆಯೇ ಮಳೆ ಎಲ್ಲಿಲ್ಲದಂತೆ ಸುರಿಯಲು ಪ್ರಾರಂಭಿಸಿತು ನಮಗೆ ಮಳೆಯಲು ನೆನೆಯಲು ಸಿಕ್ಕಿದ್ದು ಇದೇ ಅವಕಾಶ ಎಂಬ ಕುಶಿ ಒಂದು ಕಡೆಯಾದರೆ ಮನೆಯಲ್ಲಿ ಬಾಯಿಗೆಬಂದಂತೆ ಬಯ್ಯುತ್ತಾರೆ ಎಂಬ ಹೆದರಿಕೆ ಇನ್ನೊಂದು ಕಡೆ . ಅಂತು 4-5 ಜನರಿಗೆ ಇರುವ 2 ಕೊಡೆಯಲ್ಲಿ ಹೇಗೋ ಹೊಂದಾಣಿಕೆ ಮಾಡಿಕೊಂಡು ನೆನೆದುಕೊಂಡು ಮನೆಗೆ ಬಂದೆವು . ಬಂದು ಚಪ್ಪಲಿ ಬಿಚ್ಚಿ ಮನೆಯೊಳಗೇ ಓಡಿ  ನಾವೆಲ್ಲು ಹೋಗಿಲ್ಲ ಎಂಬಂತೆ ಮತ್ತು ಹೋಗಿಲ್ಲ ಎಂದು ಎಲ್ಲರನ್ನು ಯಾಮಾರಿಸಿದ ಕುಶಿಯಲ್ಲಿ ಎಲ್ಲರು ಮುಸಿಮುಸಿ ನಕ್ಕು ಸಂತೋಷಪಡುತ್ತಿದ್ದೆವು . ಅಷ್ಟರಲ್ಲಿ ಹೊರಗಿನಿಂದ ಬಂಡ ಅಜ್ಜ ಇದೇನಿದು ಮನೆಯ ತುಂಬೆಲ್ಲ ರಕ್ತ ಎನ್ನುತ್ತಾ ಒಳಗೆ ಬಂದರು ನಾವೆಲ್ಲಾ ಏನಾಯಿತು ಎಂದು ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿದ್ದೆವು ಅಜ್ಜ ಯಾರು ಹೊರಗೆ ಹೋಗಿದ್ದಿರಿ ಹೇಳಿ ಎಂದು ಕೇಳಿದರು ನಾವೆಲ್ಲಾ  ನಾವ್ಯಾರು ಹೋಗಿಲ್ಲ ಎಂದು ಉತ್ತರ ಕೊಟ್ಟೆವು . ಹಾಗಾದರೆ ಉಂಬಳ  ಕಚ್ಚಿದ್ದು ಯಾರಿಗೆ ? ಅದು ಕಚ್ಚಿದರೆ ಗೊತ್ತೇ ಆಗುವುದಿಲ್ಲ ಎಂದೆಲ್ಲ ಬಣ್ಣಿಸಲು ಪ್ರಾರಂಭಿಸಿದರು ಅದನ್ನು ಕೇಳಿ ನಮಗೆ ಎಲ್ಲಿಲ್ಲದ ಭಯ ಹುಟ್ಟಿ ಎಲ್ಲರು ನಾ ಮುಂದು ತಾ ಮುಂದು ಎನ್ನುತ್ತಾ ಅಜ್ಜ ನಾನು ಹೋಗಿದ್ದೆ ನೋಡು ಉಂಬಳ  ನನಗೆ ಕಚ್ಚಿದೆಯ ಎಂದು ಕೇಳುತ್ತ ಮುಂದೆ ಹೋದೆವು .ನಮ್ಮ ಮಲೆನಾಡಿನ ಕೆಲವು  ಭಾಗಗಳಲ್ಲಿ ಮಳೆಗಾಲದಲ್ಲಿ ಉಂಬಳ  ದ ಹಾವಳಿ ಬಹಳ .ಎಲ್ಲಿ ಕಾಲಿಟ್ಟರು ಕಾಲಿಗೊಂದು ಕಚ್ಚಿಹಿಡಿದುಕೊಂಡು ಬಿಡುತ್ತದೆ. ಆ ನಂತರ ಸುಣ್ಣ ಹಾಕಿ ಕಾಲಿನಿಂದ ಬರುತ್ತಿರುವ ರಕ್ತವನ್ನು ನಿಲ್ಲಿಸಬೇಕು . ಆದರೆ ಆ ದಿನ ಯಾರಿಗೂ ಉಂಬಳ  ಕಚ್ಚಿರಲಿಲ್ಲ ನಮ್ಮ ಗುಟ್ಟನ್ನು ರಟ್ಟು ಮಾಡುವ ಉದ್ದೇಶದಿಂದ ಅಜ್ಜ ಹಾಗೆ ಕೇಳಿದ್ದ ನಾವೆಲ್ಲಾ ಬೆಸ್ತುಬಿದ್ದಿದ್ದೆವು .




ಅರ್ಪಿತಾ ರಾವ್ 
ಲಂಡನ್ 

No comments:

Post a Comment