Published in Omanase Magazine http://www.omanase.com/nagara-panchami-festival/
ಕೋವಿಡ್ ನಿಂದಾಗಿ ಇಂದು ಎಲ್ಲವೂ ಡಿಜಿಟಲ್ ಮಾಯವಾಗಿದೆ.ಮನೆಯಿಂದ ಹೊರಗೆ ಹೋಗುವಂತಿಲ್ಲ ಇನ್ನು ವಿದೇಶದಲ್ಲಿರುವವರು ಕೇವಲ ಫೋನ್ ಮೂಲಕ ವಿಚಾರ ವಿನಿಮಯ ಮಾಡಿಕೊಳ್ಳುವುದು ಮೊದಲಿನಿಂದಲೂ ಅನಿವಾರ್ಯವಾದರೆ ಈಗ ಭಾರತದ ಎಲ್ಲೆಡೆಗಳಲ್ಲಿ ಕೇವಲ ಫೋನ್ ಅನಿವಾರ್ಯವಾಗಿದೆ .ಹಾಗೆ ಅಮ್ಮನಿಗೆ ಫೋನ್ ಮಾಡಿದಾಗ ಶನಿವಾರ ನಾಗಪಂಚಮಿ ಹಬ್ಬ ಎನ್ನುವುದು ತಿಳಿಯಿತು .ನಾಗರಪಂಚಮಿ ಎಂದರೆ ಹಬ್ಬದ ಹಳೆಯ ನೆನಪುಗಳು. ಚಿಕ್ಕವರಿರುವಾಗ ಹಬ್ಬಗಳೆಂದರೆ ಮನೆಯಲ್ಲಿ ಸಡಗರ ಸಂಭ್ರಮ. ವಿದೇಶಗಳಲ್ಲಿ ದೀಪಾವಳಿ ಇನ್ನಿತರ ಹಬ್ಬವನ್ನು ಆಚರಿಸಿದರೂ ನಾಗರ ಪಂಚಮಿ ಆಚರಿಸುವುದು ಕನಸೇ ಸರಿ.
ಕರ್ನಾಟಕದಲ್ಲಿ ನಾಗರಪಂಚಮಿ ಎಂದರೆ ವಿಶೇಷ .ಅದರಲ್ಲೂ ಹೆಣ್ಣು ಮಕ್ಕಳೆಲ್ಲ ಸೇರಿ ಹೊಸ ಬಟ್ಟೆ ಹಾಕಿ,ಹೂವು ಮುಡಿದು,ಅಲಂಕಾರ ಮಾಡಿಕೊಂಡು ತಟ್ಟೆಯಲ್ಲಿ ಹಾಲು, ನೀರು ,ಅರಿಶಿನ ಎಲ್ಲವನ್ನು ಹಿಡಿದುಕೊಂಡು ನಾಗಪ್ಪನಿಗೆ ತಣಿ ಎರೆಯಲು ನಾಗರಕಲ್ಲಿಗೆ ಹೋಗುವುದು ಸಾಮಾನ್ಯವಾಗಿ ಮಲೆನಾಡಿನ ಭಾಗಗಳಲ್ಲಿ ನಾಗಪಂಚಮಿ ದಿನಗಳಲ್ಲಿ ಕಾಣುವ ದೃಶ್ಯ.
ಮಲೆನಾಡು ಭಾಗಗಳಲ್ಲಿ ನಾಗರಪಂಚಮಿಯನ್ನು ಹೆಣ್ಣು ಮಕ್ಕಳ ಹಬ್ಬ ಎಂದೇ ಪರಿಗಣಿಸುತ್ತಾರೆ.ಹೆಣ್ಣು ಮಕ್ಕಳು ಅಲಂಕಾರ ಮಾಡಿಕೊಂಡು ನಾಗರ ಕಲ್ಲಿಗೆ ತಣಿ ಹಾಲು ಎರೆದು ಪೂಜಿಸುವುದು ಇದರ ವಿಶೇಷತೆ.ನಾಗರ ಪಂಚಮಿ ಹಬ್ಬದಂದು ನಾಗಪ್ಪ ಅಥವಾ ನಾಗರ ಕಲ್ಲುಗಳನ್ನು ಹೆಚ್ಚಾಗಿ ಅರಿಶಿನ ಬಳಿದು, ಹಾಲು ಎರೆದು, ಹೂವಿನ ಹಾರ ಏರಿಸಿ ಪೂಜಿಸುವುದು ರೂಡಿ .ಕೆಲ ಭಾಗಗಳಲ್ಲಿ ಪ್ರತಿ ಹಳ್ಳಿಗೆ ಒಂದು ಅಥವಾ ಕೆಲವೊಮ್ಮೆ ಮನೆಯ ಹಿಂಬಾಗಗಳಲ್ಲಿ,ತೋಟಗಳಲ್ಲಿ ಹೀಗೆ ನಾಗರ ಕಲ್ಲು ಅಥವಾ ಹುತ್ತಗಳು ಸಾಮಾನ್ಯವಾಗಿ ಇರುವುದು ವಿಶೇಷ .ಇನ್ನು ಹಬ್ಬ ಎಂದರೆ ಪೂಜೆಯ ಸಂಭ್ರಮದ ಜೊತೆಗೆ ವಿವಿಧ ಅಡುಗೆಗಳನ್ನು ತಯಾರಿಸುವುದು,ಸಿಹಿ ಖಾದ್ಯಗಳನ್ನು ಮಾಡುವುದು ಭಾರತದ ಎಲ್ಲೆಡೆಗಳಲ್ಲಿ ವಿಶೇಷವಾಗಿ ನಡೆಯುವುದು ಸರ್ವೇ ಸಾಮಾನ್ಯ .ನಾಗರ ಪಂಚಮಿ ಎಂದರೆ ನಾಗಪ್ಪನಿಗೆ ಪ್ರಿಯವಾದ ಚಪ್ಪೆ ದೋಸೆ ಮತ್ತು ಎಳ್ಳು,ಅರಳು,ಶೇಂಗಾ ಹೀಗೆ ವಿವಿಧ ರೀತಿಯ ಉಂಡೆಗಳನ್ನು ಮಾಡಲಾಗುತ್ತದೆ.ಮಲೆನಾಡಿನ ಇನ್ನು ಕೆಲವು ಭಾಗಗಳಲ್ಲಿ ನಾಗರ ಪಂಚಮಿ ಹಬ್ಬದ ದಿನದಂದು ಅರಿಶಿನದ ಎಲೆಗಳಲ್ಲಿ ಸುತ್ತಿ ಕಡುಬು ಮಾಡಲಾಗುತ್ತದೆ.
ಅದರ ಜೊತೆಗೆ ನಾಗರ ಪಂಚಮಿ ಹಬ್ಬಕ್ಕೆ ಹೆಣ್ಣು ಮಕ್ಕಳು ತಮ್ಮ ತವರಿಗೆ ಹೋಗುವ ಪದ್ಧತಿ ಮೊದಲಿನಿಂದ ನಡೆದುಕೊಂಡು ಬಂದಿದೆ. ನಾಗರ ಪಂಚಮಿ ಹಬ್ಬ ಹತ್ತಿರ ಬರುತ್ತಿದ್ದಂತೆ ಅಣ್ಣ ಅಥವಾ ತಮ್ಮಂದಿರು ಹೋಗಿ ತಮ್ಮ ಸಹೋದರಿಯನ್ನು ಮನೆಗೆ ಬರಲು ಆಹ್ವಾನಿಸುವುದು ಮೊದಲಿನಿಂದ ನಡೆದುಕೊಂಡು ಬಂದಿದೆ. ಆದ್ದರಿಂದಲೇ ಇದನ್ನು ಹೆಣ್ಣು ಮಕ್ಕಳ ಹಬ್ಬ ಎನ್ನಲಾಗುತ್ತದೆ .
ಈ ಬಾರಿ ಕೋವಿಡ್ ನಿಂದಾಗಿ ಎಲ್ಲೆಡೆಗಳಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತದೆ. ಆದಷ್ಟು ಬೇಗ ಕರೋನ ಹಾವಳಿ ಕಡಿಮೆಯಾದಲ್ಲಿ ಮುಂಬರುವ ಹಬ್ಬವನ್ನು ಮೊದಲಿನಂತೆ ಆಚರಿಸಬಹುದು ಎಂಬುದೊಂದೇ ಆಶಯ.
Arpitha Rao
Banbury
United kingdom
ಕೋವಿಡ್ ನಿಂದಾಗಿ ಇಂದು ಎಲ್ಲವೂ ಡಿಜಿಟಲ್ ಮಾಯವಾಗಿದೆ.ಮನೆಯಿಂದ ಹೊರಗೆ ಹೋಗುವಂತಿಲ್ಲ ಇನ್ನು ವಿದೇಶದಲ್ಲಿರುವವರು ಕೇವಲ ಫೋನ್ ಮೂಲಕ ವಿಚಾರ ವಿನಿಮಯ ಮಾಡಿಕೊಳ್ಳುವುದು ಮೊದಲಿನಿಂದಲೂ ಅನಿವಾರ್ಯವಾದರೆ ಈಗ ಭಾರತದ ಎಲ್ಲೆಡೆಗಳಲ್ಲಿ ಕೇವಲ ಫೋನ್ ಅನಿವಾರ್ಯವಾಗಿದೆ .ಹಾಗೆ ಅಮ್ಮನಿಗೆ ಫೋನ್ ಮಾಡಿದಾಗ ಶನಿವಾರ ನಾಗಪಂಚಮಿ ಹಬ್ಬ ಎನ್ನುವುದು ತಿಳಿಯಿತು .ನಾಗರಪಂಚಮಿ ಎಂದರೆ ಹಬ್ಬದ ಹಳೆಯ ನೆನಪುಗಳು. ಚಿಕ್ಕವರಿರುವಾಗ ಹಬ್ಬಗಳೆಂದರೆ ಮನೆಯಲ್ಲಿ ಸಡಗರ ಸಂಭ್ರಮ. ವಿದೇಶಗಳಲ್ಲಿ ದೀಪಾವಳಿ ಇನ್ನಿತರ ಹಬ್ಬವನ್ನು ಆಚರಿಸಿದರೂ ನಾಗರ ಪಂಚಮಿ ಆಚರಿಸುವುದು ಕನಸೇ ಸರಿ.
ಕರ್ನಾಟಕದಲ್ಲಿ ನಾಗರಪಂಚಮಿ ಎಂದರೆ ವಿಶೇಷ .ಅದರಲ್ಲೂ ಹೆಣ್ಣು ಮಕ್ಕಳೆಲ್ಲ ಸೇರಿ ಹೊಸ ಬಟ್ಟೆ ಹಾಕಿ,ಹೂವು ಮುಡಿದು,ಅಲಂಕಾರ ಮಾಡಿಕೊಂಡು ತಟ್ಟೆಯಲ್ಲಿ ಹಾಲು, ನೀರು ,ಅರಿಶಿನ ಎಲ್ಲವನ್ನು ಹಿಡಿದುಕೊಂಡು ನಾಗಪ್ಪನಿಗೆ ತಣಿ ಎರೆಯಲು ನಾಗರಕಲ್ಲಿಗೆ ಹೋಗುವುದು ಸಾಮಾನ್ಯವಾಗಿ ಮಲೆನಾಡಿನ ಭಾಗಗಳಲ್ಲಿ ನಾಗಪಂಚಮಿ ದಿನಗಳಲ್ಲಿ ಕಾಣುವ ದೃಶ್ಯ.
ಮಲೆನಾಡು ಭಾಗಗಳಲ್ಲಿ ನಾಗರಪಂಚಮಿಯನ್ನು ಹೆಣ್ಣು ಮಕ್ಕಳ ಹಬ್ಬ ಎಂದೇ ಪರಿಗಣಿಸುತ್ತಾರೆ.ಹೆಣ್ಣು ಮಕ್ಕಳು ಅಲಂಕಾರ ಮಾಡಿಕೊಂಡು ನಾಗರ ಕಲ್ಲಿಗೆ ತಣಿ ಹಾಲು ಎರೆದು ಪೂಜಿಸುವುದು ಇದರ ವಿಶೇಷತೆ.ನಾಗರ ಪಂಚಮಿ ಹಬ್ಬದಂದು ನಾಗಪ್ಪ ಅಥವಾ ನಾಗರ ಕಲ್ಲುಗಳನ್ನು ಹೆಚ್ಚಾಗಿ ಅರಿಶಿನ ಬಳಿದು, ಹಾಲು ಎರೆದು, ಹೂವಿನ ಹಾರ ಏರಿಸಿ ಪೂಜಿಸುವುದು ರೂಡಿ .ಕೆಲ ಭಾಗಗಳಲ್ಲಿ ಪ್ರತಿ ಹಳ್ಳಿಗೆ ಒಂದು ಅಥವಾ ಕೆಲವೊಮ್ಮೆ ಮನೆಯ ಹಿಂಬಾಗಗಳಲ್ಲಿ,ತೋಟಗಳಲ್ಲಿ ಹೀಗೆ ನಾಗರ ಕಲ್ಲು ಅಥವಾ ಹುತ್ತಗಳು ಸಾಮಾನ್ಯವಾಗಿ ಇರುವುದು ವಿಶೇಷ .ಇನ್ನು ಹಬ್ಬ ಎಂದರೆ ಪೂಜೆಯ ಸಂಭ್ರಮದ ಜೊತೆಗೆ ವಿವಿಧ ಅಡುಗೆಗಳನ್ನು ತಯಾರಿಸುವುದು,ಸಿಹಿ ಖಾದ್ಯಗಳನ್ನು ಮಾಡುವುದು ಭಾರತದ ಎಲ್ಲೆಡೆಗಳಲ್ಲಿ ವಿಶೇಷವಾಗಿ ನಡೆಯುವುದು ಸರ್ವೇ ಸಾಮಾನ್ಯ .ನಾಗರ ಪಂಚಮಿ ಎಂದರೆ ನಾಗಪ್ಪನಿಗೆ ಪ್ರಿಯವಾದ ಚಪ್ಪೆ ದೋಸೆ ಮತ್ತು ಎಳ್ಳು,ಅರಳು,ಶೇಂಗಾ ಹೀಗೆ ವಿವಿಧ ರೀತಿಯ ಉಂಡೆಗಳನ್ನು ಮಾಡಲಾಗುತ್ತದೆ.ಮಲೆನಾಡಿನ ಇನ್ನು ಕೆಲವು ಭಾಗಗಳಲ್ಲಿ ನಾಗರ ಪಂಚಮಿ ಹಬ್ಬದ ದಿನದಂದು ಅರಿಶಿನದ ಎಲೆಗಳಲ್ಲಿ ಸುತ್ತಿ ಕಡುಬು ಮಾಡಲಾಗುತ್ತದೆ.
ಅದರ ಜೊತೆಗೆ ನಾಗರ ಪಂಚಮಿ ಹಬ್ಬಕ್ಕೆ ಹೆಣ್ಣು ಮಕ್ಕಳು ತಮ್ಮ ತವರಿಗೆ ಹೋಗುವ ಪದ್ಧತಿ ಮೊದಲಿನಿಂದ ನಡೆದುಕೊಂಡು ಬಂದಿದೆ. ನಾಗರ ಪಂಚಮಿ ಹಬ್ಬ ಹತ್ತಿರ ಬರುತ್ತಿದ್ದಂತೆ ಅಣ್ಣ ಅಥವಾ ತಮ್ಮಂದಿರು ಹೋಗಿ ತಮ್ಮ ಸಹೋದರಿಯನ್ನು ಮನೆಗೆ ಬರಲು ಆಹ್ವಾನಿಸುವುದು ಮೊದಲಿನಿಂದ ನಡೆದುಕೊಂಡು ಬಂದಿದೆ. ಆದ್ದರಿಂದಲೇ ಇದನ್ನು ಹೆಣ್ಣು ಮಕ್ಕಳ ಹಬ್ಬ ಎನ್ನಲಾಗುತ್ತದೆ .
ಈ ಬಾರಿ ಕೋವಿಡ್ ನಿಂದಾಗಿ ಎಲ್ಲೆಡೆಗಳಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತದೆ. ಆದಷ್ಟು ಬೇಗ ಕರೋನ ಹಾವಳಿ ಕಡಿಮೆಯಾದಲ್ಲಿ ಮುಂಬರುವ ಹಬ್ಬವನ್ನು ಮೊದಲಿನಂತೆ ಆಚರಿಸಬಹುದು ಎಂಬುದೊಂದೇ ಆಶಯ.
Arpitha Rao
Banbury
United kingdom
No comments:
Post a Comment